Indi(Vijayapura) News: ಡಾ.ಜಿ.ಸಾಗರ ಸಾಹೇವರಿಗೆ ಎಂ.ಎಲ್,ಸಿ ಸ್ಥಾನ ನೀಡಿದ ಕಾಂಗ್ರೆಸ್ ಹೈಕಮಾಂಡಿಗೆ ಅಭಿನಂದನೆ: ರಮೇಶ ನಿಂಬಾಳಕರ್
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಾ.ಡಿ.ಜಿ ಸಾಗರ ಸಾಹೇಬರಿಗೆ ಸಾಮಾಜಿಕ ಸೇವೆ ಗುರುತಿಸಿ ಕಾಂಗ್ರೆಸ್ ಸರಕಾರ ಎಂ.ಎಲ್ ಸಿ ಸ್ಥಾನ ನೀಡಿ ಗೌರವಿಸಿದ್ದು, ಇಡೀ ರಾಜ್ಯದ ದಲಿತ ಸಮುದಾಯಕ್ಕೆ ಸಂದಗೌರವ ಎಂದು ತಾಲೂಕಾ ಡಿ.ಎಸ್.ಎಸ್ (ಸಾಗರ ಬಣ) ಸಂಚಾಲಕ ರಮೇಶ ನಿಂಬಾಳಕರ ಮುಖಂಡರಾದ ಧರೇಪ್ಪ ಮಂದೇವಾಲಿ, ರಾಮಚಂದ್ರ ದೊಡಮನಿ,ಬಾಬು ಗುಡಮಿ ಖಜಾಂಚಿ ಜಂಟಿಯಾಗಿ ತಿಳಿಸಿದ್ದಾರೆ

ಇಂಡಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಾ.ಡಿ.ಜಿ ಸಾಗರ ಸಾಹೇಬರಿಗೆ ಸಾಮಾಜಿಕ ಸೇವೆ ಗುರುತಿಸಿ ಕಾಂಗ್ರೆಸ್ ಸರಕಾರ ಎಂ.ಎಲ್ ಸಿ ಸ್ಥಾನ ನೀಡಿ ಗೌರವಿ ಸಿದ್ದು ಇಡೀ ರಾಜ್ಯದ ದಲಿತ ಸಮುದಾಯಕ್ಕೆ ಸಂದಗೌರವ ಎಂದು ತಾಲೂಕಾ ಡಿ.ಎಸ್.ಎಸ್ (ಸಾಗರ ಬಣ) ಸಂಚಾಲಕ ರಮೇಶ ನಿಂಬಾಳಕರ ಮುಖಂಡರಾದ ಧರೇಪ್ಪ ಮಂದೇವಾಲಿ, ರಾಮಚಂದ್ರ ದೊಡಮನಿ,ಬಾಬು ಗುಡಮಿ ಖಜಾಂಚಿ ಜಂಟಿಯಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Indi (Vijayapura) News: ಉಸಿರು ಹೋದರೂ ಹೆಸರು ಉಳಿಯಬೇಕು: ಶಾಸಕ ಯಶವಂತರಾಯಗೌಡ ಪಾಟೀಲ
ದೂರವಾಣಿ ಮೂಲಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಡಾ.ಡಿ.ಜಿ ಸಾಗರ ಅವರು ನಡೆದು ಬಂದ ದಾರಿ ಹಾಗೂ ಸಾಮಾಜಿಕ ಹಿತ ಚಿಂತನೆ ಐತಿಹಾಸಿಕವಾಗಿದೆ. ಯಾರು ಸಮಾಜ ಕ್ಕಾಗಿ ಸಮುದಾಯಕ್ಕಾಗಿ ತನುಮನದಿಂದ ಸಮರ್ಪಣಾ ಭಾವದಿಂದ ದುಡಿದಿರುತ್ತಾರೆ ಅಂತವರಿಗೆ ಒಳ್ಳೇಯ ಅವಕಾಶ ಸಿಗುತ್ತದೆ ಎಂಬುದಕ್ಕೆ ಡಾ.ಡಿ.ಜಿ ಸಾಗರ ಸಾಹೇಬರು ಉದಾಹರಣೆ.
ಇಡೀ ರಾಜ್ಯಾದಂತ ದಲಿತರ ಶೋಷಿತ ಜನಾಂಗದವರಿಗೆ ಅನ್ಯಾಯ, ಶೋಷಣೆ, ದಬ್ಬಾಳಿಕೆ ನಡೆದಾಗ ದಿಟ್ಟತನದಿಂದ ಹೋರಾಟ ಮಾಡಿ ಸಾಮಾಜಿಕ ನ್ಯಾಯ ನೊಂದ ಜನಾಂಗಕ್ಕೆ ನ್ಯಾಯ ನೀಡಿದ ಹುಟ್ಟು ಹೋರಾಟಗಾರ ಛಲದಂಕ ಮಲ್ಲ ಇಂತಹ ಆದರ್ಶ ನಾಯಕನಿಗೆ ಸರಕಾರ ಗುರುತಿಸಿ ಎಂ.ಎಲ್ ಸಿ ಸ್ಥಾನ ನೀಡಿರುವುದು ಸರಕಾರಕ್ಕೆ ಹಾಗೂ ಕಾಂಗ್ರೆಸ್ ಹೈಕಮಾಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.