ಕೊಚ್ಚಿ ಟಸ್ಕರ್ಸ್ ಫ್ರಾಂಚೈಸಿ ವಜಾ ಪ್ರಕರಣ: ಬಿಸಿಸಿಐಗೆ ಹಿನ್ನಡೆ
Set back for BCCI: ಈ ಹಿಂದೆ ನಿವೃತ್ತ ನ್ಯಾಯಮೂರ್ತಿ ಲಹೋಟಿ ನೇತೃತ್ವದ ಸಮಿತಿ ಕೊಚ್ಚಿ ತಂಡದ ಮಾಲೀಕರಿಗೆ 550 ಕೋಟಿ ರೂ.ಗಳ ಪರಿಹಾರ ನೀಡಬೇಕು ಎಂದು ವರದಿ ನೀಡಿತ್ತು. ಅಲ್ಲದೆ 550 ಕೋಟಿ ರೂ. ನೀಡದಿದ್ದ ಪಕ್ಷದಲ್ಲಿ ವಾರ್ಷಿಕ ಶೇ.18 ರಷ್ಟು ಮೊತ್ತದ ದಂಡ ತೆರಬೇಕು ಎಂದೂ ವರದಿಯಲ್ಲಿ ಎಚ್ಚರಿಕೆ ನೀಡಿತ್ತು. ಆದರೆ ಸಮಿತಿ ನಿರ್ದೇಶನದ ಹೊರತಾಗಿಯೂ ಬಿಸಿಸಿಐ ಕೊಚ್ಚಿ ಟಸ್ಕರ್ಸ್ ತಂಡಕ್ಕೆ ಪರಿಹಾರ ಧನವನ್ನಾಗಲಿ ಅಥವಾ ಪುನಃ ಫ್ರಾಂಚೈಸಿ ನೀಡುವ ಕಾರ್ಯವಾಗಲಿ ಮಾಡಿರಲಿಲ್ಲ.


ಮುಂಬಯಿ: 2011ರಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಐಪಿಎಲ್(Indian Premier League) ಟೂರ್ನಿಯಿಂದ ಕೇರಳದ ಕೊಚ್ಚಿ ಟಸ್ಕರ್ಸ್(Kochi Tuskers) ತಂಡವನ್ನು ಕೈಬಿಡಲಾಗಿದ್ದ ಪ್ರಕರಣ ಸಂಬಂಧಿಸಿ ಬಿಸಿಸಿಐಗೆ ಭಾರೀ ಹಿನ್ನಡೆಯಾಗಿದೆ. ತಂಡದ ಮಾಲೀಕರಿಗೆ 550 ಕೋಟಿ ರೂ.ಗಳ ಪರಿಹಾರ ನೀಡುವ ವಿಚಾರದಲ್ಲಿ ಬಾಂಬೆ ಹೈಕೋರ್ಟ್(Bombay High Court ) ತೀರ್ಪುಗಳನ್ನು ಎತ್ತಿಹಿಡಿದ್ದು ಮಧ್ಯಸ್ಥಿಕೆ ತೀರ್ಪುಗಳ ವಿರುದ್ಧ ಬಿಸಿಸಿಐ(Set back for BCCI) ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಏಕ ನ್ಯಾಯಾಧೀಶರಾಗಿ ಅಧ್ಯಕ್ಷತೆ ವಹಿಸಿದ್ದ ನ್ಯಾಯಮೂರ್ತಿ ಆರ್.ಐ. ಚಾಗ್ಲಾ, ಮಧ್ಯಸ್ಥಿಕೆಯ ತೀರ್ಪುಗಳ ವಿರುದ್ಧ ಬಿಸಿಸಿಐ ಸಲ್ಲಿಸಿದ ಅರ್ಜಿಯನ್ನು ಮಂಗಳವಾರ ವಜಾಗೊಳಿಸಿದ್ದಾರೆ. ನ್ಯಾಯಾಲಯವು ಮೇಲ್ಮನವಿ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ್ದಾರೆ.
"ಮಧ್ಯಸ್ಥಿಕೆ ಕಾಯ್ದೆಯ ಸೆಕ್ಷನ್ 34 ರ ಅಡಿಯಲ್ಲಿ ಈ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ತುಂಬಾ ಸೀಮಿತವಾಗಿದೆ. ವಿವಾದದ ಅರ್ಹತೆಯನ್ನು ಪರಿಶೀಲಿಸುವ ಬಿಸಿಸಿಐ ಪ್ರಯತ್ನವು ಕಾಯ್ದೆಯ ಸೆಕ್ಷನ್ 34 ರಲ್ಲಿರುವ ಆಧಾರದ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಸಾಕ್ಷ್ಯಗಳು ಮತ್ತು/ಅಥವಾ ಅರ್ಹತೆಗಳಿಗೆ ಸಂಬಂಧಿಸಿದಂತೆ ನೀಡಲಾದ ಸಂಶೋಧನೆಗಳ ಬಗ್ಗೆ ಬಿಸಿಸಿಐನ ಅತೃಪ್ತಿಯು ತೀರ್ಪನ್ನು ಪ್ರಶ್ನಿಸಲು ಕಾರಣವಾಗುವುದಿಲ್ಲ" ಎಂದು ನ್ಯಾಯಾಲಯ ತಿಳಿಸಿದಿದೆ.
ಈ ಹಿಂದೆ ನಿವೃತ್ತ ನ್ಯಾಯಮೂರ್ತಿ ಲಹೋಟಿ ನೇತೃತ್ವದ ಸಮಿತಿ ಕೊಚ್ಚಿ ತಂಡದ ಮಾಲೀಕರಿಗೆ 550 ಕೋಟಿ ರೂ.ಗಳ ಪರಿಹಾರ ನೀಡಬೇಕು ಎಂದು ವರದಿ ನೀಡಿತ್ತು. ಅಲ್ಲದೆ 550 ಕೋಟಿ ರೂ. ನೀಡದಿದ್ದ ಪಕ್ಷದಲ್ಲಿ ವಾರ್ಷಿಕ ಶೇ.18 ರಷ್ಟು ಮೊತ್ತದ ದಂಡ ತೆರಬೇಕು ಎಂದೂ ವರದಿಯಲ್ಲಿ ಎಚ್ಚರಿಕೆ ನೀಡಿತ್ತು. ಆದರೆ ಸಮಿತಿ ನಿರ್ದೇಶನದ ಹೊರತಾಗಿಯೂ ಬಿಸಿಸಿಐ ಕೊಚ್ಚಿ ಟಸ್ಕರ್ಸ್ ತಂಡಕ್ಕೆ ಪರಿಹಾರ ಧನವನ್ನಾಗಲಿ ಅಥವಾ ಪುನಃ ಫ್ರಾಂಚೈಸಿ ನೀಡುವ ಕಾರ್ಯವಾಗಲಿ ಮಾಡಿರಲಿಲ್ಲ.
ಇದನ್ನೂ ಓದಿ ಮಾಲಿನ್ಯ ಸಮಸ್ಯೆ; ನವೆಂಬರ್ ಟೆಸ್ಟ್ ಪಂದ್ಯವನ್ನು ದೆಹಲಿಯಿಂದ ಸ್ಥಳಾಂತರಿಸಿದ ಬಿಸಿಸಿಐ
ಏನಿದು ಪ್ರಕರಣ?
ಕೊಚ್ಚಿ ಟಸ್ಕರ್ಸ್ ತಂಡ ರೆಂಡೆವಸ್ ಸ್ಪೋಟ್ಸ್ ವಲ್ರ್ಡ್(ಆರ್ಎಸ್ಡಬ್ಲ್ಯೂ) ಕಂಪೆನಿ ಸೇರಿದಂತೆ ಒಟ್ಟಾರೆ ಐದು ಕಂಪನಿಗಳ ಸಮೂಹದಿಂದ ಹಣಕಾಸು ನೆರವು ಪಡೆದಿತ್ತು. ಆದರೆ 2011ರಲ್ಲಿ ತಂಡ ಬ್ಯಾಂಕ್ ಗ್ಯಾರಂಟಿ ನಿಯಮಾವಳಿಯ ಉಲ್ಲಂಘನೆ ಮಾಡಿದೆ ಎಂದು ಬಿಸಿಸಿಐ ಆರೋಪಿಸಿತ್ತು. ಅಂತೆಯೇ 6 ತಿಂಗಳೊಳಗೆ ಹೊಸ ಬ್ಯಾಂಕ್ ಗ್ಯಾರಂಟಿಯನ್ನು ಒದಗಿಸುವಂತೆ ತಂಡದ ಮಾಲೀಕರಿಗೆ ಸೂಚಿಸಿತ್ತು. ಆದರೆ ನಿಗದಿತ ಸಮಯದಲ್ಲಿ ಕೊಚ್ಚಿ ಟಸ್ಕರ್ಸ್ ತಂಡ ಹೊಸ ಬ್ಯಾಂಕ್ ಗ್ಯಾರಂಟಿ ನೀಡಲು ವಿಫಲವಾಗಿದ್ದರಿಂದ ನಿಯಾಮವಳಿಯಂತೆ ಫ್ರಾಂಚೈಸಿಯನ್ನು ಬಿಸಿಸಿಐ ವಜಾಗೊಳಿಸಿತ್ತು. ಮಾತ್ರವಲ್ಲದೇ ಕೊಚ್ಚಿ ಫ್ರಾಂಚೈಸಿ ನೀಡಿದ್ದ 156 ಕೋಟಿ ಬ್ಯಾಂಕ್ ಗ್ಯಾರಂಟಿಯನ್ನೂ ಕೂಡ ಮುಟ್ಟುಗೊಲು ಹಾಕಿಕೊಂಡಿತ್ತು.