Saturday, 21st September 2024

Bus Service: ಕುಪ್ಪೂರಿಗೆ ನಗರ ಸಾರಿಗೆ ಬಸ್ ಸೇವೆ ಆರಂಭ

ತುಮಕೂರು: ನಗರದ ಒಂದನೇ ವಾರ್ಡಿನ ಕುಪ್ಪೂರು ಹಾಗೂ ತುಮಕೂರು ನಗರ ನಡುವೆ ಸಿದ್ಧಗಂಗಾ ನಗರ ಸಾರಿಗೆ ಬಸ್ ಸೇವೆ ಆರಂಭವಾಯಿತು. ಈ ಭಾಗದ ಜನರ ಬಹು ವರ್ಷದ ಬೇಡಿಕೆಯಾಗಿದ್ದ ಬಸ್ ಸೇವೆಗೆ ಶುಕ್ರವಾರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕರು, ಈ ಬಸ್ ಸಂಚಾರ ಆರಂಭವಾಗುವುದರೊಂದಿಗೆ ಈ ಪ್ರದೇಶದ ನಾಗರೀಕರು, ವಿದ್ಯಾರ್ಥಿಗಳು ನಿತ್ಯ ತುಮಕೂರಿಗೆ ಬಂದು ಹೋಗಲು ಅನುಕೂಲವಾಗಲಿದೆ. ಕುಪ್ಪೂರು, ಮರಳೇನಹಳ್ಳಿ, ಡಿ.ಎಂ.ಪಾಳ್ಯ ಮಾರ್ಗದಲ್ಲಿ ಈ ಬಸ್ ಸಂಚಾರ ಆರಂಭವಾಗಿದೆ ಎಂದು ಹೇಳಿದರು. […]

ಮುಂದೆ ಓದಿ