ಅಭಿಮಾನೋತ್ಸವದಿಂದ ಸಂದೇಶ ಕೊಟ್ಟಿದ್ದು ಯಾರಿಗೆ ?
ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ಬಿಜೆಪಿಯಲ್ಲಿ ವಿರೋಧಾಭಾಸದ ಹೊರತಾಗಿಯೂ, ಇಡೀ ಬಿಜೆಪಿಯನ್ನು ಒಂದು ವೇದಿಕೆಯಲ್ಲಿ ತರುವ ಶಕ್ತಿ ಉಳಿದಿರುವುದು ಯಡಿಯೂರಪ್ಪ ಎನ್ನುವ ಹೆಸರಿಗೆ ಮಾತ್ರ ಎನ್ನುವುದು ಪ್ರಶ್ನಾತೀತ. ರಾಜ್ಯ ಬಿಜೆಪಿಯ ಈ ನಾಡಿಮಿಡಿತ ವಿಜಯೇಂದ್ರ ಅವರಿಗೆ ಚೆನ್ನಾಗಿ ಗೊತ್ತಿದೆ. ಆ ಕಾರಣಕ್ಕಾಗಿಯೇ ಯಡಿಯೂರಪ್ಪನವರ ಹೆಸರಿನಲ್ಲಿಯೇ ಬೃಹತ್ ಸಮಾವೇಶ ಆಯೋಜಿಸಿ ಕೇವಲ ಪಕ್ಷದ ನಾಯಕರನ್ನು ಮಾತ್ರವಲ್ಲದೇ, ಸರ್ವ ಜಾತಿಗಳ ಮಠಾಧೀಶರು, ಜಗದ್ಗುರುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿದರು.