Sunday, 28th April 2024

ಹೊತ್ತಿ ಉರಿದ ಕಾರು: ಎಂಬಿಬಿಎಸ್ ವಿದ್ಯಾರ್ಥಿಗಳ ಸಜೀವ ದಹನ

ಸೋನಿಪತ್: ಹರಿಯಾಣದ ಸೋನೆಪತ್‌ನಲ್ಲಿ ವೇಗವಾಗಿ ಬಂದ ಕಾರೊಂದು ಬ್ಯಾರಿ ಕೇಡ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ಬೆಂಕಿ ಹೊತ್ತಿಕೊಂಡಿದೆ. ಈ ಅಪಘಾತದಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಜೀವ ದಹನಗೊಂಡು ಮೂವರು ಗಾಯ ಗೊಂಡಿದ್ದಾರೆ.

ರೋಹ್ಟಕ್ ಪಿಜಿಐನಲ್ಲಿ ಎಬಿಬಿಎಸ್ ಮೂರನೇ ವರ್ಷದ ವಿದ್ಯಾರ್ಥಿಗಳಾದ ಪುಲ್ಕಿತ್, ನರ್ಬೀರ್, ಸಂದೇಶ್, ರೋಹಿತ್, ಅಂಕಿತ್ ಮತ್ತು ಸೋಂಬಿರ್ ರೋಹ್ಟಕ್‌ನಿಂದ ಹರಿ ದ್ವಾರಕ್ಕೆ ತೆರಳಿದ್ದರು.

ರಾಯ್ ಗ್ರಾಮದ ಬಳಿಯ ಮೇಲ್ಸೇತುವೆಯಲ್ಲಿ ಕಾರು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿತು.

ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಗೊಂಡ ಅಂಕಿತ್, ಸೋಂಬಿರ್ ಮತ್ತು ನರ್ಬೀರ್ ಅವರನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ದ್ದಾರೆ. ಅಲ್ಲಿಂದ ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನು ಪಿಜಿಐ ರೋಹ್ಟಕ್‌ಗೆ ಸ್ಥಳಾಂತರಿಸಲಾಗಿದೆ.

error: Content is protected !!