ಬೆಂಗಳೂರು ಉತ್ತರ ಜಿಲ್ಲೆಯ ಅಬ್ಬಿಗೆರೆಯಲ್ಲಿರುವ ಡಾ. ನೀರಜ್ ನಿವಾಸಕ್ಕೆ ಆಂಬುಲೆನ್ಸ್ ಮೂಲಕ ಸೌಂದರ್ಯ ಮೃತದೇಹವನ್ನು ರವಾನಿಸಲಾಗಿದೆ. ಫಾರ್ಮ್ ಹೌಸ್ನಲ್ಲಿ ಸೌಂದರ್ಯ ಅಂತಿಮ ಕಾರ್ಯ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಲಿಂಗಾಯತ ಸಂಪ್ರದಾಯದಂತೆ ಅಂತಿಮಾ ವಿಧಿವಿಧಾನ ನೆರವೇರಿಸಲಾಗುತ್ತದೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರ ಜೊತೆಗೆ ಈಗಾಗಲೇ ಅಬ್ಬಿಗೆರೆ ಯಲ್ಲಿರುವ ಡಾ ನೀರಜ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಶುಕ್ರವಾರ ಮೌಂಟ್ ಕಾರ್ಮಲ್ ಕಾಲೇಜು ಸಮೀಪ ಬಳಿ ಪ್ಲಾಟ್ ನಲ್ಲಿ ತಂಗಿದ್ದ ಸೌಂದರ್ಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವೃತ್ತಿಯಲ್ಲಿ ವೈದ್ಯರಾಗಿರುವ ಸೌಂದರ್ಯ ಯಡಿಯೂರಪ್ಪ ಅವರ ಮಗಳು ಪದ್ಮಾವತಿ ಅವರ ಪುತ್ರಿ ಆಗಿದ್ದಾರೆ. 2018 ರಲ್ಲಿ ವೃತ್ತಿಯಲ್ಲಿ ವೈದ್ಯರಾಗಿದ್ದ ನೀರಜ್ ರನ್ನು ಮದುವೆಯಾಗಿದ್ದು, ಸೌಂದರ್ಯ ಹಾಗೂ ನೀರಜ್ ದಂಪತಿಗೆ ಒಂದು ಮಗು ಕೂಡ ಇದ್ದು, ಸೌಂದರ್ಯ ಕೂಡ ವೃತ್ತಿಯಲ್ಲಿ ವೈದ್ಯರಾಗಿದ್ದರು.