Raghavendra swamy statue: ರಾಘವೇಂದ್ರ ಸ್ವಾಮಿ ಪ್ರತಿಮೆ ಹೆಸರಲ್ಲಿ 1.15 ಲಕ್ಷ ದೇಣಿಗೆ ಪಡೆದು ವಂಚನೆ; ಮಂತ್ರಾಲಯ ಮಠದ ಸ್ಪಷ್ಟನೆ ಏನು?
Raghavendra swamy statue: ರಾಮನಗರದಲ್ಲಿ ರಾಘವೇಂದ್ರ ಸ್ವಾಮಿ ಪ್ರತಿಮೆ ನಿರ್ಮಾಣಕ್ಕಾಗಿ ಭಕ್ತರೊಬ್ಬರು ವಾಟ್ಸ್ಆ್ಯಪ್ ಮೂಲಕ 1,15,000 ರೂ.ಗಳನ್ನು ಕೆ. ಸುರೇಶ್ ಎಂಬುವವರ ಖಾತೆಗೆ ವರ್ಗಾಯಿಸಿದ್ದಾರೆ. ಹಣ ಪಡೆದ ನಂತರ ಆ ವ್ಯಕ್ತಿ ಪ್ರತಿಕ್ರಿಯಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.


ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿಯ ರಾಮನಗರದಲ್ಲಿ 253 ಅಡಿ ಎತ್ತರದ ಶ್ರೀ ರಾಘವೇಂದ್ರ ಸ್ವಾಮಿ ಪ್ರತಿಮೆ (Raghavendra swamy statue) ನಿರ್ಮಾಣದಲ್ಲಿ ಭಕ್ತರೊಬ್ಬರಿಂದ 1,15,000 ರೂ.ಗಳನ್ನು ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠ ಸ್ಪಷ್ಟನೆ ನೀಡಿದ್ದು, ದೇಣಿಗೆ ಸಂಗ್ರಹಿಸಲು ನಾವು ಯಾವುದೇ ವ್ಯಕ್ತಿ ಅಥವಾ ಏಜೆನ್ಸಿಗೆ ಅಧಿಕಾರ ನೀಡಿಲ್ಲ. ವಂಚಕರ ಬಗ್ಗೆ ಎಚ್ಚರ ಇರಲಿ ಎಂದು ತಿಳಿಸಿದೆ.
ರಾಮನಗರದಲ್ಲಿ ರಾಘವೇಂದ್ರ ಸ್ವಾಮಿ ಪ್ರತಿಮೆ ನಿರ್ಮಾಣಕ್ಕಾಗಿ ಭಕ್ತರೊಬ್ಬರು ವಾಟ್ಸ್ಆ್ಯಪ್ ಮೂಲಕ 1,15,000 ರೂ.ಗಳನ್ನು ಕೆ. ಸುರೇಶ್ ಎಂಬುವವರ ಮೊಬೈಲ್ ಸಂಖ್ಯೆ: 9611909961 ಗೆ ವರ್ಗಾಯಿಸಿದ್ದಾರೆ ಎಂದು ದೂರು ಬಂದಿದೆ. ಹಣ ಪಡೆದ ನಂತರ ಅವರು ಸುರೇಶ್ ಪ್ರತಿಕ್ರಿಯಿಸುತ್ತಿಲ್ಲ.
ಸ್ವೀಕರಿಸಿದ ದೂರಿನ ಪ್ರಕಾರ, ಕೆ. ಸುರೇಶ್ ಎಂಬ ವ್ಯಕ್ತಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 253 ಅಡಿ ಎತ್ತರದ ಶ್ರೀ ರಾಯರ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿಕೊಂಡು ಶ್ರೀ ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗೆ ಸಂಗ್ರಹಿಸಿದ ಹಣವನ್ನು ಬಳಸಿಕೊಂಡು ಶ್ರೀ ಮಠಕ್ಕೆ ಹೆಲಿಕಾಪ್ಟರ್ ಅನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಶ್ರೀ ಮಠವು ಯಾವುದೇ ಸಂಸ್ಥೆಗೆ ಯಾವುದೇ ರೂಪದಲ್ಲಿ ಮೊತ್ತವನ್ನು ಸಂಗ್ರಹಿಸಲು ಅಧಿಕಾರ ನೀಡಿಲ್ಲ. ದುರದೃಷ್ಟವಶಾತ್, ಇಂತಹ ಘಟನೆಗಳು ಪದೇ ಪದೇ ಸಂಭವಿಸುತ್ತಿವೆ.
ಕೆಲವೇ ದಿನಗಳ ಹಿಂದೆ, ಇದೇ ರೀತಿಯ ವಂಚನೆ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ನಕಲಿ ವೆಬ್ಸೈಟ್ ವಿರುದ್ಧ ನಾವು ದೂರು ದಾಖಲಿಸಿದ್ದೇವೆ. ಆದ್ದರಿಂದ, ಭಕ್ತರು, ಅಪರಿಚಿತ ವ್ಯಕ್ತಿಗಳಿಗೆ ಯಾವುದೇ ಪಾವತಿಗಳನ್ನು ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ವಂಚನೆಗೊಳಗಾದಲ್ಲಿ ತಕ್ಷಣ ಪೊಲೀಸ್ ದೂರು ದಾಖಲಿಸಿ ಎಂದು ರಾಯರ ಮಠ ಮನವಿ ಮಾಡಿದೆ.
ಈ ಸುದ್ದಿಯನ್ನೂ ಓದಿ | Fraud Case: ಸೌಜನ್ಯಾ ಹೆಸರಿನಲ್ಲಿ ಹೆಲ್ಪ್ಲೈನ್ ತೆರೆದು ಲಕ್ಷ ಲಕ್ಷ ವಂಚನೆ; ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ಕೇಸ್
ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯಕ್ಕೆ ಯಾವುದೇ ರೂಪದಲ್ಲಿ ಕೊಠಡಿಗಳು ಅಥವಾ ಸೇವೆಗಳನ್ನು ಕಾಯ್ದಿರಿಸಲು ಮತ್ತು ದೇಣಿಗೆ ಸಂಗ್ರಹಿಸಲು ನಾವು ಯಾವುದೇ ವ್ಯಕ್ತಿ/ಏಜೆನ್ಸಿಗೆ ಅಧಿಕಾರ ನೀಡಿಲ್ಲ/ಹೊರಗುತ್ತಿಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.