Saturday, 27th April 2024

ಬಿಎಂಟಿಸಿ ಬಸ್ ಗಳಲ್ಲಿ ವಿಶೇಷ ಚೇತನರಿಗಾಗಿ ಸೌಲಭ್ಯ ಶೀಘ್ರ..!

ಬೆಂಗಳೂರು: ಬೆಂಗಳೂರಿನಲ್ಲಿ ವಿಶೇಷಚೇತನರು ಇನ್ನು ಮುಂದೆ ಬಿಎಂಟಿಸಿ ಬಸ್ ಗಳಲ್ಲಿ ಯಾರ ಸಹಾಯವಿಲ್ಲದೇ ಓಡಾಡಬಹುದಾಗಿದೆ. ಈ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿಶೇಷ ಚೇತನರಿಗೆ ಪ್ರಯಾಣ ಸುಲಭವಾಗಿಸಲು ಗಾಲಿ ಕುರ್ಚಿಗಳನ್ನು ಮೇಲೆತ್ತಬಹುದಾದ ಸೌಲಭ್ಯವುಳ್ಳ 300 ಎಸಿ ರಹಿತ ಎಲೆಕ್ಟ್ರಿಕ್ ಬಸ್‌ಗಳ ಸೌಲಭ್ಯ ನೀಡಲು ನಿರ್ಧರಿಸಿದೆ.

ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ ವೇಗದ ಅಳವಡಿಕೆ ಮತ್ತು ಉತ್ಪಾದನೆ ಎರಡನೇ ಯೋಜನೆಯಡಿ ಬಿಎಂಟಿಸಿ ಉದ್ದೇಶದಂತೆ ನಾನ್ ಎಸಿ 300 ಬಸ್ ಪೈಕಿ ಒಂದಷ್ಟು ಬಸ್ ಗಳನ್ನು ಈಗಾಗಲೇ ಖರೀದಿಸಿದ್ದು, ಸದ್ಯದಲ್ಲೇ ನಗರದ ರಸ್ತೆಗೆ ಇಳಿಯಲಿವೆ. ಈ ಬಸ್‌ಗಳಲ್ಲಿನ ವ್ಹೀಲ್ ಚೇರ್ ಲಿಫ್ಟಿಂಗ್ ವ್ಯವಸ್ಥೆಯ ನಿರ್ವಹಣೆಯನ್ನು ಬಿಎಂಟಿಸಿ ಸಿಬ್ಬಂದಿಯೇ ನಿರ್ವಹಿಸ ಲಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಬಿಎಂಟಿಸಿ ನಿರ್ದೇಶಕ ಎ.ವಿ.ಸೂರ್ಯ ಸೇನ್, ವ್ಹೀಲ್ ಚೇರ್ ಲಿಫ್ಟಿಂಗ್ ವೈಶಿಷ್ಟ್ಯ ಹೊಂದಿರುವ ಸುಮಾರು 100 ಬಸ್‌ಗಳು ಆಗಸ್ಟ್ 1ರೊಳಗೆ ನಗರದಲ್ಲಿ ಸೇವೆ ನೀಡಲಿವೆ. ಇವುಗಳ ಕಾರ್ಯಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿ ದ್ದಾರೆ ಎಂದರು.

ಮೆಜೆಸ್ಟಿಕ್‌ನಿಂದ ಹೆಬ್ಬಾಳ, ಸಿಲ್ಕ್‌ ಬೋರ್ಡ ರಸ್ತೆ, ಹೊರ ವರ್ತುಲ ರಸ್ತೆ ಸೇರಿದಂತೆ ನಿಗಮ ಸೂಚಿಸುವ ಮಾರ್ಗಗಳಲ್ಲಿ ಸೇವೆ ಒದಗಿಸಲಿವೆ. ಈಗಾಗಲೇ ಅತ್ತಿಬೇಲೆ, ಯಲ ಹಂಕ ಮತ್ತು ಬಿಡದಿ ಸೇರಿದಂತೆ ಹಲವು ಮಾರ್ಗಗಳನ್ನು ಗುರುತಿಸಲಾಗಿದೆ. ವ್ಹೀಲ್ ಚೇರ್ ಲಿಫ್ಟಿಂಗ್ ವ್ಯವಸ್ಥೆಯನ್ನು ಕೇವಲ ಖಾಸಗಿ ವಾಹನಗಳಲ್ಲಿ ಮಾತ್ರವೇ ಬಳಕೆ ಯಾಗುತ್ತಿತ್ತು.

ವ್ಹೀಲ್ ಚೇರ್ ಮೇಲೆತ್ತುವ ಸೌಲಭ್ಯವನ್ನು ಬಸ್‌ನ ಮಧ್ಯಭಾಗದಲ್ಲಿ ಕಲ್ಪಿಸಲಾಗಿದೆ. ನಿಗದಿತ ಗುಂಡಿಯನ್ನು ಒತ್ತಿದರೆ ಪ್ರಯಾಣಿ ಕರು ಹೊರಗೆ ಇಳಿಯಲು, ಒಳಗೆ ಬಂದು ಕೂರುವಂತೆ ನಿರ್ಮಿಸಳಾಗಿದೆ. ಬದು ಕೂತ ನಂತರ ಗಾಲಿಕುರ್ಚಿಯನ್ನು ಗೊತ್ತು ಪಡಿಸಿದ ಸ್ಥಳದಲ್ಲಿ ಇರಿಸಲಾಗುತ್ತದೆ. ವಿಕಲಚೇತನರನ್ನು ಗಮನದಲ್ಲಿಟ್ಟುಕೊಂಡೆ ಈ ಬಸ್ ಗಳನ್ನು ತಯಾರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬಿಎಂಟಿಸಿಯ 300 ಹೊಸ ಬಸ್ ಖರೀದಿ ನಿರ್ಧಾರ ಸ್ವಾಗತಾರ್ಹ. ಜತೆಗೆ ಬಿಎಂಟಿಸಿ ಆಡಳಿತ ಮಂಡಳಿ, ಸಿಬ್ಬಂದಿಯು ಅಂಗ ವಿಕಲ ಮಕ್ಕಳ ಜತೆಗೆ ಹೇಗೆ ನಡೆದುಕೊಳ್ಳಬೇಕು ಎಂಬ ಜಾಗೃತಿ ಮೂಡಬೇಕು. ಮಹಿಳೆಯರ ಹಿತದೃಷ್ಟಿಯಿಂದ ಬಿಎಂಟಿಸಿಯಲ್ಲಿ ಪ್ರಯಾಣಿಕ ಸ್ನೇಹಿ ಇನ್ನಷ್ಟು ಬದಲಾವಣೆಗಳು ಆಗಬೇಕು ಎಂದು ವಿಕಲಚೇತನರ ಸಂಘ ಸದಸ್ಯರೊಬ್ಬರು ತಿಳಿಸಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ, ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬರಲು, ಇಲ್ಲವೇ ಮೆಟ್ರೋ ನಿಲ್ದಾಣಕ್ಕೆ ತೆರಳಲು ವಿಶೇಷ ಮಾರ್ಗ ಇಲ್ಲ.

error: Content is protected !!