Viral News: ಲವರ್ ಜೊತೆ ಹೆಂಡ್ತಿ ಎಸ್ಕೇಪ್; ಬದುಕಿತು ಬಡಜೀವ...ಎಂದ ಪತಿ; ಏನಿದು ಪ್ರಕರಣ?
ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನವವಿವಾಹಿತೆ ಖುಷ್ಬೂ ಎಂಬ ಮಹಿಳೆ ಮದುವೆಯಾದ ಒಂಬತ್ತು ದಿನಕ್ಕೆ ತನ್ನ ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ. ಆ ವೇಳೆ ಆಕೆಯ ಪತಿ ಸುನೀಲ್ ಅದನ್ನು ವಿರೋಧಿಸುವ ಬದಲು ತಾನು ಇನ್ನೊಬ್ಬ ರಾಜರಘುವಂಶಿಯಾಗಲಿಲ್ಲ ಎಂದು ಖುಷಿಪಟ್ಟಿದ್ದಾನೆ.ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಲಖನೌ: ಇತ್ತೀಚೆಗಷ್ಟೇ ಉದ್ಯಮಿ ರಾಜಾ ರಘುವಂಶಿ ಎಂಬಾತನನ್ನು ಆತನ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಅಂತಹದೊಂದು ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. ನವವಿವಾಹಿತಯೊಬ್ಬಳು ಮದುವೆಯಾದ ಕೆಲವೇ ದಿನಗಳಲ್ಲಿ ತನ್ನ ಪ್ರಿಯಕರನೊಂದಿಗೆ ಓಡಿಹೋಗಿದ್ದು, ಆ ವೇಳೆ ಆಕೆಯ ಪತಿ ತಾನು ಇನ್ನೊಬ್ಬ ರಾಜರಘುವಂಶಿಯಾಗಲಿಲ್ಲ ಎಂದು ಹೇಳಿದ್ದಾನೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಇತ್ತೀಚೆಗೆ ಸುನಿಲ್ ಎಂಬಾತನನ್ನು ವಿವಾಹವಾದ ಖುಷ್ಬೂ, ಒಂಬತ್ತು ದಿನಗಳ ಕಾಲ ಅವನ ಕುಟುಂಬದೊಂದಿಗೆ ಇದ್ದು, ನಂತರ ತನ್ನ ಹೆತ್ತವರ ಮನೆಗೆ ಹೋಗಿದ್ದಳು. ಆದರೆ ಅಲ್ಲಿಂದ ಆಕೆ ತನ್ನ ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ. ಇದನ್ನು ತಿಳಯದ ಸುನಿಲ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾನೆ. ಪೊಲೀಸರು ಅವಳನ್ನು ಹುಡುಕುತ್ತಿರುವಾಗ, ಠಾಣೆಗೆ ಹಾಜರಾಗಿ, ತಾನು ಸ್ವಂತ ಇಚ್ಛೆಯಿಂದ ಹೊರಟು ಹೋಗಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ.ಹಾಗೇ ತಾನು ತನ್ನ ಪ್ರಿಯಕರ ಜೊತೆ ಇರುವುದಾಗಿ ಕೂಡ ಹೇಳಿದ್ದಾಳೆ.
ಪತಿ ಸುನೀಲ್ ತನ್ನ ಜೀವನ ಹಾಳುಮಾಡಿದ ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವ ಅಥವಾ ಪ್ರತಿಭಟಿಸುವ ಬದಲು ಅವಳ ಇಷ್ಟದಂತೆ ಬದುಕು ಒಪ್ಪಿಗೆ ನೀಡಿದ್ದಾನೆ. ಇಲ್ಲಿ ಆತ ಪತ್ನಿ ಹೋಗಿದ್ದಕ್ಕೆ ಬೇಸರಪಟ್ಟುಕೊಳ್ಳುವ ಬದಲು ತಾನು ಇನ್ನೊಬ್ಬ ರಾಜ ರಘುವಂಶಿಯಾಗುವುದರಿಂದ ತಪ್ಪಿಸಿಕೊಂಡೆ ಎಂದು ಖುಷಿಪಟ್ಟಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಮುತ್ತಿಡಲು ಹೋದವನಿಗೆ ಕೊನೆಗೆ ಆಗಿದ್ದೇನು? ಶಾಕಿಂಗ್ ವಿಡಿಯೊ ವೈರಲ್
ಕೊನೆಗೆ ಎರಡೂ ಕುಟುಂಬಗಳು ಈ ವಿಷಯವನ್ನು ಇತ್ಯರ್ಥ ಮಾಡಿಕೊಂಡಿದ್ದಾರಂತೆ. ಮದುವೆಯ ಸಮಯದಲ್ಲಿ ನೀಡಲಾದ ಆಭರಣಗಳು ಮತ್ತು ಉಡುಗೊರೆಗಳನ್ನು ವಧುವಿನ ಕುಟುಂಬವು ಹಿಂತಿರುಗಿಸಿದೆ. ಯಾವುದೇ ಗಲಾಟೆ, ಹೊಡೆದಾಟವಿಲ್ಲದೇ ಪ್ರಕರಣ ಮುಗಿದಿದೆ.