We Care: ಅನ್ನದಾನ, ಜನಸಂದಣಿ ನಿರ್ವಹಣೆ...: ʼವೀ ಕೇರ್ʼ ಮೂಲಕ ಪುರಿ ಜಗನ್ನಾಥ ರಥಯಾತ್ರೆಯ ಭಕ್ತರ ನೆರವಿಗೆ ಧಾವಿಸಿದ ರಿಲಯನ್ಸ್
ಒಡಿಶಾದಲ್ಲಿ ನಡೆಯುವಂಥ ರಥಯಾತ್ರೆಗೆ ಎಲ್ಲ ರೀತಿಯಲ್ಲೂ ಸಿದ್ಧತೆ ನಡೆಯುತ್ತಿದೆ. ಇನ್ನು ಈ ಅದ್ಭುತ ರಥಯಾತ್ರೆಯ ಸಂದರ್ಭಕ್ಕೆ ಪುರಿಯ ಜಿಲ್ಲಾಡಳಿತದ ಜತೆಗೆ ಕೈ ಜೋಡಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಇಲ್ಲಿಗೆ ಭೇಟಿ ನೀಡುವ ಭಕ್ತರು, ಸಂದರ್ಶಕರ ಸುರಕ್ಷಿತ, ಆರಾಮದಾಯಕ ಹಾಗೂ ಸಮೃದ್ಧವಾದ ಪಯಣದ ಅನುಭವ ದೊರಕಿಸುವ ನಿಟ್ಟಿನಲ್ಲಿ ಸಮಗ್ರವಾದ ಸರಣಿ ಪ್ರಯತ್ನಗಳನ್ನು ಆರಂಭಿಸಿದೆ.


ಭುವನೇಶ್ವರ್: ಒಡಿಶಾದಲ್ಲಿ ನಡೆಯುವಂಥ ರಥಯಾತ್ರೆಗೆ (Puri Rath Yatra) ಎಲ್ಲ ರೀತಿಯಲ್ಲೂ ಸಿದ್ಧತೆ ನಡೆಯುತ್ತಿದೆ. ಇನ್ನು ಈ ಅದ್ಭುತ ರಥಯಾತ್ರೆಯ ಸಂದರ್ಭಕ್ಕೆ ಪುರಿಯ ಜಿಲ್ಲಾಡಳಿತದ ಜತೆಗೆ ಕೈ ಜೋಡಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries), ಇಲ್ಲಿಗೆ ಭೇಟಿ ನೀಡುವ ಭಕ್ತರು, ಸಂದರ್ಶಕರ ಸುರಕ್ಷಿತ, ಆರಾಮದಾಯಕ ಹಾಗೂ ಸಮೃದ್ಧವಾದ ಪಯಣದ ಅನುಭವ ದೊರಕಿಸುವ ನಿಟ್ಟಿನಲ್ಲಿ ಸಮಗ್ರವಾದ ಸರಣಿ ಪ್ರಯತ್ನಗಳನ್ನು ಆರಂಭಿಸಿದೆ. ಪುರಿಯಲ್ಲಿ ನಡೆಯುವ ವಾರ್ಷಿಕ ರಥಯಾತ್ರೆಗೆ ಲಕ್ಷಾಂತರ ಭಕ್ತರು ಸೇರುತ್ತಾರೆ. ಜಗನ್ನಾಥ, ಬಲಭದ್ರ ಹಾಗೂ ಸುಭದ್ರ ದೇವರ ಮನಮೋಹಕವಾದ ಮೆರವಣಿಗೆಯನ್ನು ಜಗನ್ನಾಥ ದೇವಾಲಯದಿಂದ ಗುಂಡಿಚಾ ದೇವಾಲಯದ ತನಕ ನಡೆಸಲಾಗುತ್ತದೆ.

ಈ 13 ದಿನಗಳ ಪವಿತ್ರ ಪ್ರಯಾಣದಲ್ಲಿ ಅರ್ಥಪೂರ್ಣವಾದ ಕೊಡುಗೆಯೊಂದಿಗೆ ರಿಲಯನ್ಸ್ ಫೌಂಡೇಷನ್ ‘ವೀ ಕೇರ್’ ಬೆಂಬಲ ನೀಡಲಿದೆ.
ʼ‘ವೀ ಕೇರ್ʼ ಎಂಬ ಸಿದ್ಧಾಂತದಲ್ಲಿ ಸೇವೆ ಎಂಬುದು ಆಳವಾಗಿ ಬೇರೂರಿದೆ ಮತ್ತು ಪುರಿಯಲ್ಲಿ ಭಕ್ತರಿಗೆ ಸೇವೆ ಒದಗಿಸಲು ಸಿಕ್ಕಿರುವ ಅವಕಾಶವು ನಿಜವಾಗಿಯೂ ಆಶೀರ್ವಾದ. ರಥಯಾತ್ರೆಯ ಸಂದರ್ಭದಲ್ಲಿ ಭಕ್ತರು ಹಾಗೂ ಈ ರಥಯಾತ್ರೆಗಾಗಿ ಶ್ರಮಿಸುವವರಿಗೆ ಸೇವೆ ಒದಗಿಸುವುದು ಅಂದರೆ ದೈವಿಕವಾದ ಸೇವೆ ಮಾಡುತ್ತಿದ್ದೇವೆ ನಾವು ಎಂಬುದನ್ನು ನಂಬುತ್ತೇವೆ. ಆಹಾರದಿಂದ ಸುರಕ್ಷತೆ ತನಕ ವಿವಿಧ ಉಪಕ್ರಮಗಳ ಮೂಲಕವಾಗಿ ಪುರಿಗೆ ಭೇಟಿ ನೀಡುವವರ ಅನುಭವವನ್ನು ಹೆಚ್ಚಿಸುವುದಕ್ಕೆ ನಾವು ಬದ್ಧರಾಗಿದ್ದೇವೆ. ಅವರ ಪ್ರಯಾಣ ಸಲೀಸಾಗಿ, ಸುರಕ್ಷಿತವಾಗಿ ಹಾಗೂ ಹೆಚ್ಚು ಆರಾಮದಾಯಕವಾಗಿ ಇರುವಂತೆ ಮಾಡುವುದಕ್ಕೆ ಬದ್ಧರಾಗಿದ್ದೇವೆ’ʼ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಹೇಳಿದ್ದಾರೆ.
ರಿಲಯನ್ಸ್ನ ಸೇವಾ ಉಪಕ್ರಮಗಳ ಪ್ರಮುಖಾಂಶಗಳು
ಅನ್ನದಾನ ಸೇವೆ: ಯಾತ್ರೆಯ ಮಾರ್ಗದಲ್ಲಿ ಆರು ಪ್ರಮುಖ ಸ್ಥಳಗಳಲ್ಲಿ ಲಕ್ಷಾಂತರ ಭಕ್ತರು ಮತ್ತು ಪೊಲೀಸ್ ಸಿಬ್ಬಂದಿಗೆ ಬಿಸಿ, ಆರೋಗ್ಯಕರ ಊಟವನ್ನು ರಿಲಯನ್ಸ್ ಫೌಂಡೇಷನ್ ನೀಡುತ್ತಿದೆ. ಆ ಮೂಲಕ ಯಾರೂ ಹಸಿವಿನಿಂದ ಇರದಂತೆ ನೋಡಿಕೊಳ್ಳುತ್ತದೆ.
ನೈರ್ಮಲ್ಯದ ಗಮನ: ಆಹಾರ ಮಳಿಗೆಗಳಲ್ಲಿ ಸಂಪರ್ಕವಿಲ್ಲದ ಸ್ಯಾನಿಟೈಸರ್ಗಳನ್ನು ಸ್ಥಾಪಿಸುವುದು, ಪುರಸಭೆಯ ಸಹಯೋಗದೊಂದಿಗೆ ಶುಚಿತ್ವಕ್ಕಾಗಿ ಕಸದ ಚೀಲಗಳನ್ನು ಪೂರೈಸುವುದು ಮತ್ತು ಪೊಲೀಸ್ ಶಿಬಿರಗಳಿಗೆ ನೈರ್ಮಲ್ಯ ಸೌಲಭ್ಯಗಳನ್ನು ವಿಸ್ತರಿಸುವುದು.
ಜನಸಂದಣಿ ನಿರ್ವಹಣೆ: ಸ್ಪಷ್ಟ ನಿರ್ದೇಶನ ಫಲಕಗಳು ಮತ್ತು ಗುರುತುಗಳೊಂದಿಗೆ ಭಕ್ತರಿಗೆ ಮಾರ್ಗದರ್ಶನ ನೀಡಲು ಪುರಸಭೆ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸಹಕರಿಸುವುದು, ದೂರದಿಂದ ಬರುವ ಸಂದರ್ಶಕರಿಗೆ ಸುಗಮ ನೇವಿಗೇಷನ್ ಖಚಿತಪಡಿಸುವುದು.
ಸ್ವಯಂಸೇವಕರ ಬೆಂಬಲ: 4,000ಕ್ಕೂ ಹೆಚ್ಚು ತರಬೇತಿ ಪಡೆದ ಸ್ವಯಂಸೇವಕರು, ಸಮವಸ್ತ್ರಗಳನ್ನು ಧರಿಸಿ, ಜನಸಂದಣಿಯನ್ನು ನಿರ್ವಹಿಸುತ್ತಾರೆ ಹಾಗೂ ಬಿಸಿಲ ಶಾಖದಲ್ಲಿ ಭಕ್ತರಿಗೆ ದೇಹದಲ್ಲಿ ನೀರಿನ ಅಂಶಕ್ಕೆ ಕೊರತೆ ಬಾರದಂತೆ ನೀರಿನ ಪಾಯಿಂಟ್ಗಳನ್ನು ನೋಡಿಕೊಳ್ಳುತ್ತಾರೆ.
ಬಿಸಿಲಿನಲ್ಲಿ ಸೌಕರ್ಯ: ಯಾತ್ರಿಕರು ಬಿಸಿಲ ತಾಪದಿಂದ ರಕ್ಷಿಸಿಕೊಳ್ಳಲು 1.5 ಲಕ್ಷಕ್ಕೂ ಹೆಚ್ಚು ಪರಿಸರಸ್ನೇಹಿ ಹ್ಯಾಂಡ್ ಫ್ಯಾನ್ಗಳನ್ನು ವಿತರಿಸಲಾಗುತ್ತಿದೆ.
ಪೊಲೀಸ್ ಬೆಂಬಲ: ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಆಶ್ರಯಗಳೊಂದಿಗೆ 100 ಪೊಲೀಸ್ ಸಹಾಯ ಕೇಂದ್ರಗಳನ್ನು ಸ್ಥಾಪಿಸುವುದು, ಭಕ್ತರಿಗೆ ಸುಲಭವಾಗಿ ಸಹಾಯ ಕೇಂದ್ರಗಳಿಗೆ ಸಂಪರ್ಕ ಒದಗಿಸುವುದು.
ಹವಾಮಾನ ಸಿದ್ಧತೆ: ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು, ಪೊಲೀಸ್ ಸಿಬ್ಬಂದಿಗೆ 3,500 ರೇನ್ಕೋಟ್ಗಳನ್ನು ಸಹ ವಿತರಿಸಲಾಗಿದೆ. ಸ್ವಯಂಸೇವಕರು, ಪುರಸಭೆ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಗೆ ರಿಫ್ರೆಶ್ಮೆಂಟ್ ಕಿಟ್ಗಳನ್ನು ಒದಗಿಸಲಾಗುವುದು.
ಈ ವರ್ಷದ ಆರಂಭದಲ್ಲಿ, 2025ರ ಮಹಾ ಕುಂಭದ ಸಮಯದಲ್ಲಿ ರಿಲಯನ್ಸ್ ಪ್ರಯಾಗರಾಜ್ನಲ್ಲಿ ಊಟದಿಂದ ಆರೋಗ್ಯದವರೆಗೆ ಸಾರಿಗೆ ಸೇವೆಗಳವರೆಗೆ ಹಲವಾರು ಲಕ್ಷ ಸಂದರ್ಶಕರಿಗೆ ಸೇವೆ ಒದಗಿಸುವಲ್ಲಿ ತೊಡಗಿಸಿಕೊಂಡಿತ್ತು. ಆಧ್ಯಾತ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಸಮುದಾಯಗಳನ್ನು ಬೆಂಬಲಿಸುವ ಬಲವಾದ ಬದ್ಧತೆಯೊಂದಿಗೆ, ರಿಲಯನ್ಸ್ ಎಲ್ಲರಿಗೂ ಸುರಕ್ಷಿತ, ಆರೋಗ್ಯಕರ ಅನುಭವವನ್ನು ಖಚಿತಪಡಿಸಿಕೊಳ್ಳಲು ಬಲವಾದ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಈ ವರ್ಷ ಶ್ರೀ ಕ್ಷೇತ್ರದಲ್ಲಿ ರಥಯಾತ್ರೆಯ ಚಟುವಟಿಕೆಗಳು ಮಾನವೀಯತೆ ಮತ್ತು ದೈವಿಕ ಸೇವೆ ಮಾಡಲು ಮತ್ತೊಂದು ಅವಕಾಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Mukesh Ambani: ಜಿಯೋ ಆರಂಭ ಅತಿದೊಡ್ಡ ಅಪಾಯದ ನಿರ್ಧಾರವಾಗಿತ್ತು ಎಂದ ಮುಕೇಶ್ ಅಂಬಾನಿ; ಕಾರಣವೇನು?