ಜಿಲ್ಲೆಯ ಎಲ್ಲಾ ಸರ್ಕಾರಿ ಕೆರೆಗಳನ್ನು ಅಳತೆ ಮಾಡಿಸಿ ಶೀಘ್ರವಾಗಿ ಒತ್ತುವರಿ ತೆರವುಗೊಳಿಸಿ: ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು
ಕೆರೆಗಳ ಸಂರಕ್ಷಣೆ ಕುರಿತ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ , ಮಾರ್ಚ್ ತಿಂಗಳಿನೊಳಗೆ ಅಳತೆಗೆ ಬಾಕಿ ಉಳಿದಿರುವ ಎಲ್ಲ ಕೆರೆಗಳ ಅಳತೆಯನ್ನು ಕಡ್ಡಾ ಯವಾಗಿ ಮಾಡಲು, ಕಾರ್ಯಯೋಜನೆ ರೂಪಿಸಿಕೊಂಡು ಒತ್ತುವರಿಯನ್ನು ಕೂಡಲೇ ತೆರವು ಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು ಅವರು ನಿರ್ದೇಶನ ನೀಡಿದರು. ಒತ್ತು ವರಿ ತೆರವುಗೊಳಿಸದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ಸಹ ನೀಡಿದರು


ಮೈಸೂರು: ಜಿಲ್ಲಾ ಸರ್ಕಾರಿ ಕೆರೆ ಸಂರಕ್ಷಣಾ ಕಾರ್ಯಪಡೆ ವತಿಯಿಂದ ಇಂದು ನಡೆದ ಕೆರೆಗಳ ಸಂರಕ್ಷಣೆ ಕುರಿತ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ , ಮಾರ್ಚ್ ತಿಂಗಳಿನೊಳಗೆ ಅಳತೆಗೆ ಬಾಕಿ ಉಳಿದಿರುವ ಎಲ್ಲ ಕೆರೆಗಳ ಅಳತೆಯನ್ನು ಕಡ್ಡಾ ಯವಾಗಿ ಮಾಡಲು, ಕಾರ್ಯಯೋಜನೆ ರೂಪಿಸಿಕೊಂಡು ಒತ್ತುವರಿಯನ್ನು ಕೂಡಲೇ ತೆರವುಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು ಅವರು ನಿರ್ದೇಶನ ನೀಡಿ ದರು. ಒತ್ತುವರಿ ತೆರವುಗೊಳಿಸದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ಸಹ ನೀಡಿದರು.
ಇದನ್ನೂ ಓದಿ: Mysore Breaking: ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ
ಕಾರ್ಯಪಡೆ ಸಭೆಯಲ್ಲಿ ಗೌ.ಜಿಲ್ಲಾ ನ್ಯಾಯಾಧೀಶರಾದ ಶ್ರೀ.ದಿನೇಶ್ ರವರು, ಜಿಲ್ಲಾ ಪಂಚಾಯತ್ ನ ಶ್ರೀ ಕೃಷ್ಣಂರಾಜು, ಜಿಲ್ಲಾಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಹಾಜರಿದ್ದರು.