ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

D K Shivakumar Column: ನಾಡಿನ ಕಣ ಕಣದಲ್ಲೂ ಕೆಂಪೇಗೌಡರಿದ್ದಾರೆ

ಕಾಡು ಮೇಡು, ಕಲ್ಲುಗುಂಡಿಗಳ ಒಡಲಾಗಿದ್ದ ಈ ಭೂಮಿಯಲ್ಲಿ ಕನಸನ್ನು ಬಿತ್ತಿ ಬೆಳೆದ ಯುಗಪುರುಷ ಕೆಂಪನಂಜೇಗೌಡ, ಲಿಂಗಾಂಬೆಯ ಸುಪುತ್ರರಾಗಿ ಜನಿಸಿದ ನಾಡಪ್ರಭು ಕೆಂಪೇಗೌಡರು. ನಾನು ಆಗಾಗ್ಗೆ ಈ ಮಾತನ್ನು ಹೇಳುತ್ತಾ ಇರುತ್ತೇನೆ. ಬೆಂಗಳೂರಿಗರಾದ ನಾವುಗಳು ಮೂರು ‘ಓ’ ಗಳನ್ನು ಮರೆಯಲೇ ಬಾರದು ಎಂದು. ಮೊದಲು ಕೆಂಪೇಗೌಡರು, ಎರಡನೆಯವರಾಗಿ ಕೆಂಗಲ್ ಹನುಮಂತಯ್ಯ ಅವರು, ಮೂರನೇಯವರು ಎಸ್.ಎಂ.ಕೃಷ್ಣ ಅವರು.

ನಾಡಿನ ಕಣ ಕಣದಲ್ಲೂ ಕೆಂಪೇಗೌಡರಿದ್ದಾರೆ

Profile Ashok Nayak Jun 27, 2025 12:42 PM

ಡಿ.ಕೆ.ಶಿವಕುಮಾರ್‌

ಉಪಮುಖ್ಯಮಂತ್ರಿ, ಕರ್ನಾಟಕ ಸರಕಾರ

ಬೆಂಗಳೂರು ನಮ್ಮ ಪ್ರತಿಸ್ಪರ್ಧಿ... ಹೀಗೆ ಹೇಳುತ್ತಿದ್ದವರು ಅಮೆರಿಕದ ಆಗಿನ ಅಧ್ಯಕ್ಷ ಬರಾಕ್ ಒಬಾಮ. 2010ನೇ ಇಸವಿ ಇರಬಹುದು ಪ್ರಪಂಚದ ಬಲಿಷ್ಠರಾಷ್ಟ್ರವೊಂದರ ಅಧ್ಯಕ್ಷರು ಪದೇ, ಪದೇ ಬೆಂಗಳೂರಿನ ಬಗ್ಗೆ ಪುನರುಚ್ಚರಿಸುತ್ತಲೇ ಇದ್ದರು. ಯಾವುದೇ ಕಾರ್ಯಕ್ರಮಗಳಿಗೆ ಹೋದರು ಸರಿ, ಭಾರತಕ್ಕೆ ಬಂದರೂ ಸರಿ ಬೆಂಗಳೂರು ಭಾರತದ ಹೆಮ್ಮೆ’ ಎನ್ನುವ ಮಾತುಗಳನ್ನಾಡಿದ್ದರು.

ಇವರು ಒಮ್ಮೆ ತಮ್ಮ ದೇಶದ ಬ್ಯಾಕ್ ಟು ಸ್ಕೂಲ್ ಎನ್ನುವ ಕಾರ್ಯಕ್ರಮದಲ್ಲಿ ಮಕ್ಕಳನ್ನು ಕುರಿತು ಮಾತನಾಡುತ್ತಾ At a time when other countries are competing with us like never before, when students around the world in Beijing or Bangalore, are working harder than ever, and doing better than ever, your success in school is not just going to determine your success, it's going to determine America's success in the 21st century . ಎಂದು ತನ್ನ ದೇಶದ ಶಾಲಾ ಮಕ್ಕಳಿಗೆ ತಿಳಿ ಹೇಳುತ್ತಾರೆ.

ಅಂದರೆ ಬೆಂಗಳೂರಿನ ಗತ್ತು ಇಡೀ ಪ್ರಪಂಚಕ್ಕೆ ಗೊತ್ತು ಎಂದರೆ ತಪ್ಪಾಗಲಾರದು. ಕರ್ನಾಟಕದ ರಾಜಧಾನಿಯೊಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿದೆ. ಜಗತ್ತಿನ ಮಾಹಿತಿ ತಂತ್ರಜ್ಞಾನದ ಆಲದ ಮರವಾಗಿದೆ. ದೇಶದ ಯುವ ಉದ್ಯಮಿಗಳ ಕನಸಿನ ನಗರವಾಗಿ, ಜ್ಞಾನಕಾಶಿ ಯಾಗಿ, ಆರೋಗ್ಯದ ಧನ್ವಂತರಿಯಾಗಿ ರೂಪುಗೊಂಡಿದೆ. ಇಂತಹ ಊರಿನ ಬದಲಾವಣೆಯ ಭವಿಷ್ಯವೊಂದು ಸರಿಸುಮಾರು 516 ವರ್ಷಗಳ ಹಿಂದೆ ಜನನವಾಯಿತು ಎಂದರೆ ಅತಿಶಯೋಕ್ತಿ ಯಲ್ಲ ಎನ್ನುವುದು ನನ್ನ ಭಾವನೆ. ಈ ಕಾರಣಕ್ಕೆ ನಾನು ಲೇಖನದ ಆರಂಭದಲ್ಲಿ ಬರಾಕ್ ಒಬಾಮ ಅವರ ನಿದರ್ಶನ ನೀಡಿದೆ. ನಮಗೆಲ್ಲರಿಗೂ ಬೆಂದಕಾಳೂರಾಗಿರುವ ಊರು ಪ್ರಪಂಚದ ಕಣ್ಣಿನಲ್ಲಿ ಗ್ರೇಟರ್ ಬೆಂಗಳೂರಾಗಿ ಬದಲಾಗುತ್ತಿದೆ. ಇದೆಲ್ಲದರ ಹಿಂದಿರುವ ಪ್ರೇರಕ ಶಕ್ತಿ, ಇತಿಹಾಸದಲ್ಲಿ ಎಂದೂ ಅಳಿಸದ ಅಜರಾಮರನಾದ ವ್ಯಕ್ತಿ.

ಇದನ್ನೂ ಓದಿ: DK Shivakumar: ಇಡಿ ವಿಚಾರಣೆ ಎದುರಿಸಲು ನಮ್ಮ ಕುಟುಂಬ ಸದಾ ಸಿದ್ಧ ಎಂದ ಡಿ.ಕೆ.ಶಿವಕುಮಾರ್

ಕಾಡು ಮೇಡು, ಕಲ್ಲುಗುಂಡಿಗಳ ಒಡಲಾಗಿದ್ದ ಈ ಭೂಮಿಯಲ್ಲಿ ಕನಸನ್ನು ಬಿತ್ತಿ ಬೆಳೆದ ಯುಗ‌ ಪುರುಷ ಕೆಂಪನಂಜೇಗೌಡ, ಲಿಂಗಾಂಬೆಯ ಸುಪುತ್ರರಾಗಿ ಜನಿಸಿದ ನಾಡಪ್ರಭು ಕೆಂಪೇಗೌಡರು. ನಾನು ಆಗಾಗ್ಗೆ ಈ ಮಾತನ್ನು ಹೇಳುತ್ತಾ ಇರುತ್ತೇನೆ. ಬೆಂಗಳೂರಿಗರಾದ ನಾವುಗಳು ಮೂರು ‘ಓ’ ಗಳನ್ನು ಮರೆಯಲೇ ಬಾರದು ಎಂದು. ಮೊದಲು ಕೆಂಪೇಗೌಡರು, ಎರಡನೆಯವರಾಗಿ ಕೆಂಗಲ್ ಹನುಮಂತಯ್ಯ ಅವರು, ಮೂರನೇಯವರು ಎಸ್.ಎಂ.ಕೃಷ್ಣ ಅವರು. ಈ ಮೂರು ಜನರ ಹೆಸರಿಲ್ಲದೇ ಬೆಂಗಳೂರನ್ನು ಕಲ್ಪಿಸಿಕೊಳ್ಳಲೂ ಆಗುವುದಿಲ್ಲ.

ನಾನು ಯಾವುದೇ ದೇಶಕ್ಕೆ ಹೋದರು ಆ ಊರಿನ ನಗರ ಯೋಜನಾ ವಿನ್ಯಾಸ, ಕಟ್ಟಡ ವಿನ್ಯಾಸ ಗಳನ್ನು ತಿಳಿದುಕೊಳ್ಳುವ ಕುತೂಹಲ ನನ್ನದು. ಈ ಕಾರಣಕ್ಕೆ ಫೋಟೊಗಳನ್ನು ತೆಗೆದುಕೊಳ್ಳುತ್ತಾ ಇರುತ್ತೇನೆ. ಸೋಜಿಗದ ಸಂಗತಿ ಎಂದರೆ ತಂತ್ರeನ ಇಲ್ಲದ ಕಾಲದಲ್ಲಿ ಕೆಂಪೇಗೌಡರು ವಿಜ್ಞಾನ, ಯೋಜನೆ, ಮತ್ತು ಜನರ ಜೀವನದ ದೃಷ್ಟಿಯಿಂದ ಬೆಂಗಳೂರನ್ನ ಕಟ್ಟಿದ್ದರು.

ಭಾರತದ ಮೊದಲ ಸಂಘಟಿತ ಟೌನ್ ಪ್ಲ್ಯಾನಿಂಗ್ ಕೆಂಪೇಗೌಡರ ಕೊಡುಗೆ ಎಂದರೆ ತಪ್ಪಾಗಲಾ ರದು. ನಗರದ ಕೆ. ಆರ್. ಮಾರುಕಟೆಯಲ್ಲಿನ ಸಂಘಟಿತ ವ್ಯವಸ್ಥೆ ಕೆಂಪೇಗೌಡರ ದೂರ ದೃಷ್ಟಿಗೆ ಜೀವಂತ ಸಾಕ್ಷಿ. ಗೌಡರು ಜನರ ವೃತ್ತಿಗೆ ತಕ್ಕಂತೆ ಪೇಟೆಗಳನ್ನ ರೂಪಿಸಿದರು. ಅಕ್ಕಿಪೇಟೆ, ಕುಂಬಾರ ಪೇಟೆ, ಬಳೇಪೇಟೆ, ಮೇದಾರಪೇಟೆ, ತರಗುಪೇಟೆ, ಕಾಟನ್ ಪೇಟೆ, ಚಿಕ್ಕಪೇಟೆ, ಅರಳೇ ಪೇಟೆ ಸೇರಿ ದಂತೆ ಸುಮಾರು 70ಕ್ಕೂ ಹೆಚ್ಚು ಪೇಟೆಗಳನ್ನು ನಿರ್ಮಿಸಿದರು.

ಇವುಗಳನ್ನು ನಾನು ಕೇವಲ ರಸ್ತೆ -ಕಟ್ಟಡ ಎಂದು ಕರೆಯುವುದಿಲ್ಲ. ಬದಲಾಗಿ ಒಂದು ಸಂಘಟಿತ ಜೀವನ ಶೈಲಿಯನ್ನು ಉಳಿಸುವ ಯೋಜನೆ. ಕೆಂಪೇಗೌಡರು ಕೇವಲ ಒಬ್ಬ ರಾಜರಾಗಿರಲಿಲ್ಲ, ಅವರು ಒಬ್ಬ ಜ್ಞಾನದ ದಾರ್ಶನಿಕರಾಗಿದ್ದರು.ಇಲ್ಲಿನ ಮಾರುಕಟ್ಟೆ ಶೈಲಿಗೆ ದೇಶ ವಿದೇಶದ ವ್ಯಾಪಾರಿಗಳು, ಕಾರ್ಮಿಕರು ದೂರದ ರಾಜ್ಯಗಳಿಂದ ಇಲ್ಲಿಗೆ ಆಕರ್ಷಿತರಾದರು.

ಕೆಂಪೇಗೌಡರ eನ ಕೇವಲ ಮಾರುಕಟ್ಟೆಗೆ ಸೀಮಿತವಾಗಿರಲಿಲ್ಲ, ಅವರು ಪರಿಸರದ ರಕ್ಷಕರಾಗಿದ್ದರು. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ 260 ಕೆರೆಗಳನ್ನು ನಿರ್ಮಿಸಿದ್ದಾನೆ ಎಂದರೆ ವಿಶ್ವದಾಖಲೆಯೇ ಸರಿ. ನಾವುಗಳು ಈಗ ’ಮಳೆ ನೀರು ಸಂಗ್ರಹ’ ಎಂದು ಮಾತನಾಡುತ್ತಿದ್ದೇವೆ. ಏತ ನೀರಾವರಿ ಎಂದು ಬೃಹತ್ ಪಂಪ್ ಗಳನ್ನು ಜೋಡಿಸಿ ನೀರನ್ನು ಒಂದು ಊರಿನಿಂದ ಇನ್ನೊಂದು ಊರಿಗೆ ವಿತರಿಸು ತ್ತಿದ್ದೇವೆ.

ಯಾವುದೇ ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಕೇವಲ ಗುರುತ್ವಾಕರ್ಷಣೆಯ ಬಲದಿಂದಲೇ ಒಂದು ಕೆರೆಯಿಂದ ಇನ್ನೊಂದು ಕೆರೆಗೆ ನೀರು ಹರಿಯುವ ಜಾಲ ರೂಪಿಸಿದವರು. ಕೆಂಪೇಗೌಡರದ್ದು ಎಲ್ಲರನ್ನು ಒಳಗೊಂಡ ಆಡಳಿತ ಎನ್ನುವುದಕ್ಕೆ ಅವರು ಶೈವ, ವೈಷ್ಣವ ಎಂಬ ಭೇದಭಾವವಿಲ್ಲದೆ ನಿರ್ಮಾಣ ಮಾಡಿರುವ ದೇವಾಲಯಗಳೇ ಸಾಕ್ಷಿ.

130 ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದು ಅವರ ಧರ್ಮಸಹಿಷ್ಣತೆಗೆ ಮತ್ತೊಂದು ಉದಾ ಹರಣೆ. ಕೋಟೆ ಆಂಜನೇಯ, ಶ್ರೀ ವಿನಾಯಕ ಸ್ವಾಮಿ, ಚಿಕ್ಕ ಬಸವಣ್ಣ (ಈಗ ಬೆಳ್ಳಿ ಬಸವಣ್ಣ, ಮಕ್ಕಳ ಬಸವಣ್ಣ), ದೊಡ್ಡ ಬಸವಣ್ಣ, ದೊಡ್ಡ ಆಂಜನೇಯ, ಗವಿಗಂಗಾಧರೇಶ್ವರ, ಮಲ್ಲಿಕಾ ರ್ಜುನ, ಮಾವಳ್ಳಿ ಮಾರಮ್ಮ, ದೊಡ್ಡ ಮಾವಳ್ಳಿಯ ಬಿಸಿಲು ಮಾರಮ್ಮ ದೇವಸ್ಥಾನಗಳು ನಮ್ಮ ಮುಂದಿರುವ ಮಾದರಿಗಳು. ಬೆಂಗಳೂರು ಕರಗ ಸೌಹಾರ್ದತೆ ಈಗಲೂ ಇರುವ ಜೀವಂತ ಸಾಕ್ಷಿ.

ನಾಡಪ್ರಭು ಕೆಂಪೇಗೌಡರು ಹುಟ್ಟಿ ಇಂದಿಗೆ 516 ವಸಂತಗಳು ಕಳೆದು ಹೋಗಿವೆ. ಇದೇ ಪುಣ್ಯಾತ್ಮ ಕಟ್ಟಿದ ಕೆರೆಗಳ ಮೂಲಕ ಕೋಟ್ಯಂತರ ಲೀಟರ್ ನೀರು ಹರಿದು ಹೋಗಿದೆ. ಕೋಟ್ಯಂತರ ಕುಟುಂಬ ಗಳು ಬೆಳಕು ಕಂಡಿವೆ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಜಿಯವನಾಗಿ ರಾಜ್ಯ ರಾಜಧಾನಿಯನ್ನು ಮತ್ತಷ್ಟು ಯೋಜಿತ ನಗರವನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ.

ಕೆಂಪೇಗೌಡರ eನದ ದಾರಿಯಲ್ಲಿ, ನಾವು ಶುದ್ಧ, ಹಸಿರು, ಶಕ್ತಿಶಾಲಿ ಬೆಂಗಳೂರನ್ನು ಕಟ್ಟುತ್ತೇವೆ ಎನ್ನುವುದು ನನ್ನ ಅಭಿಲಾಷೆ. ಈ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಮುಂದಿನ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಭವಿಷ್ಯವನ್ನಿಟ್ಟುಕೊಂಡು ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಟನಲ್ ರೋಡ್, ಮೆಟ್ರೋ ವಿಸ್ತರಣೆ, ಬಿಜಿನೆಸ್ ಕಾರಿಡಾರ್, ಬ್ರಾಂಡ್ ಬೆಂಗಳೂರಿಗೆ 2228 ಕೋಟಿ ಮೀಸಲಿಟ್ಟಿದ್ದೇವೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ 1 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ರೂಪಿಸಿದ್ದೇವೆ. ಕಾವೇರಿ 5ನೇ ಹಂತ ಪೂರ್ಣಗೊಳಿಸಿ ನಗರದ ನೀರಿನ ಬವಣೆ ತಪ್ಪಿಸಿದ್ದೇವೆ.

ಕನ್ನಡಿಗರ ಗೌರವ ಸಂಕೇತವಾದ ಬೆಂಗಳೂರನ್ನು ಹಾಗೂ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರ ಇತಿಹಾಸವನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂದು ಸುಮನಹಳ್ಳಿಯಲ್ಲಿ ಕೆಂಪೇಗೌಡರ ಜಯಂತಿಯ ಅಂಗವಾಗಿ ಕೆಂಪೇಗೌಡರ ಭವನಕ್ಕೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಇಡೀ ಬೆಂಗಳೂರು ನಗರ ಹಾಗೂ ರಾಜ್ಯ ಈ ಜಯಂತಿಯನ್ನು ಸಂಭ್ರಮಿಸು ತ್ತಿದೆ.

ಕೆಂಪೇಗೌಡರಿಗೆ ಸಂಬಂಧಿಸಿದ ಏಳು ಐತಿಹಾಸಿಕ ಸ್ಥಳಗಳಿಂದ ಪುರಜ್ಯೋತಿ ಹೊರಡಲಿದೆ. ನಾವೆ ಲ್ಲರೂ ಈ ಅಭಿವೃದ್ಧಿಯ ಜ್ಯೋತಿಯನ್ನು ಹಿಡಿಯೋಣ, ಕೆಂಪೇಗೌಡರ ಹಾದಿಯಲ್ಲಿ ನಡೆಯೋಣ.