Vatal Nagraj: ಕಮಲ ಹಾಸನ್ ಕ್ಷಮೆ ಕೇಳಬೇಕು ಇಲ್ಲದಿದ್ದಲ್ಲಿ ರಾಜ್ಯದಲ್ಲಿ ರಣರಂಗ ಆಗಲಿದೆ : ವಾಟಾಳ್ ನಾಗರಾಜ್ ಎಚ್ಚರಿಕೆ
ಕಮಲ್ ಹಾಸನ್ ಅವನೊಬ್ಬ ದುರಹಂಕಾರಿ. ಬಾಯಿಗೆ ಬಂದಂತೆ ಮಾತನಾಡುವುದೇ ಅವನ ಉದ್ಯೋಗ.ಈಗ ತಮಿಳುನಾಡಿನಲ್ಲಿ ಮದ್ರಾಸಿನಲ್ಲಿ ಅವನ ಪ್ರಭಾವ ಬಿದ್ದು ಹೋಗಿದೆ. ಈಗ ಮತ್ತೆ ಪ್ರಭಾವಶಾಲಿಯಾಗಲು ತಮಿಳಿನಿಂದ ಕನ್ನಡ ಬಂದಿದೆ ಎಂಬ ಅಸಂಬದ್ಧ ಹೇಳಿಕೆ ಕೊಟ್ಟು ಸುದ್ದಿಯಾಗಿದ್ದಾನೆ

ಚಿಕ್ಕಬಳ್ಳಾಪುರ ನಗರದಲ್ಲಿ ಕನ್ನಡ ವಾಟಾಳ್ ಪಕ್ಷದ ನೇತಾರ ವಾಟಾಳ್ ನಾಗರಾಜ್ ಮಾತನಾಡಿದರು.

ಚಿಕ್ಕಬಳ್ಳಾಪುರ : ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ವಪಕ್ಷಗಳ ಮುಖಂಡರ ತುರ್ತು ಶಾಸನ ಸಭೆ ಕರೆದು ಕನ್ನಡದ ಪ್ರಾಚೀನತೆ ಬಗ್ಗೆ ಸುಧೀರ್ಘ ಚರ್ಚೆ ಮಾಡಬೇಕು. ಆ ಸಭೆಯಲ್ಲಿ ಕನ್ನಡ ತಮಿಳಿನಿಂದ ಬಂದಿಲ್ಲ, ಸ್ವತಂತ್ರ ಭಾಷೆ ಎಂಬುದನ್ನು ಜಗತ್ತಿಗೆ ಸಾರಬೇಕಿದೆ. ಇಲ್ಲವಾದಲ್ಲಿ ಜಗತ್ತು ಕಮಲಹಾನ್ ಮಾತನ್ನೇ ನಂಬುತ್ತದೆ. ಇದು ಅಪಾಯಕಾರಿ ಬೆಳವಣಿಗೆ.ಇದನ್ನು ತಡೆಯಬೇಕಾದರೆ ಸರ್ವಪಕ್ಷ ಸಬೆ ನಡೆಸಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.
ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಕನ್ನಡಪರ ಸಂಘಟನೆಗಳ ಜತೆಗೂಡಿ ಕಮಲಹಾಸನ್ ಹೇಳಿಕೆ ಖಂಡಿಸಿ ಮಾತನಾಡಿದರು.
ಕಮಲ್ ಹಾಸನ್ ಅವನೊಬ್ಬ ದುರಹಂಕಾರಿ. ಬಾಯಿಗೆ ಬಂದಂತೆ ಮಾತನಾಡುವುದೇ ಅವನ ಉದ್ಯೋಗ.ಈಗ ತಮಿಳುನಾಡಿನಲ್ಲಿ ಮದ್ರಾಸಿನಲ್ಲಿ ಅವನ ಪ್ರಭಾವ ಬಿದ್ದು ಹೋಗಿದೆ. ಈಗ ಮತ್ತೆ ಪ್ರಭಾವಶಾಲಿಯಾಗಲು ತಮಿಳಿನಿಂದ ಕನ್ನಡ ಬಂದಿದೆ ಎಂಬ ಅಸಂಬದ್ಧ ಹೇಳಿಕೆ ಕೊಟ್ಟು ಸುದ್ದಿಯಾಗಿದ್ದಾನೆ. ಈ ಮೂಲಕ ಸಮಗ್ರ ಕನ್ನಡಿಗರ ಮೇಲೆ ದಾಳಿ ಮಾಡಿದ್ದಾನೆ. ಈತನ ವಿರುದ್ಧ ಕರ್ನಾಟಕ ಸರಕಾರ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಈತ ಕೂಡಲೇ ಕನ್ನಡಿಗರ ಕ್ಷಮಾಪಣೆ ಕೇಳಲೇಬೇಕು. ಕನ್ನಡ ಭಾಷೆಯ ಸೊಬಗು ಸೌಂದರ್ಯ ಪ್ರಾಚೀನತೆ ಅರಿಯದೆ ಇಂತಹ ಹೇಳಿಕೆ ನೀಡಿದ್ದು ಅಪರಾಧ. ಕನ್ನಡ ಭಾಷೆಯ ಬರವಣಿಗೆ ವ್ಯಾಕರಣ ಧ್ವನಿ, ಶಕ್ತಿ, ಸೌಂದರ್ಯ ತಮಿಳಿಗಿಲ್ಲ. ಇಷ್ಟಾದರೂ ಆತ ಕ್ಷಮೆ ಕೇಳುವುದಿಲ್ಲ ಎಂದಿದ್ದಾನೆ.ತಮಿಳು ಚಿತ್ರರಂಗ ಕೂಡ ಈತನಿಗೆ ಬೆಂಬಲ ನೀಡಿರುವುದು,ನೋಡಿಯಾದರೂ ಕನ್ನಡ ಚಿತ್ರರಂಗ ಒಗ್ಗಟ್ಟಾಗಬೇಕಿದೆ ಎಂದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಕೂಡಲೇ ತೀರ್ಮಾನ ಕೈಗೊಳ್ಳಬೇಕು.ಬೆಂಗಳೂರಿನಲ್ಲಿ ಕಮಲಹಾಸನ್ ಚಿತ್ರ ಬಿಡುಗಡೆ ಮಾಡಬಾರದು.ಥಿಯೇಟರ್ ಮಾಲಿಕರಿಗೂ ಹೇಳುತ್ತೇವೆ.ಇದನ್ನು ಮೀರಿ ಬಿಡುಗಡೆ ಮಾಡಿದಲ್ಲಿ ಕರ್ನಾಟಕ ರಣರಂಗವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಮುಂದಿನ ದಿನಗಳಲ್ಲಿ ಭಾಷೆಯ ಬಗ್ಗೆ ಅವಹೇಳನ ಮಾಡುವ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇದರ ವಿರುದ್ಧ ತೀವ್ರ ಹೋರಾಟ ಮಾಆಡಲಿಲ್ಲ ಎಂದರೆ ದೇಶ ವಿದೇಶದಲ್ಲಿ ಇದೇ ಅಭಿಪ್ರಾಯ ಅಚ್ಚೊತ್ತಲಿದೆ.ಕನ್ನಡ ಅದರದೇ ಆದ ಸ್ವಂತ ಶಕ್ತಿಯಿರುವ ಸ್ವತಂತ್ರ ದ್ರಾವಿಡ ಭಾಷೆ.ಕನ್ನಡ ಸಾಹಿತ್ಯ ಪರಿಷತ್ತು, ಪತ್ರಕರ್ತರು, ಸಾಹಿತಿಗಳು, ಬರಹಗಾರರು, ಕನ್ನಡಪರ ಹೋರಾಟಗಾರರು ಎಲ್ಲರೂ ಸೇರಿ ಈ ಬಗ್ಗೆ ಗಂಬೀರವಾಗಿ ಚಿಂತನೆ ಮಾಡಬೇಕಿದೆ.ಕ್ಷಮಾಪಣೆ ಕೇಳಲಿಲ್ಲ ಎಂದರೆ ಕನ್ನಡಪರ ಸಂಘಟನೆಗಳ ಐಕ್ಯಮತ್ಯದಲ್ಲಿ ಕರ್ನಾಟಕ ಬಂದ್ಗೆ ಕರೆ ನೀಡಬೇಕಾಗುತ್ತದೆ.ಕನ್ನಡ ಚಲನಚಿತ್ರ ನಟರೂ ಕೂಡ ಬೀದಿಗೆ ಬಂದು ಭದ್ರವಾಗಿ ನಿಂತು ಕಮಲಹಾನ್ ಕ್ಷಮಾಪಣೆಗೆ ಒತ್ತಾಯಿಸಬೇಕಿದೆ ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನ ರಾಜಕಾರಣಿಗಳು ಪಕ್ಷಾತೀತವಾಗಿ ರಣಹೇಡಿ ಗಳು. ಅವರಿಗೆ ಭಾಷೆಯ ಬಗ್ಗೆ ಗೌರವವಿಲ್ಲ.ಕೇವಲ ರಾಜಕಾರಣ, ಅಧಿಕಾರ, ಲೂಟಿ, ಭ್ರಷ್ಟಾಚಾರ ಇದರ ವಾರಸುದಾರರು ಇವರು.ಈ ರಾಜ್ಯಕ್ಕೆ ತಿರುವಳ್ಳುವರ್ ಪ್ರತಿಮೆ ತಂದಿದ್ದು ಪುಣ್ಯಾತ್ಮ ಯಡಿಯೂರಪ್ಪ. ನಮ್ಮನ್ನೆಲ್ಲಾ ಬಂಧಿಸಿ ಹಾಸನದ ಜೇಲಿನಲ್ಲಿ ಇಟ್ಟು, ಇಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಮಾಡಿದ್ದರು.ಈ ರಾಜ್ಯದಲ್ಲಿ ತಮಿಳು ಸಂಸ್ಕೃತಿ ಬರಬೇಕಾದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾರಣ. ಇವತ್ತು ಬಿಜೆಪಿ ಅವರು ಕಮಲಾಹಾಸನ್ ಬಗ್ಗೆ ಮಾತ ನಾಡುತ್ತಿದ್ದಾರೆ. ಇದುವರೆವಿಗೂ ಅರ್ಯಾರೂ ತಮಿಳು ಬಗ್ಗೆ ಮಾತನಾಡುತ್ತಿರಲಿಲ್ಲ. ಇದ್ದಕ್ಕಿದ್ದಂಗೆ ಶುರು ಮಾಡಿದ್ದಾರೆ. ಯಡಿಯೂರಪ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಕಮಲಹಾಸನ್ ಹೇಳಿಕೆ ಖಂಡಿಸಿ ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳು ಬೀದಿಗಿಳಿದು ಹೋರಾಟ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಪಕ್ಷದ ಕಚೇರಿ, ಮನೆಯ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು.
ಕಮಲಹಾಸನ್ ವಿರುದ್ಧ ಇಡೀ ರಾಜ್ಯ ಒಂದಾಗಬೇಕು. ಕನ್ನಡ ಧ್ವನಿ ಒಂದಾಗಬೇಕು.ಇದು ಶಿವರಾಜ್ ಕುಮಾರ್ ಒಬ್ಬರ ವಿಚಾರವಲ್ಲ.ಇಡೀ ಕನ್ನಡ ಚಿತ್ರರಂಗ ಒಗ್ಗೂಡಬೇಕು.ತಮಿಳು ಚಿತ್ರರಂಗ ಕಮಲಹಾಸನ್ ಪರ ನಿಂತಿರುವAತೆ, ಕನ್ನಡ ಚಿತ್ರರಂಗವೂ ನಿಲ್ಲಬೇಕಿದೆ ಎಂದು ಒತ್ತಾಯಿಸಿದರು.
ಈ ವೇಳೆ ಕನ್ನಡ ಸೇನೆ ಜಿಲ್ಲಾಧ್ಯಕ್ಷ ವಿ.ರವಿಕುಮಾರ್, ನಗರ ಘಟಕ ಅಧ್ಯಕ್ಷ ಶ್ರವಣ್, ನಾಗೇಶ್, ಶ್ರೀಧರ್, ವಕೀಲ ವಿಜಯಶಂಕರ್, ವಿಜಯಕುಮಾರ್ ಮತ್ತಿತರರು ಇದ್ದರು.