Viral News: ಹಾವು ಕಚ್ಚಿದ್ರೆ ಭಯ ಪಡ್ಬೇಕಿಲ್ಲ.... ಈ ಎಲೆ ಇದ್ರೆ ಸಾಕಂತೆ!
ಆಯುರ್ವೇದ ತಜ್ಞರು ಮನೆಯ ಸುತ್ತಮುತ್ತ ಬೆಳೆಯುವ ಕಾಕೋಡ ಗಿಡ ಹಾವಿನ ವಿಷದಿಂದ ಜೀವಗಳನ್ನು ಉಳಿಸಬಲ್ಲದು ಎಂದು ಕಂಡುಹಿಡಿದಿದ್ದಾರೆ. ಹಾವು ಕಚ್ಚಿದ ಕೂಡಲೇ ಕಂಕ್ರೋಲಿನ ಎಲೆಗಳು ಅಥವಾ ಬೇರುಗಳನ್ನು ಪುಡಿ ಮಾಡಿ ಹಾವು ಕಚ್ಚಿದ ಸ್ಥಳಕ್ಕೆ ಹಚ್ಚಿದರೆ ವಿಷದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆಯಂತೆ.ಈ ಸುದ್ದಿ ಈಗ ವೈರಲ್(Viral News) ಆಗಿದೆ.


ನವದೆಹಲಿ: ಹಾವೆಂದರೆ ಎಲ್ಲರೂ ಬೆಚ್ಚಿಬೀಳುತ್ತಾರೆ. ಯಾಕೆಂದರೆ ಕೆಲವೊಂದು ವಿಷಕಾರಿ ಹಾವು ಕಚ್ಚಿದರೆ ಸತ್ತೆ ಹೋಗುತ್ತಾರೆ. ಅದೂ ಅಲ್ಲದೇ, ಪ್ರತಿವರ್ಷ ಸಾವಿರಾರು ಜನರು ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ. ಕಾರಣ ಹಾವು(Snake) ಕಚ್ಚಿದ ತಕ್ಷಣ ಸರಿಯಾದ ಚಿಕಿತ್ಸೆ ಸಿಗದೆ ಈ ಅಪಾಯ ಸಂಭವಿಸುತ್ತದೆ. ಆದರೆ ಇನ್ನು ಮುಂದೆ ಹಾವು ಕಚ್ಚಿದರೆ ಹೆದರುವ ಅಗತ್ಯವಿಲ್ಲ. ಯಾಕೆಂದರೆ ಇತ್ತೀಚೆಗೆ ಐದೇ ನಿಮಿಷಗಳಲ್ಲಿ ಹಾವಿನ ವಿಷ(Poison)ಕ್ಕೆ ರಾಮಬಾಣವಾಗಿರುವ ಔಷಧಿವೊಂದನ್ನು ಕಂಡುಹಿಡಿಯಲಾಗಿದೆ.ಹೌದು ಮನೆಯ ಹಿತ್ತಲಿನಲ್ಲಿ ಸಾಮಾನ್ಯವಾಗಿರುವ ಕಾಕೋಡ ಗಿಡದ ಎಲೆಗಳು ಹಾವಿನ ವಿಷವನ್ನು ತೆಗೆದು ಹಾಕುವ ಶಕ್ತಿಯನ್ನು ಹೊಂದಿದೆಯಂತೆ.ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.
ಈ ಗಿಡದ ಎಲೆಗಳು ಹಾವಿನ ವಿಷವನ್ನು ನಿಷ್ಕ್ರಿಯಗೊಳಿಸಲು ಸಹಾಯ ಮಾಡುತ್ತದೆ ಎಂಬುದಾಗಿ ಆಯುರ್ವೇದ ತಜ್ಞರು ಹೇಳಿದ್ದಾರೆ. ನಿಮ್ಮ ಮನೆಯ ಸುತ್ತಮುತ್ತ ಬೆಳೆಯಬಹುದಾದ ಕಾಕೋಡ ಗಿಡ ಹಾವಿನ ವಿಷದಿಂದ ಜೀವಗಳನ್ನು ಉಳಿಸಬಲ್ಲದು ಎಂದು ಕೆಲವು ತಜ್ಞರು ಸೂಚಿಸಿದ್ದಾರೆ. ಆಯುರ್ವೇದವು ಈ ಗಿಡದ ಎಲೆಗಳನ್ನು ಸರಿಯಾಗಿ ಬಳಸುವ ಮೂಲಕ ಹಾವಿನ ವಿಷವನ್ನು ಐದು ನಿಮಿಷಗಳೊಳಗೆ ನಿಷ್ಕ್ರಿಯಗೊಳಿಸಬಲ್ಲದು ಎಂದು ತಿಳಿಸಿದೆ. ಇದರ ಎಲೆಗಳು ಮತ್ತು ಬೇರುಗಳನ್ನು ಪುಡಿ ಮಾಡಿ ಹಚ್ಚಿದರೆ ವಿಷದ ಪರಿಣಾಮವನ್ನು ಕಡಿಮೆ ಮಾಡಬಲ್ಲದು ಎಂದು ಸಹ ನಂಬಲಾಗಿದೆ.
ಕಂಕ್ರೋಲ್, ಅಥವಾ ಕಟ್ರಾಲ್ ಎಂದು ಕರೆಯಲ್ಪಡುವ ಈ ಗಿಡದ ಎಲೆಗಳು ಹಾವಿನ ವಿಷವನ್ನು ನಿಷ್ಕ್ರಿಯಗೊಳಿಸುವಲ್ಲಿ ಸಹಾಯಕಾರಿಯಾಗಿದೆಯಂತೆ. ಉಷ್ಣ ವಾತಾವರಣ ಮತ್ತು ತೇವಾಂಶವಿರುವ ಸ್ಥಳದಲ್ಲಿ ಕಂಡುಬರುವ ಈ ಗಿಡದ ಕಾಯಿಗಳು ಕೂಡ ಪೌಷ್ಟಿಕಾಂಶಯುಕ್ತವಾಗಿದ್ದು, ಇದನ್ನು ತರಕಾರಿಯಾಗಿ ಅಡುಗೆಯಲ್ಲಿ ಬಳಸುತ್ತಾರೆ. ಇದರ ಔಷಧೀಯ ಗುಣಗಳು ಬಹಳಷ್ಟು ಜನರಿಗೆ ಗೊತ್ತಿಲ್ಲ. ಆದರೆ ಇತರ ಹಣ್ಣುಗಳಿಗೆ ಹೋಲಿಸಿದರೆ ಈ ಗಿಡದ ಹಣ್ಣುಗಳಲ್ಲಿ ಸಾಕಷ್ಟು ಪ್ರೋಟೀನ್ ಅಂಶಗಳಿವೆಯಂತೆ.
ಈ ಸುದ್ದಿಯನ್ನೂ ಓದಿ:Viral Video: ನಡುರಸ್ತೆಯಲ್ಲಿ ಆನೆಯ ಮೇಲೆ ದಾಳಿ ಮಾಡಿದ ಕುದುರೆ; ಶಾಕಿಂಗ್ ವಿಡಿಯೊ ವೈರಲ್
ಆರೋಗ್ಯ ರಾಷ್ಟ್ರೀಯ ಸಂಸ್ಥೆಯ ಪ್ರಕಾರ, ಹಾವು ಕಚ್ಚಿದ ಕೂಡಲೇ ಕಂಕ್ರೋಲಿನ ಎಲೆಗಳು ಅಥವಾ ಬೇರುಗಳನ್ನು ಪುಡಿ ಮಾಡಿ ಹಾವು ಕಚ್ಚಿದ ಸ್ಥಳಕ್ಕೆ ಹಚ್ಚಿದರೆ ವಿಷದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಥವಾ ಅದರ ಚಿಗುರು ಎಲೆಗಳನ್ನು ಜಜ್ಜಿ ಅವುಗಳ ರಸವನ್ನು ಸಹ ಬಳಸಬಹುದು.