ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sirsi News: ಸ್ಥಳೀಯ ಚುನಾವಣೆ ಶೀಘ್ರದಲ್ಲೇ ಬರಲಿದ್ದು ಕಮಿಟಿಗಳ ನೇಮಕವಾಗಬೇಕಿದೆ

ಸಿಎಫ್ ನಾಯ್ಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಗಣಪತಿ‌ನಾಯ್ಕ ನಡೆಯಲಿ. ಸ್ಥಳೀಯ ಸಂಸ್ಥೆಯ ಚುನಾವಣೆಯನ್ನು ಸಮರ್ಗವಾಗಿ ಎದುರಿಸುವ ಜವಾಬ್ದಾರಿ ಅವರ ಮೆರಲಿದೆ. ನಾವು ಈ ಸ್ಥಳೀಯ ಸಂಸ್ಥೆಯ ಬುನಾದಿಯನ್ನು ಗಟ್ಟಿಗೊಳಿಸಬೇಕಿದೆ. ನಿಷ್ಠಾವಂತರ ಕಡೆಗಣನೆಯಾಗದೆ ಪಕ್ಷದ ಹಿರಿಯರಿಗೆ ಗೌರವ ನೀಡುವ ಕಾರ್ಯವಾಗಬೇಕು ಎಲ್ಲರೂ ಪಕ್ಷದ ಸಂವಿಧಾನಕ್ಕೆ ಬದ್ಧರಾಗಬೇಕಿದೆ ಎಂದರು

ಎಲ್ಲರೂ ಪಕ್ಷದ ಸಂವಿಧಾನಕ್ಕೆ ಬದ್ಧರಾಗಬೇಕಿದೆ

Profile Ashok Nayak Jun 20, 2025 1:58 PM

ಶಿರಸಿ: ಸ್ಥಳೀಯ ಚುನಾವಣೆ ಶೀಘ್ರದಲ್ಲೇ ಬರಲಿದ್ದು ಕಮಿಟಿಗಳ ನೇಮಕವಾಗಬೇಕಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಸಿ ರಾಬರ್ಟ್ ದದ್ದಾಪುರಿ ಹೇಳಿದರು.

ಅವರಿಂದು ತಾಲೂಕಿನ ಬನವಾಸಿಯ ವಿಠ್ಠಲ ರುಖುಮಾಯಿ ಮಂದಿರದಲ್ಲಿ ನಡೆದ ಬ್ಕಾಂಕ್ ಕಾಂಗ್ರೆಸ್ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಿಎಫ್ ನಾಯ್ಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಗಣಪತಿ‌ನಾಯ್ಕ ನಡೆಯಲಿ. ಸ್ಥಳೀಯ ಸಂಸ್ಥೆಯ ಚುನಾವಣೆಯನ್ನು ಸಮರ್ಗವಾಗಿ ಎದುರಿಸುವ ಜವಾಬ್ದಾರಿ ಅವರ ಮೆರಲಿದೆ. ನಾವು ಈ ಸ್ಥಳೀಯ ಸಂಸ್ಥೆಯ ಬುನಾದಿ ಯನ್ನು ಗಟ್ಟಿಗೊಳಿಸಬೇಕಿದೆ. ನಿಷ್ಠಾವಂತರ ಕಡೆಗಣನೆಯಾಗದೆ ಪಕ್ಷದ ಹಿರಿಯರಿಗೆ ಗೌರವ ನೀಡುವ ಕಾರ್ಯವಾಗಬೇಕು ಎಲ್ಲರೂ ಪಕ್ಷದ ಸಂವಿಧಾನಕ್ಕೆ ಬದ್ಧರಾಗಬೇಕಿದೆ ಎಂದರು.

ಇದನ್ನೂ ಓದಿ: Sirsi News: 23 ರಂದು ಕಾರವಾರ ಚಲೋ

ಕೆಪಿಸಿಸಿ ಕಾರ್ಯದರ್ಶಿ ವಿವೆರಕ ಹೆಬ್ಬಾರ ಮಾತನಾಡಿ, 2019 ರಿಂದ ಆರಂಭವಾದ ಬನವಾಸಿ ಬ್ಲಾಕ್ ನಿಂದ ಸಿಎಪ್ ನಾಯ್ಕ ದುಡಿದಿದ್ದು ಜಾತಿ, ಧರ್ಮ ಮೀರಿದ ವ್ಯಕ್ತಿ ಅವರಾಗಿದ್ದು ಕಾಂಗ್ರೆಸ್ ಗೆ ನಿಷ್ಠೆಇಂದ ಇರುವ ಅವರಿಗೆ ಇನ್ನು ಹೆಚ್ಚಿನ ಹುದ್ದೆಗೆ ಪ್ರಯತ್ನಿಅಉವುದಾಗಿ ಹೇಳಿದರು. ಅಲ್ಲದೇ ಯಾವುದೇ ಪಕ್ಷವಿಲ್ಲದ ಶಾಸಕ ಹೆಬ್ಬಾರ್ ಅವರು ಕಾಂಗ್ರೆಸ್ ಶಕ್ತಿ, ಬೆಂಬಲವಾಗಿ ಇರುವುದಾಗಿ ವಿವೇಕ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ವಿಎಸ್ ಪಾಟೀಲ್ ಮಾತನಾಡಿ, ರಾಜಕೀಯದಲ್ಲಿ ಕೆಟ್ಟಿದ್ದನ್ನು ಹುಡುಕುವ ಬದಲಿಗೆ ಒಳ್ಳೆಯದ ಹುಡುಕಬೇಕಿದೆ. ಅವಕಾಶ ಅನ್ನುವು ಸರತಿಸಾಲಿನಲಗಲಿ ನಿಥು ಸಿನೇಮಾ ಟಿಕೆಟ್ ತೆಗೆದುಕೊಂಡಂತೆ ಬೇರೆಡೆ ಹೋಗದೇ ಸರತಿ ಸಾಲಿನಲ್ಲಿ ನಿಂತಾಗ ಮಾತ್ರ, ನಿಷ್ಠೆ ತೋರಿದಾಗ ಮಾತ್ರ ಅವಕಾಶ ಇರುತ್ತದೆ ಎಂದರು.

ಸಿ ಎಫ್ ನಾಯ್ಕ ಮಾತನಾಡಿ, ಐದು ವರ್ಷದ ನಂತರ ಅಧ್ಯಕ್ಷರ ಬದಲಾವಣೆಯಾಗುವ ಅವಶ್ಯಕತೆ ಇರುವುದರಿಂದ ಕೆಪಿಸಿಸಿ ಅಣತಿಯಂತೆ ಹುದ್ದೆ ಬದಲಾಗಿದೆಯೇ ಹೊರತಾಗಿ ಇನ್ನೇನು ಇಲ್ಲ. ಸದಾಕಾಲ ನಾನು ನಿಮ್ಮ ಜತೆಗೇ ಇರುತ್ತೇನೆಂದು ಹೇಳಿದರು.

ಕಾಂಗ್ರೆಸ್ ಮುಖಂಡ ದ್ಯಾಮಣ್ಣ ದೊಡ್ಮನೆ ಮಾತನಾಡಿ, ಪಕ್ಷ ಪಲ್ಲಟ ಸರಿಯಲ್ಲ. ಅನಿವಾರ್ಯ ಕಾರಣದಿಂದ ಅದು ನಡೆದಿದೆ. ಇನ್ನು ಮುಂದೆ ಅದು ನಡೆಯದಂತಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿವಾಜಿ, ಶ್ರೀಲತಾ ಕಾಳೇರಮನೆ, ವಿ.ಎಸ್ ಭಟ್, ಕಾಂಗ್ರೆಸ್ ಕಾರ್ಯಕರ್ತ ರು ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.