ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗಾಳಿ–ಮಳೆಗೆ ಅನಾಹುತ ಸಾಧ್ಯತೆ: ಅಪಾಯಕಾರಿ ಸ್ಥಿತಿಯ ಮರಗಳ ತೆರವಿಗೆ ಆಗ್ರಹ

ಹಿಂದೆಲ್ಲ ರಸ್ತೆ ಕಡೆಗೆ ವಾಲಿದ ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸುತ್ತಿತ್ತು. ಆದರೆ ಕಳೆದ ಒಂದೆರಡು ವರ್ಷಗಳಿಂದ ತೆರವು ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ರಸ್ತೆಯ ನಿರ್ವಹಣೆ ಮಾಡಲು ಇಲಾಖೆ ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದ ಸಣ್ಣಪುಟ್ಟ ಗಿಡಗಳನ್ನು ಮಾತ್ರ ಕಟಾವು ಮಾಡಲಾಗಿದೆ. ರಸ್ತೆಯ ಮೇಲೆ ಬೀಳುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಿಲ್ಲ

ಅಪಾಯಕಾರಿ ಸ್ಥಿತಿಯ ಮರಗಳ ತೆರವಿಗೆ ಆಗ್ರಹ

Profile Ashok Nayak Jun 26, 2025 10:14 PM

ಚಿಂತಾಮಣಿ ತಾಲ್ಲೂಕಿನ ಚೇಳೂರು ರಸ್ತೆಯ ಸೋಮಯಾಜಲಹಳ್ಳಿ ಬಳಿ ರಸ್ತೆ ಇಕ್ಕೆಲಗಳಲ್ಲಿ ಒಣಗಿನಿಂತ ಮರಗಳು,ಮುರಿದು ಬೀಳುವಂತಿರುವ ರೆಂಬೆಕೊಂಬೆಗಳು ಆತಂಕಕಾರಿ ಯಾಗಿದ್ದು, ಅರಣ್ಯ ಇಲಾಖೆ ಹಾಗೂ ಸಂಬಂಧಿ‌ತ ಇಲಾಖೆ ಎಚ್ಚರ ವಹಿಸದಿದ್ದರೆ ಗಾಳಿಮಳೆಗೆ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ.

ಚಿಂತಾಮಣಿ ತಾಲ್ಲೂಕಿನಿಂದ ಪ್ರತಿನಿತ್ಯ ಚೇಳೂರು ರಸ್ತೆ ಮುಖಾಂತರ ಅಪಾರ ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿರುತ್ತವೆ ಆದರೆ ಸೋಮಯಾಜಲಹಳ್ಳಿ ಮುಖ್ಯ ರಸ್ತೆಯಲ್ಲಿ ಎರಡು ದೊಡ್ಡ ಮರಗಳು ಯಾವಾಗ ಬೀಳುತ್ತದೆ ಎಂಬುದು ಗೊತ್ತಾಗುತ್ತಿಲ್ಲ.

ಇದನ್ನೂ ಓದಿ: Chikkaballapur News: ಭೂ ಸ್ವಾಧೀನ ಕೈ ಬಿಡಬೇಕು ಎಂದು ಆಗ್ರಹಿಸಿ ದೇವನಹಳ್ಳಿ ಚಲೋ ಹೊರಟ ಕೆಪಿಆರ್‌ಎಸ್ ಸದಸ್ಯರು

ಮಳೆ ಸಂದರ್ಭದಲ್ಲಿ ಹಾಗೂ ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸುವವರಿಗೆ ಇವು ಅಪಾಯಕಾರಿ ಯಾಗಿದ್ದು, ಈ ಕುರಿತು ಸಂಬಂದ ಇಲಾಖೆ ಗಂಭೀರವಾಗಿ ಪರಿಗಣಿಸಿ, ಅಪಾಯ ಉಂಟಾ ಗುವ ಮುನ್ನ ಎಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹಿಂದೆಲ್ಲ ರಸ್ತೆ ಕಡೆಗೆ ವಾಲಿದ ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸುತ್ತಿತ್ತು. ಆದರೆ ಕಳೆದ ಒಂದೆರಡು ವರ್ಷಗಳಿಂದ ತೆರವು ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ರಸ್ತೆಯ ನಿರ್ವಹಣೆ ಮಾಡಲು ಇಲಾಖೆ ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದ ಸಣ್ಣಪುಟ್ಟ ಗಿಡಗಳನ್ನು ಮಾತ್ರ ಕಟಾವು ಮಾಡಲಾಗಿದೆ. ರಸ್ತೆಯ ಮೇಲೆ ಬೀಳುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಿಲ್ಲ. ಅದನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಅನುಮತಿ ಅವಶ್ಯವಾಗಿದ್ದು, ಅದಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ನಿರಾಕರಿಸುತ್ತದೆ. ಹೀಗಾಗಿ ಹಲವೆಡೆ ವಾಹನ ಸವಾರರು ಕಷ್ಟ ಅನುಭವಿಸುವಂತಾಗಿದೆ. ಇಲಾಖೆಗಳು ಸಮನ್ವಯ ಸಾಧಿಸಿ, ಜನತೆಯ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ವಾಗಬೇಕಿದೆ’ ಎಂಬ ಆಗ್ರಹ ಕೇಳಿ ಬಂದಿದೆ.