ಶಿರಸಿ: ಸಿದ್ದರಾಮಯ್ಯ ಸರಕಾರ ನಮ್ಮವರ ಕೆಲಸವನ್ನು ಮುಸ್ಲಿಂ ರಿಗೆ ಮೀಸಲಾತಿಯ ಮೂಲಕ ನೀಡಿದೆ. ಒಬಿಸಿ ವರ್ಗಕ್ಕೆ ಅವರನ್ನು ಸೇರಿಸಿದ್ದು ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡಿದೆ.
ಚುನಾವಣೆಯ ಉದ್ದೇಶಕ್ಕಾಗಿ ಕಾಂಗ್ರೆಸ್ ಸರಕಾರ ಒತ್ತಾಯ ಪೂರ್ವಕವಾಗಿ ಒಬಿಸಿಯವರನ್ನು ತುರುಕಿದ್ದು ಹಿಂದುಳಿದ ವರ್ಗದವರಿಗೆ ಅನ್ಯಾಯವಾಗಿದೆ ಎಂದು ಬಿಜೆಪಿ ವಕ್ತಾರ ಸದಾನಂದ ಬಟ್ ಹೇಳಿದರು.
ಕಾಂಗ್ರೆಸ್ ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಸರಕಾರ ಹಾಗೂ ಸಿದ್ದರಾಮಯ್ಯನವರ ಮೀಸಲಾತಿ ಕಾರ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿ ದರು. ಸಂವಿಧಾನ ವಿರೋಧವಾಗಿ ಮುಸ್ಲೀಂ ರಿಗೆ ಮೀಸಲಾತಿ ನೀಡಬಾರದು ಎಂದು ಒತ್ತಾಯಿಸಿದರು.