ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sirsi News: ಸಚ್ಚಾರಿತ್ರ್ಯವಂತ ಸಮಾಜ ನಿರ್ಮಾಣವಾಗಲು ಯೋಗ ಅತ್ಯವಶ್ಯಕ

ಅಂತರಾಷ್ಟ್ರೀಯ ಯೋಗದಿ‌ನವನ್ನು ಜಗತ್ತಿನ ಎಲ್ಲಾ ಕಡೆಗಳಲ್ಲಿ ಆಚರಿಸಲಾಗುತ್ತಿದೆ. ಜಗತ್ತಿನಲ್ಲಿ ಬೇರೆ ಕೆಲವು ದೇಶಗಳಲ್ಲಿ ಯುದ್ಧವಾಗುತ್ತಿದ್ದರೆ ಭಾರತದಲ್ಲಿ ಯೋಗದ ಮೂಲಕ ಜೋಡಿಸುವ ಕಾರ್ಯ ಆಗುತ್ತಿದೆ. ಯುದ್ದ ಒಡೆಯುವ ಕೆಲಸ‌ ಮಾಡಿದರೆ ಯೋಗ ಕೂಡಿಸುತ್ತದೆ. ಆದ್ದರಿಂದ ಯೋಗ ದಿನಾ ಚರಣೆಯ ಈ ಸಂದರ್ಭದಲ್ಲಿ ನಮ್ಮ ಹೊಣೆಗಾರಿಕೆಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಬೇಕು.

ಸಚ್ಚಾರಿತ್ರ್ಯವಂತ ಸಮಾಜ ನಿರ್ಮಾಣವಾಗಲು ಯೋಗ ಅತ್ಯವಶ್ಯಕ

Profile Ashok Nayak Jun 21, 2025 2:10 PM

ಶಿರಸಿ: ಸಚ್ಚಾರಿತ್ರ್ಯವಂತ ಸಮಾಜ ನಿರ್ಮಾಣವಾಗಲು ಯೋಗ ಅತ್ಯವಶ್ಯಕ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾ ಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ‌ಹೇಳಿದರು.

ಶನಿವಾರ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಹಮ್ಮಿಕೊಂಡ ವಿಶ್ವ ಯೋಗ ದಿನಾಚರಣೆ ಯಲ್ಲಿ ಯೋಗಾನುಷ್ಠಾನ ನಡೆಸಿದ ಬಳಿಕ‌ ಅವರು ಆಶೀರ್ವಚನ ನೀಡಿದರು.

ಅಂತರಾಷ್ಟ್ರೀಯ ಯೋಗದಿ‌ನವನ್ನು ಜಗತ್ತಿನ ಎಲ್ಲಾ ಕಡೆಗಳಲ್ಲಿ ಆಚರಿಸಲಾಗುತ್ತಿದೆ. ಜಗತ್ತಿನಲ್ಲಿ ಬೇರೆ ಕೆಲವು ದೇಶಗಳಲ್ಲಿ ಯುದ್ಧವಾಗುತ್ತಿದ್ದರೆ ಭಾರತದಲ್ಲಿ ಯೋಗದ ಮೂಲಕ ಜೋಡಿಸುವ ಕಾರ್ಯ ಆಗುತ್ತಿದೆ. ಯುದ್ದ ಒಡೆಯುವ ಕೆಲಸ‌ ಮಾಡಿದರೆ ಯೋಗ ಕೂಡಿಸುತ್ತದೆ. ಆದ್ದರಿಂದ ಯೋಗ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ಹೊಣೆಗಾರಿಕೆಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಬೇಕು. ಜೋಡಿಸುವ ಕೆಲಸದಲ್ಲಿ ಇನ್ನೂ ನಾವು ಮಾಡಬೇಕಾದದ್ದು ತುಂಬಾ ಇದೆ ಎನ್ನುವುದನ್ನು ನೆನಪಿಸಿಕೊಳ್ಳಬೇಕು. ಯೋಗದಿಂದ ಸಚ್ಚಾರಿತ್ರ್ಯವಂತ ಸಮಾಜ ನಿರ್ಮಾಣವಾಗ ಬೇಕು. ವ್ಯಕ್ತಿ ವ್ಯಕ್ತಿ ವ್ಯಕ್ತಿಯಲ್ಲಿ ಚಾರಿತ್ರ್ಯ ನಿರ್ಮಾಣವಾದರೆ ಸಚ್ಚಾರಿತ್ರ್ಯವಂತ ಸಮಾಜ ನಿರ್ಮಾಣ ವಾಗುತ್ತದೆ.

ಇದನ್ನೂ ಓದಿ: Sirsi News: ಮಾಧ್ಯಮ ಕ್ಷೇತ್ರದಲ್ಲಿ ಕೈ ಹಿಡಿದು ಬರೆಸಬಲ್ಲ, ಮಾರ್ಗದರ್ಶನ ನೀಡುವ ಹಿರಿಯರ ಕೊರತೆ ಸಾಕಷ್ಟಿದೆ

ಒಳ್ಳೆಯ ನಡತೆಗಳು ಯೋಗದ ಅಂಗಗಳು ಎಂಬುದಾಗಿ ಹೇಳಿದ್ದಾರೆ. ಯೋಗ ಸಾಧಕರು ಎಲ್ಲರೂ ಸಚ್ಚಾರಿತ್ರ್ಯವನ್ನು, ಒಳ್ಳೆಯ ನಡತೆಗಳನ್ನು ಅಳವಡಿಸಿಕೊಳ್ಳಬೇಕು ಎಂಬುದು ಪತಂಜಲಿ ಮಹರ್ಷಿ ಗಳ ಆಶಯ. ಯೋಗ ಸಾಧನೆ ಮುಂದುವರಿದರೆ ಒಳ್ಳೆಯನಡತೆಯನ್ನು ಮೈಗೂಡಿಸಿಕೊಳ್ಳಲು ಸಾಧ್ಯ. ಯೋಗದ ಸಾಧನೆ ಸರಿಯಾಗಿ ಮುಂದುವರಿದರೆ ಯೋಗ ಸಾಧಕನಲ್ಲಿ ಒಂದಿಷ್ಟು ಒಳ್ಳೆಯ ಅಂಶಗಳು ಕಂಡುಬರುತ್ತವೆ. ಶರೀರ ಲಘುವಾಗಿ ಇರುತ್ತದೆ, ಬೊಜ್ಜು ಇರುವುದಿಲ್ಲ. ಆರೋಗ್ಯವಂತ ರಾಗಿರುತ್ತಾರೆ. ಇಂದ್ರಿಯಗಳ ಮೂಲಕ ವಿಷಯಗಳನ್ನು ಭೋಗಿಸಬೇಕು ಎಂಬ ಆಕರ್ಷಣೆ ಇರುವುದಿಲ್ಲ. ವಿಷಯಗಳ ಆಕರ್ಷಣೆಗೆ ಅವನು ಅತಿಯಾಗಿ ಒಳಗಾಗುವುದಿಲ್ಲ. ಇವುಗಳು ಯೋಗ ಸಾಧಕನಲ್ಲಿ ಕಂಡುಬರುವ ಅಂಶಗಳಾಗಿವೆ ಎಂದರು. ಇಂದಿನ ಯುವ ಜನತೆಯು ವಿಷಯಗಳ ಆಕರ್ಷಣೆಗೆಯ ಕಡೆಗೆ ಹೋಗುತ್ತಿದ್ದಾರೆ. ಆದ್ದರಿಂದಲೇ ಅನೈತಿಕ ಚಟುವಟಿಕೆಗಳು ಸಮಾಜದಲ್ಲಿ ನಡೆಯುತ್ತಿವೆ.

ಇವುಗಳಿಗೆಲ್ಲ ವಿಷಯಗಳ ಮೇಲಿನ ಅತಿಯಾದ ಆಕರ್ಷಣೆಯೇ ಕಾರಣ. ನಿತ್ಯವೂ ಯೋಗ ಸಾಧನೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಆಲಸ್ಯ ರಹಿತವಾದ ಜೀವನ ಮತ್ತು ಶಿಸ್ತು ಮೈಗತವಾಗಿ ಬಿಡುತ್ತದೆ. ಇದರಿಂದ ಅನೇಕ ಒಳ್ಳೆಯ ಗುಣಗಳು ಬರುತ್ತವೆ. ಯೋಗದ ಸಾಧನೆಯ ಮೂಲಕ ನೈತಿಕತೆಯನ್ನು ಕಟ್ಟಿಕೊಳ್ಳಲು ಸಾಧ್ಯವಿದೆ. ಯೋಗ ದಿನಾಚರಣೆಯ ಈ ಸಂದರ್ಬದಲ್ಲಿ ಯೋಗವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳುವ ಮೂಲಕ ಸಚ್ಚಾರಿತ್ರ್ಯವಂತ ಸಮಾಜದ ನಿರ್ಮಾಣ ಆಗಲಿ ಎಂದು ಆಶಿಸಿದರು. ವಿನಾಯಕ ಭಟ್ ಕಿಚ್ಚೀಕೇರಿ ಯೋಗದ ಮಾರ್ಗದರ್ಶನ ಮಾಡಿದರು. ಕೃಷ್ಣ ಜೋಶಿ ಮೂಲೇಮನೆ, ಸೋಂದಾ ಗ್ರಾ.ಪಂ. ಅಧ್ಯಕ್ಷ ರಾಮಚಂದ್ರ ಭಟ್ ಇತರರು ಇದ್ದರು. ಶ್ರೀಮಠದ ಪಾಠಶಾಲಾ ವಿದ್ಯಾರ್ಥಿಗಳು ಯೋಗಾಸನವನ್ನು ಮಾಡಿದರು.

*

ನಮ್ಮ ಚಿತ್ತ ಯೋಗದತ್ತ ಇರಲಿ. ಯೋಗದಿಂದ ಸಮಾಜದ ಸ್ವಾಸ್ಥ್ಯ ಹೆಚ್ಚಲಿ

-ಸ್ವರ್ಣವಲ್ಲೀ ಶ್ರೀ