ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Karnataka High Court: ಜಾತಿ ನಿಂದನೆ ಪ್ರಕರಣ, ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನ ವಾನಳ್ಳಿಗೆ ‌ಹೈಕೋರ್ಟ್ ರಿಲೀಫ್‌

ಜಾತಿ ನಿಂದನೆ‌ ಪ್ರಕರಣದಲ್ಲಿ ನಿರಂಜನ ವಾನಳ್ಳಿಗೆ ಹೈಕೋರ್ಟ್ ರಿಲೀಫ್‌

Karnataka High court : ಜಾತಿ ನಿಂದನೆ, ದ್ವೇಷ ಸಾಧನೆ ಕುರಿತು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕ ಆರ್.ಮಂಜುನಾಥ್ ನೀಡಿದ್ದ ದೂರಿನ ಅನ್ವಯ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ನಿರಂಜನ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

Gold Rate Today: ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today on 10th June 2025: ಬೆಂಗಳೂರಿನಲ್ಲಿ ನಿನ್ನೆ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 10ರೂ. ಇಳಿಕೆಯಾಗಿ 8,945 ರೂ.ಗೆ ತಲುಪಿತ್ತು. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ11 ರೂ. ಇಳಿಕೆಯಾಗಿ 9,758 ರೂ ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 71,560 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 89,450 ರೂ. ಮತ್ತು 100 ಗ್ರಾಂಗೆ 8,94,500 ರೂ. ನೀಡಬೇಕಾಗುತ್ತದೆ.

Road Accident: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ, ಇಬ್ಬರ ಸಾವು

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ, ಇಬ್ಬರ ಸಾವು

Road Accident: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ನಡೆದ ಅಪಘಾತದಲ್ಲಿ ಮಸೂದ್ ಹಾಗೂ ಅಯಾನ್ ಎಂಬವರು ಮೃತಪಟ್ಟಿದ್ದಾರೆ. ಖುಷಿ, ಚಿಕ್ಕು, ಮುಜಾಯಿದ್ ಪಾಷ, ಬಸವರಾಜು, ಪಾರ್ವತಿ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರಿನ ಮಯೋ ಹಾಲ್‌ ಬಳಿ ಘಟಿಸಿದ ಇನ್ನೊಂದು ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದಾರೆ.

Bengaluru Stampede: ಹೈಕಮಾಂಡ್‌ ಕರೆ: ಒಂದೇ ವಿಮಾನದಲ್ಲಿ ದಿಲ್ಲಿಗೆ ದೌಡಾಯಿಸಿದ ಸಿಎಂ, ಡಿಸಿಎಂ

ಹೈಕಮಾಂಡ್‌ ಕರೆ: ಒಂದೇ ವಿಮಾನದಲ್ಲಿ ದಿಲ್ಲಿಗೆ ದೌಡಾಯಿಸಿದ ಸಿಎಂ, ಡಿಸಿಎಂ

Bengaluru Stampede: ಬೆಂಗಳೂರು ಕಾಲ್ತುಳಿತ ಘಟನೆ ರಾಜ್ಯದ ಇಮೇಜ್‌ ಜೊತೆಗೆ ಕಾಂಗ್ರೆಸ್‌ ಪಕ್ಷದ ವರ್ಚಸ್ಸಿಗೂ ಹಾನಿಯುಂಟುಮಾಡಿದ್ದು, ಹೈಕಮಾಂಡ್‌ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ. ವರಿಷ್ಠರು ಘಟನೆ ನಡೆದ ದಿನ ಪ್ರಾಥಮಿಕ ಮಾಹಿತಿ ಪಡೆದಿದ್ದರೂ, ಇದೀಗ ಸಂಪೂರ್ಣ ವರದಿ ಪಡೆಯಲಿದ್ದಾರೆ.

SL Bhyrappa: ಸಮಾಜಸೇವೆಗೆ ಮೀಸಲಾದ ʼಡಾ. ಎಸ್ ಎಲ್ ಭೈರಪ್ಪ ಪ್ರತಿಷ್ಠಾನʼ ಜೂನ್‌ 14ರಂದು ಉದ್ಘಾಟನೆ

ಸಮಾಜಸೇವೆಗಾಗಿ ʼಡಾ. ಎಸ್ ಎಲ್ ಭೈರಪ್ಪ ಪ್ರತಿಷ್ಠಾನʼ ಜೂ.14ರಂದು ಉದ್ಘಾಟನೆ

SL Bhyrappa: ಭೈರಪ್ಪನವರ ಸಮಾಜಮುಖಿ ಕಾರ್ಯಗಳ ಹಾಗೂ ಯೋಜನೆಗಳನ್ನು ಜಾರಿಗೆ ತರಲು ಸ್ಥಾಪಿಸಲಾಗುತ್ತಿರುವ ʼಡಾ. ಎಸ್. ಎಲ್. ಭೈರಪ್ಪ ಪ್ರತಿಷ್ಠಾನ (ರಿ)ʼದ ಉದ್ಘಾಟನೆ ಜೂನ್‌ 14 ಶನಿವಾರ ನೆರವೇರಲಿದೆ. ಬೆಂಗಳೂರಿನ ಬಸವನಗುಡಿ ರಸ್ತೆಯ ಬಿಎಂಎಸ್‌ ಇಂಜಿನಿಯರಿಂಗ್‌ ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

Monsoon Shopping Styling Tips: ಮಾನ್ಸೂನ್ ಸೀಸನ್ ಶಾಪಿಂಗ್ ಸ್ಟೈಲಿಂಗ್‌ಗೆ ಇಲ್ಲಿದೆ 5 ಐಡಿಯಾ

ಮಾನ್ಸೂನ್ ಸೀಸನ್ ಶಾಪಿಂಗ್ ಸ್ಟೈಲಿಂಗ್‌ಗೆ ಇಲ್ಲಿದೆ 5 ಐಡಿಯಾ

Monsoon Shopping Styling Tips: ಮಾನ್ಸೂನ್ ಸೀಸನ್‌ನಲ್ಲಿ ಶಾಪಿಂಗ್ ಮಾಡುವುದು ಸುಲಭವೇನಲ್ಲ! ಮಳೆ-ಗಾಳಿಯ ಭರಾಟೆಯಲ್ಲಿ ಕಿರಿಕಿರಿ ಎಂದೆನಿಸುವುದು ಸಹಜ. ಹಾಗಾಗಿ ಈ ಸೀಸನ್‌ನಲ್ಲಿ ಆರಾಮವಾಗಿ ಒಂದಿಷ್ಟು ಸ್ಟೈಲಿಂಗ್ ಟಿಪ್ಸ್ ಪಾಲಿಸಿದಲ್ಲಿ ಕಂಫರ್ಟಬಲ್ ಆಗಿ ಶಾಪಿಂಗ್ ಮಾಡಬಹುದು. ಇದಕ್ಕಾಗಿ ಒಂದೈದು ಸಿಂಪಲ್ ಐಡಿಯಾ ನೀಡಿದ್ದಾರೆ ಸ್ಟೈಲಿಂಗ್ ಎಕ್ಸ್‌ಪರ್ಟ್ಸ್.

Self Harming: ಪದೇ ಪದೆ ಮನೆ ಬಿಟ್ಟು ಹೋಗುವ ಪತ್ನಿ, ನೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

ಪದೇ ಪದೆ ಮನೆ ಬಿಟ್ಟು ಹೋಗುವ ಪತ್ನಿ, ನೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

7 ವರ್ಷಗಳ ಹಿಂದೆ ವಿವಾಹವಾಗಿದ್ದ ಗೋವರ್ಧನ್ ಮತ್ತು ಪ್ರಿಯಾ ದಂಪತಿಗೆ ಎರಡು ಮಕ್ಕಳಿವೆ. ಪ್ರಿಯಾ ಆಗಾಗ ಮನೆ ಬಿಟ್ಟು ಹೋಗುತ್ತಿದ್ದಳು ಎನ್ನುವ ಆರೋಪ ಕೇಳಿಬಂದಿದೆ. ಕಳೆದ ಒಂದು ತಿಂಗಳ ಹಿಂದೆ ಕೂಡ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಖಿನ್ನತೆಗೊಳಗಾಗಿ ಗೋವರ್ಧನ್ ಮನೆಯಲ್ಲಿ ಫ್ಯಾನ್​ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ.

Bengaluru Stampede: ಕಾಲ್ತುಳಿತ ಪ್ರಕರಣ: ಇಂದು ಹೈಕೋರ್ಟ್‌ನಲ್ಲಿ ಆರೋಪಿ ನಿಖಿಲ್‌ ಅರ್ಜಿ ವಿಚಾರಣೆ

ಕಾಲ್ತುಳಿತ ಪ್ರಕರಣ: ಇಂದು ಹೈಕೋರ್ಟ್‌ನಲ್ಲಿ ಆರೋಪಿ ನಿಖಿಲ್‌ ಅರ್ಜಿ ವಿಚಾರಣೆ

bengaluru Stampede : ಕಾಲ್ತುಳಿತ ದುರಂತ ಪ್ರಕರಣದಲ್ಲಿ ತಮ್ಮ ಕಕ್ಷಿದಾರರನ್ನು ಬಂಧಿಸಲಾಗಿದೆ. ಇದು ಕಾನೂನು ಉಲ್ಲಂಘಿಸಿ ಮಾಡಿದ ಬಂಧನವಾಗಿದೆ. ನಿಖಿಲ್ ಸೋಸಲೆಗೆ ಮಧ್ಯಂತರ ಜಾಮೀನು ನೀಡುವಂತೆ ಹೈಕೋರ್ಟ್ ನ್ಯಾಯಪೀಠಕ್ಕೆ ನಿಖಿಲ್‌ ಪರ ನ್ಯಾಯವಾದಿ ಮನವಿ ಮಾಡಿದರು.

DCC Bank scam: ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಮಂಜುನಾಥ ಗೌಡ ಆಸ್ತಿ ಇಡಿಯಿಂದ ಮುಟ್ಟುಗೋಲು

ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಮಂಜುನಾಥ ಗೌಡ ಆಸ್ತಿ ಇಡಿಯಿಂದ ಮುಟ್ಟುಗೋಲು

DCC Bank scam: ಸದ್ಯ ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರಾಗಿರುವ ಆರ್.ಎಂ. ಮಂಜುನಾಥ್ ಗೌಡ ಜೈಲಿನಲ್ಲಿದ್ದು, ಅವರಿಗೆ ಸೇರಿದ ₹13.91 ಕೋಟಿ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಚರಾಸ್ತಿ ಹಾಗೂ ಸ್ತಿರಾಸ್ತಿ ಸೇರಿ ₹13.91 ಕೋಟಿ ಸೀಜ್ ಮಾಡಲಾಗಿದೆ.

Dog Designewears: ನಿಮ್ಮನೆ ಮುದ್ದು ನಾಯಿಮರಿಗಳಿಗೂ ಬಂತು ಕಲರ್‌ಫುಲ್ ಡಿಸೈನರ್‌ವೇರ್ಸ್

ನಿಮ್ಮನೆ ಮುದ್ದು ನಾಯಿಮರಿಗಳಿಗೂ ಬಂತು ಕಲರ್‌ಫುಲ್ ಡಿಸೈನರ್‌ವೇರ್ಸ್

Dog Designewears: ಮನೆಯ ಮುದ್ದು ಶ್ವಾನಗಳು ಕೂಡ ಗ್ರ್ಯಾಂಡ್ ಸಮಾರಂಭಗಳಲ್ಲಿ ಸಿಂಗಾರಗೊಳ್ಳುತ್ತಿವೆ. ಇವಕ್ಕೆ ಪೂರಕ ಎಂಬಂತೆ, ನಾನಾ ಪೆಟ್ ಶಾಪ್‌ಗಳು ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿವೆ. ಅವುಗಳಲ್ಲಿ ಯಾವ್ಯಾವ ಬಗೆಯವು ಬೇಡಿಕೆ ಪಡೆದುಕೊಂಡಿವೆ. ಈ ಕುರಿತಂತೆ ಡಾಗ್ ಡಿಸೈನರ್‌ಗಳು ಇಲ್ಲಿ ವಿವರಿಸಿದ್ದಾರೆ.

Karnataka Weather: ಇಂದಿನ ಹವಾಮಾನ; ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಮಳೆ!

ಇಂದು ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಮಳೆ!

Karnataka Weather: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರೆಸಾರ್ಟ್​ನಲ್ಲಿ ಕೆಲಸ ಮಾಡುತ್ತಿದ್ದವರ ನಡುವಿನ ಜಗಳ ಒಬ್ಬನ ಕೊಲೆಯಲ್ಲಿ ಪರ್ಯಾವಸಾನ: ಮೂವರ ಬಂಧನ

ಜಗಳ ಒಬ್ಬನ ಕೊಲೆಯಲ್ಲಿ ಪರ್ಯಾವಸಾನ: ಮೂವರ ಬಂಧನ

ಹ್ಯಾಪಿ ರಿಟ್ರೀಟ್ ಹೋಂಸ್ಟೇಯಲ್ಲಿ ಎಲ್ಲಾ ಆರೋಪಿಗಳು ಮತ್ತು ಮೃತನು 3 ತಿಂಗಳಿನಿಂದ ಮನೆ ಗೆಲಸದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಭಾನುವಾರ ರಾತ್ರಿರೆಲ್ಲ ನಾಲ್ವರು ಮದ್ಯ ಸೇವಿಸಿ ದ್ದಾರೆ.  ನಂತರ ಜಗಳವಾಗಿದೆ. ಜಗಳವಾಡುವ ಸಮಯದಲ್ಲಿ, ಹರಿಧನ್ ನ ತನ್ನ ಮನೆಗೆ ಪೋನ್ ಮಾಡಿ ಮನೆಯವರ ಜೊತೆ ಮಾತನಾಡುತ್ತಿದ್ದ ಈ ವೇಳೆ ಮೃತ ಮೋಹನ್ ಹರಿಧನ್ ನ ಮೊಬೈಲ್ ಅನ್ನು ಕಸಿದುಕೊಂಡು ಹರಿಧನ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸ ಲಾಗಿದೆ.

Indi(Vijayapura) News: ಡಾ.ಜಿ.ಸಾಗರ ಸಾಹೇವರಿಗೆ ಎಂ.ಎಲ್,ಸಿ ಸ್ಥಾನ ನೀಡಿದ ಕಾಂಗ್ರೆಸ್ ಹೈಕಮಾಂಡಿಗೆ ಅಭಿನಂದನೆ: ರಮೇಶ ನಿಂಬಾಳಕರ್

ಸಾಹೇವರಿಗೆ ಎಂ.ಎಲ್.ಸಿ ಸ್ಥಾನ: ಕಾಂಗ್ರೆಸ್ ಹೈಕಮಾಂಡಿಗೆ ಅಭಿನಂದನೆ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಾ.ಡಿ.ಜಿ ಸಾಗರ ಸಾಹೇಬರಿಗೆ ಸಾಮಾಜಿಕ ಸೇವೆ ಗುರುತಿಸಿ ಕಾಂಗ್ರೆಸ್ ಸರಕಾರ ಎಂ.ಎಲ್ ಸಿ ಸ್ಥಾನ ನೀಡಿ ಗೌರವಿಸಿದ್ದು, ಇಡೀ ರಾಜ್ಯದ ದಲಿತ ಸಮುದಾಯಕ್ಕೆ ಸಂದಗೌರವ ಎಂದು ತಾಲೂಕಾ ಡಿ.ಎಸ್.ಎಸ್ (ಸಾಗರ ಬಣ) ಸಂಚಾಲಕ ರಮೇಶ ನಿಂಬಾಳಕರ ಮುಖಂಡರಾದ ಧರೇಪ್ಪ ಮಂದೇವಾಲಿ, ರಾಮಚಂದ್ರ ದೊಡಮನಿ,ಬಾಬು ಗುಡಮಿ ಖಜಾಂಚಿ ಜಂಟಿಯಾಗಿ ತಿಳಿಸಿದ್ದಾರೆ

Bengaluru Stampede: ಕಾಲ್ತುಳಿತ ಪ್ರಕರಣ; ಅಮಾನತು ಪ್ರಶ್ನಿಸಿ ಸಿಎಟಿ ಮೊರೆ ಹೋದ ಐಪಿಎಸ್ ಅಧಿಕಾರಿ

ಕಾಲ್ತುಳಿತ ಪ್ರಕರಣ; ಅಮಾನತು ಪ್ರಶ್ನಿಸಿ ಸಿಎಟಿ ಮೊರೆ ಹೋದ ಐಪಿಎಸ್ ಅಧಿಕಾರಿ

Bengaluru Stampede: ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ. ದಯಾನಂದ್‌ ಸೇರಿ ಐವರು ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು. ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ಅವರು ತಮ್ಮ ಅಮಾನತು ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದಾರೆ.

Murder Case: 6 ವರ್ಷದ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ ಬಂಧನ

ಆರು ವರ್ಷದ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ!

Murder Case: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದೆ. ಮಗುವನ್ನು ತಾಯಿ ನೀರಿನಲ್ಲಿ ಮುಳುಗಿಸುತ್ತಿರುವುದನ್ನು ಕಂಡ ಸ್ಥಳೀಯರು ಮಗುವನ್ನು ಪಡೆದು, ಪ್ರಥಮ ಚಿಕಿತ್ಸೆ ನೀಡಿ ಬದುಕಿಸಲು ಯತ್ನಿಸಿದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

DK Shivakumar: ದೆಹಲಿ ಕಸ ವಿಲೇವಾರಿ ಕೇಂದ್ರ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ: ಡಿ.ಕೆ. ಶಿವಕುಮಾರ್

ದೆಹಲಿ ಕಸ ವಿಲೇವಾರಿ ಕೇಂದ್ರ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ: ಡಿಕೆಶಿ

DK Shivakumar: ನವದೆಹಲಿ ಮುನಿಸಿಪಲ್ ಕಾರ್ಪೋರೇಷನ್‌ನ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೋಮವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡಿದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾನು ಇದುವರೆಗೂ ಪರಿಶೀಲನೆ ಮಾಡಿರುವ ಕಸ ವಿಲೇವಾರಿ ಕೇಂದ್ರಗಳ ಪೈಕಿ ಇದು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ ಎಂದು ತಿಳಿಸಿದ್ದಾರೆ.

Arecanut Leaf Spot Disease: ಅಡಿಕೆ ಎಲೆ ಚುಕ್ಕಿ ರೋಗ ಕೋವಿಡ್‌ನಂತೆ ಹರಡುತ್ತಿದ್ದರೂ ಯಾರೂ ಮಾತಾಡ್ತಾ ಇಲ್ಲ ಯಾಕೆ!?

ಅಡಿಕೆ ಎಲೆ ಚುಕ್ಕಿ ರೋಗ ಹರಡುತ್ತಿದ್ದರೂ ಯಾರೂ ಮಾತಾಡ್ತಾ ಇಲ್ಲ ಯಾಕೆ!?

Arecanut Leaf Spot Disease: ಮೋಡ-ಬಿಸಿಲಿನ ಆಟ, ಆಗಾಗ ಆರ್ಭಟಿಸುವ ಮಳೆ, ಹೆಚ್ಚಿದ ವಾತಾವರಣದ ತೇವಾಂಶಗಳಿಂದ ಅಡಿಕೆ ಎಲೆ ಚುಕ್ಕಿ ರೋಗದ ಸೋಂಕು ಮುಂಗಾರು ಪೂರ್ವದಲ್ಲೇ ಕರೋನಾದಂತೆ ನಿಧಾನವಾಗಿ ಹರಡುತ್ತಿದೆ. ಇದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ.

Laxman Savadi: ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ ಕಾರು ಅಪಘಾತ; ಅಪಾಯದಿಂದ ಪಾರು

ಬೆಳಗಾವಿಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ ಕಾರು ಅಪಘಾತ

Laxman Savadi: ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರು ಗೋಕಾಕ್‌ನಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬೆಳಗಾವಿಯ ದರೂರ್ ಬಳಿ ಅವರ ಕಾರಿಗ ಗೂಡ್ಸ್ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್‌ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Kalaburagi Murder Case: ನಜಮುದ್ದೀನ್ ಕೊಲೆ ಪ್ರಕರಣ; 24 ಗಂಟೆಯಲ್ಲೇ ಆರು ಆರೋಪಿಗಳ ಹೆಡೆಮುರಿಕಟ್ಟಿದ ಖಾಕಿ

ನಜಮುದ್ದೀನ್ ಕೊಲೆ ಪ್ರಕರಣ; 24 ಗಂಟೆಯಲ್ಲೇ ಆರು ಆರೋಪಿಗಳ ಸೆರೆ

Kalaburagi Murder Case: ಕೆಲವು ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಿದ್ದ ನಜಮುದ್ದೀನ್‌ನನ್ನು ಕಲಬುರಗಿ ನಗರದ ಹೊರವಲಯದ ಕೂಡಿ ದರ್ಗಾದ ಸಮೀಪ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Murder Case: ಸಹಜೀವನ ನಡೆಸುತ್ತಿದ್ದವನೇ ಮಹಿಳೆಯ ಹತ್ಯೆಗೈದು ಶವ ಸುಟ್ಟುಹಾಕಿದ!; ಇಬ್ಬರು ಅರೆಸ್ಟ್

ಸಹಜೀವನ ನಡೆಸುತ್ತಿದ್ದವನಿಂದಲೇ ಮಹಿಳೆಯ ಹತ್ಯೆ!

Murder Case: ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಡಿಯಾರ ತಾಂಡಾದ ಮಹಿಳೆಯನ್ನು ಹತ್ಯೆ ಮಾಡಿ, ಪೆಟ್ರೋಲ್‌ ಸುರಿದು ಶವವನ್ನು ಸುಟ್ಟುಹಾಕಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Book Release: ನದಿ ತಟದ ವೃಕ್ಷ “ಕವನ ಸಂಕಲನ ಬಿಡುಗಡೆ ಸಮಾರಂಭ

ನದಿ ತಟದ ವೃಕ್ಷ “ಕವನ ಸಂಕಲನ ಬಿಡುಗಡೆ ಸಮಾರಂಭ

ಕವನದಲ್ಲಿ ಆಧುನಿಕ ಯುಗದ ಆಕರ್ಷಣೆಗೆ ಒಳಗಾಗಿ ನಾವು ನಮ್ಮ ನೆಲ, ಜಲ, ಆಕಾಶವನ್ನು ನಿರ್ಲಕ್ಷ ಮಾಡುತ್ತಿರುವ ಬಗೆಗೆ ಮಾರ್ಮಿಕವಾಗಿ ಕವಿಗಳು ಈ ಕವನಸಂಕಲನದಲ್ಲಿ ಚಿತ್ರಿಸಿರುತ್ತಾರೆ ಹಾಗೆಯೇ ಪರಿಸರದ ಬಗ್ಗೆ ಒಳ್ಳೆಯ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು

ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವೀಕ್ಷಿಸಲು ಕೇಂದ್ರ ಸಚಿವ ವಿ.ಸೋಮಣ್ಣ ಆಗಮನ : ಜೂನ್ 11 ರಂದು ರೈತರು ಸ್ಥಳಕ್ಕೆ ಆಗಮಿಸಲು ಮನವಿ

ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವೀಕ್ಷಣೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಆಗಮನ

ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುವ ಕೇಂದ್ರ ಸಚಿವರಿಗೆ ಇಲ್ಲಿನ ಸಮಸ್ಯೆ ಹಾಗೂ ಅವೈಜ್ಞಾನಿಕ, ಅಕ್ರಮದ ಬಗ್ಗೆ ಮನದಟ್ಟು ಮಾಡಬೇಕಿದೆ. ಕುಣಿಗಲ್ ತಾಲ್ಲೂಕಿನ ರೈತರಿಗೆ ನೀರು ನೀಡಲು ನಮ್ಮದು ಅಭ್ಯಂತರ ವಿಲ್ಲ. ಮುಖ್ಯ ನಾಲೆ ಮೂಲಕ ನೀರು ಹರಿಸಿಕೊಳ್ಳಲಿ. ಆದರೆ ಮಾಗಡಿ ರಾಮನಗರದತ್ತ ನೀರು ಹರಿಸಿ ಕೊಳ್ಳಲು ಕುಣಿಗಲ್ ರಂಗನಾಥ್ ಅವರು ಸಂಬಂಧ ವ್ಯಾಮೋಹಕ್ಕೆ ನೀರು ಇದೇ ಪೈಪ್ ಲೈನ್ ಮೂಲಕ ಬರಲಿ

Karnataka Rains: ಇಂದು, ನಾಳೆ ರಾಜ್ಯದಲ್ಲಿ ಗುಡುಗು ಸಹಿತ ಭಾರಿ ಸಾಧ್ಯತೆ; ಯೆಲ್ಲೋ ಅಲರ್ಟ್

ಇಂದು, ನಾಳೆ ರಾಜ್ಯದಲ್ಲಿ ಗುಡುಗು ಸಹಿತ ಭಾರಿ ಸಾಧ್ಯತೆ; ಯೆಲ್ಲೋ ಅಲರ್ಟ್

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆಶೀರ್ವಾದ್‌ ಅಟ್ಟಾ ಶೇ.100ರಷ್ಟು ಗೋದಿಹಿಟ್ಟಿನಿಂದಲೇ ಮಾಡಲ್ಪಟ್ಟಿರುವ ಬಗ್ಗೆ ಪ್ರಮಾಣಪತ್ರ ಪ್ಯಾಕ್‌ನ ಮೇಲೆಯೇ ಮುದ್ರಣ

ಆಶೀರ್ವಾದ್‌ ಅಟ್ಟಾ ಪ್ರಮಾಣೀಕರಣಕ್ಕೆ ಪ್ಯಾಕ್‌ನ ಮೇಲೆಯೇ ಮುದ್ರಣ

ಮಾರುಕಟ್ಟೆಯಿಂದ ಖರೀದಿಸುವ ಗೋದಿಹಿಟ್ಟು ಸಂಪೂರ್ಣವಾಗಿ ಗೋದಿಯಿಂದಲೇ ತಯಾರಾಗಿರು ತ್ತದೆಯೇ ಎಂಬುದರ ಬಗ್ಗೆ ನಮಗೆ ಯಾವುದೇ ಖಾತರಿ ಇರುವುದಿಲ್ಲ. ಆದರೆ, ಐಟಿಸಿ ಆಶೀರ್ವಾದ್‌ ಇದೀಗ ತನ್ನ ಅಟ್ಟಾ(ಗೋದಿ ಹಿಟ್ಟು)ಗೆ “ಗುಣಮಟ್ಟದ ಪ್ರಮಾಣಪತ್ರ ವನ್ನು ಖರೀದಿ ಮಾಡುವ ಪ್ಯಾಕ್‌ನ ಮೇಲೆಯೇ ಮುದ್ರಿಸುವ ಮೂಲಕ ಆಶೀರ್ವಾದ್‌ ಅಟ್ಟ ಹೆಚ್ಚು ಸುರಕ್ಷಿತ ಎಂಬುದನ್ನು ತಿಳಿಸುತ್ತಿದೆ.