ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr M C Sudhakar: ವಿದ್ಯೆ ಕಲಿಸಿದ ಗುರು ಮತ್ತು ಜನ್ಮ ನೀಡಿದ ಪಾಲಕರನ್ನು ಎಂದಿಗೂ ಮರೆಯದಿರಿ

ಪದವಿ ಒಂದು ಘಟ್ಟ, ಇದು ಮುಗಿದ ನಂತರ ರಾಷ್ಟ್ರ ನಿರ್ಮಿಸುವ ದೊಡ್ಡ ಜವಾಬ್ದಾರಿ ನಿಮ್ಮ ಮುಂದಿದೆ . ಎಸ್.ಜೆ.ಸಿ.ಐ.ಟಿ  ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದವರ ಮೇಲೆ ಶ್ರೀಗಳ ಆಶೀರ್ವಾದ ಸದಾ ಇರುತ್ತದೆ.   ಪದವಿ ಪಡೆಯಲು ಕಾರಣರಾದ ಪ್ರಾಧ್ಯಾಪಕರನ್ನು ಮತ್ತು ಪೋಷಕರನ್ನು ಎಂದಿಗೂ ಮರೆಯಬಾರದು

ವಿದ್ಯೆ ಕಲಿಸಿದ ಗುರು ಮತ್ತು ಜನ್ಮ ನೀಡಿದ ಪಾಲಕರನ್ನು ಎಂದಿಗೂ ಮರೆಯದಿರಿ

Profile Ashok Nayak Jun 18, 2025 10:20 PM

ಚಿಕ್ಕಬಳ್ಳಾಪುರ : ವಿದ್ಯೆ ಕಲಿಸಿದ ಗುರುಗಳನ್ನ ಮತ್ತು ಜನ್ಮ ನೀಡಿದ ತಾಯಿ ತಂದೆಯರನ್ನು ಎಂದಿಗೂ ಮರೆಯದೆ ಪದವಿಯ ನಂತರ ರಾಷ್ಟ್ರಕಟ್ಟುವ ಗುರುತರ ಜವಾಬ್ದಾರಿ ಹೊರಬೇಕು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ಹೇಳಿದರು. 

.ಅವರು ನಗರದ ಹೊರವಲಯದ  ಎಸ್ ಜೆ ಸಿ ಐ ಟಿ ತಾಂತ್ರಿಕ ಮಹಾವಿದ್ಯಾಲಯದ ಬಿಜಿಎಸ್ ಆಡಿಟೋರಿಯಮ್ ನಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. 

ಪದವಿ ಒಂದು ಘಟ್ಟ, ಇದು ಮುಗಿದ ನಂತರ ರಾಷ್ಟ್ರ ನಿರ್ಮಿಸುವ ದೊಡ್ಡ ಜವಾಬ್ದಾರಿ ನಿಮ್ಮ ಮುಂದಿದೆ . ಎಸ್.ಜೆ.ಸಿ.ಐ.ಟಿ  ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದವರ ಮೇಲೆ ಶ್ರೀಗಳ ಆಶೀರ್ವಾದ ಸದಾ ಇರುತ್ತದೆ.   ಪದವಿ ಪಡೆಯಲು ಕಾರಣರಾದ ಪ್ರಾಧ್ಯಾಪಕರನ್ನು ಮತ್ತು ಪೋಷಕರನ್ನು ಎಂದಿಗೂ ಮರೆಯಬಾರದು.  ಪೋಷಕರ ಕನಸು ನನಸಾದಂತಹ ದಿನ ಇದಾಗಿದ್ದು  ಮುಂಬರುವ ದಿನಗಳಲ್ಲಿ ಗುರು ಹಿರಿಯ ಮಾರ್ಗದರ್ಶನದೊಂದಿಗೆ  ಸತ್ಪ್ರಜೆಯಾಗಿ  ಬೆಳೆಯಿರಿ, ಆಧುನಿಕ ಸವಾಲು ಗಳನ್ನು ಎದುರಿಸುವಂತಹ ಶಕ್ತಿ  ಬರಲಿ ಎಂದು ಅವರು  ಪದವಿ ಪ್ರಧಾನ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.    

ಇದನ್ನೂ ಓದಿ: Chikkaballapur News: ಹೊರಗುತ್ತಿಗೆ ನೌಕರರ ಹಿತರಕ್ಷಣೆಗೆ ಸಂಘಟನೆ ಬದ್ಧ : ರಾಜ್ಯಾಧ್ಯಕ್ಷ ಸುಧಾಕರ್ ಅಭಯ

ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ   ಪರಮಪೂಜ್ಯ ಜಗದ್ಗುರು ಶ್ರೀ  ಡಾ. ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಪದವಿ ಪೂರೈಸಿ ಶಿಕ್ಷಣವಂತರಾದ   ನೀವು ಈ ದೇಶಕ್ಕೆ ದೊಡ್ಡ ಆಸ್ತಿ. ನಿಮ್ಮ ಭವಿಷ್ಯತನ್ನು ಒಳ್ಳೆದಾಗಿ ರೂಪಿಸಿ ಕೊಂಡು ಸಮಾಜದ ಒಳಿತಿಗೆ  ಶ್ರಮಿಸಬೇಕು. ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಸಿಕ್ಕಂತಹ  ಶಿಕ್ಷಣದ ಜೊತೆಗಿನ ಮೌಲ್ಯವನ್ನು ಸಹ   ರೂಡಿಕೊಂಡು   ಸಮಾಜದಲ್ಲಿ ಉನ್ನತ ಸ್ಥರಕ್ಕೆ  ಏರಬೇಕು. ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬು ದನ್ನು  ಮನನ ಮಾಡಿಕೊಂಡು ಜೀವನದ ಒಳ್ಳೆಯ ಮೌಲ್ಯಗಳೊಂದಿಗೆ ಮುನ್ನಡೆಯಲು  ವಿದ್ಯಾರ್ಥಿ ಗಳಿಗೆ ಶ್ರೀಗಳು ಕಿವಿ ಮಾತು ಹೇಳಿದರು.

ಸದಾ ಅಂತರಂಗದ ಜ್ಞಾನ ಜ್ಯೋತಿಯನ್ನು ಹತ್ತಿಸಿಕೊಳ್ಳಲು ತಿಳಿಸಿದ ಶ್ರೀ  ನಿಮಗೆ ನೀವೆ ಬೆಳಕಾಗಿ ತದನಂತರ ಎಲ್ಲೆಡೆ  ಜ್ಞಾನಜ್ಯೋತಿಯನ್ನು ಬೆಳಗಿಸಿದರೆ ಭೂಮಿಯ ಮೇಲೆ  ಹುಟ್ಟಿರುವುದಕ್ಕೆ ಸಾರ್ಥಕತೆ ಪಡೆಯಲು ಸಾಧ್ಯ  ಕಲಿಕೆಯಿಂದ ಜ್ಞಾನಾರ್ಜನೆ, ಜ್ಞಾನಾರ್ಜನೆಯಿಂದ ಬುದ್ದಿವಂತಿಕೆ ಯನ್ನು ಬೆಳೆಸಿಕೊಂಡು ಸಮಾಜಕ್ಕೆ ನಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದರು.

ಎಸ್ ಜೆ. ಸಿ ಐ ಟಿ   ಕಾಲೇಜಿನ ಪ್ರಾಂಶುಪಾಲರಾದ ಡಾ|| ಜಿ.ಟಿ ರಾಜು ಮಾತನಾಡಿ ವ್ಯಾಸಂಗ ಮಾಡಿದ ಕಾಲೇಜಿಗೆ ಮತ್ತು ಎಚ್ಚ ತಂದೆ ತಾಯಿಗೆ ಗೌರವ ತರುವಂತೆ ಜೀವನದಲ್ಲಿ ತಮ್ಮ  ಈತ ಚಿಂತನೆಗಳನ್ನು ಇಟ್ಟುಕೊಳ್ಳಬೇಕು  ಅದೇ ರೀತಿ ನೀವು ಸಮಾಜದ ಸುಸ್ಥಿರತೆಗೆ  ಇನ್ನೊಬ್ಬರಿಗೆ ಮಾರ್ಗದರ್ಶನ ಆಗುವಂತೆ  ನಡೆದುಕೊಳ್ಳಬೇಕು  ಸೇವಾ ಮನೋಭಾವನೆ ಜೊತೆಗೆ ಮಾನವೀಯ ಮೌಲ್ಯಗಳನ್ನು ರೂಡಿಸಿಕೊಂಡು ನಿಮ್ಮ ಮುಂದಿನ  ಜೀವನ ಸುಂದರಮಯವಾಗಲಿ ಎಂದು ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಅಕಾಡೆಮಿಕ್ ಡೀನ್ ಡಾ|| ಮಂಜುನಾಥ್ ಕುಮಾರ್ ಪದವಿ ವಿದ್ಯಾರ್ಥಿಗಳಿಗೆ ಸಮಾನತೆ, ಕರ್ತವ್ಯನಿಷ್ಠೆ, ಸೇವೆಯನ್ನು ಒಳಗೊಂಡಂತೆ ದ್ಯೇಯ ವಾಕ್ಯ, ಪ್ರತಿಜ್ಞಾವಿಧಿ ಭೋದಿಸಿದರು. 

ಎಲ್ಲಾ ವಿಭಾಗದ ಅಂತಿಮ ವರ್ಷದ ಬಿ.ಇ, ಎಂ.ಟೆಕ್, ಎಂ.ಬಿ.ಎ, ಬಿ.ಎಸ್ಸಿ ಮತ್ತು ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ, ವಿವಿದ ಕ್ಷೇತ್ರಗಳಲ್ಲಿನ ಅತ್ಯುತ್ತಮ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು

ಕಾರ್ಯಕ್ರಮದಲ್ಲಿ ಹಿರಿಯ ನೇಮಕಾತಿ ಮೆನೇಜರ್ ( ಕ್ಯಾಂಪಸ್ ನೇಮಕಾತಿ ) ಕೀರ್ತಿ ನಾಯಕ್,  ಆದಿಚುಂಚನಗಿರಿ ಟ್ರಸ್ಟ್  ಮುಖ್ಯ ಆಡಳಿತ ಅಧಿಕಾರಿ  ಡಾ|| ಎನ್.ಶಿವರಾಮರೆಡ್ಡಿ, ಪ್ರಾಂಶುಪಾಲರಾದ ಡಾ|| ಜಿ.ಟಿ ರಾಜು,  ಜಿ ಆರ್.ರಂಗಸ್ವಾಮಿ ಸೇರಿದಂತೆ  ವಿವಿಧ ವಿಭಾಗಗಳ ಮುಖ್ಯಸ್ಥರು ಪ್ರಾಧ್ಯಾಪಕರು ಬೋಧಕೇತರ ಸಿಬ್ಬಂದಿ ಇದ್ದರು.