ಪರಿಷತ್ತಿನ ಫಲಿತಾಂಶ, ಗೆದ್ದರೂ ನಲುಗಿದ್ದ ಕಮಲ ಪಡೆ !
ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಲೇ ವಿಧಾನಪರಿಷತ್ ಐದನೇ ಅಭ್ಯರ್ಥಿಯನ್ನು ಹಾಕುವ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿದ್ದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಯಾದ ಬಳಿಕ ತನ್ನ ಆಪ್ತ ವಿನಯ್ ಕಾರ್ತಿಕ್ನನ್ನು ಗೆಲ್ಲಿಸಿಕೊಂಡು ಬರುವ ಟಾಸ್ಕ್ ಕೈಗೆತ್ತಿಕೊಂಡರು. ಡಿಕೆಗೆ ಸವಾಲು ಹಾಕುವ ರೀತಿ ಜೆಡಿಎಸ್ ಸಹ ಸಂಖ್ಯಾ ಬಲದ ಕೊರತೆಯ ಹೊರತಾಗಿಯೂ ‘ಮ್ಯಾಜಿಕ್’ ನಿರೀಕ್ಷೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು