Kamal Hassan: ತಮಿಳು ನಟ ಕಮಲಾಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು : ಕರವೇ ತಾಲೂಕು ಅಧ್ಯಕ್ಷ ಜಿ.ಎಲ್.ಆಶ್ವತ್ಥ್ ನಾರಾಯಣ ಆಗ್ರಹ
ಕನ್ನಡ ಭಾಷೆಗೆ ಎರಡುಸಾವಿರದ ಐನೂರು ವರ್ಷಗಳ ಇತಿಹಾಸ ಹಾಗೂ ಪರಂಪರೆ ಇದೆ. ಇದರ ಪರಿವೇ ಇಲ್ಲದೆ ತಮಿಳು ನಟ ಕಮಲಹಾಸನ್ ವಿವಾದ್ಮಾಕ ಹೇಳಿಕೆಯಾದ ತಮಿಳು ಭಾಷೆಯಿಂದ ಕನ್ನಡ ಭಾಷೆ ತಾಳಿದೆ ಎಂದು ಹೇಳಿರುವುದು ನಿಜಕ್ಕೂ ಖಂಡನೀಯ ಮತ್ತು ಹಾಸ್ಯಾಸ್ಪದ ಕನ್ನಡ ಭಾಷೆಗೆ ಎರಡುಸಾವಿರದ ಐನೂರು ವರ್ಷಗಳ ಇತಿಹಾಸ ಹಾಗೂ ಪರಂಪರೆ ಇದೆ. ಇದರ ಪರಿವೇ ಇಲ್ಲದೆ ತಮಿಳು ನಟ ಕಮಲಹಾಸನ್ ವಿವಾದ್ಮಾಕ ಹೇಳಿಕೆಯಾದ ತಮಿಳು ಭಾಷೆಯಿಂದ ಕನ್ನಡ ಭಾಷೆ ತಾಳಿದೆ ಎಂದು ಹೇಳಿರುವುದು ನಿಜಕ್ಕೂ ಖಂಡನೀಯ ಮತ್ತು ಹಾಸ್ಯಾಸ್ಪದ

ತಮಿಳು ನಟ ಕಮಲಾಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಕರವೇ ತಾಲೂಕು ಅಧ್ಯಕ್ಷ ಜಿ.ಎಲ್.ಆಶ್ವತ್ಥ್ ನಾರಾಯಣ ಆಗ್ರಹಿಸಿದರು.

ಗೌರಿಬಿದನೂರು : ಕನ್ನಡ ಭಾಷೆಯ ಬಗ್ಗೆ ವಿವಾದ್ಮಾತಕ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿರುವ ತಮಿಳು ನಟ ಕಮಲಹಾಸನ್ ಅವರ ಹೇಳಿಕೆ ನಿಜಕ್ಕೂ ಖಂಡ ನೀಯ ಎಂದು ಕರವೇ ತಾಲೂಕು ಅಧ್ಯಕ್ಷ ಜಿ.ಎಲ್.ಆಶ್ವತ್ಥ್ ನಾರಾಯಣ ತಿಳಿಸಿದರು. ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕನ್ನಡ ಭಾಷೆಗೆ ಎರಡುಸಾವಿರದ ಐನೂರು ವರ್ಷಗಳ ಇತಿಹಾಸ ಹಾಗೂ ಪರಂಪರೆ ಇದೆ. ಇದರ ಪರಿವೇ ಇಲ್ಲದೆ ತಮಿಳು ನಟ ಕಮಲಹಾಸನ್ ವಿವಾದ್ಮಾಕ ಹೇಳಿಕೆಯಾದ ತಮಿಳು ಭಾಷೆಯಿಂದ ಕನ್ನಡ ಭಾಷೆ ತಾಳಿದೆ ಎಂದು ಹೇಳಿರುವುದು ನಿಜಕ್ಕೂ ಖಂಡನೀಯ ಮತ್ತು ಹಾಸ್ಯಾಸ್ಪದ ಎಂದರು.ಇದಕ್ಕೆ ಇಂಬು ನೀಡುವಂತೆ ಅವರ ಪರ ಹೇಳಿಕೆ ನೀಡಿರುವ ಕೆಲವು ಕನ್ನಡ ನಟರ ನಡೆಯೂ ಕೂಡ ನಿಜಕ್ಕೂ ಖಂಡನೀಯ ಎಂದು ಕಿಡಿಕಾರಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ನಟನೊಬ್ಬ ತನ್ನದಲ್ಲದ ಭಾಷೆಯ ಬಗ್ಗೆ ಪಂಡಿತನAತೆ ಹೇಳಿಕೆ ನೀಡುವುದು ಸರಿಯಲ್ಲ.ಇದು ನಿಜವೇ ಆಗಿದ್ದಲ್ಲಿ ಆತ ತನ್ನ ಹೇಳಿಕೆಗೆ ದಾಖಲೆ ಒದಗಿಸಬೇಕು. ಇಲ್ಲವಾದಲ್ಲಿ ಈ ಕೂಡಲೆ ಕನ್ನಡಿಗರ ಕ್ಷೇಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದ ಅವರು ಮೊಂಡುಹಠ ಮಾಡಿದಲ್ಲಿ ರಾಜ್ಯವ್ಯಾಪ್ತಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರವೇ ಸಂಘಟನೆಯ ಪ್ರಭು, ಬಾಲಕೃಷ್ಣ, ಛತ್ರಂ ಶ್ರೀಧರ್. ಮುಂತಾದವರು ಹಾಜರಿದ್ದರು.