Chikkaballapur News: ಪ್ರತಿಭಾವಂತ ವಿದ್ಯಾರ್ಥಿ ನಿತಿನ್ ಕುಮಾರ್, ಪೋಷಕರಿಗೆ ಗೌರವಿಸಿ ಸನ್ಮಾನ
ತಾಲೂಕಿನ ಪೋತೇನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ನಿತಿನ್ ಕುಮಾರ್ ಹತ್ತನೇ ತರಗತಿಯಲ್ಲಿ 91℅ ಕ್ಕೂ ಹೆಚ್ಚು ಅಂಕಗಳಿಸಿದ್ದು, ಪ್ರತಿಭಾವಂತ ವಿದ್ಯಾರ್ಥಿ ನಿತಿನ್ ಕುಮಾರ್ ಮತ್ತು ಆತನ ಪೋಷಕ ರನ್ನು ನಗರದಲ್ಲಿ ಸಮಾಜ ಸೇವಕರಾದ ಪೋತೇನಹಳ್ಳಿ ರಾಮಣ್ಣ ಗೌರವಿಸಿ ಸನ್ಮಾನಿಸಿದರು.


ಗೌರಿಬಿದನೂರು: ತಾಲೂಕಿನ ಪೋತೇನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ನಿತಿನ್ ಕುಮಾರ್ ಹತ್ತನೇ ತರಗತಿಯಲ್ಲಿ 91℅ ಕ್ಕೂ ಹೆಚ್ಚು ಅಂಕಗಳಿಸಿದ್ದು, ಪ್ರತಿಭಾವಂತ ವಿದ್ಯಾರ್ಥಿ ನಿತಿನ್ ಕುಮಾರ್ ಮತ್ತು ಆತನ ಪೋಷಕರನ್ನು ನಗರದಲ್ಲಿ ಸಮಾಜ ಸೇವಕರಾದ ಪೋತೇನಹಳ್ಳಿ ರಾಮಣ್ಣ ಗೌರವಿಸಿ ಸನ್ಮಾನಿಸಿದರು. ನಂತರ ಮಾತನಾಡಿ ಗ್ರಾಮೀಣ ಭಾಗದಲ್ಲಿ ಪರಿಶಿಷ್ಟ ಜಾತಿಯ ಕೂಲಿನಾಲಿ ಮಾಡಿ ಕೊಂಡು ಜೀವನ ಮಾಡುತ್ತಿರುವ ಬಡ ಕುಟುಂಬದ ವಿದ್ಯಾರ್ಥಿ ನಿತಿನ್ ಕುಮಾರ್ ಬಡತನದ ಬೇಗೆಯಲ್ಲೂ ಕೂಡ ಶ್ರದ್ಧೆಯಿಂದ ಓದಿ ಇಂದು ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿಸುವ ಮೂಲಕ ಆತನ ತಂದೆ ತಾಯಿಗಳಿಗೆ ಮತ್ತು ಗ್ರಾಮಕ್ಕೆ ಒಳ್ಳೆಯ ಹೆಸರು ಬರುವಂತೆ ಮಾಡಿದ್ದಾನೆ. ಇವನ ಮುಂದಿನ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು.
ಇದನ್ನೂ ಓದಿ: Chikkaballapur News: ಸಮುದಾಯಗಳ ಮಧ್ಯೆ ಬೆಂಕಿ ಇಡುವ ಕೆಲಸ ಬೇಡ: ವಿಜಯ ನರಸಿಂಹ
ವಕೀಲರು ಹಾಗೂ ದಲಿತ ಮುಖಂಡರಾದ ಜೆಕೆ ಗಂಗಾಧರ್ ಅವರು ಮಾತನಾಡುತ್ತಾ ಸರ್ಕಾರ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಅವುಗಳನ್ನು ಸದ್ಬಳಿಕೆ ಮಾಡಿಕೊಂಡು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಈ ಸಂಧರ್ಭದಲ್ಲಿ ಪತ್ರಕರ್ತ ಸಾಗಾನಹಳ್ಳಿ ಶಿವಕುಮಾರ್,ವಿಎನ್ ಅಂಬರೀಶ್,ಚಿಕ್ಕಣ್ಣ,ವೆಂಕಟೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.