Indi (Vijayapura) news: ಪುರಸಭೆಯ ಮುಂಭಾಗ ಪೌರ ಕಾರ್ಮಿಕರ ಅನಿರ್ದಿಷ್ಠಾವಧಿ ಧರಣಿ ಮುಷ್ಕರ
ಸ್ಥಳಿಯ ಸಂಸ್ಥೆಗಳಾದ ಪುರಸಭೆ, ನಗರ ಸಭೆ ಪಟ್ಟಣ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರ ಬಹುದಿನಗಳ ಬೇಡಿಕೆ ಇನ್ನೂ ಇಡೇರಿಲ್ಲ. ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು, ರಾಜ್ಯ ಸರಕಾರಿ ನೌಕರರಿಗೆ ಇರುವ ಎಲ್ಲಾ ಸೌಲತ್ತುಗಳು ಪೌರ ಕಾರ್ಮಿಕರಿಗೂ ಒದಗಿಸಬೇಕು

ಇಂಡಿ: ಪೌರ ಕಾರ್ಮಿಕರು ಖಾಯಂ ಮಾಡುವುದು ಸರಕಾರಿ ನೌಕರರಂತೆ ಪರಿಗಣಿಸುವುದು ಸೇರಿ ದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪೌರ ಕಾರ್ಮಿಕರು ಕೆಲಸ ಕಾರ್ಯ ಗಳನ್ನು ಸ್ಥಗಿತಗೊಳಿಸಿ ಪುರಸಭೆಯ ಮುಂಭಾಗ ಅನಿರ್ದಿಷ್ಠಾವಧಿ ಧರಣಿ ಮುಷ್ಕರ ನಡೆಸಿದರು. ಈ ಸಂದರ್ಭದಲ್ಲಿ ಪೌರ ಕಾರ್ಮಿಕರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ಶಿವಶರಣ ಮಾತನಾಡಿ ಸ್ಥಳಿಯ ಸಂಸ್ಥೆಗಳಾದ ಪುರಸಭೆ, ನಗರ ಸಭೆ ಪಟ್ಟಣ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರ ಬಹುದಿನಗಳ ಬೇಡಿಕೆ ಇನ್ನೂ ಇಡೇರಿಲ್ಲ. ಪೌರ ಕಾರ್ಮಿಕರನ್ನು ಖಾಯಂಗೊಳಿಸ ಬೇಕು, ರಾಜ್ಯ ಸರಕಾರಿ ನೌಕರರಿಗೆ ಇರುವ ಎಲ್ಲಾ ಸೌಲತ್ತುಗಳು ಪೌರ ಕಾರ್ಮಿಕರಿಗೂ ಒದಗಿಸ ಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡ ಬಿ,ಡಿ ಪಾಟೀಲ, ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಕರವೇ ಅಧ್ಯಕ್ಷ ಬಾಳು ಮುಳಜಿ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕೀವುಡೆ, ಪುರಸಭೆ ಸದಸ್ಯರಾದ ಅನಿಲಗೌಡ ಬಿರಾದಾರ, ಬಿಜೆಪಿಯುವ ಮುಖಂಡರಾದ ಶಿವು ಬಗಲಿ, ವಿಜಯಕುಮಾರ ಮೂರಮನ್, ವಿಜು ರಾಠೋಡ, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಜಹಾಂಗೀರ ಸೌದಾಗರ, ಭೀಮಾಶಂಕರ ಮೂರಮನ್, ಉಮೇಶ ದೇಗಿನಾಳ, ಅಸ್ಲಂ ಕಡಣಿ, ಶಬ್ಬೀರ ಖಾಜಿ, ಮುಸ್ತಾಕ ಇಂಡಿಕರ್, ಅಯೂಬ ಬಾಗವಾನ, ದಲಿತ ಮುಖಂಡ ಚಂದ್ರಶೇಖರ ಹೊಸಮನಿ, ಅಯೂಬ ನಾಟೀಕಾರ, ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ ಪೌರ ಕಾರ್ಮಿಕರ ಅನಿರ್ದಿಷ್ಠಾವಧಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಇದನ್ನೂ ಓದಿ: Indi (Vijayapura) news: ಕೆ.ಡಿ.ಪಿ ಸಭೆಯಲ್ಲಿ ಠರಾವು: ಆಲಮಟ್ಟಿ ಆಣೆಕಟ್ಟು ಎತ್ತರ 524ಮೀ ಗೆ ಏರಿಸಿ: ಯಶವಂತರಾಯಗೌಡರು
ಪ್ರವೀಣ ಸೋನಾರ, ಅಬ್ದುಲಸಲೀ೦ ಕಾಖಂಡಕಿ, ದೇವೇಂದ್ರ ಕಟ್ಟಿಮನಿ, ಬಸವರಾಜ ಮುಂಜನ್ನಿ, ಚಂದು ಕಾಲೇಬಾಗ, ಅಸ್ಲಂ ಖಾದಿಂ, ತಹಸ್ಲಿಂಬಾನು ವಾಲೀಕಾರ, ಸುಭಾಷ ಕಸಬ, ಸದ್ದಾಂ ಶೇಖ, ಮಲ್ಲಪ್ಪ ನಡಗಡ್ಡಿ, ಮುತ್ತು ಮುರಾಳ, ಲಕ್ಷ್ಮೀ ಕಾಲೇಬಾಗ ,ಕಲಾವತಿ ಕಾಳೆ, ಲತಾ ಗುಡಮಿ, ಶ್ರೀಶೈಲ ಹಾದಿಮನಿ, ಮರೇಪ್ಪ ಗುಡಮಿ, ಮಲ್ಲಪ್ಪ ಕಂಟಿಕಾರ, ಮಾಳು ಹೆಳವರ್, ನಿಂಬಣ್ಣಾ ರವಳಿ, ಮರೇವ್ವ ಗುಡಮಿ, ಶ್ರೀಶೈಲ ಗುಡ್ಲ, ಶಮೀರ , ಮಲ್ಲಿಕಾರ್ಜುನ ಶಿವಶರಣ, ಬಸು ಪಾಟೀಲ, ಶಶಿ ದೇವರ, ಮಲ್ಲು ಕಾಳೆ ಸೇರಿದಂತೆ ಇತರೇ ಪೌರ ಕಾರ್ಮಿಕರು ಧರಣಿಯಲ್ಲಿದ್ದರು.
ಪೌರಕಾರ್ಮಿಕರ ಪ್ರಮುಖ ಬೇಡಿಕೆಗಳು -
೧) ರಾಜ್ಯದ ಸ್ಥಳೀಯ ನೌಕಲರರನ್ನು ರಾಜ್ಯ ಸರಕಾರಿ ನೌಕರರು ಎಂದು ಕರಿಗಣಿಸಿ ಜ್ಯೋತಿ ಸಂಜೀವಿನಿ ಕೆಜೆಆಯ್ಡಿ ಸೇರಿದಂತೆ ಸರಕಾರಿ ನೌಕರರು ಪಡೆಯುವ ಎಲ್ಲಾ ಸೌಲತ್ತು ನೀಡಬೇಕು.೨) ರಾಜ್ಯದ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ನೀರು ಸರಬರಾಜು ಕಾರ್ಮಿಕರು ವಾಹನ ಚಾಲಕರು ಲೋಡರ್ಸ, ಕ್ಲೀನರ್ಸ,ಗಾರ್ಡಿನರ್, ಸ್ಯಾನಿಟರಿ, ಸುಪ್ರೀವಾಯಿಜರ್, ಕಂಪ್ಯೋಟರ್ , ಯುಜಿಡಿ ಸಹಾಯಕರು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ಕಾರ್ಮಿಕರನ್ನು ನಗರದ ಸ್ಥಳಿಯ ಸಂಸ್ಥೆಗಳಿAದ ನೇರ ಪಾವತಿಗೆ ಒಳಪಡಿಸುವುದು
೩) ದಿನಗೂಲಿ ಕ್ಷೇಮಾಭಿವೃದ್ದಿ ಸಮಾನ ಕೆಲಸಕ್ಕೆ ಸಮಾನ ವೇತನ ಈ ನೌಕರರನ್ನು ಖಾಯಂ ಮಾಡುವುದು.
೪) ವಿಶೇಷ ನೇಮಕಾತಿ ಅಡಿ ಖಾಯಂಗೊAಡ ನೌಕರರಿಗೆ ಎಸ್.ಎಫ್.ಸಿ ವೇತನ ಅನುಧಾನದಿಂದ ವೇತನ ನೀಡುವುದು.