ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fire In Crew: 14 ಭಾರತೀಯ ಸಿಬ್ಬಂದಿ ಇದ್ದ ತೈಲ ಹಡಗಿನಲ್ಲಿ ಬೆಂಕಿ; ಕಾರ್ಯಾಚರಣೆಗಿಳಿದ INS ತಬಾರ್‌

ಓಮನ್ ಕೊಲ್ಲಿಯಲ್ಲಿ ಭಾರತೀಯ ಮೂಲದ 14 ಸಿಬ್ಬಂದಿ ಇದ್ದ ಎಂಟಿ ಯಿ ಚೆಂಗ್ 6 ತೈಲ ಹಡಗಿನಲ್ಲಿ ಭಾನುವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಭಾರತೀಯ ನೌಕಾಪಡೆಯ ಹಡಗು ಐಎನ್ಎಸ್ ತಬರ್ ಕಾರ್ಯಾಚರಣೆಗಿಳಿದಿದೆ.

ಕಾಂಡ್ಲಾದಿಂದ ಒಮಾನ್‌ಗೆ ತೆರಳುತ್ತಿದ್ದ ಹಡಗಿನಲ್ಲಿ ಬೆಂಕಿ

Profile Vishakha Bhat Jun 30, 2025 12:20 PM

ನವದೆಹಲಿ: ಓಮನ್ ಕೊಲ್ಲಿಯಲ್ಲಿ (Fire In Crew) ಭಾರತೀಯ ಮೂಲದ 14 ಸಿಬ್ಬಂದಿ ಇದ್ದ ಎಂಟಿ ಯಿ ಚೆಂಗ್ 6 ತೈಲ ಹಡಗಿನಲ್ಲಿ ಭಾನುವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಭಾರತೀಯ ನೌಕಾಪಡೆಯ ಹಡಗು ಐಎನ್ಎಸ್ ತಬರ್ (INS Tabar) ಕಾರ್ಯಾಚರಣೆಗಿಳಿದಿದೆ. ಭಾರತೀಯ ನೌಕಾಪಡೆಯ ಪ್ರಕಾರ, ಜೂನ್ 29 ರಂದು ತೈಲ ಹಡಗು ಭಾರತದ ಕಾಂಡ್ಲಾದಿಂದ ಒಮಾನ್‌ನ ಶಿನಾಸ್‌ಗೆ ಹೋಗುತ್ತಿದ್ದಾಗ ಎಂಜಿನ್ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ವಿದ್ಯುತ್ ವ್ಯತ್ಯಯವಾಯಿತು. ಕಡಲ ಭದ್ರತಾ ಕಾರ್ಯಾಚರಣೆಗಾಗಿ ಕೊಲ್ಲಿಯಲ್ಲಿ ನಿಯೋಜಿಸಲ್ಪಟ್ಟಿದ್ದ ಐಎನ್ಎಸ್ ತಬರ್ ಇದೀಗ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

ಭಾರತದ ಕಾಂಡ್ಲಾದಿಂದ ಓಮನ್‌ನ ಶಿನಾಸ್‌ಗೆ ಪ್ರಯಾಣಿಸುತ್ತಿದ್ದ ಭಾರತೀಯ ಮೂಲದ 14 ಸಿಬ್ಬಂದಿಯ ಹಡಗಿನ ಎಂಜಿನ್ ಕೋಣೆಯಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿತು ಮತ್ತು ಹಡಗಿನಲ್ಲಿ ಸಂಪೂರ್ಣ ವಿದ್ಯುತ್ ವೈಫಲ್ಯ ಸಂಭವಿಸಿದೆ" ಎಂದು ಭಾರತೀಯ ನೌಕಾಪಡೆ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ. ಪುಲಾವ್ ಧ್ವಜಾರೋಹಣಗೊಂಡ ಹಡಗಿನ ತುರ್ತು ಕರೆಗೆ ಐಎನ್ಎಸ್ ತಬರ್ ಸ್ಪಂದಿಸಿತು ಮತ್ತು 14 ಭಾರತೀಯರು ಸೇರಿದಂತೆ ಸಿಲುಕಿಕೊಂಡಿದ್ದ ಸಿಬ್ಬಂದಿಯನ್ನು ಸ್ಥಳಾಂತರಿಸಲು ನೌಕಾ ಹಡಗಿನ ಅಗ್ನಿಶಾಮಕ ತಂಡದ ಸಹಾಯದೊಂದಿಗೆ ಹೆಲಿಕಾಪ್ಟರ್ ಮೂಲಕ ಹಡಗಿಗೆ ವರ್ಗಾಯಿಸಲಾಗಿದೆ.



13 ಭಾರತೀಯ ನೌಕಾ ಸಿಬ್ಬಂದಿ ಮತ್ತು ಹಾನಿಗೊಳಗಾದ ಟ್ಯಾಂಕರ್‌ನ 05 ಸಿಬ್ಬಂದಿ ಪ್ರಸ್ತುತ ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಹಡಗಿನಲ್ಲಿ ಬೆಂಕಿಯ ತೀವ್ರತೆ ತೀವ್ರವಾಗಿ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಕಷ್ಟದಲ್ಲಿರುವ ಹಡಗುಗಳಿಗೆ ಭಾರತೀಯ ನೌಕಾಪಡೆ ಸಹಾಯ ಮಾಡುತ್ತಿರುವುದು ಇದೇ ಮೊದಲಲ್ಲ.

ಈ ಸುದ್ದಿಯನ್ನೂ ಓದಿ: Spying for Pakistan: ಪಾಕಿಸ್ತಾನಕ್ಕೆ ಬೇಹುಗಾರಿಕೆ; ನೌಕಾಪಡೆ ಪ್ರಧಾನ ಕಚೇರಿ ಗುಮಾಸ್ತನ ಬಂಧನ

ಈ ತಿಂಗಳ ಆರಂಭದಲ್ಲಿ ಸಿಂಗಾಪುರ ಧ್ವಜವನ್ನು ಹೊಂದಿರುವ ಸರಕು ಹಡಗಾದ MV ವಾನ್ ಹೈ 503 ಗೆ ಸಹಾಯ ಮಾಡಲು ಭಾರತೀಯ ನೌಕಾಪಡೆ ಕಾರ್ಯಾಚರಣೆ ನಡೆಸಿತ್ತು. ಸಮುದ್ರದ ಅಲೆಗಳು ಮತ್ತು ಸವಾಲಿನ ಹವಾಮಾನದ ಹೊರತಾಗಿಯೂ ಯಶಸ್ವಿಯಾಗಿ ಕಾರ್ಯಚರಣೆ ನಡೆಸಲಾಗಿತ್ತು. ಈ ಹಿಂದೆ ಕೊಲಂಬೊದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಹಡಗಿನ ಒಂದು ಕಂಟೇನರ್ ಕೇರಳದ ಕರಾವಳಿಯಲ್ಲಿ ಸ್ಫೋಟಗೊಂಡಿತ್ತು. ಭಾರತೀಯ ನೌಕಾಪಡೆಯು ಕೊಚ್ಚಿಯಲ್ಲಿರುವ ದಕ್ಷಿಣ ನೌಕಾ ಕಮಾಂಡ್‌ನಿಂದ ಸೀಕಿಂಗ್ ಹೆಲಿಕಾಪ್ಟರ್ ಅನ್ನು ಬಳಸಿಕೊಂಡು ರಕ್ಷಣಾ ತಂಡವನ್ನು ಹಡಗಿನ ಮೇಲೆ ಇಳಿಸಿ ಕಾರ್ಯಾಚರಣೆ ಕೈಗೊಂಡಿತ್ತು.