ಜೂ.8 ರಂದು ಭಾರತರತ್ನ ಪಂ. ಭೀಮಸೇನ ಜೋಶಿ ಮೊಮ್ಮಗ, ವಿರಾಜ್ ಜೋಶಿ, ವಿದುಷಿ ಜಸ್ಮಿತ ಕೌರ್ ರಿಂದ ಗಾಯನ
ಪ್ರಜ್ವಲ ಟ್ರಸ್ಟ್ , ಸುರ್ ಸಪ್ತಕ ಮ್ಯೂಸಿಕ್ ಟ್ರಸ್ಟ್ ನಿಂದ ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಸ್ಮರಣಾರ್ಥ ತಾರ ಶಡ್ಡ ಕಾರ್ಯಕ್ರಮವನ್ನು ಜೂ.8 ರಂದು ನಗರದ ಟಿ. ಆರ್. ಸಿ ಸಭಾಂಗಣ ಸಂಜೆ 5 ಘಂಟೆಗೆ ಭಾರತರತ್ನ ಪಂ. ಭೀಮಸೇನ ಜೋಶಿಯವರ ಮೊಮ್ಮಗ, ವಿರಾಜ್ ಜೋಶಿ, ವಿದುಷಿ ಜಸ್ಮಿತ ಕೌರ್ ಇವರಿಂದ ಗಾಯನ ನಡೆಯಲಿದೆ ಎಂದು ವಿನಾಯಕ ಹೆಗಡೆ ಮಾಹಿತಿ ನೀಡಿದರು.


ಶಿರಸಿ: ಪ್ರಜ್ವಲ ಟ್ರಸ್ಟ್, ಸುರ್ ಸಪ್ತಕ ಮ್ಯೂಸಿಕ್ ಟ್ರಸ್ಟ್ ನಿಂದ ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಸ್ಮರಣಾರ್ಥ ತಾರ ಶಡ್ಡ ಕಾರ್ಯಕ್ರಮವನ್ನು ಜೂ.8 ರಂದು ನಗರದ ಟಿ. ಆರ್. ಸಿ ಸಭಾಂಗಣ ಸಂಜೆ 5 ಘಂಟೆಗೆ ಭಾರತರತ್ನ ಪಂ. ಭೀಮಸೇನ ಜೋಶಿಯವರ ಮೊಮ್ಮಗ, ವಿರಾಜ್ ಜೋಶಿ, ವಿದುಷಿ ಜಸ್ಮಿತ ಕೌರ್ ಇವರಿಂದ ಗಾಯನ ನಡೆಯಲಿದೆ ಎಂದು ವಿನಾಯಕ ಹೆಗಡೆ ಮಾಹಿತಿ ನೀಡಿದರು. ಅವರು ನಗರದ ಸಾಮ್ರಾಟ್ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಸಹ ಕಲಾವಿದರಾಗಿ ತಬಲಾದಲ್ಲಿ ಪಂ. ಭರತ್ ಕಾಮತ್ ಪುಣೆ ಮಧು ಕುಡಾಲ್ಕರ್, ಅಂಕೋಲಾ, ಸತೀಶ್ ಭಟ್ ಹೆಗ್ಗಾರ್, ಭರತ್ ಹೆಗಡೆ ಶಿರಸಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: IPL 2025: ʻಈ ಒಂದು ಕಾರಣದಿಂದಲೇ ವಿರಾಟ್ ಕೊಹ್ಲಿಯ ಮೇಲೆ ನನಗೆ ಗೌರವ ಜಾಸ್ತಿʼ: ಎಬಿಡಿ!
ಪಖವಾಜ್ ದಲ್ಲಿ ಧ್ಯಾನೇಶ್ವರ ದುಢಾನೇ, ಪಂಡರಪೂರ, ಮಂಜಿರಾದಲ್ಲಿ ದೇವದಾಸ ನಾಗರಮಠ, ಮಂಗಳೂರು, ರವಿ ಹೆಗಡೆ ಭಾಗವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಪಂ ಶ್ರೀನಿವಾಸ್ ಜೋಶಿ ಹಾಗೂ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ನೆರವೇರಿಸುವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಂದು ಹೆಗಡೆ, ಸುಮಾ ಹೆಗಡೆ ಉಪಸ್ಥಿತರಿದ್ದರು.