Bhagya Lakshmi Serial: ಕೊನೆಗೂ ನಡೆಯಿತು ಪೂಜಾ-ಕಿಶನ್ ಎಂಗೇಜ್ಮೆಂಟ್: ಮದುವೆ ನಿಲ್ಲಿಸುವೆ ಎಂದ ಕನ್ನಿಕಾ ಗ್ಯಾಂಗ್
ಪೂಜಾ-ಕಿಶನ್ ಎಂಗೇಜ್ಮೆಂಟ್ ನಡೆದು ಹೋಗಿದೆ.. ಇನ್ನೇನು ಮದುವೆ ಕಾರ್ಯಗಳು ಶುರುವಾಗಲಿದೆ. ಆದರೆ, ಇದನ್ನು ತಪ್ಪಿಸಲು ಈಗ ಕನ್ನಿಕಾ-ಆದೀ ಗ್ಯಾಂಗ್ಗೆ ಮೀನಾಕ್ಷಿ ಕೂಡ ಬಂದಿದ್ದು, ಇವರು ಏನು ಮಾಡುತ್ತಾರೆ ಎಂಬುದು ನೋಡಬೇಕಿದೆ. ಮತ್ತೊಂದೆಡೆ ಮೀನಾಕ್ಷಿ ಈ ಮದುವೆ ಹೇಗೆ ಆಗುತ್ತೆ ಅಂತ ನಾನೂ ನೋಡ್ತೀನಿ ಎಂದು ಕೋಪದಲ್ಲಿ ಹೇಳಿರುವುದು ಭಾಗ್ಯ ತಂದೆಯ ಕಿವಿಗೆ ಬಿದ್ದಿದೆ.

Bhagya Lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಪೂಜಾ-ಕಿಶನ್ ಎಂಗೇಜ್ಮೆಂಟ್ ಕೊನೆಗೂ ನಡೆದು ಹೋಗಿದೆ. ಸಾಕಷ್ಟು ವಿಘ್ನಗಳ ನಡುವೆ ನಿಶ್ಚಿತಾರ್ಥ ನೆರವೇರಿದೆ. ಆದೀಶ್ವರ್ ಮತ್ತು ಕನ್ನಿಕಾ ಈ ಎಂಗೇಜ್ಮೆಂಟ್ ಯಾವುದೇ ಕಾರಣಕ್ಕೂ ಆಗಬಾರದು ಎಂದು ಪ್ಲ್ಯಾನ್ ಮಾಡಿದ್ದರು. ಆದರೆ, ರಾಮ್ದಾಸ್ ಕಾಮತ್ ಈ ನಿಶ್ಚಿತಾರ್ಥ- ಮದುವೆ ಎಲ್ಲ ನಡೆದೇ ನಡೆಯುತ್ತದೆ ಎಂದು ಭಾಗ್ಯ ಫ್ಯಾಮಿಲಿಗೆ ಹೇಳಿದ್ದಾರೆ. ಪೂಜಾ-ಕಿಶನ್ ಎಂಗೇಜ್ಮೆಂಟ್ ತಡೆಯಲು ಕನ್ನಿಕಾ-ಆದೀ ರಾಮ್ದಾಸ್ ಅವರ ತಂಗಿ ಮೀನಾಕ್ಷಿ ಅವರನ್ನು ಕರೆಸಲು ಪ್ಲ್ಯಾನ್ ಮಾಡಿದ್ದರು. ಆದರೆ, ಮೀನಾಕ್ಷಿ ಬಂದರೂ ಈ ಎಂಗೇಜ್ಮೆಂಟ್ ನಡೆದಿದೆ.
ಪೂಜಾ ಎಂಗೇಜ್ಮೆಂಟ್ ದಿನ ಗ್ರ್ಯಾಂಡ್ ಆಗಿ ರೆಡಿಯಾಗಿದ್ದಾಳೆ. ಕಿಶನ್ ಕೂಡ ಮುದ್ದಾಗಿ ಕಾಣಿಸುತ್ತಿದ್ದಾರೆ. ಆದರೆ, ಅತ್ತ ಆದೀ ಮತ್ತು ಕನ್ನಿಕಾ ಈ ಎಂಗೇಜ್ಮೆಂಟ್ ನಿಲ್ಲಿಸಲು ಏನಾದರು ಮಾಡಬೇಕು ಎಂದು ತಮ್ಮ ಪ್ಲ್ಯಾನ್ ಅನ್ನು ಮುಂದೆವರೆಸಿದ್ದಾರೆ. ಇದಕ್ಕಾಗಿ ರಾಮ್ದಾಸ್ ತಂಗಿ ಮೀನಾಕ್ಷಿಯನ್ನು ಬರಲು ಹೇಳಿದ್ದಾರೆ. ಮೀನಾಕ್ಷಿ ಬಂದೊಡನೆ ಕನ್ನಿಕಾ ಮತ್ತೊಂದು ಕಥೆ ಕಟ್ಟಿ ಅವಳನ್ನು ನಂಬಿಸಿದ್ದಾಳೆ. ಅವರು ಬಡವರು, ಹಣವಿಲ್ಲ, ಸಂಸ್ಕಾರವಿಲ್ಲ ಎಂದು ಹೇಳಿದ್ದಾಳೆ. ಇದನ್ನ ಕೇಳಿ ಮೀನಾಕ್ಷಿ.. ಏನು ಹಡುಗಿ ಮನೆ ಹೀಗೆ ಇದೆಯಾ?, ಇಂಥ ಮನೆಯಿಂದ ಹೆಣ್ಣು ತರ್ತಾ ಇದ್ದೀವಾ?, ಅಣ್ಣ ಏನು ಮಾಡೋಕೆ ಹೊರಟಿದ್ದಾನೆ ಎಂದು ಕೇಳುತ್ತಾಳೆ.
ಆಗ ಕನ್ನಿಕಾ ನಾವು ಎಷ್ಟು ಹೇಳಿದ್ರೂ ಅಪ್ಪ ಕೇಳ್ತಿಲ್ಲ.. ಇದಕ್ಕೆ ಆದೀ ಕೂಡ ಕೈಜೋಡಿಸಿ, ಅಪ್ಪ ನನ್ನ ಎಲ್ಲ ಮಾತನ್ನ ಕೇಳೋರು ಆದ್ರೆ ಈ ವಿಷಯದಲ್ಲಿ ಯಾಕೆ ಹೀಗೆ ಆಡ್ತಾ ಇದ್ದಾರೆ ಅಂತ ಗೊತ್ತಾಗ್ತಾ ಇಲ್ಲ ಎಂದಿದ್ದಾನೆ. ಈ ಮಾತೆಲ್ಲ ಕೇಳಿ ಮೀನಾಕ್ಷಿ ನೇರವಾಗಿ ಮನೆಯ ಒಳಗೆ ಬಂದು ರಾಮ್ದಾಸ್ ಬಳಿ ಮಾತನಾಡ ಬೇಕು ಎಂದು ಹೇಳುತ್ತಾಳೆ. ಈಗ ಬೇಡ ಮತ್ತೆ ಮಾತಾಡೋಣ ಎಂದು ಹೇಳಿದರು ಕೇಳದೆ ಕೂಡಲೇ ಮತನಾಡಬೇಕು ಎಂದಿದ್ದಾಳೆ.
ಕೊನೆಗೆ ರಾಮ್ದಾಸ್ ಸೈಡ್ಗೆ ಕರೆದುಕೊಂಡು ಹೋಗಿ ಏನು ಹೇಳು ಎನ್ನುತ್ತಾರೆ. ಈ ಕುಟುಂಬ ಎಂತಹದು ಅಂತ ಅವಳ ಅಕ್ಕನನ್ನು ನೋಡಿದ್ರೆ ಗೊತ್ತಾಗುತ್ತೆ ಅಲ್ವಾ.. ಅವಳು ಗಂಡನ ಬಿಟ್ಟವಳು, ಈ ಫ್ಯಾಮಿಲಿ ಸರಿಯಿಲ್ಲ.. ಅವರಿಗಂತು ಈ ಫ್ಯಾಮಿಲಿ-ರಿಲೇಷನ್ಶಿಪ್ ಬಗ್ಗೆ ನಾಲೇಜ್ ಇಲ್ಲ.. ಈ ಮದುವೆ ಆಗೋದು ಬೇಡ.. ಈ ಸಂಬಂಧ ಇಲ್ಲಿಗೆ ನಿಲ್ಲಿಸಿ ಬಿಡೋಣ ಎಂದು ಹೇಳುತ್ತಾಳೆ. ಇದು ರಾಮ್ದಾಸ್ಗೆ ಕೋಪ ತರಿಸಿದೆ. ನಾನು ನಿರ್ಧಾರ ತೆಗೆದುಕೊಂಡು ಆಗಿದೆ.. ನಾನು ಅನೇಕ ಜನರ ಜೊತೆ ಬೆರೆತಿದ್ದೇನೆ.. ಯಾರು ಹೇಗೆ ಅನ್ನೋದು ನಂಗೆ ಚೆನ್ನಾಗಿ ಗೊತ್ತು.. ಕಿಶನ್ಗೆ ಪೂಜಾನೆ ಸರಿಯಾದ ಜೋಡಿ.. ನಮ್ಮ ಮನೆಗೆ ಪೂಜಾನೆ ಸರಿಯಾದ ಸೊಸೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ನಾನು ಆದೀಗೆ ಏನು ಹೇಳಿದ್ದೇನೊ ಅದನ್ನೆ ನಿನ್ಗೂ ಹೇಳುತ್ತೇನೆ.. ಈ ಸಂಬಂಧ ಸರಿ ಇಲ್ಲ ಅನ್ನೋದನ್ನು ಪ್ರೂವ್ ಮಾಡಿ.. ಅದು ಪ್ರೂವ್ ಆದ್ರೆ ಆ ಕ್ಷಣವೇ ಮದುವೆ ನಿಲ್ಲಿಸುತ್ತೇನೆ.. ಈ ಸಂಬಂಧ ಸರಿಯಿಲ್ಲ ಅಂತ ಪ್ರೂಫ್ ಸಮೇತ ಹೇಳಬೇಕು.. ನೀವು ಅದನ್ನು ಪ್ರೂವ್ ಮಾಡೋ ತನಕ ನಾನು ಏನು ಹೇಳುತ್ತೇನೊ ಅದೇ ನಡೆಯುತ್ತೆ ಎಂದು ರಾಮ್ದಾಸ್ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
ಸದ್ಯ ಪೂಜಾ-ಕಿಶನ್ ಎಂಗೇಜ್ಮೆಂಟ್ ನಡೆದು ಹೋಗಿದೆ.. ಇನ್ನೇನು ಮದುವೆ ಕಾರ್ಯಗಳು ಶುರುವಾಗಲಿದೆ. ಆದರೆ, ಇದನ್ನು ತಪ್ಪಿಸಲು ಈಗ ಕನ್ನಿಕಾ-ಆದೀ ಗ್ಯಾಂಗ್ಗೆ ಮೀನಾಕ್ಷಿ ಕೂಡ ಬಂದಿದ್ದು, ಇವರು ಏನು ಮಾಡುತ್ತಾರೆ ಎಂಬುದು ನೋಡಬೇಕಿದೆ. ಮತ್ತೊಂದೆಡೆ ಮೀನಾಕ್ಷಿ ಈ ಮದುವೆ ಹೇಗೆ ಆಗುತ್ತೆ ಅಂತ ನಾನೂ ನೋಡ್ತೀನಿ ಎಂದು ಕೋಪದಲ್ಲಿ ಹೇಳಿರುವುದು ಭಾಗ್ಯ ತಂದೆಯ ಕಿವಿಗೆ ಬಿದ್ದಿದೆ.. ಈ ವಿಚಾರವನ್ನು ಅವರು ಭಾಗ್ಯಾಳಿಗೆ ಹೇಳುವುದು ಖಚಿತ. ಮುಂದೇನು ಆಗುತ್ತೆ ಎಂಬುದು ಕುತೂಹಲ ಕೆರಳಿಸಿದೆ.
Karna Serial: ಕರ್ಣ ಧಾರಾವಾಹಿ ಪ್ರಸಾರವಾಗದ ಬಗ್ಗೆ ನಮ್ರತಾ ಗೌಡ ಹೇಳಿದ್ದೇನು?