Chikkaballapur News: ಪರಿಸರ ಸ್ನೇಹಿ ಕೃಷಿ ತಾಂತ್ರಿಕತೆಯಿಂದ ಸುಸ್ಥಿರ ಕೃಷಿ ಸಾಧನೆ
ಪ್ರಕೃತಿ ವಿಕೋಪಗಳು ಈಗ ನಮ್ಮ ಕಣ್ಮುಂದೆ ಕಾಣು ತ್ತಿವೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಮರಗಳನ್ನು ಕಡಿದು ವಾಣಿಜ್ಯ ಮಟ್ಟದಲ್ಲಿ ಹೆಚ್ಚು ರಾಸಾಯ ನಿಕಗಳನ್ನು ಬಳಸಿ ಕೃಷಿ ಮಾಡಿ ಹಣಗಳಿಸುತ್ತಿರುವು ದರಿಂದ, ಆರೋಗ್ಯದಲ್ಲಿ ವ್ಯತ್ಯಾಸಗಳು ಕಾಣಿಸಿ ಕೊಂಡು ಆಸ್ಪತ್ರೆಗಳಿಗೆ ಖರ್ಚು ಮಾಡಲಾಗುತ್ತಿದೆಂದು ಸದ್ಯದ ಪರಿಸರದ ಪರಿಸ್ಥಿತಿಯ ಬಗ್ಗೆ ಸಂಕ್ಷಿಪ್ತವಾಗಿ ರೈತರಿಗೆ ಮನದಟ್ಟು ಮಾಡಿಕೊಟ್ಟರು.

ಪರಿಸರ ಸ್ನೇಹಿ ಕೃಷಿ ತಾಂತ್ರಿಕತೆಗಳನ್ನು ಅನುಸರಿಸಿಕೊಂಡು ಸುಸ್ಥಿರ ಕೃಷಿಯನ್ನು ಸಾಧಿಸಬಹುದು, ಹಿಂದಿನ ಕಾಲದಲ್ಲಿ ಹೆಚ್ಚು ಹೆಚ್ಚು ಮರಗಳಿದ್ದು ಆರೋಗ್ಯಕರ ವಾತಾವರಣ ಇರುತ್ತಿತ್ತೆಂದು ಡಾ. ಜಿ.ಆರ್.ಅರುಣಾ ನುಡಿದರು.

ಚಿಂತಾಮಣಿ: ಪರಿಸರ ಸ್ನೇಹಿ ಕೃಷಿ ತಾಂತ್ರಿಕತೆಗಳನ್ನು ಅನುಸರಿಸಿಕೊಂಡು ಸುಸ್ಥಿರ ಕೃಷಿಯನ್ನು ಸಾಧಿಸಬಹುದು, ಹಿಂದಿನ ಕಾಲದಲ್ಲಿ ಹೆಚ್ಚು ಹೆಚ್ಚು ಮರಗಳಿದ್ದು ಆರೋಗ್ಯಕರ ವಾತಾವರಣ ಇರುತ್ತಿತ್ತೆಂದು ಡಾ. ಜಿ.ಆರ್.ಅರುಣಾ ನುಡಿದರು.
ಕೃಷಿ ವಿಜ್ಞಾನ ಕೇಂದ್ರ ಚಿಂತಾಮಣಿ ವತಿಯಿಂದ ರೇಷ್ಮೆಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಪ್ರಕೃತಿ ವಿಕೋಪಗಳು ಈಗ ನಮ್ಮ ಕಣ್ಮುಂದೆ ಕಾಣು ತ್ತಿವೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಮರಗಳನ್ನು ಕಡಿದು ವಾಣಿಜ್ಯ ಮಟ್ಟದಲ್ಲಿ ಹೆಚ್ಚು ರಾಸಾಯ ನಿಕಗಳನ್ನು ಬಳಸಿ ಕೃಷಿ ಮಾಡಿ ಹಣಗಳಿಸುತ್ತಿರುವುದರಿಂದ, ಆರೋಗ್ಯದಲ್ಲಿ ವ್ಯತ್ಯಾಸಗಳು ಕಾಣಿಸಿ ಕೊಂಡು ಆಸ್ಪತ್ರೆಗಳಿಗೆ ಖರ್ಚು ಮಾಡಲಾಗುತ್ತಿದೆಂದು ಸದ್ಯದ ಪರಿಸರದ ಪರಿಸ್ಥಿತಿಯ ಬಗ್ಗೆ ಸಂಕ್ಷಿಪ್ತವಾಗಿ ರೈತರಿಗೆ ಮನದಟ್ಟು ಮಾಡಿಕೊಟ್ಟರು.
ಇದನ್ನೂ ಓದಿ: Chikkaballapur News: ಅಖಿಲ ಕರ್ನಾಟಕ ರೈತ ಸಂಘದ ವತಿಯಿಂದ ಪ್ರತಿಭಟನೆ
ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ. ಅಮೋಘವರ್ಷಚಿತ್ತರಾಗಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಗಿಡಮರ ಬೆಳೆಸಿ, ಪರಿಸರ ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆಯೆಂದು ಹಾಗೂ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಬಳಸಿ ಸಸ್ಯ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು.
ಗೃಹ ವಿಜ್ಞಾನಿ ಡಾ. ಸೌಮ್ಯ ಹಿರೇಗೌಡ್ರು ಸಮತೋಲನದ ಆಹಾರ ಕುರಿತು ಮಾಹಿತಿ ನೀಡಿದರೆ, ಕ್ಷೇತ್ರ ವ್ಯವಸ್ಥಾಪಕಿ ಡಾ. ಸಾಕಮ್ಮ ಹಾಗೂ ಇನ್ನಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಅಂಗವಾಗಿ ೧೦೦ ಸಸಿಗಳನ್ನು ನೆಡಲಾಯಿತು ಹಾಗೂ ರೇಷ್ಮೆಕೃಷಿ ಕಾಲೇಜಿನ ವಿದ್ಯಾರ್ಥಿಗಳು, ದೇಸಿ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.