ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
79th Independence Day: ಬಾಗೇಪಲ್ಲಿಯಲ್ಲಿ ಸಡಗರದಿಂದ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಾಗೇಪಲ್ಲಿಯಲ್ಲಿ ಸಡಗರದಿಂದ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ

ನಾವೆಲ್ಲರೂ ಯಾವುದೋ ಸಿನಿಮಾ ನಟ ನಟಿಯರ ಅಭಿಮಾನಿ ಗಳಾಗುತ್ತೇವೆ ಆದರೆ ನನ್ನ ಪ್ರಕಾರ ದೇಶದ ಅಭಿಮಾನಿಯಾಗಬೇಕು ಭಾರತಮಾತೆಯ ಅಭಿಮಾನಿ ಯಾಗಬೇಕು ಆ ನಿಟ್ಟಿನಲ್ಲಿ ದೇಶಕ್ಕೆ ಗೌರವವನ್ನು ತೋರಿಸುವಂತ ಮನೋಭಾವ ಬೆಳೆಸಿಕೊಳ್ಳ ಬೇಕು. ಏಕೆಂದರೆ ಈ ದೇಶದ ಸ್ವಾತಂತ್ರ್ಯ ಕ್ಕಾಗಿ ಹಲವಾರು ದೇಶಾಭಿಮಾನಿಗಳು ತಮ್ಮ ಪ್ರಾಣವನ್ನ ತ್ಯಾಗ ಮಾಡಿ, ಪರಕಿಯರಿಂದ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ.

MLA S R Srinivas: ರಾಜ್ಯದಲ್ಲಿ ತಲಾ ಆದಾಯ ಹೆಚ್ಚಿಸುವಲ್ಲಿ ಗ್ಯಾರಂಟಿ ಯೋಜನೆ ಪಾತ್ರ ಹೆಚ್ಚಿದೆ : ಶಾಸಕ ಎಸ್.ಆರ್.ಶ್ರೀನಿವಾಸ್

ರಾಜ್ಯದಲ್ಲಿ ತಲಾ ಆದಾಯ ಹೆಚ್ಚಿಸುವಲ್ಲಿ ಗ್ಯಾರಂಟಿ ಯೋಜನೆ ಪಾತ್ರ ಹೆಚ್ಚಿದೆ

ಸ್ವಾತಂತ್ರ್ಯ ಎಂದರೆ ದೇಶದ ಪ್ರಗತಿಯ ಜೊತೆ ಸಮಾಜ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆ ಆಗಿದೆ. ಪ್ರಸ್ತುತ ವಿದ್ಯಮಾನದಲ್ಲಿ ಸಮೃದ್ಧ ದೇಶವನ್ನು ಕಟ್ಟುವ ಕೆಲಸ ಆಗಬೇಕಿದೆ. ನಮ್ಮಲ್ಲಿನ ಯುವಶಕ್ತಿ ಬಳಸಿ ಇಡೀ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ಬೆಳೆಯಲು ಮೊದಲು ದೇಶಾಭಿಮಾನ ಬೆಳೆಸಬೇಕಿದೆ.

Minister Dr M C Sudhakar: ಸಂಸದರ ಗೊಡ್ಡು ಬೆದರಿಕೆಗೆ ಹೆದರುವ ಪೈಕಿನ ನಾನಲ್ಲ : ಡಾ.ಎಂ.ಸಿ.ಸುಧಾಕರ್

ಸಂಸದರ ಗೊಡ್ಡು ಬೆದರಿಕೆಗೆ ಹೆದರುವ ಪೈಕಿನ ನಾನಲ್ಲ

ಜನರ ವಿಶ್ವಾಸ ಇರೋವರೆಗೂ ನಮ್ಮನ್ನು ಯಾರೂ ಏನು ಮಾಡಕ್ಕಾಗಲ್ಲ,ಎರಡು ಕಾಲು ವರ್ಷದಲ್ಲಿ ನಾವು ಯಾವತ್ತು ದ್ವೇಷದ ರಾಜಕಾರಾಣ ಮಾಡಿಲ್ಲ , ಎಲ್ಲರನ್ನೂ ಸೋಲಿಸಿ ಬಿಡ್ತೇನೆ, ಮುಗಿಸಿ ಬಿಡುತ್ತೇನೆ ಎಂದು ಅಬ್ಬರಿಸುವ ಈತ ದುಡ್ಡಿನ ದುರಹಂಕಾರದಿಂದ ಆ ರೀತಿ ಮಾತಾಡ್ತಾರೆ. ೨೦೨೩ರ ಚುನಾವಣೆಯಲ್ಲಿ ಚಿಂತಾಮಣಿಯಲ್ಲಿ ನಾನು ನಿಲ್ಲಿಸುವ ಕ್ಯಾಂಡಿಟೇಟ್ ಮೇಲೆ ಗೆದ್ದು ಬರಲಿ ನೋಡೋಣ ಅಂದಿದ್ರು

Pralhad Joshi: ಧರ್ಮಸ್ಥಳಕ್ಕೆ ಕಪ್ಪು ಮಸಿ ಬಳಿಯಲು ಸರ್ಕಾರದ್ದೂ ಸಾಥ್‌ ಇದೆಯೇ? ಜೋಶಿ ಪ್ರಶ್ನೆ

ಧರ್ಮಸ್ಥಳಕ್ಕೆ ಕಪ್ಪು ಮಸಿ ಬಳಿಯಲು ಸರ್ಕಾರದ್ದೂ ಸಾಥ್‌ ಇದೆಯೇ? ಜೋಶಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸತ್ಯ ತಿಳಿದಿದ್ದರೂ ಎಸ್‌ಐಟಿ ತನಿಖೆ, ಶೋಧ ಕಾರ್ಯ, ಅಗೆತ ಕಾರ್ಯಾಚರಣೆಗೆ ಆದೇಶ ನೀಡಿದ್ದಾರೆಯೇ? ಎಂದು ಪ್ರಶ್ನಿಸಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ, ಪೊಲೀಸ್‌ ತನಿಖೆ ಬಳಿಕ ಕುರುಹುಗಳೇನಾದರೂ ಸಿಕ್ಕಿದ್ದೇ ಆಗಿದ್ದಲ್ಲಿ ಎಸ್‌ಐಟಿ ರಚಿಸಿ ಹೆಚ್ಚಿನ ತನಿಖೆ ಮುಂದುವರಿಸಬಹುದಿತ್ತು. ಆದರೆ ʼಸರ್ಕಾರ ಗುಡ್ಡ ಅಗೆದು ಇಲಿ ಹಿಡಿಯದಂತೆʼ ಯೂ ಆಗಿದೆ ಎಂದು ಟೀಕಿಸಿದ್ದಾರೆ.

‌Bengaluru News: ಬೆಂಗಳೂರಿನಲ್ಲಿ ಸಂಚಾರ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ್ದ ಹಿಂದಿ ಮಹಿಳೆ ಸೇರಿ ಇಬ್ಬರು ಅರೆಸ್ಟ್

ಸಂಚಾರ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ್ದ ಮಹಿಳೆ ಸೇರಿ ಇಬ್ಬರು ಅರೆಸ್ಟ್

‌Bengaluru News: ಪೊಲೀಸರ ಮೇಲೆ ಕೂಗಾಡುವುದರಿಂದ ನೀವು ವೀರರಾಗುವುದಿಲ್ಲ. ಅಸಭ್ಯ ಪದಗಳು ಮತ್ತು ಬೆದರಿಕೆಗಳು ನಿಮಗೆ ವಿಶೇಷ ವ್ಯಕ್ತಿಯಂತೆ ವಿಶೇಷ ಉಪಚಾರದ ಪಾಸ್‌ಗೆ ಕಾರಣವಾಗಬಹುದು. ಅದುವೇ ನೇರ ಪೊಲೀಸ್ ಠಾಣೆಗೆ. ಎಚ್ಚರಿಕೆ!... ಬೆಂಗಳೂರು ನಗರ ಪೊಲೀಸರು ನಿಮ್ಮನ್ನು ಗಮನಿಸುತ್ತಿದ್ದಾರೆ ಎಂದು ಅಪರಾಧ ಎಸಗುವವರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಸ್ವಾತಂತ್ರ್ಯ ಬಹುಮಾನವಲ್ಲ. ಇದು ಕಷ್ಟಪಟ್ಟು ಗಳಿಸಿದ್ದು ; ಮೇಜರ್ ಜನರಲ್ ರವಿಮುರುಗನ್

ಸ್ವಾತಂತ್ರ್ಯ ಬಹುಮಾನವಲ್ಲ. ಇದು ಕಷ್ಟಪಟ್ಟು ಗಳಿಸಿದ್ದು

ಭಾರತೀಯರಾದ ನಾವು ಮಾಡುವ ಕೆಲಸದಲ್ಲಿ ತೃಪ್ತಿಯನ್ನು ಕಾಣಲು ನಮ್ಮ ಕೌಶಲವನ್ನು ಗುರುತಿಸಿ ಕೊಂಡು ಆ ನಿಟ್ಟಿ ನಲ್ಲಿ ಕಾರ್ಯೋನ್ಮುಖರಾದರೆ ದೇಶದ ಪ್ರಗತಿ ಕಟ್ಟಿಟ್ಟ ಬುತ್ತಿ. “ಭಾರತದ ವಿಶ್ವ ಗುರು” ಸ್ಥಾನದ ಪ್ರಖರತೆಯನ್ನು ಹೆಚ್ಚಿಸುವುದು ನಿಮ್ಮ ಕೈಲಿದೆ. “ಒಗ್ಗಟ್ಟಿನಲ್ಲಿ ಬಲವಿದೆ” ಎಂದು ತಿಳಿಸಿ ಅದರಂತೆ ಬಾಳುವಂತೆ ಕರೆ ನೀಡಿದರು.

ಸ್ವಾತಂತ್ರ ಹೋರಾಟಗಾರರ ಬದುಕು ನಮಗೆಲ್ಲ ಆದರ್ಶ: ತಹಶೀಲ್ದಾರ ಎಸ್.ಎಂ ಮ್ಯಾಗೇರಿ

ಸ್ವಾತಂತ್ರ ಹೋರಾಟಗಾರರ ಬದುಕು ನಮಗೆಲ್ಲ ಆದರ್ಶ

ಭಾರತ ದೇಶ ಆರ್ಥಿಕವಾಗಿ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಭವ್ಯ ಭಾರತ ದೇಶ ವಿಶ್ವ ಭೂಪಟದಲ್ಲಿ, ಜಾಗತಿಕವಾಗಿ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಮೊದಲನೇ ಸ್ಥಾನ ದಲ್ಲಿ ಕಾಣಲು ಈ ಸ್ವಾತಂತ್ರ್ಯ ಎಂಬ ಸಾಧನ ಅತಿ ಮಹತ್ವದ್ದು ಎಂದರು. ಮಹಾತ್ಮಾ ಗಾಂಧೀಜಿಯವರ ನಾಯಕತ್ವದಲ್ಲಿ ಅಹಿಂಸಾತ್ಮಕ ಹೋರಾಟದ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಜೊತೆಗೆ ಅನೇಕ ಹೋರಾಟಗಾರ ತ್ಯಾಗ, ಬಲಿದಾನವನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಅತ್ಯವಶ್ಯಕವಾಗಿದೆ

ದಶಕದ ಸಂಭ್ರಮದಲ್ಲಿ ಪ್ರಿಸಂ ರೆಕಾರ್ಡಿಂಗ್ ಸ್ಟುಡಿಯೋಸ್ - ಪ್ರಿಸಂ ಫೌಂಡೇಶನ್ ಮತ್ತು ಪಿ ಎಂ ಆಡಿಯೋಸ್

ನೂತನ, ಸುಸಜ್ಜಿತ ಕಛೇರಿಗೆ ಶಾಸಕ ಡಾ.ಅಶ್ವಥ್ ನಾರಾಯಣ ರಿಂದ ಚಾಲನೆ

ಪ್ರಿಸಂ ರೆಕಾರ್ಡಿಂಗ್ ಸಂಸ್ಥೆಯ ನೂತನ ಸ್ಟುಡಿಯೋ, ಪ್ರಿಸಮ್ ಫೌಂಡೇಶನ್ - ಇಂಟರ್‌ ನ್ಯಾಷನಲ್‌ ಸ್ಕೂಲ್ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್‌ ಮತ್ತು ಪಿ ಎಂ ಆಡಿಯೋಸ್ ಅಂಡ್ ಎಂಟರ್‌ ಟೇನ್‌ ಮೆಂಟ್ಸ್‌ ನ ಕೇಂದ್ರ ಕಚೇರಿಯನ್ನು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಡಾ. ಸಿ ಎನ್. ಅಶ್ವಥ್ ನಾರಾಯಣ್ ಉದ್ಘಾಟಿಸಿದರು.

Dr. Sharanabasappa Appa: ಕಲಬುರಗಿಯಲ್ಲಿ ವೀರಶೈವ ಸಂಪ್ರದಾಯದಂತೆ ನೆರವೇರಿದ ಡಾ. ಶರಣಬಸಪ್ಪ ಅಪ್ಪ ಅಂತ್ಯಕ್ರಿಯೆ

ವೀರಶೈವ ಸಂಪ್ರದಾಯದಂತೆ ನೆರವೇರಿದ ಡಾ. ಶರಣಬಸಪ್ಪ ಅಪ್ಪ ಅಂತ್ಯಕ್ರಿಯೆ

Dr. Sharanabasappa Appa: ಅಂತ್ಯ ಸಂಸ್ಕಾರಕ್ಕೂ ಮುನ್ನ ಶರಣಬಸಪ್ಪ ಅಪ್ಪ ಅವರಿಗೆ ಸರ್ಕಾರದಿಂದ ಗೌರವ ಸಲ್ಲಿಸಲಾಯಿತು. ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಶಿವಾನುಭವ ಮಂಟಪದ ಮುಂದೆ ಪೊಲೀಸರಿಂದ ಗೌರವ ಸಲ್ಲಿಕೆಯಾಯಿತು. ವಿವಿಧ ಗಣ್ಯರು ಸೇರಿ ಸಾವಿರಾರು ಭಕ್ತರರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

Karnataka Rains: ನಾಳೆ ಕರಾವಳಿ ಸೇರಿ ಐದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಭಾರಿ ಮಳೆ ಸಾಧ್ಯತೆ

ನಾಳೆ ಕರಾವಳಿ ಸೇರಿ ಐದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಭಾರಿ ಮಳೆ ಸಾಧ್ಯತೆ

Weather forecast: ಆಗಸ್ಟ್‌ 16ರಂದು ರಾಜ್ಯದ ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡಿನ ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 26°C ಮತ್ತು 20°C ಇರುವ ಸಾಧ್ಯತೆ ಇದೆ.

Dharmasthala Temple: ಬಯಲಾಗುತ್ತಿದೆ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ; ಸಿಡಿದೆದ್ದ ಭಕ್ತರು

ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ತನಿಖೆಗೆ ಆಗ್ರಹ

ರಾಜ್ಯದ ಪವಿತ್ರ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವಿನಾಕಾರಣ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಧರ್ಮಸ್ಥಳದ ಭಕ್ತರು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ವಿರೋಧಪಕ್ಷದ ನಾಯಕರು ಸೇರಿದಂತೆ ಆಡಳಿತ ಪಕ್ಷದ ಲೀಡರ್‌ಗಳು ಕೂಡ ಶ್ರೀಕ್ಷೇತ್ರದ ಪಾವಿತ್ರ್ಯತೆಗೆ ಕಳಂಕ ತರುವ ಕೆಲಸವಾಗುತ್ತಿದೆ ಎಂದು ಘರ್ಜಿಸಿದ್ದಾರೆ. ಸಾಮಾಜಿಕ ಮಾಧ್ಯಮ ಸನ್ನೆಗೆ ಬಲಿಯಾಗಿದ್ದ ಜನರು ಇದೀಗ ಸತ್ಯ, ನಿಷ್ಠೆ, ಧರ್ಮಕ್ಕೆ ಹೆಸರು ವಾಸಿಯಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಬೆನ್ನಿಗೆ ನಿಂತಿದ್ದಾರೆ, ಧರ್ಮರಕ್ಷಣೆ ನಮ್ಮೆಲ್ಲರ ಹೊಣೆ, ಕ್ಷೇತ್ರದೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ಸಾರುತ್ತಿದ್ದಾರೆ.

Cylinder Blast: ಬೆಂಗಳೂರು ಸಿಲಿಂಡರ್ ಬ್ಲಾಸ್ಟ್ ಪ್ರಕರಣಕ್ಕೆ ತಿರುವು; ಫ್ರಿಡ್ಜ್ ಸ್ಫೋಟಗೊಂಡು ಅವಘಡ!

ಸಿಲಿಂಡರ್ ಬ್ಲಾಸ್ಟ್ ಪ್ರಕರಣಕ್ಕೆ ತಿರುವು; ಫ್ರಿಡ್ಜ್ ಸ್ಫೋಟಗೊಂಡು ಅವಘಡ!

Cylinder Blast: ಬೆಂಗಳೂರು ವಿಲ್ಸನ್ ಗಾರ್ಡನ್ ಸಮೀಪ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಮೊದಲಿಗೆ ಸಿಲಿಂಡರ್ ಸ್ಫೋಟದಿಂದ ಘಟನೆ ಸಂಭವಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಮನೆಯ ಸಿಲಿಂಡರ್‌ಗೆ ಯಾವುದೇ ಹಾನಿಯಾಗಿಲ್ಲ. ಮನೆಯಲ್ಲಿದ್ದ ಫ್ರಿಡ್ಜ್ ಸ್ಫೋಟಗೊಂಡ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

Krishna janmastami 2025: ಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಸಾಂಪ್ರದಾಯಿಕ ಉಡುಗೆ ಸಾಥ್

ಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಸಾಂಪ್ರದಾಯಿಕ ಉಡುಗೆ ಸಾಥ್

Krishna janmastami 2025: ಕೃಷ್ಣ ಜನ್ಮಾಷ್ಟಮಿಯಂದು ಮಕ್ಕಳೊಂದಿಗೆ ಇತರರು ಸಾಂಪ್ರದಾಯಿಕ ಉಡುಗೆ ಧರಿಸಿ ಸಾಥ್‌ ನೀಡಿ, ಹಬ್ಬ ಆಚರಿಸಿದಲ್ಲಿ ಸಂಭ್ರಮ ದುಪಟ್ಟಾಗುವುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಮನೆಯ ಮಕ್ಕಳೊಂದಿಗೆ ಮಕ್ಕಳಾಗಿ ಟ್ರೆಡಿಷನಲ್ ಉಡುಗೆ ತೊಡುಗೆಗಳಲ್ಲಿ ಕಾಣಿಸಿಕೊಂಡಲ್ಲಿ ಹಬ್ಬದ ಸಂತೋಷ ಹೆಚ್ಚಾಗುವುದು, ಹಬ್ಬದ ಸಂಪ್ರದಾಯ ಕೂಡ ಮುಂದುವರಿಸಿದಂತಾಗುವುದು ಎನ್ನುವ ಅವರು ಈ ಬಗ್ಗೆ ಒಂದಿಷ್ಟು ವಿವರ ನೀಡಿದ್ದಾರೆ.

Cylinder Blast: ಸಿಲಿಂಡರ್ ಸ್ಫೋಟ: ಹಾನಿಗೀಡಾದ ಮನೆಗಳ ದುರಸ್ತಿಗೆ ಸಿಎಂ ಸೂಚನೆ

ಸಿಲಿಂಡರ್ ಸ್ಫೋಟ: ಹಾನಿಗೀಡಾದ ಮನೆಗಳ ದುರಸ್ತಿಗೆ ಸಿಎಂ ಸೂಚನೆ

CM Siddaramaiah: ಮೃತ ಮುಬಾರಕ್ ಕುಟುಂಬದವರಿಗೆ 5 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗಿದೆ. ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಸುತ್ತ ಗಾಯಗಳಾಗಿರುವ ಕಸ್ತೂರಮ್ಮ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. 13 ಮನೆಗಳು ಹಾನಿಗೀಡಾಗಿದ್ದು ಅದನ್ನು ದುರಸ್ತಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Laxmi Hebbalkar: ಎಸ್‌ಐಟಿ ತನಿಖೆಯಿಂದ ಧರ್ಮಸ್ಥಳ ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ ಎಂದ ಹೆಬ್ಬಾಳ್ಕರ್‌

ಎಸ್‌ಐಟಿ ತನಿಖೆಯಿಂದ ಧರ್ಮಸ್ಥಳ ಕೇಸ್‌ನ ಸತ್ಯಾಸತ್ಯತೆ ತಿಳಿಯಲಿದೆ

Laxmi Hebbalkar: ಧರ್ಮಸ್ಥಳ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ನಾವೆಲ್ಲರೂ ಧರ್ಮಸ್ಥಳ ಮಂಜುನಾಥನ ಭಕ್ತರು, ಈ ವಿಚಾರವಾಗಿ ಡಿಸಿಎಂ ಅವರ ಹೇಳಿಕೆಗೆ ನನ್ನ ಸಹಮತವಿದೆ. ಎಸ್‌ಐಟಿ ತನಿಖೆ ಬಗ್ಗೆ ಅಧಿಕಾರಿಗಳು, ಗೃಹಸಚಿವರಿಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

Laxmi Hebbalkar: ಬಿಜೆಪಿಗರ ಮತಗಳ್ಳತನದಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ- ಲಕ್ಷ್ಮೀ ಹೆಬ್ಬಾಳ್ಕರ್‌ ಆರೋಪ

ಬಿಜೆಪಿಗರ ಮತಗಳ್ಳತನದಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ- ಹೆಬ್ಬಾಳ್ಕರ್‌

Laxmi Hebbalkar: ವಿಧಾನಸಭೆ ಚುನಾವಣೆಯಲ್ಲಿ135 ಸೀಟುಗಳನ್ನು ಗೆದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ನಮಗೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಆಯಿತು. ಇದಕ್ಕೆ ಕಾರಣ ಮತಗಳ್ಳತನ. ಮುಂದೆ ನಡೆಯುವ ಬಿಹಾರ‌ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವನ್ನು ಸೋಲಿಸುವ ಸಲುವಾಗಿ ಈಗಾಗಲೇ 85 ಲಕ್ಷ ಮತದಾರರ ಹೆಸರನ್ನು ಕೈಬಿಡಲಾಗಿದೆ. ಕೈಬಿಟ್ಟ ಮತದಾರರ ಪಟ್ಟಿಯನ್ನು ನೀಡದೆ, ಚುನಾವಣಾ ಆಯೋಗ ಪರೋಕ್ಷವಾಗಿ ಬಿಜೆಪಿಗೆ ಬೆಂಬಲಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.

Bengaluru Power Cut: ಆ.16,17ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಆ.16,17ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

Bengaluru Power Cut: ಬೆಂಗಳೂರು ನಗರದ 220/66/11 ಕೆ.ವಿ. ಇ.ಪಿ.ಐ.ಪಿ ಸ್ಟೇಷನ್‌ನಲ್ಲಿ 31.5 ಎಂ.ವಿ.ಎ ಶಕ್ತಿ ಪರಿವರ್ತಕ -3 ರ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಆ.16ರಂದು ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

Cylinder Blast: ಸಿಲಿಂಡರ್ ಸ್ಫೋಟ; ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಸಿಲಿಂಡರ್‌ ಸ್ಫೋಟ; ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

Cylinder Blast in Bengaluru: ಸಿಲಿಂಡರ್ ಸ್ಫೋಟದ ಸ್ಥಳದಲ್ಲಿ ಶುಕ್ರವಾರ ಎಸ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಈ ಸ್ಫೋಟದಿಂದಾಗಿ ಬಾಲಕ ಮುಬಾರಕ್ ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ನೂರಾರು ಮಂದಿ ಸ್ಥಳೀಯರು ಜಮಾಯಿಸಿದ್ದಾರೆ.

KN Rajanna: ಮೂವರು ಪಿತೂರಿ ಮಾಡಿ ಸಚಿವ ಸ್ಥಾನ ತೆಗೆಸಿದ್ದಾರೆ: ಕೆ.ಎನ್‌. ರಾಜಣ್ಣ ಸ್ಫೋಟಕ ಹೇಳಿಕೆ

ಮೂವರು ಪಿತೂರಿ ಮಾಡಿ ಸಚಿವ ಸ್ಥಾನ ತೆಗೆಸಿದ್ದಾರೆ: ರಾಜಣ್ಣ ಸ್ಫೋಟಕ ಹೇಳಿಕೆ

KN Rajanna Press Meet: ನಾನು ಅಧಿಕಾರಕ್ಕೆ ಅಂಟಿಕೊಂಡು ಕೂತಿಲ್ಲ. ಸಮಯ ಬಂದಾಗ ಸಚಿವ ಸ್ಥಾನವನ್ನು ತೆಗೆದುಕೊಳ್ಳುತ್ತೇನೆ. ಆದರೆ ಈಗ ನಾನು ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ ಎಂದು ತುಮಕೂರಿನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

Gubbi News: ಕೆ.ಎನ್.ರಾಜಣ್ಣ ಪರ ಬ್ಯಾಟಿಂಗ್ ಮಾಡಿದ ಗುಬ್ಬಿ ವಾಲ್ಮೀಕಿ ಮುಖಂಡರು

ರಾಜಣ್ಣ ಪರ ಬ್ಯಾಟಿಂಗ್ ಮಾಡಿದ ಗುಬ್ಬಿ ವಾಲ್ಮೀಕಿ ಮುಖಂಡರು

ಸತ್ಯ ಹೇಳಿದ್ದಕ್ಕೆ ಕಾಂಗ್ರೆಸ್ ದಲಿತರಿಗೆ ಶಿಕ್ಷೆ ನೀಡಿದೆ. ದಲಿತರು ಸತ್ಯ ಹೇಳುವಂತಿಲ್ಲವೇ, ಸದಾಕಾಲ ದೀನ ದಲಿತರ ಪರ ನಿಲ್ಲುವ ರಾಜಣ್ಣ ಅವರ ವ್ಯಕ್ತಿತ್ವ ಎಲ್ಲರಿಗೂ ತಿಳಿದಿದೆ. ನೇರವಾದಿ ಮತಪಟ್ಟಿಯ ಚಿತ್ರಣ ಸಿದ್ಧವಾದಾಗ ನಮ್ಮದೇ ಸರ್ಕಾರ ಇತ್ತು. ಅಂದು ಎಲ್ಲವನ್ನೂ ಗಮನಿಸಬೇಕಿತ್ತು ಎಂದು ನೇರವಾಗಿ ಸತ್ಯ ಹೇಳಿದ್ದಕ್ಕೆ ವಜಾ ಶಿಕ್ಷೆ ನೀಡಿದ್ದು ಸರಿಯಲ್ಲ. ವಾಲ್ಮೀಕಿ ಸಮಾಜವನ್ನು ಕಡೆಗಣಿಸಿದ್ದಾರೆ. ನಮ್ಮ ಜನಾಂಗದ ಬೆಳವಣಿಗೆ ಸಹಿಸದ ಕೆಲವರ ಕುತಂತ್ರಕ್ಕೆ ನಾಗೇಂದ್ರ ಅವರು ಮೊದಲ ಬಲಿ

Self Harming: ಮೈಸೂರಿನಲ್ಲಿ ಘೋರ ಘಟನೆ; ಮಗನಿಗೆ ನೇಣು ಹಾಕಿ, ತಾಯಿಯೂ ಆತ್ಮಹತ್ಯೆ, ಮಗಳು ಪಾರು

ಮೈಸೂರಿನಲ್ಲಿ ಘೋರ ಘಟನೆ; ಮಗನಿಗೆ ನೇಣು ಹಾಕಿ, ತಾಯಿಯೂ ಆತ್ಮಹತ್ಯೆ

Self Harming: ಮೈಸೂರಿನ ಮುರುಡನಹಳ್ಳಿಯಲ್ಲಿ ಘಟನೆ ನಡೆದಿದೆ. ಕೌಟುಂಬಿಕ ಕಾರಣಕ್ಕೆ ಬೇಸರಗೊಂಡು ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದ್ದು, ಮೈಸೂರಿನ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರು ವರ್ಷದ ಮಗಳಿಗೂ ನೇಣು ಬಿಗಿಯಲು ತಾಯಿ ಯತ್ನಿಸಿದ್ದಾಳೆ. ಆದರೆ ಮಗಳು ಸಾವಿನಿಂದ ಪಾರಾಗಿದ್ದಾಳೆ.

ಐಸ್ ಮೇಕ್ ರೆಫ್ರಿಜರೇಷನ್ 2025ರ 1ನೇ ತ್ರೈಮಾಸಿಕದಲ್ಲಿ ಆದಾಯದಲ್ಲಿ ಸದೃಢ ಪ್ರಗತಿ; ಕಾರ್ಯತಂತ್ರೀಯ ಹೂಡಿಕೆಗಳಿಂದ ದೀರ್ಘಾವಧಿ ವಿಸ್ತರಣೆ

ಐಸ್ ಮೇಕ್ ರೆಫ್ರಿಜರೇಷನ್: 1ನೇ ತ್ರೈಮಾಸಿಕದಲ್ಲಿ ಆದಾಯದಲ್ಲಿ ಸದೃಢ ಪ್ರಗತಿ

ತ್ರೈಮಾಸಿಕದಲ್ಲಿ ಕಂಪನಿಯು ಕಾರ್ಯಾಚರಣೆಗಳಿಂದ ಕ್ರೋಢೀಕೃತ ಆದಾಯ ₹111.50 ಕೋಟಿ ವರದಿ ಮಾಡಿದ್ದು ಕ್ಯೂ1 ಎಫ್.ವೈ.25ರಲ್ಲಿ ₹85.23 ಕೋಟಿಗೆ ಹೋಲಿಸಿದರೆ ಶೇ.30ರಷ್ಟು ಪ್ರಗತಿ ವರ್ಷದಿಂದ ವರ್ಷಕ್ಕೆ ದಾಖಲಿಸಿದೆ. ಈ ಸಾಧನೆಯು ಕೋಲ್ಡ್ ರೂಮ್ಸ್, ಇಂಡಸ್ಟ್ರಿಯಲ್ ರೆಫ್ರಿಜರೇಷನ್ ಮತ್ತು ಸಾರಿಗೆ ರೆಫ್ರಿಜಿರೇಷನ್ ವಲಯಗಳಲ್ಲಿ ಸತತ ಬೇಡಿಕೆಯನ್ನು ಬಿಂಬಿಸುತ್ತಿದ್ದು ಅದು ಸದೃಢವಾದ ಆರ್ಡರ್ ಪೂರೈಕೆ ಮತ್ತು ಮಾರುಕಟ್ಟೆ ವ್ಯಾಪ್ತಿ ಹೆಚ್ಚಳದ ಬೆಂಬಲ ಪಡೆದಿದೆ

ಲ್ಯಾಂಡ್‌ ಲಾರ್ಡ್‌ ದುನಿಯಾ ವಿಜಯ್‌ ಜತೆಯಾದ ʼಡೇರ್‌ ಡೆವಿಲ್‌ ಹೀರೋʼ

ಲ್ಯಾಂಡ್‌ ಲಾರ್ಡ್‌ ದುನಿಯಾ ವಿಜಯ್‌ ಜತೆಯಾದ ʼಡೇರ್‌ ಡೆವಿಲ್‌ ಹೀರೋʼ

ಡೇರ್‌ ಡೆವಿಲ್‌ ಮುಸ್ತಾಫ ಸಿನಿಮಾದ ಅಭಿನಯ ಕಂಡು ಶಿಶಿರ್‌ ಅವರಿಗೆ ಇಂಡಸ್ಟ್ರಿ ಕಡೆಯಿಂದ ಒಳ್ಳೆ ಅವಕಾಶಗಳೇ ಅರಸಿ ಬಂದಿದೆ. ಡೇರ್‌ ಡೆವಿಲ್‌ ಚಿತ್ರದ ನಂತರ ದುನಿಯಾ ವಿಜಯ್‌ ಅಭಿನಯದ ‘ಲ್ಯಾಂಡ್‌ ಲಾರ್ಡ್‌ʼ ಸಿನಿಮಾದಲ್ಲಿ ಶಿಶಿರ್‌ ಉತ್ತಮ ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Suspicious Blast: ಬೆಂಗಳೂರಿನಲ್ಲಿ ನಿಗೂಢ ಸ್ಫೋಟ;  ಘಟನಾ ಸ್ಥಳಕ್ಕೆ ಸಿಎಂ ಭೇಟಿ

ನಿಗೂಢ ಸ್ಫೋಟದ ಸ್ಥಳಕ್ಕೆ ಸಿಎಂ ಭೇಟಿ

ವಿಲ್ಸನ್‌ ಗಾರ್ಡ್‌ನ ಚಿನ್ನಯ್ಯನ ಪಾಳ್ಯದಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಸಿಎಂ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ್ಕೆ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಬೆಂಗಳೂರು ನಗರ ಆಯುಕ್ತ ಸೀಮಂತ್‌ ಕುಮಾರ್‌ ಅವರೂ ಭೇಟಿ ನೀಡಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು.

Loading...