ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಉಗ್ರ ಪೋಷಕ ಪಾಕ್‌ ವಿರುದ್ಧ ವಿಶ್ವಸಂಸ್ಥೆಯಲ್ಲಿ ಮತ್ತೆ ಗುಡುಗಿದ ಭಾರತ

ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನವನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಆಪರೇಷನ್ ಸಿಂಧೂರ್ ಭಾರತದ ಹಕ್ಕು ಮಾತ್ರವಲ್ಲ, ಕರ್ತವ್ಯವೂ ಆಗಿದೆ ಎಂದಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಮಾತನಾಡಿದ ಭಾರತೀಯ ರಾಯಭಾರಿ ಕ್ಷಿತಿಜ್ ತ್ಯಾಗಿ, "ಪಾಕಿಸ್ತಾನ ತನ್ನನ್ನು ಬಲಿಪಶು ಎಂದು ಚಿತ್ರಿಸಿಕೊಂಡಿದೆ. ಆದರೆ ಅದು ಜಿಹಾದಿ ಭಯೋತ್ಪಾದಕರ ಕೇಂದ್ರವಾಗಿದೆ ಎಂದಿದ್ದಾರೆ.

ಉಗ್ರ ಪೋಷಕ ಪಾಕ್‌ ವಿರುದ್ಧ ವಿಶ್ವಸಂಸ್ಥೆಯಲ್ಲಿ ಮತ್ತೆ ಗುಡುಗಿದ ಭಾರತ

Profile Rakshita Karkera Jun 24, 2025 2:29 PM

ನವದೆಹಲಿ: ಭಯೋತ್ಪಾದಕರಿಗೆ (Terrorists) ಆಶ್ರಯ ನೀಡುತ್ತಿರುವ ಪಾಕಿಸ್ತಾನವನ್ನು (Pakistan) ಭಾರತ (India) ತೀವ್ರವಾಗಿ ಖಂಡಿಸಿದ್ದು, ಆಪರೇಷನ್ ಸಿಂಧೂರ್ (Operation Sindoor) ಭಾರತದ ಹಕ್ಕು ಮಾತ್ರವಲ್ಲ, ಕರ್ತವ್ಯವೂ ಆಗಿದೆ ಎಂದಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಮಾತನಾಡಿದ ಭಾರತೀಯ ರಾಯಭಾರಿ ಕ್ಷಿತಿಜ್ ತ್ಯಾಗಿ, "ಪಾಕಿಸ್ತಾನ ತನ್ನನ್ನು ಬಲಿಪಶು ಎಂದು ಚಿತ್ರಿಸಿಕೊಂಡಿದೆ. ಆದರೆ ಅದು ಜಿಹಾದಿ ಭಯೋತ್ಪಾದಕರ ಕೇಂದ್ರವಾಗಿದೆ. ಅಮಾಯಕರನ್ನು ಕೊಂದ ಭಯೋತ್ಪಾದಕರಿಗೆ ಆಶ್ರಯ ನೀಡುವ ರಾಷ್ಟ್ರದ ವಿರುದ್ಧ ರಕ್ಷಣಾತ್ಮಕ ಕ್ರಮ (ಆಪರೇಷನ್ ಸಿಂಧೂರ್) ತೆಗೆದುಕೊಳ್ಳುವುದು ಹಕ್ಕು ಮಾತ್ರವಲ್ಲ, ಕರ್ತವ್ಯವೂ ಆಗಿದೆ" ಎಂದಿದ್ದಾರೆ.

ಪಾಕಿಸ್ತಾನವು ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ನೀಡಿದ್ದರಿಂದ ಹಿಡಿದು ಭಯೋತ್ಪಾದಕರಿಗೆ ರಾಜ್ಯ ಗೌರವದ ಅಂತ್ಯಕ್ರಿಯೆಯನ್ನೂ ನಡೆಸಿದೆ ಎಂದು ತ್ಯಾಗಿ ಟೀಕಿಸಿದರು. ಜೊತೆಗೆ, ಸಿಂಧೂ ನದಿ ಒಪ್ಪಂದದ ನಿಯಮಗಳನ್ನು ದುರುಪಯೋಗಪಡಿಸಿಕೊಂಡು ಭಾರತದ ಕಾನೂನುಬದ್ಧ ಯೋಜನೆಗಳಿಗೆ ದಶಕಗಳಿಂದ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು.

ಆಪರೇಷನ್ ಸಿಂಧೂರ್

ಮೇ 7 ರಂದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರನ್ನು ಕೊಂದ ಭಯೋತ್ಪಾದಕ ದಾಳಿಯ ಎರಡು ವಾರಗಳ ಬಳಿಕ, ಭಾರತವು ಪಾಕಿಸ್ತಾನ ಮತ್ತು PoKಯ 9 ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ್‌ನಡಿ ದಾಳಿ ನಡೆಸಿತು. ಪಾಕಿಸ್ತಾನದ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಭಾರತೀಯ ಸೇನೆ ತಡೆದು, ಪ್ರತೀಕಾರ ಕ್ರಮವನ್ನು ವಿಫಲಗೊಳಿಸಿತು. ಮೇ 9-10 ರಂದು, ಬ್ರಹ್ಮೋಸ್ ಕ್ಷಿಪಣಿಯಿಂದ ಸರ್ಗೋಧಾ, ರಹೀಮ್ ಯಾರ್ ಖಾನ್ ಮತ್ತು ನೂರ್ ಖಾನ್ ವಾಯುನೆಲೆಗಳಿಗೆ ಗಂಭೀರ ಹಾನಿಯಾಯಿತು. ಕನಿಷ್ಠ 42 ಪಾಕ್ ಸೈನಿಕರು ಸಾವನ್ನಪ್ಪಿದರು. ಮೇ 10 ರಂದು ಪಾಕಿಸ್ತಾನ ಕದನ ವಿರಾಮಕ್ಕೆ ಮನವಿ ಮಾಡಿದ ಬಳಿಕ ಸಂಘರ್ಷ ಕೊನೆಗೊಂಡಿತು.

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಫೋನ್ ಸಂಭಾಷಣೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ, ಆಪರೇಷನ್ ಸಿಂಧೂರ್‌ನ ಕ್ರಮಗಳು ಸಂಯಮಿತ, ನಿಖರ ಮತ್ತು ಉದ್ವಿಗ್ನತೆ ಹೆಚ್ಚಿಸದಂತಿವೆ ಎಂದರು. ಪಾಕಿಸ್ತಾನದ ಯಾವುದೇ ಗುಂಡಿನ ದಾಳಿಗೆ ಭಾರತ ತೀವ್ರವಾಗಿ ತಿರುಗೇಟು ನೀಡುತ್ತದೆ ಎಂದು ಪುನರುಚ್ಚರಿಸಿದರು. ಭಯೋತ್ಪಾದನೆಯನ್ನು ಇನ್ನು ಮುಂದೆ ಪರೋಕ್ಷ ಯುದ್ಧವೆಂದು ಭಾವಿಸದೆ, ಯುದ್ಧದ ಕೃತ್ಯವೆಂದು ಪರಿಗಣಿಸಲಾಗುವುದು ಮತ್ತು ಆಪರೇಷನ್ ಸಿಂಧೂರ್ ಇನ್ನೂ ಮುಂದುವರಿದಿದೆ ಎಂದು ಮೋದಿ ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ: Narendra Modi: ನಾವು ಉಗ್ರರನ್ನು ಮಾತ್ರ ಹೊಡೆದಿದ್ದೇವೆ; ಆಪರೇಷನ್‌ ಸಿಂದೂರ್‌ ಕುರಿತು ಟ್ರಂಪ್‌ಗೆ ಮಾಹಿತಿ ನೀಡಿದ ಮೋದಿ

ಕೆನಡಾದ ಕನನಾಸ್ಕಿಸ್‌ನ ಜಿ7 ಔಟ್‌ರೀಚ್ ಸೆಷನ್‌ನಲ್ಲಿ ಮಾತನಾಡಿದ ಮೋದಿ, ಪಹಲ್ಗಾಮ್ ದಾಳಿಯು ಮಾನವೀಯತೆಯ ಮೇಲಿನ ದಾಳಿಯಾಗಿದೆ ಎಂದರು. ಭಯೋತ್ಪಾದನೆಗೆ ದ್ವಿಮುಖ ನೀತಿಗೆ ಆಸ್ಪದವಿರಬಾರದು ಎಂದು ಒತ್ತಾಯಿಸಿ, ಪಾಕಿಸ್ತಾನದಂತಹ ಭಯೋತ್ಪಾದನೆಯನ್ನು ಬಹಿರಂಗವಾಗಿ ಬೆಂಬಲಿಸುವ ರಾಷ್ಟ್ರಗಳು ಶತಕೋಟಿ ಡಾಲರ್ ಸಹಾಯ ಪಡೆದು, ಅದನ್ನು ಗಡಿಯಾಚೆಗಿನ ಭಯೋತ್ಪಾದನೆಗೆ ದುರುಪಯೋಗ ಮಾಡುತ್ತವೆ ಎಂದು ಟೀಕಿಸಿದ್ದರು.