ಸಂಭ್ರಮಕ್ಕೆ ಇರಲಿ ಮಿತಿ
ಎಂದಿನಂತೆ ವಾಕಿಂಗ್ ಮುಗಿಸಿ ಒಳಹೋಗುವಾಗ, ಥಟ್ ಅಂತ ನಿಲ್ಲಿಸಿ ಬಿಟ್ಟಿತು ಪಕ್ಕದ ಮನೆಯ ಸುಗಂಧಕ್ಕಾನ ಮುಖದ ನೋವು. ‘ಏಕೆ? ಮಗಳು ಸುವ್ವಿ ಮಲಗಿದ್ದಾಳಾ?’ ಎಂದಾಗ ಸುಗಂಧಿ ಕಣ್ಣು ಇನ್ನಷ್ಟು ತೇವಗೊಂಡವು/ ‘ಮೇಡಂ ರಾತ್ರಿಯಿಂದ ಒಂಥರಾ ಸಂಕಟ. ಸ್ಕೂಲಿನಲ್ಲಿ ಫಾದರ್ಸ ಡೇಗೆ ಅಪ್ಪಯ್ಯನ ಕರಕೊಂಡು, ಅವರ ಜೊತೆ ಇರುವ ಫೋಟೋ ತರಲಿಕ್ಕೆ ಸುವ್ವಿಗೆ ಹೇಳಿದಾರಂತೆ.


ಡಾ.ಮಹಾಲಕ್ಷ್ಮೀ ಮಹಾನಂದ ಭೂಶಿ
ಬದುಕಿನ ಬಹುತೇಕ ಸಂಕಟಗಳನ್ನು ಸಮಾಜದ ಮುಂದೆ ನಿಂತು ಎದುರಿಸುವುದಾದರೂ ಹೇಗೆ ಎಂಬ ಪ್ರಶ್ನೆಗಳು ಕಾಡುವ ಸಂದರ್ಭದಲ್ಲಿ ಶಿಕ್ಷಣವನ್ನೇ ಮೌಲ್ಯಯುತವಾಗಿ ತೆಗೆದುಕೊಂಡು ಬದುಕುವ ವಿದ್ಯಾರ್ಥಿಗಳ ಮಧ್ಯೆ ಇತ್ತೀಚಿಗೆ ತಂದೆ ಮತ್ತು ತಾಯಿಯ ದಿನಾಚರಣೆಯನ್ನು ಆಚರಿಸುವ ಸಂಪ್ರದಾಯವನ್ನು ಹಲವು ಶಾಲೆಗಳು ಮಾಡುತ್ತಿವೆ; ಈ ಆಚರಣೆ ಹಲವರಿಗೆ ಸಂತಸ ನೀಡಿದರೆ, ಕೆಲವು ಮಕ್ಕಳಿಗೆ ಸಂಕಟ.
ಎಂದಿನಂತೆ ವಾಕಿಂಗ್ ಮುಗಿಸಿ ಒಳಹೋಗುವಾಗ, ಥಟ್ ಅಂತ ನಿಲ್ಲಿಸಿ ಬಿಟ್ಟಿತು ಪಕ್ಕದ ಮನೆಯ ಸುಗಂಧಕ್ಕಾನ ಮುಖದ ನೋವು. ‘ಏಕೆ? ಮಗಳು ಸುವ್ವಿ ಮಲಗಿದ್ದಾಳಾ?’ ಎಂದಾಗ ಸುಗಂಧಿ ಕಣ್ಣು ಇನ್ನಷ್ಟು ತೇವಗೊಂಡವು/ ‘ಮೇಡಂ ರಾತ್ರಿಯಿಂದ ಒಂಥರಾ ಸಂಕಟ. ಸ್ಕೂಲಿನಲ್ಲಿ ಫಾದರ್ಸ ಡೇಗೆ ಅಪ್ಪಯ್ಯನ ಕರಕೊಂಡು, ಅವರ ಜೊತೆ ಇರುವ ಫೋಟೋ ತರಲಿಕ್ಕೆ ಸುವ್ವಿಗೆ ಹೇಳಿದಾರಂತೆ.
ಇದನ್ನೂ ಓದಿ: Vishweshwar Bhat Column: ಹೊಣೆಯರಿತ ವ್ಯಕ್ತಿಗಳು, ಬ್ರ್ಯಾಂಡ್ ಗಳು ನಿರೀಕ್ಷೆಯನ್ನೂ ಹುಸಿಗೊಳಿಸೋದಿಲ್ಲ
ಎಲ್ಲಿಂದ ತರಲಿ ಮೇಡಂ ಇಲ್ಲದ ಅವಳ ಅಪ್ಪನ ಫೋಟೋ ಮತ್ತು ಅವಳ ಅಪ್ಪನನ್ನು!’ ಒಂದೇ ಸಮನೇ ಉಸಿರುಗಟ್ಟಿಸಿ ಅತ್ತಳು. ‘ಮೇಡಂ ಸ್ಕೂಲಲ್ಲಿ ನಾವು ಓದುವಾಗ ಇದ್ಯಾವುದು ಇರಲಿಲ್ಲ. ಈಗೇಕೆ?’ ಎಂದಳು. ‘ಇದನ್ನ ಇತ್ತೀಚಿಗೆ ಕಾನ್ವೆಂಟ್ ಸ್ಕೂಲ್ದವರು ಮಾಡ್ತಿರೋದು’ ಎಂದೆ.
‘ತುಂಬು ಬಸುರಿ ಇದ್ದಾಗ ಇವರ ಅಪ್ಪ ಆಕ್ಸಿಡೆಂಟ್ಲ್ಲಿ ತೀರಿದರು, ಮನೇಲಿ ಬಡತನ; ಊರ ಬಿಟ್ಟು ಇವಳನ್ನು ಚೆನ್ನಾಗಿ ಓದಿಸಬೇಕಂತ ಬಂದೆ ಮೇಡಂ ಇಲ್ಲಿ ಹೊಟೇಲ್ ಕೆಲಸಕ್ಕಿದ್ದು ಇವಳನ್ನು ಓದಸ್ತಿರೋದು, ಅವಳಿಗೆ ಅಪ್ಪ ಇಲ್ಲದ್ದು ಗೊತ್ತಿಲ್ಲ ಮೇಡಂ. ಬೇರೆ ಊರಲ್ಲಿ ಕೆಲಸಕ್ಕೆ ಇದಾರೆ ಅಂತಾ ಹೇಳಿದ್ದೇನೆ. ಈಗ ನೋಡಿದ್ರೆ ಅಪ್ಪನ ಕರೆಸು, ಫೋನ್ ಮಾಡಿಕೊಡು ಅಂತವಳೆ!
ಪಿಂಕಿ, ಪರಿ, ಮೋಹನ್, ಶಾನೂಲ್ ಎಲ್ಲರೂ ಕರಕೊಂಡು ಬರ್ತಿದ್ದಾರೆ, ಸೋಹೆಲ್ ಅಪ್ಪ ಬೆಂಗಳೂ ರಿಂದ ಬರ್ತಿದಾರೆ. ನೀನು ಹೇಳು ಪಪ್ಪಗೆ - ಅಂತಾರಾತ್ರಿಯಿಂದ ಹಠ ಹಿಡಿದಿದ್ದಾಳೆ. ಏನ್ ಮಾಡಿ ಸಮಾಧಾನ ಮಾಡಲಿ ತಿಳಿತಿಲ್ಲ.’ ಎಂದಳಾಕೆ. ಬದುಕಿನ ಸಂಕಟಗಳೇ ಹಾಗೇ!
ಸಂತೈಸುವವರಿದ್ದರೂ, ಎನನ್ನೂ ಸರಿಪಡಿಸಲಾಗದ ಪರಿಸ್ಥಿತಿ. ಈ ಸ್ಕೂಲುಗಳಲ್ಲಿ ಯಾಕೆ ಈ ಆಚರಣೆ ತಿಳಿತಿಲ್ಲ. ಅಪ್ಪ ಇಲ್ಲದ ಮಕ್ಕಳು ಒಂದೆಡೆಯಾದರೆ, ಗಂಡನ ಕಳೆದುಕೊಂಡ ತಾಯಂದಿ ರಿಗೆ ಅಪ್ಪನ ಅನುಪಸ್ಥಿತಿ ತುಂಬೋದು ಹೇಗೆ ಅಂತಾ ಕಳವಳ. ‘ಸುಗಂಧಿ, ಸಮಾಧಾನ ಮಾಡ್ಕೋ. ಪರಿಸ್ಥಿತಿಗಳನ್ನು ಎದುರಿಸಲೇಬೇಕು. ಅವಳಿಗೆ ರಜೆ ಹಾಕಿಸಿ ಎಲ್ಲಾದರೂ ಕರೆದೊಯ್ಯೀ’ ಅಂದೆ. ಅಷ್ಟರೊಳಗೆ ನನ್ನ ಗಂಟಲುಬ್ಬಿ ಬಂತು. ಕಿಟಕಿಯಾಚೆ ಮುಖ ಮಾಡಿ ನಿಂತೆ.
ಅವರ ಶಾಲೆ ನನಗೆ ಗೊತ್ತಿತ್ತು; ಒಂದು ಫೋನ್ ಮಾಡಿ, ಸುವ್ವಿ ವಿಚಾರ ಹೇಳಿದೆ. ಆಗ ಅವರು ‘ಮೇಡಂ, ನಾವ್ ಸೆಲೆಬ್ರೆಟ್ ಮಾಡೋ ಖುಷಿಯಲ್ಲಿ ಇಂತಹ ಸಂಗತಿಗಳೇ ನೆನೆಪಿಗೆ ಬರಲ್ಲ, ದಯ ವಿಟ್ಟು ಕ್ಷಮಿಸಿ’ ಎಂದರು. ಅರ್ಧ ಗಂಟೆಯ ಹೊತ್ತಿನಲ್ಲಿ, ‘ಶಾಲೆಯಲ್ಲಿ ಫಾದರ್ಸ್ ಡೇ ಸಂಭ್ರಮಾ ಚರಣೆ ರದ್ದಾಗಿದೆ’ ಎಂಬ ಸಂದೇಶವನ್ನು ಸ್ಕೂಲ್ ಗ್ರೂಪ್ಲ್ಲಿ ನೋಡಿದ ಕೂಡಲೇ ಸುಗಂಧಿ ಖುಷಿಗೆ ಪಾರವೇ ಇಲ್ಲ.