ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ರಾಮನಕೊಪ್ಪ ಗ್ರಾಮದ ಬಳಿ ಚಲಿಸುತ್ತಿದ್ದ ಲಾರಿ ರಸ್ತೆ ಮಧ್ಯದಲ್ಲೇ ಹೊತ್ತಿ ಉರಿದು, ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪರಾರಿಯಾಗಿದ್ದಾರೆ.
ಆಂಧ್ರದಿಂದ ಹಾವೇರಿ ಕಡೆ ಬಣ್ಣದ ವಸ್ತುಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿ ಶಿಗ್ಗಾವಿ ಬಳಿ ಬರುತ್ತಿದ್ದಂತೆ ಶೌಚಾಲಯಕ್ಕೆ ಹೋಗಬೇಕೆಂದು ಲಾರಿ ನಿಧಾನಗೊಳಿಸಿದ ಕೂಡಲೇ ಬೆಂಕಿ ತಗುಲಿದೆ. ಕೂಡಲೇ ಟ್ರೈವರ್ ಮತ್ತು ಕ್ಲೀನರ್ ಲಾರಿನಿಂದ ಇಳಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ.
ಎರಡು ಮೂರು ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಪೆಂಟ್ ನ ಡಬ್ಬಿ ಗಳು, ಡ್ರಿಲ್ಲಿಂಗ್ ಮಷಿನ್ಗಳು, ಮೋಟಾರ್ ಆಯಿಲ್ ಬಾಕ್ಸ್ ಗಳು ಸೇರಿದಂತೆ ವಿವಿಧ ವಸ್ತು ಗಳು ಸುಟ್ಟು ಕರಕಲಾಗಿದೆ.
ಶಿಗ್ಗಾಂವಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಅಗ್ನಿ ನಂದಿಸಿದ್ದಾರೆ. ಈ ಬಗ್ಗೆ ತಡಸ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.