ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಎಲ್ಲರ ಸಮ್ಮುಖದಲ್ಲೇ ನಡೆಯಿತು ಕಿಶನ್-ಪೂಜಾ ಮದುವೆ?: ನೋಡುತ್ತಾ ಕೂತ ಆದೀ-ಕನ್ನಿಕಾ

ಇದೇ ವೇಳೆಗೆ ಅಲ್ಲಿದೆ ರಾಮ್ದಾಸ್ ಕಾಮತ್ ಎಂಟ್ರಿ ಆಗಿದೆ. ಮೀನಾಕ್ಷಿ-ಕನ್ನಿಕಾ- ಆದೀ ಇನ್ನಾದರು ನೀವು ನಂಬಿ ಭಾಗ್ಯ ಮನೆಯವರು ತುಂಬಾ ಒಳ್ಳೆಯವರು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಎರಡೂ ಮನೆಯವರು ಇದ್ದೀರಿ.. ಇನ್ನು ಈ ಗೊಂದಲಗಳು ಬೇಡ.. ಇಂದೇ ಈ ಮದುವೆ ನಡೆದು ಹೋಗಲಿ ಎಂದು ರಾಮ್ದಾಸ್ ಕಾಮತ್ ಕಿಶನ್ ಬಳಿ ಪೂಜಾಗೆ ತಾಳಿ ಕಟ್ಟಲು ಹೇಳಿದ್ದಾರೆ.

ಎಲ್ಲರ ಸಮ್ಮುಖದಲ್ಲೇ ನಡೆಯಿತು ಕಿಶನ್-ಪೂಜಾ ಮದುವೆ?

Bhagya Lakshmi Serial

Profile Vinay Bhat Jun 28, 2025 11:49 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತಂಗಿ ಪೂಜಾ ಹಾಗೂ ಕಿಶನ್ ಮದುವೆ ಎಪಿಸೋಡ್ ಕುತೂಹಲ ಮೂಡಿಸಿದೆ. ಯಾರಿಗೂ ಹೇಳದೆ ಕಿಶನ್, ಪೂಜಾಳನ್ನು ಮದುವೆ ಆಗಲೆಂದು ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದಾನೆ. ಆದರೆ, ಇದರಲ್ಲೊಂದು ಟ್ವಿಸ್ಟ್ ಇಡಲಾಗಿದೆ. ಈ ಮದುವೆ ಕಾರ್ಯ ಕಿಶನ್ ಯಾರಿಗೂ ತಿಳಿಯದಂತೆ ಸೃಷ್ಟಿಸಿದ ಒಂದು ಡ್ರಾಮ. ಸ್ವತಃ ಪೂಜಾಳಿಗೂ ಈ ಸೀಕ್ರೆಟ್ ತಿಳಿದಿಲ್ಲ. ಕಿಶನ್​ಗೆ 100 ಪರ್ಸೆಂಟ್ ನಂಬಿಕೆ ಇತ್ತು. ಈ ರೀತಿ ಓಡಿ ಬಂದು ಮದುವೆ ಆಗೋದು ಭಾಗ್ಯ-ಪೂಜಾ ಮನೆಯವರ ಗುಣ ಅಲ್ಲ.. ಅವಳು ಇದಕ್ಕೆ ಒಪ್ಪಲ್ಲ ಎಂಬುದು ಕಿಶನ್​ಗೆ ಗೊತ್ತಿತ್ತು. ಭಾಗ್ಯ ಮನೆಯವರ ಗುಣ ಎಂತಹದು ಎಂದು ಆದೀಶ್ವರ್ ಹಾಗೂ ಮೀನಾಕ್ಷಿಗೆ ಸಾಕ್ಷಿ ಸಮೇತ ತೋರಿಸಲು ಕಿಶನ್ ಆಡಿದ ನಾಟ ಇದಾಗಿದೆ.

ಪೂಜಾ-ಕಿಶನ್ ಮದುವೆ ಯಾವುದೇ ಕಾರಣಕ್ಕೂ ಆಗ ಬಾರದು ಎಂದು ಆದೀಶ್ವರ್, ಮೀನಾಕ್ಷಿ ಮತ್ತು ಕನ್ನಿಕಾ ನಾನಾ ಪ್ರಯತ್ನ ಮಾಡಿದರು. ಎಂಗೇಜ್ಮೆಂಟ್ ಹೇಗೋ ಆಯ್ತು ಆದ್ರೆ ಮದುವೆ ಮಾತ್ರ ಯಾವುದೇ ಕಾರಣಕ್ಕೆ ಆಗಲು ಬಿಡಲ್ಲ ಎಂದು ಮೀನಾಕ್ಷಿ ಉಪವಾಸ ಕೂತಿದ್ದಳು. ಕಿಶನ್​ನ ಅನೇಕ ಬಾರಿ ಭಾಗ್ಯ ಮನೆಯವರು ತುಂಬಾ ಒಳ್ಳೆಯವರು ಎಂದು ಕನ್ವೆನ್ಸ್ ಮಾಡಲು ಟ್ರೈ ಮಾಡಿದರೂ ಅದು ವರ್ಕ್ ಆಗಲಿಲ್ಲ. ಕಿಶನ್ ಬಳಿ ಎಮೋಷನ್ ಡ್ರಾಮಾ ಆಡಿ ಈ ಮದುವೆ ಆಗಬಾರದು ಎಂದು ಪೀಡಿಸುತ್ತಿದ್ದರು.

ಈ ಸಂದರ್ಭ ಕಿಶನ್​ಗೆ ಏನು ಮಾಡಬೇಕು ಎಂದು ದೋಚದೆ ದಿಢೀರ್ ಓಡಿ ಹೋಗಿ ಮದುವೆ ಆಗುವ ಡ್ರಾಮ ಸೃಷ್ಟಿಸಿದ್ದಾನೆ. ಕಿಶನ್ ಕರೆದಿದ್ದಾನೆ ಎಂದು ಪೂಜಾ ಬರುತ್ತಾಳೆ. ನಿನಗೊಂದು ಸರ್​ಪ್ರೈಸ್ ಇದೆ ಎಂದು ಹೇಳಿ ಮೊದಲಿಗೆ ಸೀರೆ ಅಂಗಡಿಗೆ ಕರೆದುಕೊಂಡು ಹೋಗಿ ಅದನ್ನು ಉಟ್ಟು ಬಾ ಎಂದು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾನೆ. ನಮ್ಮ ಮನೆಯಲ್ಲಿ ಮದುವೆಗೆ ಒಪ್ಪಿಸಲು ತುಂಬಾ ಪ್ರಯತ್ನ ಮಾಡಿದೆ.. ಆದರೆ ಇದಕ್ಕೆ ಅವು ಒಪ್ಪುತ್ತಿಲ್ಲ.. ಒಂದಲ್ಲ ಒಂದು ಪ್ರಾಬ್ಲಂ ನಮ್ಮ ಮದುವೆಗೆ ಬರುತ್ತಲೇ ಇದೆ.. ಈ ಎಲ್ಲ ಸಮಸ್ಯೆಗೆ ಪರಿಹಾರ ಹುಡುಕೋಣ.. ನಾವು ಈಗ ಮದುವೆ ಆಗೋಣ ಎಂದಿದ್ದಾನೆ.

ಇದು ಪೂಜಾಗೆ ಆಘಾತ ಉಂಟುಮಾಡಿದೆ. ಕಿಶನ್ ಏನು ಹೇಳ್ತಾ ಇದ್ದೀಯಾ?, ನೀನು ಈತರ ನಿರ್ಧಾರ ತೆಗೊತಿ ಅಂತ ನಾನು ಅಂದುಕೊಂಡಿರಲಿಲ್ಲ.. ಅವರು ನಮ್ಮ ಮದುವೆಗೆ ಒಪ್ಪಿಕೊಂಡಿಲ್ಲ ಅಂದ್ರೆ ನಾವು ಅವರನ್ನು ಕನ್ವೆನ್ಸ್ ಮಾಡಬೇಕು.. ಅದು ನಮ್ಮ ಜವಾಬ್ದಾರಿ.. ಅದು ಬಿಟ್ಟು ಈರೀತಿ ಓಡಿ ಬಂದ್ರೆ ಹೇಗೆ.. ನನ್ಗೆ ಇದು ಸರಿ ಕಾಣಿಸುತ್ತಿಲ್ಲ.. ನನ್ನ ಮನೆಯವರು ನನ್ನ ಹೀಗೆ ಬೆಳೆಸಿಲ್ಲ.. ನಮ್ಮದು ಸಂಸ್ಕಾರಸ್ತ ಕುಟುಂಬ ಈ ರೀತಿ ಮದುವೆ ಆಗೋದು ಬೇಡ.. ಅವರು ಒಪ್ಪಿಗೆ ಸೂಚಿಸುವ ವರೆಗೆ ಕಾಯೋಣ.. ನಾನು ಈರೀತಿ ಮದುವೆ ಆದರೆ ಅದೊಂದು ಜೀನವ ಪೂರ್ತಿ ಕಳಂಕ.. ನನ್ನ ಅಕ್ಕ ಇಷ್ಟು ಸಮಯ ಕಾಪಾಡಿಕೊಂಡು ಬಂದ ಮಾನ-ಮರ್ಯಾದೆ ಎಲ್ಲ ನಾನು ಬೀದಿ ಪಾಲು ಮಾಡಿದಂತಾಗುತ್ತದೆ ಎಂದು ಹೇಳಿದ್ದಾಳೆ.



ಇದನ್ನೆಲ್ಲ ಭಾಗ್ಯ ಹಾಗೂ ಕಿಶನ್ ಮನೆಯವರು ದೂರದಿಂದ ನೋಡುತ್ತಾ ಇರುತ್ತಾರೆ. ಪೂಜಾ ಆಡಿದ ಮಾತು ಕೇಳಿ ಭಾಗ್ಯ ಮನೆಯವರಿಗೆ ತುಂಬಾ ಖುಷಿ ಆಗುತ್ತದೆ. ಪೂಜಾ ಭಾಗ್ಯಳನ್ನು ಕಂಡು ಓಡಿ ಬಂದು ಅಪ್ಪಿಕೊಳ್ಳುತ್ತಾಳೆ. ಬಳಿಕ ಆದೀ ಕಿಶನ್​ಗೆ ಬೈಯಲು ಮುಂದಾಗುತ್ತಾನೆ. ಆಗ ಕಿಶನ್ ಇದೆಲ್ಲ ನಾನು ಮಾಡಿದ ಒಂದು ಡ್ರಾಮ.. ಭಾಗ್ಯ ಮನೆಯವರು ಒಳ್ಳೆಯವರು ಎಂದು ನಿಮಗೆ ಬಾಯಲ್ಲಿ ಎಷ್ಟು ಹೇಳಿದರೂ ಅರ್ಥ ಆಗಲಿಲ್ಲ.. ಅದಕ್ಕೆ ಬೇರೆ ದಾರಿಯಿಲ್ಲದೆ ಈರೀತಿ ನಾಟಕ ಆಡಬೇಕಾಯಿತು. ನೀನು ಹೇಳಿದಂತೆ ಭಾಗ್ಯ ಮನೆಯವರು ಹಣಕ್ಕೋಸ್ಕರ ನಮ್ಮ ಮನೆಯ ಸಂಬಂಧ ಬೆಳೆಸಿದ್ದಾರೆ ಎಂಬುದು ನಿಜವೇ ಆಗಿದ್ದರೆ ಈರೀತಿಯ ಮದುವೆಯನ್ನು ಅವಳು ಬೇಡ ಎಂದು ಹೇಳುತ್ತಿರಲಿಲ್ಲ ಎಂದಿದ್ದಾನೆ.



ಇದೇ ವೇಳೆಗೆ ಅಲ್ಲಿದೆ ರಾಮ್​ದಾಸ್ ಕಾಮತ್ ಎಂಟ್ರಿ ಆಗಿದೆ. ಮೀನಾಕ್ಷಿ-ಕನ್ನಿಕಾ- ಆದೀ ಇನ್ನಾದರು ನೀವು ನಂಬಿ ಭಾಗ್ಯ ಮನೆಯವರು ತುಂಬಾ ಒಳ್ಳೆಯವರು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಎರಡೂ ಮನೆಯವರು ಇದ್ದೀರಿ.. ಇನ್ನು ಈ ಗೊಂದಲಗಳು ಬೇಡ.. ಇಂದೇ ಈ ಮದುವೆ ನಡೆದು ಹೋಗಲಿ ಎಂದು ರಾಮ್​ದಾಸ್ ಕಾಮತ್ ಕಿಶನ್ ಬಳಿ ಪೂಜಾಗೆ ತಾಳಿ ಕಟ್ಟಲು ಹೇಳಿದ್ದಾರೆ. ಆದರೆ, ಈ ಮಾತು ಕೇಳಿ ಭಾಗ್ಯಾ ಮೊಗದಲ್ಲಿ ಬೇಸರ ತೋರಿಸಲಾಗಿದೆ. ಇಷ್ಟೆಲ್ಲ ಅನುಭವಿಸಿದ ಮೇಲೆ ಭಾಗ್ಯ ಈ ಮದುವೆ ಬೇಡ ಎಂದು ಹೇಳುತ್ತಾಳಾ? ಅಥವಾ ಅದ್ಧೂರಿಯಾಗಿ ಬೇರೆಕಡೆ ಮದುವೆ ಮಾಡೋಣ ಎಂದು ಹೇಳುತ್ತಾಳ ಎಂಬುದು ಕುತೂಹಲ ಕೆರಳಿಸಿದೆ.

Sangeetha Sringeri: ಸಿಕ್ಸ್ ಪ್ಯಾಕ್ ನತ್ತ ಸಂಗೀತಾ ಚಿತ್ತ: ಫೋಟೋ ನೋಡಿ ಶಾಕ್ ಆದ ಫ್ಯಾನ್ಸ್