ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಿ-7 ಶೃಂಗಸಭೆ: ಭಾರತ-ಕೆನಡಾ ಸಂಬಂಧ ಸುಧಾರಣೆಗೊಂದು ವೇದಿಕೆ

ಜಸ್ಟಿನ್ ಟ್ರುಡೋ ಅವಽಯಲ್ಲಿ ಹದಗೆಟ್ಟಿದ್ದ ಭಾರತ-ಕೆನಡಾ ದ್ವಿಪಕ್ಷೀಯ ಸಂಬಂಧವನ್ನು ಮರು ಸ್ಥಾಪಿಸುವುದು ತಮ್ಮ ಆದ್ಯತೆ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಕಳೆದ ಮಾರ್ಚ್‌ನಲ್ಲಿ ಅಧಿಕಾರ ವಹಿಸಿಕೊಂಡಾಗ ಹೇಳಿದ್ದರು. ಆ ಕಾರಣಕ್ಕಾಗಿಯೇ ಜಿ-7 ಶೃಂಗಸಭೆಯಲ್ಲಿ ಭಾರತ ಭಾಗವಹಿಸಬೇಕೆಂದು ಕೆನಡಾ ಕೋರಿಕೊಂಡಿದೆ. ಈ ಒಕ್ಕೂಟದಲ್ಲಿ ವಿಶ್ವದ ಬಲಾಢ್ಯ ಸದಸ್ಯ ರಾಷ್ಟ್ರ ಗಳು ಇರುವುದರಿಂದ ವಿಶೇಷ ಆಹ್ವಾನಿತರಾಗಿ ಪ್ರಧಾನಿ ಮೋದಿ ಕೂಡಾ ಭಾಗವಹಿಸುತ್ತಿರುವುದು ಖಚಿತವಾಗಿದ್ದು, ಶೃಂಗಸಭೆಯು ಭಾರತ-ಕೆನಡಾ ಬಾಂಧವ್ಯ ವೃದ್ಧಿಗೊಂದು ಪ್ರಮುಖ ವೇದಿಕೆ ಯಾಗುವುದಂತೂ ನಿಶ್ಚಿತ.

ಜಿ-7 ಶೃಂಗಸಭೆ: ಭಾರತ-ಕೆನಡಾ ಸಂಬಂಧ ಸುಧಾರಣೆಗೊಂದು ವೇದಿಕೆ

Profile Ashok Nayak Jun 10, 2025 12:22 PM

ನರೇಂದ್ರ ಪಾರೆಕಟ್

ಮುಂದಿನ ವಾರ, ಅಂದರೆ ಜೂನ್ -15ರಿಂದ 17ರ ತನಕ ಕೆನಡಾದ ಆಲ್ಬರ್ಟಾದಲ್ಲಿ ನಡೆಯ ಲಿರುವ ಮಹತ್ವದ ಜಿ-7 ಶೃಂಗಸಭೆಗೆ ಇದೀಗ ವೇದಿಕೆ ಸಜ್ಜುಗೊಂಡಿದೆ. ಕೆನಡಾ ಪ್ರಧಾನಿಯೇ ಖುದ್ದಾಗಿ ಆಹ್ವಾನ ನೀಡಿರುವ ಕಾರಣ ತಾನೂ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗಾಗಿ ಜಸ್ಟಿನ್ ಟ್ರುಡೋ ಅವಧಿಯಲ್ಲಿ ಹದಗೆಟ್ಟಿದ್ದ ಭಾರತ-ಕೆನಡಾ ಸಂಬಂಧ ಧಾರಣೆಗೆ ಅದೊಂದು ಪ್ರಮುಖ ವೇದಿಕೆ ಎನಿಸಲಿದೆ.

ಆ ಕಾರಣಕ್ಕಾಗಿಯೇ ಈ ಸಲದ ಶೃಂಗಸಭೆ ಭಾರತ-ಕೆನಡಾ ಪಾಲಿಗೆ ನಿಜಕ್ಕೂ ಮಹತ್ವದ ಅವಕಾಶ. ಭಾರತದೊಂದಿಗೆ ಅಸ್ತಿತ್ವದಲ್ಲಿರುವ ಭಿನ್ನಾಭಿಪ್ರಾಯವನ್ನು ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ನಿರೀಕ್ಷೆ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿರವರ ಯೋಚನೆಯಾಗಿದೆ.

ಜಸ್ಟಿನ್ ಟ್ರುಡೋ ಅವರು ಕೆನಡಾದಲ್ಲಿ ಖಲಿಸ್ತಾನಿ ಚಳುವಳಿಗೆ ಬೆಂಬಲ ನೀಡುತ್ತಿದ್ದುದು ಮತ್ತು ಕೆನಡಾದಲ್ಲಿ ಹತನಾದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಗುಪ್ತಚರ ಸಂಸ್ಥೆಗಳ ಕೈವಾಡ ಇದೆ ಎಂದು ಆರೋಪಿಸಿದ್ದು, ಭಾರತ- ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ ಭಾರೀ ಪೆಟ್ಟು ನೀಡಿತ್ತು.

‘ಭಾರತದೊಂದಿಗಿನ ವ್ಯಾಪಾರ ಸಂಬಂಧಗಳನ್ನು ವೈವಿಧ್ಯಗೊಳಿಸುವದು ನನ್ನ ಪ್ರಮುಖ ಆದ್ಯತೆಗಳ ಲ್ಲೊಂದು. ಅಲ್ಲದೇ, ಉಭಯ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ಎಲ್ಲಾ ಭಿನ್ನಾಭಿ ಪ್ರಾಯಗಳನ್ನು ರಾಜತಾಂತ್ರಿಕ ಮಾತುಕತೆಯ ಮೂಲಕ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಇದನ್ನೂ ಓದಿ: Narendra Parekat Column: ಮಕ್ಕಳ ಬೇಸಿಗೆ ಶಿಬಿರ ವಿಕಸನದ ಅವಕಾಶ

ಭಾರತ- ಕೆನಡಾದ ರಚನಾತ್ಮಕ ರಾಜತಾಂತ್ರಿಕ ಸಂಬಂಧವು ಜಾಗತಿಕ ಪರಿಣಾಮಗಳನ್ನೂ ಬೀರು ತ್ತದೆ. ಹಾಗಾಗಿಯೇ ಈ ಬಗ್ಗೆ ನಾನು ಖಂಡಿತವಾಗಿಯೂ ಹೆಚ್ಚು ಗಮನಹರಿಸುತ್ತೇನೆ’ ಎಂದು ಮಾರ್ಕ್ ಕಾರ್ನಿ ಅಧಿಕಾರ ವಹಿಸಿಕೊಂಡಾಕ್ಷಣವೇ ಹೇಳಿದ್ದರು. ಪ್ರತಿ ವರ್ಷ ಏಳು ಅತ್ಯಂತ ಶಕ್ತಿ ಶಾಲಿ ಆರ್ಥಿಕ ಶಕ್ತಿಯನ್ನೊಂದಿದ ದೇಶದ ನಾಯಕರು ಒಂದೆಡೆ ಸೇರಿ ಪ್ರಚಲಿತ ವಿಷಯಗಳ ಮಾತುಕತೆ, ನಿರ್ಧಾರ ಮತ್ತು ಘೋಷಣೆಗಳಿಗಾಗಿ ಒಟ್ಟುಗೂಡುವ ಉದ್ದೇಶವಾಗಿರುವ ಜಿ-7 ಶೃಂಗ ಸಭೆಯ ವೇಳೆಯೇ ಭಾರತದ ಬೆಂಬಲ ಮತ್ತೆ ತನಗೆ ದೊರಕಲಿ ಎಂಬ ಉದ್ಧೇಶ ಮಾರ್ಕ್ ಕಾನಿ ಅವರದ್ದಾಗಿದೆ.

ವಿಶ್ವದ ಒಟ್ಟು ಜನಸಂಖ್ಯೆಯ ಶೇ.10ರಷ್ಟನ್ನು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ದೇಶಗಳು ಪ್ರತಿನಿಧಿಸುತ್ತದೆ. ನ್ಯಾಟೋ ಗುಂಪಿನಂತೆ ಜಿ-7ಗೆ ಯಾವುದೇ ಕಾನೂನು ಅಸ್ತಿತ್ವ, ಶಾಶ್ವತ ಸಚಿವಾ ಲಯ ಇಲ್ಲ. ಆದರೂ ಜಿ-7 ಸಭೆಯಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರಗಳು, ಮಾಡಿ ಕೊಳ್ಳಲಾದ ಒಪ್ಪಂದಗಳನ್ನು ಆಯಾ ದೇಶಗಳ ಆಡಳಿತವು ಅನುಮೋದಿಸಬೇಕಾಗುತ್ತದೆ. ನಮ್ಮ ದೇಶವು ಜಿ-೭ನ ಸದಸ್ಯದೇಶ ಅಲ್ಲದಿದ್ದರೂ, 2019ರಿಂದ ಶೃಂಗಸಭೆಯಲ್ಲಿ ಭಾಗವಹಿಸುತ್ತಿದೆ.

ಜಿ-7 ಒಕ್ಕೂಟದ ವಿಸ್ತೃತ ರೂಪ ಮತ್ತು ಸಮೂಹ ದೇಶಗಳು ಸಂಕ್ಷಿಪ್ತವಾಗಿ ಹೇಳುವುದಾದರೆ, ಜಿ-7 ಎಂದರೆ ಗ್ರೂಪ್ ಆಫ್ ಸೆವೆನ್ (ದೇಶಗಳು) ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಜಿ-7 ಸಮೂಹಕ್ಕೆ ಒಳಪಡುವ ದೇಶಗಳು ಯಾವುವೆಂದರೆ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಕೆನಡಾ. ಜಿ-7 ಒಕ್ಕೂಟ ಪ್ರಾರಂಭವಾಗಿದ್ದು ಹೇಗೆ? 1973ರಲ್ಲಿ ಅಮೆರಿಕವು ಬ್ರಿಟನ್, ಆಗಿನ ಪಶ್ಚಿಮ ಜರ್ಮನಿ ಮತ್ತು ಫ್ರಾನ್ಸ್‌ನ ಹಣಕಾಸು ಮಂತ್ರಿಗಳ ಅನೌಪಚಾರಿಕ ಸಭೆಯೊಂದನ್ನು ಕರೆದಿತ್ತು.

Screenshot_2 R

ಶ್ವೇತಭವನದ ಗ್ರಂಥಾಲಯ ಕೋಣೆಯಲ್ಲಿ ನಡೆದ ಆ ಸಭೆಯನ್ನು ‘ಗ್ರಂಥಾಲಯ ಗುಂಪು’ ಎಂದೇ ವಿಶ್ಲೇಷಿಸಲಾಗಿತ್ತು. 1973ರಲ್ಲಿ ತಲೆದೋರಿದ ತೈಲ ಬಿಕ್ಕಟ್ಟು, ಆರ್ಥಿಕ ಅಸ್ಥಿರತೆಯ ಬಳಿಕ 1975, ನವೆಂಬರ್‌ನಲ್ಲಿ ಫ್ರಾನ್ಸ್ ನಲ್ಲಿ ಮೊದಲ ಶೃಂಗಸಭೆ ಆಯೋಜಿಸಲಾಗಿತ್ತು. ಐದು ದೇಶಗಳ ಒಂದು ಗುಂಪು ಮತ್ತು ಇಟಲಿ ದೇಶವೂ ಸೇರಿದಂತೆ ಆಫ್‌ ಜಿ-6 ರಚಿಸಿಕೊಂಡವು.

ಒಂದು ವರ್ಷದ ನಂತರ ಕೆನಡಾ ದೇಶವನ್ನೂ ಸಹ ಆ ಗುಂಪಿಗೆ ಸೇರ್ಪಡೆ ಮಾಡಲಾಯಿತು. 1976ರಲ್ಲಿ ಮೊದಲ ಜಿ-7 ಶೃಂಗಸಭೆ ನಡೆಯಿತು. ಸ್ಥೂಲ ಆರ್ಥಿಕ ನೀತಿಗಳನ್ನು ಸಂಘಟಿಸಲು ಸಮಾನ ಮನಸ್ಕ ಬಂಡವಾಳಶಾಹಿ ಪ್ರಜಾಪ್ರಭುತ್ವ ದೇಶಗಳಿಗೆ ಅದು ಒಂದು ಉತ್ತಮ ಸಂವಹನ ವೇದಿಕೆಯಾಗಿ ಮಾರ್ಪಟ್ಟಿತು. 1991ರಲ್ಲಿ ಸೋವಿಯತ್ ಒಕ್ಕೂಟದ ಪತನ ಹಾಗೂ 1997 ಜಿ-7 ಶೃಂಗಸಭೆಯ ನಂತರ ರಷ್ಯಾವನ್ನು ಜಿ-7ನ ಭಾಗವಾಗಲು ಔಪಚಾರಿಕವಾಗಿ ಆಹ್ವಾನ ನೀಡ ಲಾಗಿತ್ತು.

ಹಾಗಾಗಿ 1998ರಲ್ಲಿ ರಷ್ಯಾ ಆ ಬಳಗಕ್ಕೆ ಸೇರ್ಪಡೆ ಆಯಿತು. ಆಗ ಅದು ಜಿ-8 ಎಂದು ಕರೆಯ ಲ್ಪಟ್ಟಿತು. ಆದರೆ ಉಕ್ರೇನ್‌ನಿಂದ ಕ್ರಿಮಿಯಾವನ್ನು ರಷ್ಯಾ ಸ್ವಾಧೀನಪಡಿಸಿಕೊಂಡ ಬಳಿಕ, ಅಂದರೆ 2014ರಲ್ಲಿ ರಷ್ಯಾದ ಸದಸ್ಯತ್ವವನ್ನು ಅಮಾನತುಗೊಳಿಸಲಾಯಿತು. ಶೃಂಗಸಭೆ ಗಮನಹರಿಸುವ ವಿಷಯಗಳು ಹವಾಮಾನ ಬದಲಾವಣೆ ಮತ್ತು ಇಂಧನ ಭದ್ರತೆ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಆಡಳಿತ, ಜಾಗತಿಕ ಆರೋಗ್ಯ-ಸಾಂಕ್ರಾಮಿಕ ಸಿದ್ಧತೆ, ಆಹಾರ ಭದ್ರತೆ, ಅಭಿವೃದ್ಧಿ ನೆರವು, ಭೌಗೋಳಿಕ-ರಾಜಕೀಯ ಬಿಕ್ಕಟ್ಟುಗಳು, ಉಕ್ರೇನ್, ಗಾಜಾ, ಇಂಡೋ- ಪೆಸಿಫಿಕ್ ಉದ್ವಿಗ್ನತೆಗಳು, ಆರ್ಥಿಕ ಸ್ಥಿತಿಸ್ಥಾಪಕತ್ವ ಮತ್ತು ಪೂರೈಕೆ ಸರಪಳಿ ಭದ್ರತೆ ಹೀಗೆ ಹಲವು ವಿಷಯಗಳ ಮೇಲೆ ಜಿ-7 ರಾಷ್ಟ್ರಗಳು ತೀವ್ರ ಗಮನ ಕೊಡುತ್ತಿವೆ. ಮೂಲಭೂತವಾಗಿ ಬೃಹತ್ ರಾಜಕೀಯ ಮತ್ತು ಆರ್ಥಿಕ ಶಕ್ತಿಯನ್ನು ಹೊಂದಿರುವ ಜಾಗತಿಕ ಚಿಂತಕರ ಚಾವಡಿ ಕೂಡಾ ಇದಾಗಿದೆ ಎಂದರೂ ತಪ್ಪಾಗಲಾರದು.

ಬಲಿಷ್ಠ ದೇಶಗಳ ಸಹಯೋಗದ ವೇದಿಕೆ

ಇದಾಗಿದ್ದರೂ ಜಿ-7 ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಜಾಗತಿಕವಾಗಿ ಶ್ರೀಮಂತ ರಾಷ್ಟ್ರಗಳ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ಕಾರ್ಯಸೂಚಿಯನ್ನು ಜಾರಿಗೆ ತರುವ ವೇದಿಕೆ ಅದಾಗಿದೆ ಎಂಬ ಮಾತೂ ಆಗಾಗ ಕೇಳಿಬರುತ್ತಿದೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ಆರ್ಥಿಕ ಅಸಮಾನತೆ ಗಳಂತಹ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಆದಷ್ಟು ಬೇಗ ಜಿ-7 ಸಫಲತೆಯನ್ನು ಕಾಣಬೇಕೆಂಬ ನಿರೀಕ್ಷೆ ಸದಸ್ಯ ರಾಷ್ಟ್ರಗಳದ್ದಾಗಿದೆ.

ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಯತ್ನ

1982ರಲ್ಲಿಇಂದಿರಾಗಾಂಽಯವರು ಖಲಿಸ್ತಾನಿ ಆತಂಕಿ ತಲ್ವಿಂದರ್ ಪಾರ್ಮರ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ಕೋರಿದ್ದಾಗ ಜಸ್ಟಿನ್ ಟ್ರುಡೊ ತಂದೆ ಪಿಯರ್ ಎಲಿಯಟ್ ಟ್ರುಡೊ ಅಂದು ಪ್ರಧಾನಿಯಾಗಿದ್ದರು. ಪಾರ್ಮರ್‌ನನ್ನು ಕೆನಡಾದಲ್ಲೇ ಇಟ್ಟುಕೊಂಡ ಪರಿಣಾಮ ಆತ ನಡೆಸಿದ ವಿಮಾನ ಬಾಂಬ್ ಸ್ಫೋಟದಿಂದಾಗಿ 329 ಜನರು ಅಸುನೀಗಿದ್ದರು. ಕೆನಡಾವು ಭಾರತದಿಂದ ಔಷಧ, ಕಬ್ಬಿಣ, ಪರಮಾಣು ಒಲೆ ಆಮದು ಮಾಡಿಕೊಳ್ಳುತ್ತದೆ.

ಇಲ್ಲಿನ ಶೇ.47 ವಿದೇಶಿ ವಿದ್ಯಾರ್ಥಿಗಳು ಭಾರತೀಯರಾಗಿದ್ದಾರೆ. ಹಾಗಾಗಿ ಭಾರತದ ಜತೆ ಸಂಬಂಧ ಮತ್ತಷ್ಟು ಹದಗೆಟ್ಟರೆ ಕೆನಡಕ್ಕೆ ಭಾರೀ ನಷ್ಟ ಎಂಬುದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರ ಈ ಬದಲಾದ ನಿಲುವಿಗೆ ಮುಖ್ಯ ಕಾರಣ.

ಜಿ-7: ಭಾರತದ ಪಾತ್ರವೂ ಪ್ರಮುಖ

ಸಮೂಹದ ಸದಸ್ಯದೇಶ ಅಲ್ಲದಿದ್ದರೂ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ವಿಶಿಷ್ಟತೆಯು ಭಾರತವನ್ನು ಜಿ-7 ಶೃಂಗಸಭೆಗಳಲ್ಲಿ ಗೌರವಾನ್ವಿತ ಅತಿಥಿಯನ್ನಾಗಿ ಮಾಡಿದೆ. ಭಾರತ ಇದುವರೆಗೆ ಹನ್ನೊಂದು ಬಾರಿ ಜಿ-7 ಶೃಂಗಸಭೆಗಳಲ್ಲಿ ಭಾಗವಹಿಸಿದೆ. 2003ರಲ್ಲಿ ಮೊದಲ ಬಾರಿಗೆ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಭಾರತವು ನಿಯಮಿತವಾಗಿ ಹಲವಾರು ಜಿ-7 ಶೃಂಗಸಭೆಯಗಳಲ್ಲಿ ಭಾಗವಹಿಸಿದೆ. ಭಾರತವು ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿದ್ದು ತಂತ್ರಜ್ಞಾನ, ವ್ಯಾಪಾರ, ಹವಾಮಾನ ಮತ್ತು ಭದ್ರತೆಯಲ್ಲಿ ಬಲವಾದ ಪಾಲನ್ನು ಭಾರತ ಹೊಂದಿದೆ.