ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ಶಿಶಿರ್‌ ಹೆಗಡೆ

columnist

[email protected]

ಕರಾವಳಿಯ ಕುಮಟಾ ತಾಲ್ಲೂಕಿನ ಮೂರೂರಿನವರು. ಇವರದು ಯಕ್ಷಗಾನ ಕುಟುಂಬ. ಇವರ ಅಜ್ಜ ದೇವರು ಹೆಗಡೆಯವರು ಜನಪ್ರಿಯ ಯಕ್ಷಗಾನ ಕಲಾವಿದರು. ತಂದೆ ಕನ್ನಡದ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದವರು. ಕನ್ನಡ ಮತ್ತು ಕಲೆಯ ವಾತಾವರಣದ ಹಳ್ಳಿಯಲ್ಲಿ ಹುಟ್ಟಿ ಬೆಳೆದದ್ದು ಇವರ ಹೆಗ್ಗಳಿಕೆ. ಕುಮಟಾ ಮತ್ತು ಹುಬ್ಬಳ್ಳಿಯಲ್ಲಿ ವಿದ್ಯಾಭ್ಯಾಸ ನಡೆಯಿತು. ಓದಿದ್ದು ಇಂಜಿನಿಯರಿಂಗ್, ಶಾಸ್ತ್ರೀಯವಾಗಿ ಯಕ್ಷಗಾನವನ್ನು ಕಲಿತು ಕೆಲವು ಪ್ರದರ್ಶನಗಳಲ್ಲಿ ಭಾಗಿಯಾದವರು. ವೃತ್ತಿಯಲ್ಲಿ ಅಮೆರಿಕಾದ ಬಹುರಾಷ್ಟ್ರೀಯ ಕಂಪನಿಯಲ್ಲಿ ನಿರ್ದೇಶಕ. ದಶಕದಿಂದ ಅಮೆರಿಕಾದಲ್ಲಿ ವಾಸ. ಶಿಕಾಗೋದ ಬೋಲಿಂಗ್ ಬ್ರೂಕ್‌ನಲ್ಲಿ ಹೆಂಡತಿ ಮೇಘಾ ಮತ್ತು ಮಗಳು ಮೈನಾ ಜೊತೆ ಬದುಕು. ಇದಕ್ಕಿಂತ ಮೊದಲು ದಕ್ಷಿಣ ಅಮೆರಿಕಾದ ಉರುಗೈ, ಚಿಲಿ, ಅರ್ಜೆಂಟೀನಾ, ಬ್ರೆಜಿಲ್ ದೇಶಗಳಲ್ಲಿ ಕೆಲ ಕಾಲ ವಾಸ. ಹತ್ತಕ್ಕೂ ಹೆಚ್ಚು ದೇಶ ನೋಡಿದ, ತಿರುಗಾಡಿದ ಅನುಭವ. ಕಳೆದ ನಾಲ್ಕು ವರ್ಷದಿಂದ ವಿಶ್ವವಾಣಿಯಲ್ಲಿ ಅಂಕಣಕಾರರಾಗಿ ಸಕ್ರಿಯ. ಓದು, ಬರವಣಿಗೆ, ಫೋಟೋಗ್ರಾಫಿ, ಪ್ರವಾಸ, ಕ್ರಿಕೆಟ್, ವಾಲಿಬಾಲ್ ಹವ್ಯಾಸಗಳು.

Articles
Shishir Hegde Column: ಮರದ ವಿಮಾನ ಅರ್ಧ ಮೈಲಿ ಹಾರಿದ ಕಥೆ !

Shishir Hegde Column: ಮರದ ವಿಮಾನ ಅರ್ಧ ಮೈಲಿ ಹಾರಿದ ಕಥೆ !

ಅಮೆರಿಕದಲ್ಲಿ ಇಂತಹ ಎಷ್ಟು ವಸ್ತುಸಂಗ್ರಹಾಲಯಗಳಿರಬಹುದು ಹೇಳಿ? ಒಬ್ಬನ ಜೀವಮಾನ ದಲ್ಲಿ ನೋಡಿ ಮುಗಿಸಲಿಕ್ಕಾಗದಷ್ಟು. ಎಷ್ಟು? 35 ಸಾವಿರ..! ಹೌದು- ಅಷ್ಟು. ಜಗತ್ತಿನ ಅತ್ಯಂತ ಹೆಚ್ಚು ವಸ್ತುಸಂಗ್ರಹಾಲಯವಿರುವ ದೇಶ ಅಮೆರಿಕ. ಅದರಲ್ಲಿ ಚಿಕ್ಕ ಮನೆಯ ಗಾತ್ರದ ಸುಮಾರು 25 ಸಾವಿರ, ಮಧ್ಯಮ ಗಾತ್ರದ 7-8 ಸಾವಿರ ಮತ್ತು ಅಂತಾರಾಷ್ಟ್ರೀಯ ಮಟ್ಟದ - ಬೃಹದ್ ಗಾತ್ರದ ಸುಮಾರು ಒಂದು ಸಾವಿರ ವಸ್ತುಸಂಗ್ರಹಾಲಯಗಳಿವೆ.

Shishir Hegde Column: ಅರೆ ಗೋಪಾಲ್‌, ನಿಮ್ದುಕೆ ಅಷ್ಟೆಲ್ಲಾ ದೇವ್ರು ಏಕಿದೆ ?

ಅರೆ ಗೋಪಾಲ್‌, ನಿಮ್ದುಕೆ ಅಷ್ಟೆಲ್ಲಾ ದೇವ್ರು ಏಕಿದೆ ?

ಸರಕಾರಿ ವ್ಯವಸ್ಥೆಗೂ, ಕಾರ್ಪೊರೇಟ್ ವ್ಯವಸ್ಥೆಗೂ ಹೋಲಿಸುವಂತೆಯೇ ಇಲ್ಲ. ಕಾರ್ಪೊರೇಟ್ ವ್ಯವಹಾರಗಳನ್ನು ತೀರಾ ಹತ್ತಿರದಿಂದ ದಿನಬೆಳಗಾದರೆ ಕಂಡು ವ್ಯವಹರಿಸುವುದರಿಂದ ಅವೆಲ್ಲ ಹೇಗೆ ಇರುತ್ತದೆ ಎನ್ನುವುದು ನನಗೆ ನೇರವಾಗಿ ಕಂಡು ಗೊತ್ತು. ಎಲ್ಲ ಕಂಪನಿಗಳಲ್ಲೂ ಬಂತು, ಅಲ್ಲಿನ ನೌಕರ ಶೋಷಣೆಗೆ ಒಳಗಾದಲ್ಲಿ ಅದನ್ನು ಹೇಳಿಕೊಳ್ಳಲು ಕನಿಷ್ಠ ಮೂರ್ನಾಲ್ಕು ಮಾರ್ಗಗಳನ್ನಾದರೂ ಮಾಡಿಟ್ಟಿರುತ್ತಾರೆ.

Shishir Hegde Column: ಇದೆಲ್ಲ ಸವತಿ ಮಕ್ಕಳ ನಾಲ್ಕು ಸಾವಿರ ವರ್ಷದ ವ್ಯಾಜ್ಯವೇ ?

ಇದೆಲ್ಲ ಸವತಿ ಮಕ್ಕಳ ನಾಲ್ಕು ಸಾವಿರ ವರ್ಷದ ವ್ಯಾಜ್ಯವೇ ?

ಒಬ್ಬ ವ್ಯಕ್ತಿಯಿಂದ. ಆಗ ಮನುಷ್ಯರೆಲ್ಲ ಪೂಜೆ ಮಾಡುತ್ತಿದ್ದುದು ಸೂರ್ಯ, ಪ್ರಕೃತಿ ಇತ್ಯಾದಿ. ಈಜಿ, ಚೀನಾದ ಹ್ವಾಂಗೆ ನದಿತಟ ಪ್ರದೇಶ, ರೋಮನ್, ಇಂಕಾ ಇತ್ಯಾದಿ ನಾಗರಿಕತೆಗಳು ಪ್ರತ್ಯೇಕವಾಗಿಯೇ ಬೆಳೆಯುತ್ತಿದ್ದವು. ಭಾರತ, ಇರಾನ್, ಪಾಕಿಸ್ತಾನ, ಅಫ್ಘಾನಿಸ್ತಾನ ಪ್ರಾಂತ್ಯದಲ್ಲಿ ಇದೆಲ್ಲ ಆಚರಣೆ ಇನ್ನಷ್ಟು ರೂಪಗಳನ್ನು ಪಡೆದುಕೊಂಡಿದ್ದವು. ಇಲ್ಲಿ ಆಗ ವೇದಕಾಲ. ಆದರೆ ಎಲ್ಲಿಯೂ ಯಾವುದೇ ಮತ (ಇಂದಿನ ರಿಲಿಜಿಯನ್) ಎಂದು ಇರಲಿಲ್ಲ.

Shishir Hegde Column: ಸಾಕು...ಎರಡನೆಯ ಬಾಣ ಚುಚ್ಚಿಕೊಂಡಷ್ಟು ಸಾಕು !

Shishir Hegde Column: ಸಾಕು...ಎರಡನೆಯ ಬಾಣ ಚುಚ್ಚಿಕೊಂಡಷ್ಟು ಸಾಕು !

ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದೂ ಮಲಗದ ಅದ್ಭುತ ಜಾಗ. ಅಲ್ಲಿ ಎಲ್ಲಿ, ಯಾವಾಗ ನೋಡಿದರೂ ಜನವೇ ಜನ. ಒಂದು ಕಡೆ ಅದೆಷ್ಟೋ ತಾಸು ಎಲ್ಲಿಂದಲೋ ಬಂದು ಮುಂದೆ ಹೋಗುವ, ನಿದ್ರೆ ಸರಿಯಾಗಿರದೆ, ಹೊಟ್ಟೆ ಕೆಟ್ಟ, ಸ್ನಾನವಿಲ್ಲದ, ಮಾನಸಿಕವಾಗಿಯೂ ದಣಿದ ಪ್ರಯಾಣಿಕರು. ಕೆಲವರಿಗೆ ಭಾಷೆ ಬರುವುದಿಲ್ಲ. ಕೆಲವರು ಕಂಗಾಲಾಗಿರುತ್ತಾರೆ, ಇನ್ನು ಕೆಲವರು ವಿಮಾನ ನಿಲ್ದಾಣ ದಲ್ಲಿಯೇ ದಾರಿ ತಪ್ಪಿ ಇತ್ತಿಂದತ್ತ ದಿಕ್ಕು ಬಳ್ಳಿ ದಾಟಿದವರಂತೆ ಓಡಾಡುತ್ತಿರುತ್ತಾರೆ ಇತ್ಯಾದಿ.

Shishir Hegde Column: ಜ್ಞಾನದಿಂದ ವಿಜ್ಞಾನದೆಡೆಗೆ ಹೊರಳುತ್ತಿದೆಯೇ ಸೈನ್ಸ್‌ ?

ಜ್ಞಾನದಿಂದ ವಿಜ್ಞಾನದೆಡೆಗೆ ಹೊರಳುತ್ತಿದೆಯೇ ಸೈನ್ಸ್‌ ?

ವಿಜ್ಞಾನ ನಿಂತ ನೀರಾಗುವಂತಿಲ್ಲ. ಕಳೆದ, ಅದರಲ್ಲೂ ಹತ್ತು ವರ್ಷದಿಂದೀಚೆ ಆಧುನಿಕ ವಿಜ್ಞಾನ ಬಹಳಷ್ಟು ಬದಲಾಗಿದೆ. ಕೆಲವು ವಿಷಗಳನ್ನು ಇಂದಿನ ವಿಜ್ಞಾನ ಯೋಚಿಸುವ ರೀತಿಯೇ ಬದಲಾಗಿದೆ. ವಿಸ್ತಾರಗೊಂಡಿದೆ. ಮೊದಲು ಹೇಗಿತ್ತು? ಕಳೆದ ಒಂದು ಶತಮಾನದಲ್ಲಿ ಬೆಳೆದು ಬಂದ ವಿಜ್ಞಾನ - ವೆಸ್ಟೆರ್ನ್ ಸೈನ್ಸ್ - ಯಾವುದು ಕಾಣಿಸುತ್ತದೆಯೋ ಅಥವಾ ಲೆಕ್ಕ ಮಾಡಲು ಸಾಧ್ಯವೋ ಅದನ್ನಷ್ಟೇ ನಂಬುತ್ತಿತ್ತು, ಒಪ್ಪುತ್ತಿತ್ತು. ‌

Shishir Hegde Column: ವರ್ಷ ಆರು, ವಾರ ಮುನ್ನೂರು: ಇದು ಶಿಶಿರಕಾಲದ ಸ್ವಗತ

ವರ್ಷ ಆರು, ವಾರ ಮುನ್ನೂರು: ಇದು ಶಿಶಿರಕಾಲದ ಸ್ವಗತ

ನಾವೇಕೆ ಸಂಖ್ಯೆಯನ್ನು ಸಂಭ್ರಮಿಸಬೇಕು? ಅಳತೆಗೆ? ಲೆಕ್ಕಕ್ಕೆ? ಹೋಲಿಕೆಗೆ? ಸ್ವಸ್ತುತಿಗೆ? ಪ್ರಯಾಣ ಚಾಲ್ತಿಯಲ್ಲಿರುವಾಗಲೇ ‘ರೌಂಡ್ ಫಿಗರ್’ ನಮಗೊಂದು ಏನೋ ಮುಗಿಸಿದ ಭಾವ ಕೊಡುತ್ತದೆಯಲ್ಲ! ಆ ಕಾರಣಕ್ಕೆ? ಬ್ಯಾಟ್ಸ್‌ಮನ್ ಶತಕ ಬಾರಿಸಿದಾಗ, ವ್ಯಕ್ತಿಯ ಸಹಸ್ರಚಂದ್ರ ದರ್ಶನ, ದಶಮಾನೋತ್ಸವ, ಸಿಲ್ವರ್, ಗೋಲ್ಡನ್ ಇತ್ಯಾದಿ ಜುಬಿಲಿಗಳ ಸಂಭ್ರಮಗಳ ಅವಶ್ಯ ಕತೆ, ಅಸಲಿ ಪ್ರಸ್ತುತತೆ ಏನು? ಸರಿ- ಈಗ ಅಂಕಣ ಮುನ್ನೂರು ವಾರ ಆಗಿದೆ.

Shishir Hegde Column: ನಾಯಕನನ್ನು ಕೊಲ್ಲುವ ಮೂಲಕ ಈ ಯುದ್ಧ ಶುರುವಾಯಿತಲ್ಲ !

ನಾಯಕನನ್ನು ಕೊಲ್ಲುವ ಮೂಲಕ ಈ ಯುದ್ಧ ಶುರುವಾಯಿತಲ್ಲ !

ಇರಾನ್ ಮತ್ತು ಭಾರತದ ಸಂಬಂಧ ಬಹಳ ಹಳೆಯದು. ಎಷ್ಟು? ನಾವಿಂದು ಉಖ ಮಾಡುವ ಹರುಕುಮುರುಕು ಬ್ರಿಟಿಷ್ ಅಪೂರ್ಣ ಇತಿಹಾಸವನ್ನೇ ಆಧರಿಸಿ ನೋಡುವುದಾದರೆ, ಆರರಿಂದ ಹತ್ತುಸಾವಿರ ವರ್ಷ. ಅಷ್ಟುಕಾಲದಿಂದ ಭಾರತ ಇರಾನಿನ ಸಂಬಂಧವಿದೆ. ಪಾಕಿಸ್ತಾನ ವಿಭಜನೆ ಗಿಂತ ಮೊದಲು ಇರಾನ್ ಪಕ್ಕದ ದೇಶ ತಾನೆ!

Shishir Hegde Column: ಶ್..‌ ಗುಟ್ಟಿನ ಗುಟ್ಟನ್ನು ಹೇಳುತ್ತೇನೆ, ಯಾರಿಗೂ ಹೇಳ್ಬೇಡಿ

ಶ್..‌ ಗುಟ್ಟಿನ ಗುಟ್ಟನ್ನು ಹೇಳುತ್ತೇನೆ, ಯಾರಿಗೂ ಹೇಳ್ಬೇಡಿ

ಮಕ್ಕಳ ಯಾವುದೇ ಕಿತಾಪತಿ ತಿಳಿದಾಗ ಸಂಭ್ರಮಿಸಬೇಕೋ, ಪೂರ್ತಿ ಕೇಳಿಸಿಕೊಳ್ಳು ವುದಕ್ಕಿಂತ ಮೊದಲು ಬುದ್ಧಿವಾದಕ್ಕೆ ಇಳಿಯಬೇಕೋ ಅಥವಾ ‘ಅವರ ಮುಂದೆ ನಿಮ್ಮದೇನು ಕಿಸುಬೋಕ್ಕೆ’ ಎಂದು ನಮ್ಮ ಗತಕಾಲದ ಭುಜಬಲ ಪರಾಕ್ರಮ ಕೊಚ್ಚಿಕೊಳ್ಳಬೇಕೋ ಎಂಬಿತ್ಯಾದಿ ಬಹುವಿಕಲ್ಪ ನಮ್ಮ ತಲೆಮಾರಿನ ಅಪ್ಪ-ಅಮ್ಮಂದಿರದು.

Shishir Hegde Column: ಟಿಂಗ್‌ ಟಿಂಗ್ ಮೋಹಿನಿ ಮತ್ತು ಕೂರುವುದು ಎಂಬ ಸಾಧನೆ

ಟಿಂಗ್‌ ಟಿಂಗ್ ಮೋಹಿನಿ ಮತ್ತು ಕೂರುವುದು ಎಂಬ ಸಾಧನೆ

ಬದಲಾದ ದಿನಮಾನದಲ್ಲಿ 4-5 ತಾಸು ಏಕಾಗ್ರತೆಯಿಂದ ಒಂದೇ ಕೆಲಸ ಮಾಡುವುದು ಸುಲಭ ವಲ್ಲ. ಗೆಳೆಯನ ಫೋನ್ ಬರುತ್ತದೆ, ಇನ್ಯಾರದೋ ಮೆಸೇಜ್ ‘ಟಿಂಗ್’ ಎನ್ನುತ್ತದೆ, ಆಫೀಸಿನ ಅಪೂರ್ಣ ಕೆಲಸವೊಂದು ನೆನಪಾಗುತ್ತದೆ, ಬ್ರೇಕಿಂಗ್ ನ್ಯೂಸ್ ಕಾಣಿಸುತ್ತದೆ, ಸಂಬಂಧಿಕರು ಮನೆಗೆ ಬರುತ್ತಾರೆ, ಅದರ ಮಧ್ಯೆ ಮೊಬೈಲ್‌ನಲ್ಲಿನ ಅಪ್ಲಿಕೇಷನ್ʼಗಳಿಂದ ಅಸಂಖ್ಯ ‘ನೋಟಿಫಿ ಕೇಷನ್’ಗಳು, ನಿಮ್ಮ ಫೊಟೋಗೆ ಯಾರದ್ದೋ ಕಮೆಂಟು, ಯಾರಿಗೆ ಯಾರದ್ದೋ ಕುಹಕ, ಖುಷಿ, ಬೇಸರ, ಸುದ್ದಿ, ಕಂಗ್ರಾಜುಲೇಷನ್ಸ್ ಇತ್ಯಾದಿ.

Shishir Hegde Column: ಅಂಗಡಿ ಗಣೇಶ ಭಟ್ಟರು ಮತ್ತು ಸ್ಯಾನ್ಪೋ ಯೋಷಿ ಸುತ್ತಮುತ್ತ

ಅಂಗಡಿ ಗಣೇಶ ಭಟ್ಟರು ಮತ್ತು ಸ್ಯಾನ್ಪೋ ಯೋಷಿ ಸುತ್ತಮುತ್ತ

ಒಂದು ಕಡೆ ಸಹ್ಯಾದ್ರಿ, ಒಂದು ಕಡೆ ಕಡಲು, ಮಧ್ಯದಂದು ಯಾವುದಕ್ಕೂ ಇರಲಿ ಎಂಬಂತಿಟ್ಟ ಹೊಳೆ. ಇಲ್ಲ ಬೆಟ್ಟದ ಏರು-ತಗ್ಗುಗಳೇ ನದಿಗಳಾಗಿ, ಆ ನದಿಗಳೇ ಅಲ್ಲಲ್ಲಿ ತಿರುಗಿ ಊರುಗಳಾಗಿವೆ. ಎಂದರಲ್ಲಿ ತೆಂಗು, ಅಡಕೆ, ಬಾಳೆ ತೋಟ, ಇಲ್ಲವೇ ಬೋಳು ಬೆಟ್ಟ. ಅದರ ಮಧ್ಯದಲ್ಲಿ ಅಲ್ಲಲ್ಲಿ ಅಡಗಿ ಕೂತಿರುವ ಮಂಗಳೂರು ಹಂಚಿನ ಟೊಪ್ಪಿಗೆ ಹಾಕಿಕೊಂಡ ತೇರಿನಾಕೃತಿಯ ಮನೆಗಳು.

Shishir Hegde Column: ಕುರ್ಚಿಯು ಹೋಗಿ ಮುಟ್ಟಬೇಕಾದ ಜಾಗವಾಗಿದ್ದು ಹೇಗೆ ?

ಕುರ್ಚಿಯು ಹೋಗಿ ಮುಟ್ಟಬೇಕಾದ ಜಾಗವಾಗಿದ್ದು ಹೇಗೆ ?

ನೆಲದ ಮೇಲೆ ಕೂರುವುದಕ್ಕಿಂತ ಈ ರೀತಿ ಕಲ್ಲಿನ ಮೇಲೆ ಸ್ವಲ್ಪ ಎತ್ತರಕ್ಕೆ ಕೂರುವುದು ಹೆಚ್ಚು ಅನು ಕೂಲ. ಅಷ್ಟರಲ್ಲಿ ಅವನು ಹಾಗೆ ಕೂತದ್ದನ್ನು ಇನ್ನೊಬ್ಬ ಕಂಡ. ಕುಳಿತುಕೊಳ್ಳಲು ಒಳ್ಳೆಯ ಉಪಾಯ.. ಎರಡನೆಯವನು ಗುಡಿಸಿಲಿನೊಳಗೆ ಚಪ್ಪಡಿ ಕಂದನ್ನು ತಂದಿಟ್ಟುಕೊಂಡ. ಮೂರನೆ ಯವನು ಅದರ ಬೆನ್ನಿಗೆ ಆನಿಸಿಕೊಳ್ಳಲು ಇನ್ನೊಂದು ಕಲ್ಲನ್ನು ಸರಿಸಿಟ್ಟ. ಇನ್ನೊಬ್ಬ ಅದನ್ನೇ ಸ್ವಲ್ಪ ಎತ್ತರಕ್ಕೆ ಇರಿಸಿದ. ಹೀಗೆ- ಹೇಗೋ ಗೊತ್ತಿಲ್ಲ, ಕುರ್ಚಿಯೆಂಬ ಕುರ್ಚಿಯ ರೂಪಾಂತರಗಳ ಆವಿಷ್ಕಾರವಾಯಿತು!!

Shishir Hegde Column: ಜಗತ್ತಿನಲ್ಲಿ ಮನುಷ್ಯರಿಗಿಂತ ವಸ್ತುಗಳೇ ಹೆಚ್ಚು ಓಡಾಡುತ್ತವೆ !

ಜಗತ್ತಿನಲ್ಲಿ ಮನುಷ್ಯರಿಗಿಂತ ವಸ್ತುಗಳೇ ಹೆಚ್ಚು ಓಡಾಡುತ್ತವೆ !

ಇಂಗು, ಸಾಸಿವೆ, ಜೀರಿಗೆ, ಮೆಣಸು ಹೀಗೆ ಒಂದೊಂದೇ ನೆನಪು ಮಾಡಿ ಪಟ್ಟಿ ಮಾಡಿ ಹೇಳಿದೆ. ಗಣೇಶ ಭಟ್ಟರು “ಇಂಗು ಎಲ್ಲಿಂದ ಬರುತ್ತದೆ ಗೊತ್ತೇ?" ಎಂದು ಕೇಳಿದರು. ಅದು- ಅಫ್ಘಾನಿಸ್ತಾನದಿಂದ. ಜೀರಿಗೆ ಎಲ್ಲಿಂದ? ಗುಜರಾತಿನಿಂದ. ಮೆಣಸು ಎಲ್ಲಿಂದ? ಬ್ಯಾಡಗಿಯಿಂದ. ಸಾಸಿವೆ ಎಲ್ಲಿಂದ? ಪಂಜಾಬಿನಿಂದ. ಹೀಗೆ ಸುಮಾರು ಇಪ್ಪತ್ತೈದು ದಿನಸಿ ವಸ್ತುಗಳನ್ನು ಪಟ್ಟಿಮಾಡಿ ಅವು ಎಲ್ಲಿಂದ ಬರುತ್ತವೆ ಎಂದು ಹೇಳಿದರು. ಇಪ್ಪತ್ತು ಊರು, ಹತ್ತು ರಾಜ್ಯ, ಮೂರು ದೇಶ ಇದ್ದವು!

Shishir Hegde Column: ಬದುಕಲು ಕಾರಣ ಬೇಕೆಂಬುದೇ ಬಂಡಲ್‌ ಬಡಾಯಿ !

Shishir Hegde Column: ಬದುಕಲು ಕಾರಣ ಬೇಕೆಂಬುದೇ ಬಂಡಲ್‌ ಬಡಾಯಿ !

ಮುಸ್ಸಂಜೆಯ ಬೆಳಕನ್ನು ಕತ್ತಲು ಮೀರಿತ್ತು. ಮುಲ್ಲಾ ನಸ್ರುದ್ದೀನ್ ಗಾಬರಿಯಲ್ಲಿದ್ದ. ಬೀದಿ ದೀಪದ ಕೆಳಗೆ ಏನನ್ನೋ ತರಾತುರಿಯಲ್ಲಿ ಹುಡುಕುತ್ತಿದ್ದ. “ದೆವ್ವ ಓಡಾಡುವ ಈ ಹೊತ್ತಿನಲ್ಲಿ ಮುಲ್ಲಾ ಏನು ಹುಡುಕುತ್ತಿದ್ದಾನೆ" ಎಂದು ಕೇಳುತ್ತಾ ಮೂರ್ನಾಲ್ಕು ಮಂದಿ ಬಂದರು. ತಾವೂ ಹುಡುಕುವು ದರಲ್ಲಿ ಜತೆಯಾದರು. ರಸ್ತೆಯ ಅಕ್ಕಪಕ್ಕ, ತೋಡಿನಲ್ಲಿ, ಮೋರಿಯಲ್ಲಿ ಎಡೆ ಒಂದು ಗಂಟೆ ಹರಸಾಹಸ ಪಟ್ಟರೂ, ಆತ ಹುಡುಕುತ್ತಿದ್ದ ಕೀಲಿ ಮಾತ್ರ ಎಲ್ಲಿಯೂ ಸಿಗಲಿಲ್ಲ. ಆಗ ಅವರಲ್ಲೊಬ್ಬ ಸುಮ್ಮನೆ ಮಾತಿಗೆ “ಮುಲ್ಲಾ, ನಾವು ಹುಡುಕಲು ಶುರುಮಾಡಿ ತುಂಬಾ ಹೊತ್ತಾಯಿತು.

Shishir Hegde Column: ಬದುಕಿನಂತೆ ಉದ್ದೇಶಕ್ಕೂ ಬದಲಾಗುವ ಸ್ವಾತಂತ್ರ್ಯವಿದೆ !

ಬದುಕಿನಂತೆ ಉದ್ದೇಶಕ್ಕೂ ಬದಲಾಗುವ ಸ್ವಾತಂತ್ರ್ಯವಿದೆ !

ಪ್ರತಿಯೊಂದರ, ಪ್ರತಿಯೊಬ್ಬರ ಆಳವೂ ಅಷ್ಟೇ ಇದೆ. ಯಾವುದನ್ನೇ ಎತ್ತಿಕೊಳ್ಳಿ, ಯಾರನ್ನೇ ಓದಿಕೊಳ್ಳಿ, ಎಲ್ಲವನ್ನೂ, ಎಲ್ಲರನ್ನೂ ಸ್ವಲ್ಪ ಸ್ವಲ್ಪ ಓದಿದರೂ ಸಾಕು. ಅದರಲ್ಲಿ ಕೆಲವು ನೇರಾನೇರ, ದ್ವಂದ್ವ ಸೃಷ್ಟಿಸದ ವಿಚಾರಗಳು- ಉದಾಹರಣೆಗೆ ‘ಅಷ್ಟಾವಕ್ರಗೀತೆ’. ಭಗವದ್ಗೀತೆ ಮೊದಲಾದವು ಹಾಗಲ್ಲ- ಅವುಗಳಲ್ಲಿ ವ್ಯಕ್ತಿಯ ಪ್ರಶ್ನೆಗೆ ಅನುಗುಣವಾಗಿ ಉತ್ತರಗಳು ರೂಪ ತಾಳುತ್ತವೆ.

Shishir Hegde Column: ಡಿಪ್ರೆಶನ್:‌ ಬದುಕಿ ಪ್ರಯೋಜನವೇನು ? ಎಂಬ ಯಕ್ಷಪ್ರಶ್ನೆ !

ಡಿಪ್ರೆಶನ್:‌ ಬದುಕಿ ಪ್ರಯೋಜನವೇನು ? ಎಂಬ ಯಕ್ಷಪ್ರಶ್ನೆ !

ನಮ್ಮ ಯೋಚನೆಗಳೇ ನಮ್ಮ ಸುಸ್ತಿಗೆ ಕಾರಣವಾಗುತ್ತಿವೆ, ಭಾರವೆನಿಸುತ್ತಿವೆ ಎನ್ನುವುದನ್ನು ತಿಳಿದು ಕೊಳ್ಳುವುದು ಕಷ್ಟದ ವಿಷಯವೇನಲ್ಲ. ನಮ್ಮ ವಿಚಾರಗಳನ್ನು, ಮನೋಹರಿವನ್ನು ಗಮನ ಕೊಟ್ಟು ನೋಡದಿದ್ದರೆ ಅವುಗಳಲ್ಲಿ ನಿಜವಾದ ಸಮಸ್ಯೆಗಳೆಷ್ಟು ಮತ್ತು ನಮ್ಮ ಕಲ್ಪನೆಯ ಸಮಸ್ಯೆಗಳೆಷ್ಟು ಎನ್ನುವ ಪ್ರತ್ಯೇಕತೆ ತಿಳಿಯುವುದಿಲ್ಲ.

Shishir Hegde Column: ಮರೆಯದಿರಿ, ಈ ತಳಮಳ ಬುದ್ಧಿವಂತರಿಗೆ ಮಾತ್ರ

Shishir Hegde Column: ಮರೆಯದಿರಿ, ಈ ತಳಮಳ ಬುದ್ಧಿವಂತರಿಗೆ ಮಾತ್ರ

ಯಾವುದೇ ಅಸಹಜ ಘಟನೆಯಾದಾಗ ಹೇಗಾಯ್ತು ಎಂಬುದು ಅಪಾಯ/ಹಾನಿಯನ್ನು ಗ್ರಹಿಸಲು. ಏಕಾಯ್ತು ಎನ್ನುವುದು ಸ್ವರಕ್ಷಣೆ ಮತ್ತು ಪರಿಹಾರಕ್ಕೆ. ನಮಗೆ ಆಗದಂತೆ ಎಚ್ಚರ ವಹಿಸಲು. ಯಾವುದೇ ಘಟನೆ ಅರ್ಥವೇ ಆಗದಾಗ? ಹಾನಿಯನ್ನು ಯಾವುದೋ ಒಂದಕ್ಕೆ ಆರೋಪಿಸಬೇಕು. ಇದು ಗುಣ. ಇಲ್ಲಿ ತಂದೆ-ತಾಯಿಗೋ, ಅವರ ಶಿಸ್ತಿಗೋ, ಓದಿನ ಒತ್ತಡಕ್ಕೋ, ಪ್ರೇಮ ಪ್ರಕರಣಕ್ಕೋ, ಆಫೀಸಿನ ಬಾಸ್ʼಗೋ- ಏನೋ ಒಂದಕ್ಕೆ. ಕಾರಣವನ್ನು ವ್ಯಕ್ತಿಗೆ ಆರೋಪಿಸುವುದು ಸಮಾಜಕ್ಕೆ ಸುಲಭದ ಮಾರ್ಗ.

Shishir Hegde Column: ಪೇಟೆಯ ಬದುಕಿಗೆ ಜೀನ್ಸ್‌ ಬದಲಿಸಿಕೊಂಡ ಶಿಕಾಗೋ ಗಿಡುಗ

ಪೇಟೆಯ ಬದುಕಿಗೆ ಜೀನ್ಸ್‌ ಬದಲಿಸಿಕೊಂಡ ಶಿಕಾಗೋ ಗಿಡುಗ

ನಾನು ಕಚೇರಿಯಲ್ಲಿ ಕುಳಿತುಕೊಳ್ಳುವ ಗಾಜಿನ ಗೋಡೆಯ ಹೊರಗೆ ಕಾಣಿಸುವಂತೆ ಎರಡು ಗಿಡುಗಗಳು ಸೇರಿ ಗೂಡು ಕಟ್ಟುತ್ತಿದ್ದವು. ಒಂದೆರಡು ದಿನ, ಆಗೀಗ, ಹೋಗಿ ಬರುವಾಗ ಅದರತ್ತ ಗಮನಹರಿಸುತ್ತಿದ್ದೆ ಒಳಗಿನಿಂದ. ದಿನಗಳು ಕಳೆಯುತ್ತಿದ್ದಂತೆ ನನಗೆ ಅವುಗಳ ಚಲನವಲನವನ್ನು ನೋಡುವುದೇ ಒಂದು ಚಟವಾಗಿಬಿಟ್ಟಿತು. ಒಂದು ದಿನ ನೋಡುತ್ತೇನೆ, ಗಿಡುಗ ಮೂರು ಮೊಟ್ಟೆ ಯಿಟ್ಟಿದೆ.

Shishir Hegde Column: ಬೆಳಗ್ಗೆ ಬೇಗ ಏಳಲು ಐದು ಕ್ಷಣದ ಉಪಾಯ...

ಬೆಳಗ್ಗೆ ಬೇಗ ಏಳಲು ಐದು ಕ್ಷಣದ ಉಪಾಯ...

ಯಶಸ್ವಿ ವ್ಯಕ್ತಿಗಳು ಬೆಳಗ್ಗೆ ಬೇಗನೆ ಏಳುತ್ತಾರೆ, ಏಕೆಂದರೆ ಅವರಲ್ಲಿ ಶಿಸ್ತಿದೆ, ಪ್ರೇರಣೆ ಇದೆ, ಅವರಿಗೆ ದೇವರ ಆಶೀರ್ವಾದ ಇದೆ, ಅವರಲ್ಲಿ ಇನ್ನೇನೋ ಮಣ್ಣು ಮಸಿ ಇದೆ- ಎಂದೆಲ್ಲ ನಾವು ನಂಬಿ ಕೊಂಡಿರು ತ್ತೇವೆ. ಅವರೆಲ್ಲರೂ 4-5 ಗಂಟೆಗೆ ಅಲಾರಾಂ ಆಗುತ್ತಿದ್ದಂತೆ, ಯಾರನ್ನೂ ಶಪಿಸುವುದಿಲ್ಲ, ಬೈದು ಕೊಳ್ಳುವುದಿಲ್ಲ. ಮುಗುಳ್ನಗುತ್ತ, ಜಗತ್ ಪ್ರೇರಣೆಯಿಂದ ಬೆಡ್‌ನಿಂದ- ಪಿಂಗ್‌ಪಾಂಗ್ ಬಾಲಿನಂತೆ ಛಂಗನೆ ಪುಟಿದೇಳುತ್ತಾರೆ- ಇವೆಲ್ಲ ಎಂದುಕೊಳ್ಳುತ್ತೇವೆ.

Shishir Hegde Column: ʼರೀಲ್ಸ್‌ʼ ನಾವಂದುಕೊಂಡಷ್ಟು ಪಾಪದ ಚಟವಲ್ಲ, ಹುಷಾರ್‌

ʼರೀಲ್ಸ್‌ʼ ನಾವಂದುಕೊಂಡಷ್ಟು ಪಾಪದ ಚಟವಲ್ಲ, ಹುಷಾರ್‌

ಕುಡಿದದ್ದು ಹೊಟ್ಟೆಯಿಂದ ರಕ್ತ ಸೇರಿ ಮಿದುಳನ್ನು ತಲುಪುತ್ತದೆ. ಮಿದುಳಿನಲ್ಲಿ ಇರೋದು ನ್ಯೂರಾನ್- ನರಕೋಶಗಳು. ಸರಾಸರಿ 86 ಸಾವಿರ ಕೋಟಿ ನರಕೋಶಗಳು. ಅವುಗಳು ಒಂದಕ್ಕಿನ್ನೊಂದು ಸಂವಹಿಸು ತ್ತಿದ್ದರೆ, ವ್ಯವಹರಿಸುತ್ತಿದ್ದರೆ ಮಾತ್ರ ನಮ್ಮ ಇಡೀ ದೈಹಿಕ ಮತ್ತು ಮಾನಸಿಕ ವ್ಯವಸ್ಥೆಗಳು ತಾಳ-ಮೇಳ ಹೊಂದಿ, ಸರಿಯಾಗಿ ಕೆಲಸ ಮಾಡಲು ಸಾಧ್ಯ.

Shishir Hegde Column: ರೆಸ್ಟೋರೆಂಟ್‌ʼಗಳಿಗೆ ಸ್ಟಾರ್‌ ಪಟ್ಟ ಕೊಡುವ ಟೈರ್‌ ಕಂಪೆನಿ

ರೆಸ್ಟೋರೆಂಟ್‌ʼಗಳಿಗೆ ಸ್ಟಾರ್‌ ಪಟ್ಟ ಕೊಡುವ ಟೈರ್‌ ಕಂಪೆನಿ

ನಾವು ರೆಸ್ಟೋರೆಂಟ್ ಮತ್ತು ಹೋಟೆಲ್ ಎಂಬೆರಡು ಇಂಗ್ಲಿಷ್ ಶಬ್ದವನ್ನು ಬೇಕಾಬಿಟ್ಟಿ ಬಳಸುತ್ತೇವೆ. ಇವೆರಡೂ ಬೇರೆ ಬೇರೆ. ರೆಸ್ಟೋರೆಂಟ್ ಎಂದರೆ ಹೋಟೆಲ್ ಅಲ್ಲ, ಹೋಟೆಲ್ ಎಂದರೆ ರೆಸ್ಟೋರೆಂಟ್ ಅಲ್ಲ. ರೆಸ್ಟೋರೆಂಟ್- ಆಹಾರ ಮತ್ತು ಪಾನೀಯ ಒದಗಿಸುವ ಜಾಗ, ಖಾನಾವಳಿ. ಹೋಟೆಲ್ ಎಂದರೆ ಅದು ಮುಖ್ಯವಾಗಿ ತಂಗುವ ಪೂರ್ಣ ವ್ಯವಸ್ಥೆ.

Shishir Hegde Column: ನಾವೇಕೆ ಭಯಾನಕ ಕ್ರೈಂ ಸ್ಟೋರಿಗಳನ್ನು ನೋಡಲು ಬಯಸುತ್ತೇವೆ ?

ನಾವೇಕೆ ಭಯಾನಕ ಕ್ರೈಂ ಸ್ಟೋರಿಗಳನ್ನು ನೋಡಲು ಬಯಸುತ್ತೇವೆ ?

ಇಂಥ ಅರ್ಥವಾಗದ ಬಯಕೆಗಳನ್ನು ಈಡೇರಿಸಿಕೊಳ್ಳುವುದನ್ನು ‘ಅದೇನೋ ಥ್ರಿಲ್’ ಎಂದು ಆಡುಮಾತಿನಲ್ಲಿ ಹೇಳುವುದಿದೆ. ‘ಥ್ರಿಲ್’ ಎಂದರೆ ಅತ್ಯುತ್ಸುಕತೆ. ಈ ಅತಿಯಾದ ಕುತೂಹಲವೇಕೆ? ಕಾರಣವಿದೆ. ನಮ್ಮೆಲ್ಲರಲ್ಲೂ ವಿಷಯ ಯಾವುದೇ ಇರಲಿ, ಅದರ ಪರಮಾವಧಿ ಸಾಧ್ಯತೆಯನ್ನು ತಿಳಿದುಕೊಳ್ಳುವ ಒಂದು ಅದಮ್ಯ ಕುತೂಹಲವಿರುತ್ತದೆ.

Shishir Hegde Column: ಉತ್ತರಿಸುವುದನ್ನು ನಿಲ್ಲಿಸುವವರೆಗೂ ಮನಸ್ಸಿನ ಪ್ರಶ್ನೆ ನಿಲ್ಲುವುದಿಲ್ಲ

ಉತ್ತರಿಸುವುದನ್ನು ನಿಲ್ಲಿಸುವವರೆಗೂ ಮನಸ್ಸಿನ ಪ್ರಶ್ನೆ ನಿಲ್ಲುವುದಿಲ್ಲ

ನಾವೆಲ್ಲರೂ ವಾಟ್ಸ್ ಆಪ್ ಬಳಸುತ್ತೇವೆ. ಅದರಲ್ಲಿ ನಾವು ಕಳುಹಿಸಿದ ಸಂದೇಶ ಹೊರ ಹೋದರೆ ಒಂದು ಟಿಕ್ ಮಾರ್ಕ್ (ಸರಿ ಗುರುತು). ಅವರಿಗೆ ತಲುಪಿದರೆ ಎರಡು ಟಿಕ್ ಮಾರ್ಕ್ ಮತ್ತು ಅದನ್ನು ಅವರು ಓದಿದರೆ ಆ ಎರಡು ಟಿಕ್ ಮಾರ್ಕ್ ನೀಲಿ ಬಣ್ಣಕ್ಕೆ ತಿರುಗುತ್ತವೆ ಅಲ್ಲವೇ? ನೀವೇನೋ ಒಂದು ಸಂದೇಶ ಕಳುಹಿಸಿರುತ್ತೀರಿ, ಅತ್ತ ಕಡೆ ಆ ವ್ಯಕ್ತಿ ಆ ಸಂದೇಶವನ್ನು ಓದಿದ್ದು ನೀಲಿ ಗುರುತಿ ನಿಂದ ತಿಳಿಯುತ್ತದೆ. ಆದರೆ ಓದಿಯೂ ಉತ್ತರಿಸದಿದ್ದರೆ? ಆ ಕ್ಷಣದಲ್ಲಿ ನಮ್ಮ ಯೋಚನೆಗಳು ಶುರುವಾಗುತ್ತವೆ

Shishir Hegde Column: ನಾವೇಕೆ ಎಲ್ಲದಕ್ಕೂ ಈ ಪರಿ ಹೆಸರಿಡುತ್ತೇವೆ ?

Shishir Hegde Column: ನಾವೇಕೆ ಎಲ್ಲದಕ್ಕೂ ಈ ಪರಿ ಹೆಸರಿಡುತ್ತೇವೆ ?

ಅಸಲಿಗೆ ‘ಹೆಸರು’ ಎಂದರೇನು? ಒಂದು ಅನನ್ಯ ಶಬ್ದ -ಧ್ವನಿ. ಬಾಯಿಂದ ಹೊರಡಿಸುವ ಒಂದು ಸದ್ದು sound. ಅದನ್ನು ಚಿಕ್ಕ ಮಗುವಿಗೆ ಕಿವಿಯಲ್ಲಿ ಹೇಳಿ ಕರೆಯುವುದು - ನಾಮ ಸಂಸ್ಕಾರ. ಅಲ್ಲಿಂದ ಮುಂದೆ ಆ ಮಗುವಿಗೆ ಅದನ್ನೇ ಕರೆದು ಕರೆದು ಕ್ರಮೇಣ ಆ ಸದ್ದೇ ನಾನು, ಅದು ನನ್ನ ಗಮನವನ್ನು ಸೆಳೆಯಲು, ಸಂಬೋಧಿಸಲು ಬಳಸುವ ಸದ್ದು ಎನ್ನುವುದು ಮಗುವಿಗೆ ಮನದ ಟ್ಟಾಗುತ್ತದೆ.

Shishir Hegde Column: ಈ ಪಾತರಗಿತ್ತಿ ಪಕ್ಕ, ನೀ ನೋಡಿದೇನ ಅಕ್ಕಾ ?

Shishir Hegde Column: ಈ ಪಾತರಗಿತ್ತಿ ಪಕ್ಕ, ನೀ ನೋಡಿದೇನ ಅಕ್ಕಾ ?

ದಕ್ಷಿಣದ ಅಂಟಾರ್ಕ್ಟಿಕಾದಲ್ಲಿ ಚಳಿಗಾಲ ಶುರುವಾದರೆ ಮತ್ತೆ ಉತ್ತರದ ಗ್ರೀನ್‌ಲ್ಯಾಂಡ್‌ಗೆ ಪ್ರಯಾಣ. ಅವು ಧ್ರುವದಿಂದ ಧ್ರುವಕ್ಕೆ ವಲಸೆ ಹೋಗುವುದು ಏಕೆ, ಧ್ರುವಗಳಿಂದ ಸಮಭಾಜಕ ವೃತ್ತದ ಕಡೆಗೆ/ವರೆಗೆ ಬಂದರಾಗದೇ? ಈ ರೀತಿ ವಲಸೆ ಹೋಗುವಾಗ ಅವು ಮಧ್ಯದಲ್ಲಿ ತಂಗು ತ್ತವೆ, ಅಲ್ಲಿಯೇ ಏಕೆ ಉಳಿದುಬಿಡುವುದಿಲ್ಲ ಎಂಬ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರ ಇಲ್ಲ

Loading...