ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anganwadi Menu: ಅಂಗನವಾಡಿ ಮಕ್ಕಳಿಗೆ ಸಿಗಲಿದೆ ಬಿರಿಯಾನಿ, ಪಲಾವ್, ಸೋಯಾ ಡ್ರೈ ಕರಿ.. ಇನ್ನು ಹಲವು ವಿಶೇಷ ಖಾದ್ಯಗಳು

ಮೂರು ತಿಂಗಳ ಹಿಂದೆ ತಮ್ಮ ಹಳ್ಳಿಯ ಅಂಗನವಾಡಿಯಲ್ಲಿ ಪುಟಾಣಿ ಶಂಕು ಎಂಬ ಬಾಲಕ "ಉಪ್ಮಾ" ಬದಲಿಗೆ ಬಿರಿಯಾನಿ ಕೇಳಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ (kerala Health Minister Veena George) ಅವರ ಗಮನವನ್ನೂ ಸೆಳೆದಿದೆ. ಇದರ ಪರಿಣಾಮ ಈಗ ಕೇರಳದಾದ್ಯಂತದ ಮಕ್ಕಳ ಆರೈಕೆ ಕೇಂದ್ರಗಳಲ್ಲಿ ಆಹಾರ ಮೆನುವನ್ನು ಪರಿಷ್ಕರಿಸಲಾಗಿದೆ. ಮಕ್ಕಳಿಗೆ ವಿವಿಧ ರೀತಿಯ ರುಚಿಕರ ಮತ್ತು ಪೌಷ್ಟಿಕ ಆಹಾರ ನೀಡಲು ಪ್ರಾರಂಭಿಸಿದೆ.

ಅಂಗನವಾಡಿ ಮಕ್ಕಳಿಗೆ ಇನ್ಮುಂದೆ ಸಿಗಲಿದೆ ಬಿರಿಯಾನಿ!

ಪಥನಂತಿಟ್ಟ: ಮಕ್ಕಳಿಗೆ ಶಾಲೆಯಲ್ಲಿ ಅವರಿಗೆ ಇಷ್ಟವಾದ ಖಾದ್ಯಗಳು ಸವಿಯಲು ಸಿಕ್ಕರೆ ಅದಕ್ಕಿಂತ ಹೆಚ್ಚಿನ ಖುಷಿ ಮಕ್ಕಳಿಗೆ ಬೇರೇನಿದೆ. ಮಕ್ಕಳು ಪ್ರತಿನಿತ್ಯ ಖುಷಿಖುಷಿಯಾಗಿ ಶಾಲೆಗೆ ಹೊರಡಲು ಇದು ಒಂದು ಕಾರಣವಾಗುವುದು. ಇದೀಗ ಕೇರಳದ (Kerala) ಅಂಗನವಾಡಿಗೆ (Kerala Anganwadi) ಮಕ್ಕಳು ಖುಷಿಯಿಂದ ಬರುತ್ತಾರೆ. ಯಾಕೆಂದರೆ ಇಲ್ಲಿ ಈಗ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಬಿರಿಯಾನಿ, ಪಲಾವ್, ದಾಲ್ ಪಾಯಸ, ಸೋಯಾ ಡ್ರೈ ಕರಿ, ನ್ಯೂಟ್ರಿ ಲಡ್ಡುಗಳು ದೊರೆಯುತ್ತವೆ. ಮಕ್ಕಳ ಕೋರಿಕೆಯ ಮೇರೆಗೆ 3 ತಿಂಗಳ ಅನಂತರ ಕೇರಳ ಅಂಗನವಾಡಿ ಮೆನುವಿನಲ್ಲಿ (food menu) ಇದನ್ನು ಸೇರಿಸಲಾಗಿದೆ.

ಮೂರು ತಿಂಗಳ ಹಿಂದೆ ತಮ್ಮ ಹಳ್ಳಿಯ ಅಂಗನವಾಡಿಯಲ್ಲಿ ಪುಟಾಣಿ ಶಂಕು ಎಂಬ ಬಾಲಕ "ಉಪ್ಪಿಟ್ಟು" ಬದಲಿಗೆ ಬಿರಿಯಾನಿ ಕೇಳಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ (Kerala Health Minister Veena George) ಅವರ ಗಮನವನ್ನೂ ಸೆಳೆದಿದೆ. ಇದರ ಪರಿಣಾಮ ಈಗ ಕೇರಳದಾದ್ಯಂತದ ಮಕ್ಕಳ ಆರೈಕೆ ಕೇಂದ್ರಗಳಲ್ಲಿ ಆಹಾರ ಮೆನುವನ್ನು ಪರಿಷ್ಕರಿಸಲಾಗಿದೆ. ಮಕ್ಕಳಿಗೆ ವಿವಿಧ ರೀತಿಯ ರುಚಿಕರ ಮತ್ತು ಪೌಷ್ಟಿಕ ಆಹಾರ ನೀಡಲು ಪ್ರಾರಂಭಿಸಿದೆ.

ಮಂಗಳವಾರ ಅನಾವರಣಗೊಳಿಸಲಾಗಿರುವ ಹೊಸ ಮೆನುವಿನಲ್ಲಿ ಎಗ್ ಬಿರಿಯಾನಿ, ಪುಲಾವ್, ದಾಲ್ ಪಾಯಸಂ, ಸೋಯಾ ಡ್ರೈ ಕರಿ ಮತ್ತು ನ್ಯೂಟ್ರಿ ಲಡ್ಡುಗಳಂತಹ ಮಕ್ಕಳಿಗೆ ಪ್ರಿಯವಾಗುವ ಭಕ್ಷ್ಯಗಳು ಸೇರಿಸಲಾಗಿದೆ. ಇದು ಕೊಂಚ ದುಬಾರಿಯಾದರೂ ಸಾವಿರಾರು ಮಕ್ಕಳಿಗೆ ಸಂತೋಷವನ್ನು ಕೊಡುತ್ತದೆ ಮತ್ತು ಅವರ ಉತ್ತಮ ಬೆಳವಣಿಗೆಗೆ ಪೋಷಣೆಯನ್ನು ಕೊಡುತ್ತದೆ.

ಅಂಗನವಾಡಿ ಮಕ್ಕಳಿಗಾಗಿ ಪರಿಷ್ಕೃತ ಮೆನುವನ್ನು ಅನಾವರಣಗೊಳಿಸಿದ ಸಚಿವೆ ಜಾರ್ಜ್, ರಾಜ್ಯ ಸರ್ಕಾರ ಸ್ವಾಮ್ಯದ ಶಿಶುಪಾಲನಾ ಕೇಂದ್ರಗಳಿಗೆ ಏಕೀಕೃತ ಮೆನುವನ್ನು ಜಾರಿಗೆ ತರುತ್ತಿರುವುದು ಇದೇ ಮೊದಲು ಎಂದು ಹೇಳಿದರು. ಹೊಸ ಮೆನು ಹೆಚ್ಚು ರುಚಿಕರ, ವೈವಿಧ್ಯಮಯ ಮತ್ತು ಪೌಷ್ಟಿಕ ಊಟವನ್ನು ಒಳಗೊಂಡಿದೆ. ಸಕ್ಕರೆ ಮತ್ತು ಉಪ್ಪು ಸೇವನೆಯನ್ನು ಕಡಿಮೆ ಮಾಡುವುದರ ಜೊತೆಗೆ ಪ್ರೊಟೀನ್ ಭರಿತ ಆಹಾರವನ್ನು ನೀಡುವ ಮೂಲಕ ಮಕ್ಕಳ ಆರೋಗ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿರುವ ಜಾರ್ಜ್ ಅಂಗನವಾಡಿಗಳ ರಾಜ್ಯ ಮಟ್ಟದ ಪುನರಾರಂಭ ಸಮಾರಂಭದಲ್ಲಿ ಈ ಹೊಸ ಬದಲಾವಣೆಗಳನ್ನು ಘೋಷಿಸಿದರು. ಪರಿಷ್ಕೃತ ಮೆನುವು ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಊಟದಲ್ಲಿ ಸೇರಿದ್ದು, ಇದು ಸಾಮಾನ್ಯ ಆಹಾರವನ್ನೂ ಒಳಗೊಂಡಿದೆ ಎಂದು ಹೇಳಿದರು.

ಇದನ್ನೂ ಓದಿ: Pakistan: ಪಾಕ್‌ ಕುತಂತ್ರಕ್ಕೆ ಮಲೇಷ್ಯಾದಿಂದ ತಕ್ಕ ಪಾಠ; ಮತ್ತೆ ತೀವ್ರ ಮುಖಭಂಗ

ಮಕ್ಕಳಿಗೆ ನಿರ್ದಿಷ್ಟ ದಿನಗಳಲ್ಲಿ ಗೋಧಿ ಕಡಿ ಪುಲಾವ್, ರಾಯಿತ, ಕಡಲೆ ಕರಿಯಂತಹ ಪೌಷ್ಟಿಕ ಆಹಾರಗಳ ಜೊತೆಗೆ ಕೊಝುಕ್ಕಟ್ಟ ಮತ್ತು ಇಲ್ಯಾಡದಂತಹ ಸಾಂಪ್ರದಾಯಿಕ ತಿಂಡಿಗಳನ್ನು ಸಹ ನೀಡಲಾಗುತ್ತದೆ. ಈ ಹಿಂದೆ ವಾರಕ್ಕೆ ಎರಡು ಬಾರಿ ನೀಡಲಾಗುತ್ತಿದ್ದ ಹಾಲು ಮತ್ತು ಮೊಟ್ಟೆಗಳನ್ನು ಈಗ ವಾರಕ್ಕೆ ಮೂರು ಬಾರಿ ನೀಡಲಾಗುವುದು ಎಂದು ಹೇಳಿದರು.

ಹೊಸ ಮೆನುವು ಪ್ರತಿ ಖಾದ್ಯಕ್ಕೆ ಬೇಕಾದ ಪದಾರ್ಥಗಳು ಮತ್ತು ಪೌಷ್ಠಿಕಾಂಶದ ಮೌಲ್ಯಗಳ ಬಗ್ಗೆ ವಿವರಗಳನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಅಲಪ್ಪುಳದ ಚಿಕ್ಕ ಹುಡುಗ ಶಂಕು ಎಂಬಾತ ತನ್ನ ಅಂಗನವಾಡಿಯಲ್ಲಿ ಉಪ್ಮಾ ಬದಲಿಗೆ ಬಿರಿಯಾನಿ ಮತ್ತು ಚಿಕನ್ ಫ್ರೈ ಕೇಳುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದು ತಮ್ಮ ಗಮನಕ್ಕೂ ಬಂದಿದ್ದು, ಇದೀಗ ಮೆನುವನ್ನು ಪರಿಷ್ಕರಿಸಿರುವುದಾಗಿ ಅವರು ಹೇಳಿದರು.