ಚೊಚ್ಚಲ ಟ್ರೋಫಿ ಗೆದ್ದ ಬಳಿಕ ಸ್ವಾಮಿ ಚಿದಾನಂದ ಸರಸ್ವತಿ ಭೇಟಿಯಾದ ಆರ್ಸಿಬಿ ಕೋಚ್
RCB Coach Andy Flower: ಯೋಗದ ಬಗ್ಗೆಯೂ ಮಾತನಾಡಿದ ಫ್ಲವರ್, ಕಳೆದ ಎರಡು ವಾರಗಳಿಂದ ನಾನು ರಿಷಿಕೇಶದಲ್ಲಿದ್ದೇನೆ. ನಾನು ಯೋಗದ ಬಗ್ಗೆ ಬಹಳಷ್ಟು ಕಲಿಯುತ್ತಿದ್ದೇನೆ ಮತ್ತು ನಾನು ಕಲಿತ ಮುಖ್ಯ ವಿಷಯವೆಂದರೆ ಯೋಗವು ಒಂದು ಗಂಟೆಯ ತರಗತಿಯಲ್ಲ. ಆದರೆ, ಅದು ಲಕ್ಷಾಂತರ ಜನರಿಗೆ ಜೀವನ ವಿಧಾನವಾಗಿದೆ. ನಾನು ಮಾಡಿದ ದೈಹಿಕ ಅಭ್ಯಾಸಗಳನ್ನು ನಾನು ಆನಂದಿಸಿದ್ದೇನೆ' ಎಂದರು.


ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್(Andy Flower) ಪರಮಾರ್ಥ ನಿಕೇತನ ಆಶ್ರಮದ ಅಧ್ಯಕ್ಷ ಮತ್ತು ಆಧ್ಯಾತ್ಮಿಕ ಮುಖ್ಯಸ್ಥ ಸ್ವಾಮಿ ಚಿದಾನಂದ ಸರಸ್ವತಿ(Swami Chidanand Saraswati) ಅವರನ್ನು ಭೇಟಿ ಮಾಡಿ ಆರ್ಸಿಬಿ ಚೊಚ್ಚಲ ಟ್ರೋಫಿ ಗೆದ್ದ ಬಗ್ಗೆ ಮಾತನಾಡಿದರು. ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಫ್ಲವರ್, ಆರ್ಸಿಬಿ ತಮ್ಮ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಪ್ರಶಸ್ತಿಯನ್ನು ತರಬೇತುದಾರರಾಗಿ ಗೆದ್ದ ಕೆಲವು ದಿನಗಳ ನಂತರ ಋಷಿಕೇಶದಲ್ಲಿ ಸ್ವಾಮಿಯನ್ನು ಭೇಟಿಯಾದರು.
ಭೇಟಿಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಫ್ಲವರ್ "ವಾಸ್ತವವಾಗಿ ನಾನು ಸ್ವಾಮಿಯೊಂದಿಗೆ ಆರ್ಸಿಬಿ ತಂಡದ ಬಗ್ಗೆ ಮಾತನಾಡುತ್ತಿದ್ದೆ. ಆಟ ಮತ್ತು ತರಬೇತಿಯಲ್ಲಿ ನನ್ನ ಅನುಭವದ ಪ್ರಕಾರ, ಗೆಲ್ಲುವುದು ಸಾಕಾಗುವುದಿಲ್ಲ. ಗೆಲ್ಲುವುದಕ್ಕಿಂತ ಹೆಚ್ಚಿನ, ಆಳವಾದ, ಹೆಚ್ಚು ಅರ್ಥಪೂರ್ಣವಾದ ಏನಾದರೂ ಇರಬೇಕು" ಎಂದು ಹೇಳಿದರು.
ಇದೇ ವೇಳೆ ಯೋಗದ ಬಗ್ಗೆಯೂ ಮಾತನಾಡಿದ ಫ್ಲವರ್, ಕಳೆದ ಎರಡು ವಾರಗಳಿಂದ ನಾನು ರಿಷಿಕೇಶದಲ್ಲಿದ್ದೇನೆ. ನಾನು ಯೋಗದ ಬಗ್ಗೆ ಬಹಳಷ್ಟು ಕಲಿಯುತ್ತಿದ್ದೇನೆ ಮತ್ತು ನಾನು ಕಲಿತ ಮುಖ್ಯ ವಿಷಯವೆಂದರೆ ಯೋಗವು ಒಂದು ಗಂಟೆಯ ತರಗತಿಯಲ್ಲ. ಆದರೆ, ಅದು ಲಕ್ಷಾಂತರ ಜನರಿಗೆ ಜೀವನ ವಿಧಾನವಾಗಿದೆ. ನಾನು ಮಾಡಿದ ದೈಹಿಕ ಅಭ್ಯಾಸಗಳನ್ನು ನಾನು ಆನಂದಿಸಿದ್ದೇನೆ' ಎಂದರು.
#WATCH | Uttarakhand: Former Zimbabwean cricket captain and RCB coach, Andy Flower meets Swami Chidanand Saraswati, president and spiritual head of Parmarth Niketan Ashram, in Rishikesh pic.twitter.com/EOuSxgFqhq
— ANI (@ANI) June 21, 2025
ಜೂನ್ 3 ರಂದು ನಡೆದಿದ್ದ ಐಪಿಎಲ್ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರುತಂಡ ಪಂಜಾಬ್ ಕಿಂಗ್ಸ್ ತಂಡವನ್ನೂ ಮಣಿಸಿ 18 ವರ್ಷಗಳ ಬಳಿಕ ಮೊದಲ ಐಪಿಎಲ್ ಟ್ರೋಫಿ ಗೆದ್ದಿತ್ತು. ಆರ್ಸಿಬಿ ಗೆದ್ದರೂ ಕೂಡ ಆ ಬಳಿಕ ಚಿನ್ನಸ್ವಾಮಿಯ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11ಮಂದಿ ಸಾವನ್ನಪ್ಪಿದ್ದು ತಂಡದ ಕಪ್ ಗೆದ್ದ ಎಲ್ಲ ಸಂಭ್ರಮವನ್ನು ಮರೆಯುಂತೆ ಮಾಡಿತ್ತು. ಐಪಿಎಲ್ ಇತಿಹಾಸದ ಪುಟದಲ್ಲಿ ಈ ಘಟನೆ ದುರಂತವಾಗಿ ದಾಖಲಾಯಿತು.