ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಧಾರೆ ಎರೆದುಕೊಟ್ಟ ತ್ಯಾಗಮಯಿ ಪತಿ; ಹೊಡಿರಿ ಚಪ್ಪಾಳೆ ಎಂದ ನೆಟ್ಟಿಗರು
Viral Video: ಉತ್ತರ ಪ್ರದೇಶದಲ್ಲಿ ಅಪರೂಪದ ಪ್ರಸಂಗವೊಂದು ನಡೆದಿದ್ದು, ಪತಿಯೇ ಪತ್ನಿಯನ್ನು ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿಸಿದ್ದಾನೆ. ಮದುವೆಯಾಗಿದ್ದರೂ ಪ್ರಿಯಕರನೊಂದಿಗೆ ಸಂಬಂಧ ಹೊಂದಿದ್ದ ಆಕೆಯ ವರ್ತನೆಯಿಂದ ಬೇಸತ್ತು ಆತ ಈ ಕ್ರಮ ಕೈಗೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.


ಲಖನೌ: ಮದುವೆ ಆಗಿ ಮಕ್ಕಳಿರುವ ಮಹಿಳೆಯರು ಪ್ರಿಯಕರನೊಂದಿಗೆ ಓಡಿ ಹೋಗುವ ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದಕ್ಕೆ ಇತ್ತೀಚಿನ ಉದಾಹರಣೆಯಾಗಿ ಈ ಘಟನೆ ಸೇರ್ಪಡೆಯಾಗಿದೆ (Viral Video). ಆದರೆ ಈಲ್ಲೊಂದು ಟ್ವಿಸ್ಟ್ ಇದೆ. ಪ್ರಿಯಕರನೊಂದಿಗೆ ಸಂಬಂಧ ಮುಂದುವರಿಸಿದ್ದ ಪತ್ನಿಯ ವರ್ತನೆಯಿಂದ ಬೇಸೆತ್ತ ಪತಿ ಆಕೆಯನ್ನು ಆತನಿಗೇ ಕೊಟ್ಟು ಮದುವೆ ಮಾಡಿಸಿದ್ದಾನೆ. ಉತ್ತರ ಪ್ರದೇಶದಲ್ಲಿ (Uttar Pradesh) ಈ ವಿಚಿತ್ರ ಘಟನೆ ನಡೆದಿದೆ. ಸದ್ಯ ಈ ವಿಚಾರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಉತ್ತರ ಪ್ರದೇಶದ ಜಾನ್ಪುರದಲ್ಲಿ ಈ ಘಟನೆ ನಡೆದಿದೆ. ಇದು ಜನರನ್ನು ಅಚ್ಚರಿಗೆ ದೂಡಿದ್ದು ಮಾತ್ರವಲ್ಲ ಸಂಬಂಧ, ಪ್ರೀತಿ, ಮದುವೆ ಮತ್ತು ತ್ಯಾಗಕ್ಕೆ ಹೊಸ ಭಾಷ್ಯ ಬರೆದಿದೆ. ಜಿಲ್ಲೆಯ ಸೂಥಕಲಾ ಬ್ಲಾಕ್ನ ಮೊಹಿಯುದ್ದೀನ್ಪುರ ಮಾರ್ಕೆಟ್ನಲ್ಲಿ ಈ ಅಪರೂಪದ ಪ್ರಸಂಗ ನಡೆದಿರುವುದಾಗಿ ವರದಿಯೊಂದು ತಿಳಿಸಿದೆ. ಪತ್ನಿಯ ಲವ್ಸ್ಟೋರಿ ತಿಳಿದ ಪತಿ ಆಕೆಯನ್ನು ಪ್ರಿಯಕರನೊಂದಿಗೆ ಮದುವೆ ಮಾಡಿಸಿ ಕೈ ತೊಳೆದುಕೊಂಡಿದ್ದಾನೆ. ಪತಿಯ ಈ ನಡೆಯನ್ನು ʼʼಅಪರೂಪದ ತ್ಯಾಗʼʼ ಎಂದು ಸ್ಥಳೀಯರು ಬಣ್ಣಿಸಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
" क्या होगा इस देश का लाड़ो " 😡😡
— Mahima Yadav (@SinghKinngSP) June 18, 2025
उत्तर प्रदेश –
जौनपुर में पति अरविंद ने पत्नी रीता की शादी उसके बॉयफ्रेंड यशवंत से करवा दी। शादी से पहले से दोनों रिलेशन में थे। शादी के बाद एक बार बायफ्रेंड के साथ चली गयी थी, लेकिन रीता अपनी हरकतों से बाज नहीं आई और यह बात फिर पति को ये बात… pic.twitter.com/BSXKYjClDq
ಈ ಸುದ್ದಿಯನ್ನೂ ಓದಿ: Viral Video: ವೃದ್ಧ ದಂಪತಿಯ ಪ್ರೀತಿಗೆ ಮನಸೋತು ಮಂಗಳಸೂತ್ರ ಉಡುಗೊರೆ ನೀಡಿದ ಆಭರಣ ಅಂಗಡಿ ಮಾಲೀಕ; ಹೃದಯಸ್ಪರ್ಶಿ ವಿಡಿಯೊ ವೈರಲ್
ಘಟನೆ ವಿವರ
ಸರೈ ಮೊಹಿಯುದ್ದೀನ್ಪುರದ ನಿವಾಸಿ ಅರವಿಂದ್ ಬಿಂದ್ 2 ವರ್ಷಗಳ ಹಿಂದೆ ಖೇತಸರೈ ನಿವಾಸಿ ರೀಟಾ ಎಂಬಾಕೆಯನ್ನು ವಿವಾಹವಾಗಿದ್ದ. ಮದುವೆಯಾದ ಕೆಲವು ದಿನಗಳ ಕಾಲ ಎಲ್ಲವೂ ಸರಿ ಇತ್ತು. ಆದರೆ ತಿಂಗಳ ಬಳಿಕ ಅರವಿಂದ್ಗೆ ಪತ್ನಿಯ ವರ್ತನೆಯಲ್ಲಿನ ಬದಲಾವಣೆ ಗಮನಕ್ಕೆ ಬಂತು. ವಿಚಾರಿಸಿದಾಗ ಆತನಿಗೆ ಪತ್ನಿಯ ಲವ್ ಅಫೇರ್ ಬಗ್ಗೆ ತಿಳಿಯಿತು. ಮದುವೆಗೆ ಮೊದಲೇ ಯಶವಂತ್ ಬಿಂದ್ ಜತೆಗೆ ಸಂಬಂಧ ಹೊಂದಿದ್ದ ಆಕೆ ಬಳಿಕವೂ ಇದನ್ನು ಮುಂದುವರಿಸಿದ್ದಳು.
ಅದಾದ ಬಳಿಕ ರೀಟಾ ತನ್ನ ಪ್ರಿಯಕರ ಯಶವಂತ್ ಜತೆಗೆ ಮನೆ ಬಿಟ್ಟು ಓಡಿ ಹೋದಳು. ಹೇಗೊ ಹುಡುಕಿ ಅರವಿಂದ್ ಆಕೆಯನ್ನು ಮನೆಗೆ ಕರೆ ತಂದ. ಆದರೆ ಆಕೆ ತನ್ನ ಕಿರಿಕ್ ಮುಂದುವರಿಸಿದಳು. ಅತ್ತೆ-ಮಾವನೊಂದಿಗೆ ವಾಸಿಸಲು ನಿರಾಕರಿಸುವ ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದಳು. ಹೀಗಾಗಿ ಅರವಿಂದ್ ಆಕೆಯನ್ನು ಕರೆದುಕೊಂಡು ನೋಯ್ಡಾಕ್ಕೆ ತೆರಳಿದ.
ನಾಯಿ ಬಾಲ ಎಂದಿಗೂ ಡೊಂಕೇ ಎನ್ನುವ ಮಾತಿನಂತೆ ನೋಯ್ಡಾಕ್ಕೆ ಬಂದರೂ ರೀಟಾ ತನ್ನ ವರ್ತನೆಯನ್ನು ಬದಲಾಯಿಸಲಿಲ್ಲ. ಅರವಿಂದ್ ಕೆಲಸಕ್ಕೆ ತೆರಳುತ್ತಿದ್ದಂತೆ ಪ್ರಿಯಕರನೊಂದಿಗೆ ಗಂಟೆಗಟ್ಟಲೆ ಸಂಭಾಷಣೆಯಲ್ಲಿ ತೊಡಗಿರುತ್ತಿದ್ದಳು. ಆತನೊಂದಿಗೆ ಸಂಬಂಧ ಮುಂದುವರಿಸಿದ್ದಳು. ಬಹಳಷ್ಟು ಬಾರಿ ಬುದ್ಧಿ ಹೇಳಿದರೂ ಆಕೆ ಬದಲಾಗಲಿಲ್ಲ. ಕೊನೆಗೆ ಅರವಿಂದ್ ಆಕೆಯನ್ನು ಪ್ರಿಯಕರನೊಂದಿಗೆ ಮದುವೆ ಮಾಡಿಸುವ ನಿರ್ಧಾರಕ್ಕೆ ಬಂದ.
ಜಾನ್ಪುರಕ್ಕೆ ಪತ್ನಿಯನ್ನು ಕರೆತಂದ ಅರವಿಂದ್ ಅಲ್ಲಿನ ದುರ್ಗಾ ದೇವಸ್ಥಾನದಲ್ಲಿ ಯಶವಂತ್ ಜತೆಗೆ ಆಕೆಯ ಮದುವೆ ನೆರವೇರಿಸಿದ್ದಾನೆ. ಸಂಪ್ರದಾಯಬದ್ದವಾಗಿ ವಿವಾಹ ಶಾಸ್ತ್ರ ನೆರವೇರಿದೆ. ಕೊನೆಗೆ ಅರವಿಂದ್ ಭಾವುಕನಾಗಿ ವಧು-ವರರನ್ನು ಅಶೀರ್ವದಿಸಿ ಬೀಳ್ಕೊಟ್ಟಿದ್ದಾನೆ. ಸದ್ಯ ಈ ಅಪರೂಪದ ಮದುವೆ ಪ್ರಸಂಗ ದೇಶದ ಗಮನ ಸೆಳೆದಿದೆ.