ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

America Government: ಭಾರತಕ್ಕೆ ಒಂಟಿಯಾಗಿ ಹೋಗದಿರಿ... ತನ್ನ ಪ್ರಜೆಗಳಿಗೆ ಇದ್ದಕ್ಕಿದ್ದಂತೆ ವಿಚಿತ್ರ ಎಚ್ಚರಿಕೆ ನೀಡಿದ ಅಮೆರಿಕ

ಅಮೆರಿಕ (America) ಭಾರತಕ್ಕೆ (India) ಭೇಟಿ ನೀಡುವ ತನ್ನ ದೇಶದ ನಾಗರಿಕರಿಗೆ ಎಚ್ಚರಿಕೆಯನ್ನು (Travel Warning) ನೀಡಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಎಚ್ಚರಿಕೆಯಿಂದ ಇರಲು ಸೂಚಿಸಿದೆ. ಭಾರತದ ಪ್ರವಾಸಿ ತಾಣಗಳು, ಸಾರಿಗೆ ಕೇಂದ್ರಗಳು, ಮಾರುಕಟ್ಟೆ, ಸರ್ಕಾರಿ ಕಚೇರಿಗಳಲ್ಲಿ ಹಿಂಸಾತ್ಮಕ ಅಪರಾಧಗಳು ಸಂಭವಿಸುತ್ತವೆ. ಯಾವ ಕ್ಷಣದಲ್ಲಾದರೂ ಭಯೋತ್ಪಾದಕಾ ದಾಳಿ ನಡೆಯಬಹುದು ಎಂದು ಅಮೆರಿಕ ತಿಳಿಸಿದೆ.

ಭಾರತಕ್ಕೆ ಒಂಟಿಯಾಗಿ ಹೋಗದಿರಿ... ಟ್ರಂಪ್‌ ಸರ್ಕಾರದಿಂದ ವಾರ್ನಿಂಗ್‌

Profile Rakshita Karkera Jun 22, 2025 7:15 PM

ನವದೆಹಲಿ: ಅಮೆರಿಕ (America) ಭಾರತಕ್ಕೆ (India) ಭೇಟಿ ನೀಡುವ ತನ್ನ ದೇಶದ ನಾಗರಿಕರಿಗೆ ಎಚ್ಚರಿಕೆಯನ್ನು (Travel Warning) ನೀಡಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಎಚ್ಚರಿಕೆಯಿಂದ ಇರಲು ಸೂಚಿಸಿದೆ. ಅಪರಾಧ ಮತ್ತು ಭಯೋತ್ಪಾದನೆಯನ್ನು ಕಾರಣವಾಗಿ ಉಲ್ಲೇಖಿಸಿ ಎಚ್ಚರಿಕೆ ನೀಡಲಾಗಿದೆ. ಭಾರತದ ಪ್ರವಾಸಿ ತಾಣಗಳು, ಸಾರಿಗೆ ಕೇಂದ್ರಗಳು, ಮಾರುಕಟ್ಟೆ, ಸರ್ಕಾರಿ ಕಚೇರಿಗಳಲ್ಲಿ ಹಿಂಸಾತ್ಮಕ ಅಪರಾಧಗಳು ಸಂಭವಿಸುತ್ತವೆ. ಯಾವ ಕ್ಷಣದಲ್ಲಾದರೂ ಭಯೋತ್ಪಾದಕಾ ದಾಳಿ ನಡೆಯಬಹುದು ಎಂದು ಅಮೆರಿಕ ತಿಳಿಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಅಮೆರಿಕ ನಾಗರಿಕರಿಗೆ ತುರ್ತು ಸೇವೆ ಒದಗಿಸಲು ಸರ್ಕಾರದಲ್ಲಿ ಸೌಲಭ್ಯ ಇಲ್ಲ. ಪೂರ್ವ ಮಹಾರಾಷ್ಟ್ರ, ಉತ್ತರ ತೆಲಂಗಾಣದಿಂದ ಪಶ್ಚಿಮ ಬಂಗಾಳಕ್ಕೆ ಅಮೆರಿಕ ಸರ್ಕಾರಿ ಉದ್ಯೋಗಿಗಳು ಪ್ರಯಾಣಿಸಲು ವಿಶೇಷ ಅನುಮತಿ ಪಡೆಯಬೇಕು ಎಂದು ಎಚ್ಚರಿಕೆಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಸ್ಯಾಟಲೈಟ್ ಫೋನ್ ಅಥವಾ ಜಿಪಿಎಸ್ ಉಪಕರಣ ಹೊಂದಿರುವುದು ಕಾನೂನುಬಾಹಿರವಾಗಿದ್ದು, ಇದನ್ನು ತಪ್ಪಿದರೆ 2 ಲಕ್ಷ ಡಾಲರ್ ದಂಡ ಅಥವಾ 3 ವರ್ಷ ಜೈಲು ಶಿಕ್ಷೆಗೆ ಕಾರಣವಾಗಬಹುದು. ಮಹಿಳೆಯಾದರೆ ಒಂಟಿಯಾಗಿ ಪ್ರಯಾಣಿಸಬೇಡಿ ಎಂದು ಅಮೆರಿಕ ತನ್ನ ದೇಶದ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.

ಜಮ್ಮು ಮತ್ತು ಕಾಶ್ಮೀರ, ಭಾರತ-ಪಾಕಿಸ್ತಾನ ಗಡಿ, ಮಧ್ಯ ಮತ್ತು ಪೂರ್ವ ಭಾರತದ ಕೆಲವು ಭಾಗಗಳಿಗೆ ವಿಶೇಷ ಎಚ್ಚರಿಕೆ ಸೂಚಿಸಲಾಗಿದೆ. ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಮೇಘಾಲಯ, ಒಡಿಶಾ ರಾಜ್ಯಗಳಿಗೆ ಅಮೆರಿಕ ಸರ್ಕಾರಿ ಉದ್ಯೋಗಿಗಳು ಪೂರ್ವಾನುಮತಿ ಇಲ್ಲದೆ ಪ್ರಯಾಣಿಸುವಂತಿಲ್ಲ. ಆದರೆ, ಈ ರಾಜ್ಯಗಳ ರಾಜಧಾನಿಗಳಿಗೆ ಪ್ರಯಾಣಕ್ಕೆ ಅನುಮತಿ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: IED Blast: ತೆಲಂಗಾಣದಲ್ಲಿ ಮಾವೋವಾದಿಗಳಿಂದ ಐಇಡಿ ಸ್ಫೋಟ; ಮೂವರು ಗ್ರೇಹೌಂಡ್‌ ಸಿಬ್ಬಂದಿ ಬಲಿ

ಪೂರ್ವ ಮಹಾರಾಷ್ಟ್ರ ಮತ್ತು ಪೂರ್ವ ಮಧ್ಯಪ್ರದೇಶದ ಪ್ರಯಾಣಕ್ಕೂ ಅನುಮತಿ ಅಗತ್ಯವಿದೆ. ಭಾರತ-ನೇಪಾಳ ಗಡಿಯನ್ನು ಭೂಮಾರ್ಗದಿಂದ ದಾಟದಂತೆ ಅಮೆರಿಕ ನಾಗರಿಕರಿಗೆ ಸಲಹೆ ನೀಡಲಾಗಿದೆ, ಏಕೆಂದರೆ ಇದು ವಲಸೆ ಸಂಬಂಧಿತ ಬಂಧನ ಮತ್ತು ದಂಡಕ್ಕೆ ಕಾರಣವಾಗಬಹುದು. ಮಣಿಪುರ ಮತ್ತು ಈಶಾನ್ಯ ರಾಜ್ಯಗಳಿ ತೆರಳದಂತೆ ಎಚ್ಚರಿಕೆಯಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ.