ದಳಗಳನ್ನು ಒಗ್ಗೂಡಿಸುವುದು ಸುಲಭವೇ ?
ಸಂಘಟನೆಯಿಲ್ಲದೇ ನೇರವಾಗಿ ಜನಪ್ರತಿನಿಧಿಯಾಗುವ ಉತ್ಸಾಹದಲ್ಲಿದ್ದ ನಿಖಿಲ್ ಕುಮಾರಸ್ವಾಮಿ, ಸತತ ಮೂರು ಸೋಲುಗಳ ಬಳಿಕ ಇದೀಗ ಸಂಘಟನೆಯ ಮೂಲಕ ಪಕ್ಷದ ರಾಜಕೀಯದಲ್ಲಿ ಆಯ ಕಟ್ಟಿನ ಸ್ಥಾನದಲ್ಲಿ ಕೂರಬೇಕೆನ್ನುವ ಲೆಕ್ಕಾಚಾರ ಆರಂಭಿಸಿದ್ದಾರೆ. ಇದರ ಭಾಗವಾಗಿ ‘ಜನರೊಂದಿಗೆ ಜನತಾದಳ’ ಎನ್ನುವ ಅಭಿಯಾನ ಆರಂಭಿಸಿ ‘ಮಿಸ್ಡ್ ಕಾಲ್’ ಅಭಿಯಾನ ಹಾಗೂ ರಾಜ್ಯಾದ್ಯಂತ ಸಂಘಟನಾತ್ಮಕ ಪ್ರವಾಸ ಮಾಡಲು ಮುಂದಾಗಿದ್ದಾರೆ.