KR Puram railway station: ರೈಲಿನಡಿ ಬೀಳುತ್ತಿದ್ದ ಪ್ರಯಾಣಿಕನನ್ನು ದೇವರಂತೆ ಬಂದು ರಕ್ಷಿಸಿದ ರೈಲ್ವೆ ಸಿಬ್ಬಂದಿ, ಮಾಜಿ ಸೈನಿಕ!; ವಿಡಿಯೋ ವೈರಲ್
KR Puram railway station: ಬೆಂಗಳೂರಿನ ಕೆ.ಆರ.ಪುರಂ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ 2 ರಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದೆ. ರೈಲಿನಡಿ ಸಿಲುಕುವಷ್ಟರಲ್ಲಿ ಸ್ಥಳದಲ್ಲಿದ್ದ ಮಾಜಿ ಸೈನಿಕ ಮತ್ತು ರೈಲ್ವೆ ಇಲಾಖೆಯ ಸಿಬ್ಬಂದಿಯೊಬ್ಬರು ಪ್ರಯಾಣಿಕನನ್ನು ಪ್ಲಾಟ್ಫಾರ್ಮ್ನತ್ತ ಎಳೆದು ರಕ್ಷಣೆ ಮಾಡಿದ್ದಾರೆ.


ಬೆಂಗಳೂರು: ಚಲಿಸುತ್ತಿದ್ದ ರೈಲು ಹತ್ತುವಾಗ ಆಯತಪ್ಪಿ ಬಿದ್ದ ಪ್ರಯಾಣಿಕನನ್ನು ಮಾಜಿ ಸೈನಿಕ ಹಾಗೂ ರೈಲ್ವೆ ಸಿಬ್ಬಂದಿ ರಕ್ಷಿಸಿದ ಘಟನೆ ಸೋಮವಾರ ರಾತ್ರಿ ಕೆ. ಆರ್. ಪುರಂ ರೈಲ್ವೆ ನಿಲ್ದಾಣದಲ್ಲಿ (KR Puram railway station) ನಡೆದಿದೆ. ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನನ್ನು ರಕ್ಷಿಸಿರುವ ದೃಶ್ಯ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಂಗಳೂರಿನಿಂದ ಮಂಗಳೂರು ಮಾರ್ಗದೆಡೆಗೆ ಹೊರಟಿದ್ದ ರೈಲು ವೇಗ ಪಡೆದುಕೊಂಡಾಗ ಪ್ರಯಾಣಿಕನೊಬ್ಬ ಆಯತಪ್ಪಿ ಬಿದ್ದಿದ್ದು, ಆತನನ್ನು ರಕ್ಷಣೆ ಮಾಡಲಾಗಿದೆ.
ಕೆ.ಆರ.ಪುರಂ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ 2 ರಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದೆ. ರೈಲಿನಡಿ ಸಿಲುಕುವಷ್ಟರಲ್ಲಿ ಸ್ಥಳದಲ್ಲಿದ್ದ ಮಾಜಿ ಸೈನಿಕ ಸತೀಶ್ ಮತ್ತು ರೈಲ್ವೆ ಇಲಾಖೆಯ ಸಿಬ್ಬಂದಿ ಪ್ರದೀಪ್ ಕುಮಾರ್ ಪ್ರಯಾಣಿಕನನ್ನು ಪ್ಲಾಟ್ಫಾರ್ಮ್ನತ್ತ ಎಳೆದು ರಕ್ಷಣೆ ಮಾಡಿದ್ದಾರೆ. ಇದರಿಂದ ಕೂದಲೆಳೆ ಅಂತರದಲ್ಲಿ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಪ್ರಯಾಣಿಕನನ್ನು ಸಿಬ್ಬಂದಿ ರಕ್ಷಿಸಿದ ವಿಡಿಯೋ
On 23.06.25 Sri Pradeep Kumar, CON/RPF & Sri Sateesh(Ex-Serviceman) swiftly rescued a passenger struggling to deboard of T. No.16565 at PF-2 of KJM Rly stn. Their alertness averted a major mishap & saved a precious life@RPF_INDIA @drmsbc @SWRRLY @rpfswrmys @rpfswr pic.twitter.com/SlL2aB0c7j
— RPF BENGALURU DIV (@rpfswrsbc) June 24, 2025
ಈ ಸುದ್ದಿಯನ್ನೂ ಓದಿ | ಇದನ್ನೂ ಓದಿ: Physical abuse: ಬೆಂಗಳೂರಲ್ಲಿ ಹಾಡಹಗಲೇ ಯುವತಿ ಮೈ ಕೈ ಮುಟ್ಟಿ, ಹಲ್ಲೆಗೈದ ಗಾಂಜಾ ಗ್ಯಾಂಗ್!
ಯುವತಿಗೆ ಕಿರಿಕ್ ಮಾಡಿದ ಗಾಂಜಾ ಗ್ಯಾಂಗ್: ಐವರ ಬಂಧನ
ಬೆಂಗಳೂರು : ಬೆಂಗಳೂರು (bengaluru crime news) ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮೈಲಸಂದ್ರದಲ್ಲಿ ಹಾಡಹಗಲೇ ಗಾಂಜಾ ಮತ್ತಿನಲ್ಲಿ ಯುವತಿಯೊಬ್ಬರ ಮೈಕೈ ಮುಟ್ಟಿ ಎಳೆದಾಡಿ ಕಿರುಕುಳ (Harassment) ನೀಡಿದ ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯ ಮನೆ ಪಕ್ಕದಲ್ಲೇ ವಾಸಿಸುತ್ತಿದ್ದ ಐದರಿಂದ ಆರು ಜನ ಪುಂಡರು ಯವತಿಯ ಮೈಗೆ ಕೈ ಹಾಕಿದ್ದರು. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬನ್ನೇರುಘಟ್ಟ ಠಾಣೆ ಪೊಲೀಸರು (arrest) ಬಂಧಿಸಿದ್ದಾರೆ. ಬಂಧಿತರನ್ನು ಜಾನ್ ರಿಚರ್ಡ್, ಪುನೀತ್ ಅಲಿಯಾಸ್ ಕಾಡೆ, ಅನುಷ್ ಮದನ್, ಅರುಣ್, ಕಾಣಿಕ್ಯಾ ಸ್ವಾಮಿ ಎಂದು ಗುರುತಿಸಲಾಗಿದೆ.
ಹಾಡಹಗಲೇ ಗಾಂಜಾದ ನಶೆ ಏರಿಸಿಕೊಂಡು ತೂರಾಡುತ್ತಿದ್ದ ಯುವಕರು ನಡುಬೀದಿಯಲ್ಲಿ ಅಟ್ಟಹಾಸ ಮೆರೆದಿದ್ದರು. ಅಂಗಡಿಗೆ ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದರು. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮೈಲಸಂದ್ರ ಬಳಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಈ ಕೃತ್ಯ ನಡೆದಿತ್ತು. ಗಾಂಜಾ ಮತ್ತು ಎಣ್ಣೆ ನಶೆಯಲ್ಲಿದ್ದ ಐದರಿಂದ ಆರು ಪುಂಡರ ಗ್ಯಾಂಗ್ ಈ ಕೃತ್ಯ ಎಸಗಿದೆ. ಪ್ರತಿರೋಧ ವ್ಯಕ್ತಪಡಿಸಿದ ಯುವತಿಯ ಮೇಲೆ ಹಲ್ಲೆ ಮಾಡಿದ್ದರು. ಇದನ್ನು ಪ್ರತಿಭಟಿಸಿದ್ದ ಯುವತಿ ಪುಂಡರಿಗೆ ಕಾಲಿನಿಂದ ಒದ್ದು ಪ್ರತಿರೋಧ ತೋರಿದ್ದರು.
ನಂತರ ಅಲ್ಲಿಯೇ ಇದ್ದ ಮನೆಯೊಂದರಲ್ಲಿ ಹೋಗಿ ಸೇರಿಕೊಂಡಿದ್ದರು. ಆದರೆ ಗಾಂಜಾ ನಶೆಯಲ್ಲಿದ್ದ ಆ ಪುಂಡರ ಗ್ಯಾಂಗ್ ಮನೆಗೂ ನುಗ್ಗಿ ಮನೆಯವರಿಗೂ ಅವಾಜ್ ಹಾಕಿತ್ತು. ಈ ಕುರಿತು ಯುವತಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರು ಪುಂಡರ ವಿರುದ್ಧ FIR ದಾಖಲಾಗಿದೆ.