ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rashmika Mandanna: ರಶ್ಮಿಕಾ ಚಿತ್ರರಂಗ ಪ್ರವೇಶಿಸುವುದು ತಂದೆಗೆ ಇಷ್ಟವಿರಲಿಲ್ಲ; ಬಣ್ಣದ ಲೋಕಕ್ಕೆ ಬರದಿದ್ದರೆ ಕೊಡಗಿನ ಬೆಡಗಿ ಏನಾಗುತ್ತಿದ್ದರು?

2016ರಲ್ಲಿ ತೆರೆಕಂಡ ಕನ್ನಡದ ʼಕಿರಿಕ್‌ ಪಾರ್ಟಿʼ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಈಗ ಪ್ಯಾನ್‌ ಇಂಡಿಯಾ ಸ್ಟಾರ್‌. ಅಷ್ಟೇ ಅಲ್ಲದೆ ನ್ಯಾಶನಲ್ ಕ್ರಶ್‌ ಎಂದೆನಿಸಿಕೊಂಡಿದ್ದಾರೆ. ಅದಾಗ್ಯೂ ವಾರು ಚಿತ್ರರಂಗ ಪ್ರವೇಶಿಸುವುದು ಅವರ ಮನೆಯವರಿಗೆ ಇಷ್ಟವಿರಲಿಲ್ಲವಂತೆ. ಈ ಬಗ್ಗೆ ಸ್ವತಃ ರಶ್ಮಿಕಾ ತಿಳಿಸಿದ್ದಾರೆ.

ರಶ್ಮಿಕಾ ಚಿತ್ರರಂಗ ಪ್ರವೇಶಿಸುವುದು ತಂದೆಗೆ ಇಷ್ಟವಿರಲಿಲ್ಲವಂತೆ

ರಶ್ಮಿಕಾ ಮಂದ‍ಣ್ಣ.

Profile Ramesh B Jun 30, 2025 4:13 PM

ಬೆಂಗಳೂರು: 2016ರಲ್ಲಿ ತೆರೆಕಂಡ ಕನ್ನಡದ ʼಕಿರಿಕ್‌ ಪಾರ್ಟಿʼ (Kirik Party) ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ಯಾನ್‌ ಇಂಡಿಯಾ ಸ್ಟಾರ್‌. ಅಷ್ಟೇ ಅಲ್ಲದೆ ನ್ಯಾಶನಲ್ ಕ್ರಶ್‌ ಎಂದೆನಿಸಿಕೊಂಡಿದ್ದಾರೆ. ಚಿತ್ರರಂಗದ ಯಾವುದೇ ಹಿನ್ನೆಲೆ ಇಲ್ಲದೆ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರಿಂದು ದೇಶದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರು. ತೆಲುಗು, ತಮಿಳು, ಹಿಂದಿ ಸಿನಿಮಾಗಳ ನಿರ್ಮಾಪಕರು ಅವರ ಕಾಲ್‌ಶೀಟ್‌ಗಾಗಿ ಕಾಯುವಂತಾಗಿದೆ. ಇಂತಿಪ್ಪ ರಶ್ಮಿಕಾ ಸಿನಿಮಾರಂಗಕ್ಕೆ ಪ್ರವೇಶಿಸುವುದು ಅವರ ಪಾಲಕರಿಗೆ ಇಷ್ಟವಿರಲಿಲ್ಲವಂತೆ. ಅಲ್ಲದೆ ಸ್ವತಃ ರಶ್ಮಿಕಾಗೂ ಚಿತ್ರರಂಗಕ್ಕೆ ಪ್ರವೇಶಿಸುವ ಬಗ್ಗೆ ಯೋಚನೆಯೇ ಇರಲಿಲ್ಲವಂತೆ. ಈ ಬಗ್ಗೆ ಅವರೇ ತಿಳಿಸಿದ್ದಾರೆ.

ಸದ್ಯ ರಶ್ಮಿಕಾ ಬ್ಯಾಕ್‌ ಟು ಬ್ಯಾಕ್‌ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಅದರಲ್ಲಿಯೂ ಇತ್ತೀಚೆಗೆ ತೆರೆಕಂಡ, ರಶ್ಮಿಕಾ ಮೊದಲ ಬಾರಿಗೆ ಧನುಷ್‌ ಜತೆ ಕಾಣಿಸಿಕೊಂಡ ʼಕುಬೇರʼ ಬಾಕ್ಸ್‌ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿದ್ದು, ಈ ವರ್ಷದ ಸೂಪರ್‌ ಹಿಟ್‌ ಚಿತ್ರ ಎನಿಸಿಕೊಂಡಿದೆ. ಈ ಮಧ್ಯೆ ರಶ್ಮಿಕಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Rashmika Mandanna: ಮದುವೆಗೆ ಸಜ್ಜಾದ್ರಾ ರಶ್ಮಿಕಾ ಮಂದಣ್ಣ? ರೇಷ್ಮೆ ಸೀರೆ ಉಟ್ಟು ವಿಜಯ್‌ ದೇವರಕೊಂಡ ಮನೆಯಲ್ಲಿ ಪೋಸ್‌ ಕೊಟ್ಟ ಶ್ರೀವಲ್ಲಿ

ರಶ್ಮಿಕಾ ಹೇಳಿದ್ದೇನು?

ಸಂದರ್ಶನವೊಂದರಲ್ಲಿ ಮಾತನಾಡಿದ ರಶ್ಮಿಕಾ, ತಮ್ಮ ಸಿನಿಮಾ ವೃತ್ತಿಜೀವನಕ್ಕೆ ಕುಟುಂಬ ಆರಂಭದ ದಿನಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಂಡರು. ತಾನು ಕುಟುಂಬದ ವ್ಯವಹಾರ ನೋಡಬೇಕೆಂದು ತಂದೆ ಬಯಸಿದ್ದರು ಎಂದು ರಶ್ಮಿಕಾ ತಿಳಿಸಿದ್ದಾರೆ. ʼʼನಾನು ಎಂದಿಗೂ ನಟಿಯಾಗುವ ಗುರಿ ಹೊಂದಿರಲಿಲ್ಲ. ಪತ್ರಿಕೋದ್ಯಮ, ಮನೋವಿಜ್ಞಾನ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದ ನಂತರ ಮಾಧ್ಯಮದತ್ತ ಆಕರ್ಷಿತಳಾಗಿದ್ದೆ. ಅದಾಗ್ಯೂ ತಂದೆಗೆ ವಿಭಿನ್ನ ಆಲೋಚನೆಗಳಿದ್ದವು. ಅವರ ಕಂಪನಿಗೆ ಸೇರಿ ಸಹಾಯ ಮಾಡಬೇಕೆಂದು ಬಯಸಿದ್ದರುʼʼ ಎಂದು ರಶ್ಮಿಕಾ ತಿಳಿಸಿದ್ದಾರೆ. ತಮ್ಮದು ದಕ್ಷಿಣ ಭಾರತದ ಸಂಪ್ರದಾಯವಾದಿ ಕುಟುಂಬವಾದ್ದರಿಂದ ಚಲನಚಿತ್ರೋದ್ಯಮ ಕುರಿತು ಅನುಮಾನಗಳಿದ್ದವು ಎಂದೂ ಹೇಳಿದ್ದಾರೆ.

ʼʼನನ್ನ ಪ್ರಕಾರ ದಕ್ಷಿಣ ಭಾರತದ ಕೆಲವು ಕುಟುಂಬಗಳಲ್ಲಿ ಈಗಲೂ ಚಿತ್ರರಂಗಕ್ಕೆ ಪ್ರವೇಶಿಸುವ ಬಗ್ಗೆ ಭಯ ಇದೆ. ಅವರಿಗೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವ ಬಗ್ಗೆ ಕಲ್ಪನೆಯೂ ಇಲ್ಲʼʼ ಎಂದು ರಶ್ಮಿಕಾ ಅಭಿಪ್ರಾಯಪಟ್ಟಿದ್ದಾರೆ. ಸಹೋದರಿ ಜನಿಸುವ ತನಕ ಪಾಲಕರು ತಮ್ಮನ್ನು ಚಿಕ್ಕ ಮಗುವಿನ ಹಾಗೆ ಸಂರಕ್ಷಿಸುತ್ತಿದ್ದರು ಎಂದು ತಿಳಿಸಿದ್ದಾರೆ. ʼʼನನ್ನ ಬಗ್ಗೆ ಅವರು ತುಂಬಾ ಪೊಸೆಸಿವ್‌ ಆಗಿದ್ದರು. ಹೀಗಾಗಿ ನಾನು ಚಿತ್ರರಂಗಕ್ಕೆ ಪ್ರವೇಶಿಸುವ ಬಗ್ಗೆ ಅವರನ್ನು ಒಪ್ಪಿಸುವುದು ಸುಲಭದ ಕೆಲಸವಾಗಿರಲಿಲ್ಲ. ನಮ್ಮ ಕುಟುಂಬದಲ್ಲಿ, ಪರಿಚಯದವರಲ್ಲಿ ಯಾರೂ ಕಲಾವಿದರೇ ಇರಲಿಲ್ಲ. ನಾನೇ ಮೊದಲು ಚಿತ್ರರಂಗಕ್ಕೆ ಪ್ರವೇಶಿಸಿದ್ದು. ಹೀಗಾಗಿ ಭಯ ಇದ್ದೇ ಇತ್ತುʼʼ ಎಂದು ಅಂದಿನ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.

ʼಅನಿಮಲ್‌ʼ ಚಿತ್ರದ ಬಗ್ಗೆ ರಶ್ಮಿಕಾ ಹೇಳಿದ್ದೇನು?

2023ರಲ್ಲಿ ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಾಲಿವುಡ್‌ ಚಿತ್ರ ʼಅನಿಮಲ್‌ʼ ತೆರೆಕಂಡಿತ್ತು. ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ಹಿಂಸೆ ಮತ್ತು ಲೈಂಗಿಕತೆಯನ್ನು ವೈಭವೀಕರಿಸಲಾಗಿದೆ ಎನ್ನುವ ಬಗ್ಗೆ ಹಲವು ಅಪಸ್ವರ ಕೇಳಿ ಬಂದಿತ್ತು. ಜತೆಗೆ ಚಿತ್ರ ವೇಕ್ಷಕರ ಮೇಲೆ ಪ್ರಭಾವ ಬೀರುತ್ತದೆ ಎನ್ನುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಈ ಬಗ್ಗೆ ರಶ್ಮಿಕಾ ಮಾತನಾಡಿ, ʼʼಸಿನಿಮಾವನ್ನು ಕೇವಲ ಸಿನಿಮಾವಾಗಿ ಮಾತ್ರ ನೋಡಬೇಕು. ಅದನ್ನು ಕಲಾವಿದರ ವೈಯಕ್ತಿಕ ಜೀವನದೊಂದಿಗೆ ಹೋಲಿಸಬಾರದು. ಕಲಾವಿದರ ನಿಜ ಜೀವನದ ವ್ಯಕ್ತಿತ್ವವನ್ನು ಅವರ ಪಾತ್ರದೊಂದಿಗೆ ಹೋಲಿಸಬೇಡಿ. ಯಾರೂ ಯಾವ ಚಿತ್ರವನ್ನೂ ನೋಡಿ ಒಂದು ಆಗ್ರಹಿಸುವುದಿಲ್ಲ. ಹಾಗಿದ್ದರೆ ಎಲ್ಲ ಚಿತ್ರವೂ ಬ್ಲಾ ಬಸ್ಟರ್‌ ಆಗಿರುತ್ತಿತ್ತುʼʼ ಎಂದಿದ್ದಾರೆ.