ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

TTD: ತಿರುಪತಿ ವಿಮಾನ ನಿಲ್ದಾಣಕ್ಕೆ ಶ್ರೀ ವೆಂಕಟೇಶ್ವರ ಹೆಸರಿಡಲು ಟಿಟಿಡಿ ಶಿಫಾರಸು

Renigunta Airport: ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಮಂಡಳಿಯು ಮಂಗಳವಾರ ರೇಣಿಗುಂಟ ವಿಮಾನ ನಿಲ್ದಾಣವನ್ನು ‘ಶ್ರೀ ವೆಂಕಟೇಶ್ವರಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡಲು ಶಿಫಾರಸು ಮಾಡಿ, ಈ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ.

ತಿರುಪತಿ ವಿಮಾನ ನಿಲ್ದಾಣಕ್ಕೆ ಶ್ರೀ ವೆಂಕಟೇಶ್ವರ ಹೆಸರಿಡಲು ಟಿಟಿಡಿ ಶಿಫಾರಸು

Profile Sushmitha Jain Jun 18, 2025 6:29 PM

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ (TTD) ಟ್ರಸ್ಟ್ ಮಂಡಳಿಯು ಮಂಗಳವಾರ ರೇಣಿಗುಂಟ ವಿಮಾನ ನಿಲ್ದಾಣವನ್ನು ‘ಶ್ರೀ ವೆಂಕಟೇಶ್ವರ (Venkateswara) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡಲು ಶಿಫಾರಸು ಮಾಡಿ, ಈ ಕುರಿತು ಕೇಂದ್ರ ನಾಗರಿಕ ವಿಮಾನಯಾನ (Civil Aviation) ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ. TTD ಅಧ್ಯಕ್ಷ ಬಿ.ಆರ್. ನಾಯ್ಡು, ವಿಮಾನ ನಿಲ್ದಾಣವನ್ನು ತಿರುಮಲದ ಆಧ್ಯಾತ್ಮಿಕ ಮತ್ತು ಭಕ್ತಿಮಯ ವಾತಾವರಣವನ್ನು ಪ್ರತಿಬಿಂಬಿಸುವ ಸೌಂದರ್ಯಾತ್ಮಕ ವಿನ್ಯಾಸದೊಂದಿಗೆ ಪುನರಾಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು.

“ರೇಣಿಗುಂಟ ವಿಮಾನ ನಿಲ್ದಾಣವನ್ನು ಶ್ರೀ ವೆಂಕಟೇಶ್ವರನ ಹೆಸರಿನಲ್ಲಿ ಮರುನಾಮಕರಣ ಮಾಡಲು ಪ್ರಸ್ತಾವನೆ ಸಿದ್ಧವಾಗಿದೆ. ಇದು ತಿರುಮಲದ ದೈವಿಕ ಸೌಂದರ್ಯವನ್ನು ಒಳಗೊಂಡಿರುವಂತೆ ರೂಪಿಸಲಾಗುವುದು” ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಸುದ್ದಿಯನ್ನೂ ಓದಿ: Tirupati Temple: ತಿರುಮಲದಲ್ಲಿ ಇನ್ನು ದೇವರ ದರ್ಶನ ಸುಲಭ; ಭಕ್ತರ ಅನುಕೂಲಕ್ಕಾಗಿ AI ಸೇವೆಗಾಗಿ ಗೂಗಲ್‌ ಜತೆ ಕೈಜೋಡಿಸಿದ ಟಿಟಿಡಿ

TTD ಅಧ್ಯಕ್ಷರು, ಕರ್ನಾಟಕ ಸರ್ಕಾರದಿಂದ ಜಮೀನು ಮಂಜೂರಾದರೆ, ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ ಶ್ರೀವಾರಿ ದೇವಾಲಯ ನಿರ್ಮಿಸುವ ಯೋಜನೆಯನ್ನು ಘೋಷಿಸಿದರು. ಕೇಂದ್ರ ಭಾರೀ ಕೈಗಾರಿಕೆ ಸಚಿವ ಕುಮಾರಸ್ವಾಮಿ TTDಗೆ 100 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲು ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ಇವುಗಳನ್ನು ತಿರುಮಲಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ತಿರುಪತಿಯಲ್ಲಿ ದೇವಾಲಯದ ನೈವೇದ್ಯಕ್ಕೆ ಬಳಸುವ ತುಪ್ಪ, ನೀರು, ಮತ್ತು ಆಹಾರದ ಗುಣಮಟ್ಟವನ್ನು ಪರಿಶೀಲಿಸಲು CSIR ಲ್ಯಾಬ್ ಸ್ಥಾಪನೆಗೆ ಜಾಗವನ್ನು ಗುತ್ತಿಗೆಗೆ ನೀಡಲು TTD ನಿರ್ಧರಿಸಿದೆ. ದೆಹಲಿಯ 73 ವರ್ಷದ ಶ್ರೀ ವೆಂಕಟೇಶ್ವರ ಕಾಲೇಜನ್ನು ಆಧುನೀಕರಿಸಲಾಗುವುದು ಎಂದು ನಾಯ್ಡು ಹೇಳಿದರು. 200 ಗುತ್ತಿಗೆ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸಲು TTD ಅಧ್ಯಕ್ಷರ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, ಇದರ ನಂತರ ಹೊಸ ನೇಮಕಾತಿ ನಡೆಯಲಿವೆ.