Monday, 13th May 2024

ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ ನೀರಿನ ಪಾಠಗಳು

ಜಲ ಕ್ರಾಂತಿ

 ಸಂಗಮೇಶ ಆರ್.ನಿರಾಣಿ, 

ಉತ್ತರ ಕರ್ನಾಟಕ ಸಮಗ್ರ ನೀರಾವರಿ ಅಭಿವೃದ್ಧಿಿ ಸಮಿತಿಯ ಸದಸ್ಯರಾದ ನಮಗೆ ಕೇಂದ್ರ ಜಲಶಕ್ತಿಿ ಮಂತ್ರಿಿ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡುವ ಒಂದು ಅಪರೂಪದ ಅವಕಾಶ ಕಳೆದ ವಾರ ಲಭಿಸಿತ್ತು. ಶೇಖಾವತ್ ಅವರನ್ನು ಲೋಕಸಭೆಯ ಅವರದೇ ಕಚೇರಿಯಲ್ಲಿ ಭೇಟಿ ಮಾಡಿದೆವು. ಸಮಯಕ್ಕೆೆ ಸರಿಯಾಗಿ ಅವರ ಕಚೇರಿ ಬಳಿಗೆ ಬಂದಾಗ ಸ್ವತಃ ಸಚಿವರೇ ಎದ್ದು ಕಚೇರಿಯ ದ್ವಾಾರದವರೆಗೆ ಬಂದು ನಮ್ಮನ್ನು ಸ್ವಾಾಗತಿಸಿದರು. ಅವರ ಸೌಜನ್ಯದ ನಡೆ ನನ್ನ ಮನಸ್ಸನ್ನು ಆವರಿಸಿತು. ಅಧಿಕಾರದಲ್ಲಿದ್ದವರು ಜನರ ಬಳಿಗೆ ಬಂದು ಅವರ ಅಹವಾಲು ಕೇಳುವುದು ನಿಜಕ್ಕೂ ಒಂದು ಅಪರೂಪದ ಸಂಗತಿ.

ಡಾ.ಝಾಕೀರ್ ಹುಸೇನ್ ರಾಷ್ಟ್ರಪತಿಯಾಗಿದ್ದಾಾಗ, ಅವರನ್ನು ಭೇಟಿಯಾಗಲು ಅವರ ಹುಟ್ಟೂರಿನ ಕಿರಾಣಿ ವರ್ತಕರೊಬ್ಬರು ಬರುತ್ತಿಿದ್ದರಂತೆ. ಹುಸೇನ್ ಅವರು ತಾವೇ ಸ್ವತಃ ದ್ವಾಾರದ ಬಳಿಗೆ ಬಂದು ಆ ವರ್ತಕ ಮಹಾಶಯರನ್ನು ರಾಷ್ಟ್ರಪತಿ ಭವನದ ಒಳಗೆ ಕರೆದುಕೊಂಡು ಹೋಗುತ್ತಿಿದ್ದರು. ವಿದೇಶಿ ರಾಷ್ಟ್ರಪತಿಗಳು ರಾಜಭವನಕ್ಕೆೆ ಭೇಟಿ ನೀಡಿದಾಗ ಮಾತ್ರ ಭಾರತದ ರಾಷ್ಟ್ರಪತಿಗಳು ದ್ವಾಾರದ ಬಳಿಗೆ ಹೋಗಿ ಕರೆತರುವ ಸಂಪ್ರದಾಯವಿದೆ. ಇದು ರಾಷ್ಟ್ರಪತಿ ಭವನದ ಶಿಷ್ಟಾಾಚಾರ. ಒಮ್ಮೆೆ, ಕಿರಾಣಿ ವರ್ತಕನನ್ನು ಕರೆತರಲು ದ್ವಾಾರದ ಬಳಿಗೆ ಹೋಗಬೇಡಿರಿ ಎಂದು ಅಧಿಕಾರಿಗಳು ರಾಷ್ಟ್ರಪತಿ ಹುಸೇನ್‌ರಿಗೆ ಸಲಹೆ ನೀಡಿದರಂತೆ. ಅದಕ್ಕೆೆ ಡಾ.ಹುಸೇನ್ ಅವರು ಬಾಯ್ತುಂಬ ನಕ್ಕು ಹೇಳಿದರಂತೆ, ‘ಈ ವರ್ತಕ ಬಾಲ್ಯದಲ್ಲಿ ನಮ್ಮ ಕುಟುಂಬಕ್ಕೆೆ ಉದ್ರಿಿ ಕಿರಾಣಿ ರೇಶನ್ ಕೊಡುತ್ತಿಿದ್ದರು. ಅವರ ಕೊಟ್ಟ ಆಹಾರ ಧಾನ್ಯ ಉಂಡು ಬೆಳೆದವನು ನಾನು. ಅವರ ನೆರವು ಇಲ್ಲದಿದ್ದರೆ ನಾನು ಈ ಸ್ಥಾಾನದಲ್ಲಿ ಕುಳಿತುಕೊಳ್ಳುತಿದ್ದೆೆನೋ, ಇಲ್ಲವೋ ಗೊತ್ತಿಿಲ್ಲ. ಶಿಷ್ಟಾಾಚಾರ ಪಕ್ಕಕ್ಕೆೆ ಹಿಡಿರಿ. ನಾನು ಗೇಟ್ ಬಳಿಗೆ ಬಂದು ಆ ಪುಣ್ಯಾಾತ್ಮನನ್ನು ಕರೆತರುತ್ತೇನೆ’ ಎಂದು ಡಾ.ಹುಸೇನ್ ಹೇಳಿದರಂತೆ. ಸಚಿವ ಶೇಖಾವತ್ ಅವರ ನಡೆ ನೋಡಿದ ತಕ್ಷಣ ನನ್ನ ಮನಸ್ಸಿಿನಲ್ಲಿ ಈ ಮೇಲಿನ ಘಟನೆ ಸುಳಿದು ಹೋಯಿತು.

ಶೇಖಾವತ್ ತುಂಬ ಸ್ಪಷ್ಟವಾಗಿ ಮಾತನಾಡುತ್ತಾಾರೆ. ಅವರು ಮಾತನಾಡತೊಡಗಿದರೆ ಕೇಳಬೇಕು ಎನ್ನುವ ಆಸಕ್ತಿಿ ಮೂಡುತ್ತದೆ. ಅವರ ಆಳವಾದ ಜ್ಞಾಾನ, ವಿಷಯ ಸಂಗ್ರಹ, ಮಾತಿನ ಸ್ಪಷ್ಟತೆ ಎದ್ದು ಕಾಣುತ್ತದೆ. ಕುಸ್ತಿಿ ಪಟುವಿನಂತಿರುವ ಅವರದು ಆಕರ್ಷಕ ವ್ಯಕ್ತಿಿತ್ವ.
ನೀರು ನಿರ್ವಹಣೆ ಯಶಸ್ವಿಿಯಾಗಲು ಜನ ಆಂದೋಲನ ಸಂಘಟಿಸಬೇಕು ಬಾಗಲಕೋಟೆಯವರಾದ ನೀವು ನೀರಾವರಿ ಅಭಿವೃದ್ಧಿಿಗೆ ಶ್ರಮಿಸುತ್ತಿಿರುವುದು ಸಂತೋಷದ ಸಂಗತಿ ಎಂದು ಅವರು ಮಾತು ಆರಂಭಿಸಿದರು. ನಾವು ಕಾಳಿ ನದಿಯನ್ನು ಮಹದಾಯಿ-ಮಲಪ್ರಭಾ ನದಿಗಳಿಗೆ ಜೋಡಿಸುವ ವರದಿಯನ್ನು ಅವರಿಗೆ ಸಲ್ಲಿಸಿದೆವು. ನಾವು ಹೇಳುವುದನ್ನೆೆಲ್ಲ ತುಂಬ ಆಸಕ್ತಿಿಯಿಂದ ಕೇಳಿದರು. ಮಧ್ಯದಲ್ಲಿ ಒಂದು ಶಬ್ದಕೂಡ ಮಾತನಾಡಲಿಲ್ಲ. ಚೆನ್ನಾಾಗಿ ಕೇಳುವ ಕಲೆಯನ್ನು ಅವರು ಅರಿತುಕೊಂಡಿದ್ದಾಾರೆ. ನಾವು ತೋರಿಸಿದ ನಕ್ಷೆ ನೋಡಿದರು, ವಿಡಿಯೋ ವೀಕ್ಷಿಸಿದರು.

ಅವರು ದೇಶದ ನೀರು, ನೀರಿನ ಸಮಸ್ಯೆೆ, ಅದಕ್ಕೆೆ ಪರಿಹಾರ, ನೀರಿನ ಮಹತ್ವ, ತಾವು ಹಾಕಿಕೊಂಡ ಯೋಜನೆಗಳು ಅದಕ್ಕೆೆ ಸಂಬಂಧಿಸಿದ ವಿವರ ಎಲ್ಲವನ್ನು ನಮಗೆ ಹೇಳತೊಡಗಿದರು. ಅವರು ಒಂದು ಚೆಂದದ ಕಥೆಯೊಂದಿಗೆ ಮಾತು ಆರಂಭಿಸಿದರು; ರಾಜಸ್ತಾಾನದ ‘ಲಪ್ಪೇರಿಯಾ’ ಎಂಬ ಹಳ್ಳಿಿಯ ಲಕ್ಷ್ಮಣಸಿಂಗ್ ಎಂಬ ಯುವಕ 40 ವರ್ಷಗಳ ಹಿಂದೆ ಜಲಕ್ರಾಾಂತಿ ಮಾಡಿದ ಕಥೆ ಅದು. ಆ ಹಳ್ಳಿಿಯಲ್ಲಿ ಕುಡಿಯುವುದಕ್ಕೆೆ ಒಂದು ಹನಿ ನೀರು ಸಿಗುತ್ತಿಿರಲಿಲ್ಲ. ಜನರನ್ನು ಸಂಘಟಿಸಿ ಗ್ರಾಾಮದ 19 ಬಾವಿಗಳನ್ನು ಸ್ವಚ್ಛ ಮಾಡುವ ಕಾರ್ಯ ಆರಂಭಿಸಿದನು. ತಕ್ಷಣ ಕುಡಿಯುವುದಕ್ಕೆೆ ನೀರು ಸಿಗತೊಡಗಿತು. ಲಕ್ಷಣಸಿಂಗ್ ಸಲಹೆ ಪ್ರಕಾರ ಗ್ರಾಾಮದ ಎಲ್ಲರೂ ಮಳೆ ನೀರು ಕೊಯ್ಲು ಮಾಡಲು ನಿರ್ಧರಿಸಿದರು.

ಶ್ರಮದಾನ ಮಾಡಿ ಆರು ಕೆರೆಗಳನ್ನು ಕಟ್ಟಲಾಯಿತು. ಗ್ರಾಾಮದಲ್ಲಿ ಹನಿ ನೀರಾವರಿ ಪದ್ಧತಿ ಜಾರಿಗೆ ತರುವ ವ್ಯವಸ್ಥೆೆ ಮಾಡಿದ. ಈ ಯುವಕನ ಸಾಹಸದಿಂದ ಲಪ್ಪೇರಿಯಾ ಗ್ರಾಾಮ ನೀರಿನ ವಿಷಯದಲ್ಲಿ ಬಹುದೊಡ್ಡ ಸಾಧನೆ ಮಾಡಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಊರಿನ ಹೆಸರು ಗಮನ ಸೆಳೆಯಿತು. ಇಸ್ರೇಲ್ ದೇಶದ ಪ್ರಮುಖರು ರಾಜಸ್ತಾಾನದ ಲಪ್ಪೇರಿಯಾ ಗ್ರಾಾಮಕ್ಕೆೆ ಭೇಟಿ ನೀಡಿ ಲಕ್ಷ್ಮಣಸಿಂಗ್ ಅವರೊಂದಿಗೆ ಮಾತನಾಡಿ ಮಾಹಿತಿ ಸಂಗ್ರಹಿಸಿದರು. ಹೆಮ್ಮೆೆಯ ಸಂಗತಿಯೆಂದರೆ ಲಕ್ಷ್ಮಣಸಿಂಗ್‌ನಿಂದ ಪ್ರೇರಣೆ ಪಡೆದು ಇಸ್ರೇಲ್ ದೇಶ ನೀರು ನಿರ್ವಹಣೆಯಲ್ಲಿ ಈಗ ಜಗತ್ತಿಿಗೆ ಮಾದರಿಯಾಗಿ ನಿಂತಿದೆ. ಭಾರತದ ಪ್ರತಿಯೊಂದು ಗ್ರಾಾಮಕ್ಕೆೆ ಒಬ್ಬ ಲಕ್ಷ್ಮಣಸಿಂಗ್ ಬೇಕಾಗಿದ್ದಾಾರೆ. ನೀವು ಬಾಗಲಕೋಟ ಯುವಕರು ನಿಮ್ಮ ನಿಮ್ಮ ಊರುಗಳಲ್ಲಿ ಲಕ್ಷ್ಮಣಸಿಂಗ್ ಆಗುತ್ತೀರಾ? ಎಂದು ಪ್ರಶ್ನಿಿಸಿ ನಕ್ಕರು.

ಅವರು ಮಾತು ಮುಂದುವರಿಸಿ ‘ಭಾರತದಲ್ಲಿ ಒಂದು ಕಿಲೋ ಭತ್ತ ಬೆಳೆಯಲು 560 ಲೀಟರ್ ನೀರು ಬೇಕು. ಚೀನಾದಲ್ಲಿ ಕೇವಲ 350 ಲೀಟರ್‌ನಲ್ಲಿ ಒಂದು ಕಿಲೋ ಭತ್ತ ಬೆಳೆಯುತ್ತಾಾರೆ. ಭಾರತದಲ್ಲಿ ನೀರಿನ ಫಲ ಉತ್ಪಾಾದಕತೆ ಜಗತ್ತಿಿನಲ್ಲಿಯೇ ತೀರ ಕಡಿಮೆ ಇರುವುದು ಅತ್ಯಂತ ನೋವಿನ ಸಂಗತಿ. ಕಳೆದ 2 ವರ್ಷಗಳಿಂದ ನೀರಿನ ನಿರ್ವಹಣೆ ಜಾಗೃತಿ ಕ್ರಮೇಣ ಮೂಡತೊಡಗಿದೆ. 2035 ರ ವೇಳೆಗೆ ಭಾರತ ನೀರಿನ ಸಮಸ್ಯೆೆಯಿಂದ ಪೂರ್ಣ ಮುಕ್ತವಾಗಿ ಬೆಳೆಯಲು ಯೋಜನೆ ರೂಪಿಸಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ 10 ಸಾವಿರ ಕೋಟಿ ರು. ಭಾರತದ ಕುಡಿಯುವ ನೀರಿನ ಯೋಜನೆಗಾಗಿ ತೆಗೆದಿರಿಸಲಾಗಿದೆ. ಜಿಲ್ಲಾಾ ಅಧಿಕಾರಿಗಳಿಗೆ ನೀರು ನಿರ್ವಹಣೆ ಹೊಣೆ ವಹಿಸಲಾಗಿದೆ. ಅವರನ್ನು ನೇರವಾಗಿ ಜವಾಬ್ದಾಾರರನ್ನಾಾಗಿ ಮಾಡಲಾಗಿದೆ. ಕುಡಿಯುವ ನೀರಿಗೆ ಬೇಕಾಗುವ ಹಣವನ್ನು ಜಿಲ್ಲಾಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಈ ಯೋಜನೆ ಕಾರ್ಯರೂಪಕ್ಕೆೆ ತರಲು 256 ಜಿಲ್ಲೆೆಗಳನ್ನು ಮೊದಲು ಹಂತದಲ್ಲಿ ಆಯ್ಕೆೆ ಮಾಡಿಕೊಳ್ಳಲಾಗಿದೆ. ಈ ಯೋಜನೆಯಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆೆಯನ್ನು ಸೇರಿಸಲಾಗಿದೆ. ನೀವೆಲ್ಲರೂ ಇದಕ್ಕೆೆ ಸಹಯೋಗ ನೀಡಬೇಕು ಎಂದರು.

ಜನರೇ ನೀರಿನ ಆಂದೋಲನ ಆರಂಭಿಸಬೇಕು; ಜನರ ಸಹಯೋಗ ಮತ್ತು ಸಹಭಾಗಿತ್ವದಿಂದ ಭಾರತದಲ್ಲಿ ಜಲಕ್ರಾಾಂತಿಯನ್ನು ಮಾಡಬಹುದು. ಪ್ರಧಾನಮಂತ್ರಿಿಗಳು ಈ ವಿಷಯವನ್ನು ತಮ್ಮ ‘ಮನ್‌ಕಿ ಬಾತ್’ನಲ್ಲಿ ಹೇಳಿದ್ದಾಾರೆ. ಮಹಾರಾಷ್ಟ್ರದ ಕೆಲವು ಹಳ್ಳಿಿಗಳಲ್ಲಿ ಜನರು ಸಂಘಟಿತರಾಗಿ ತಮ್ಮ ಗ್ರಾಾಮದ ನೀರಿನ ಸಮಸ್ಯೆೆ ತಾವೇ ಬಗೆಹರಿಸಲು ಮಾರ್ಗೋಪಾಯ ರೂಪಿಸುತ್ತಿಿದ್ದಾಾರೆ. ಮಳೆ ನೀರು ಕೊಯ್ಲು, ಕೆರೆಗಳ ರಕ್ಷಣೆ, ಜಲಮೂಲಗಳ ರಕ್ಷಣೆ, ಹನಿ ನೀರಾವರಿಗೆ ಆದ್ಯತೆ ಕೊಡುತ್ತಿಿದ್ದಾಾರೆ. ಕರ್ನಾಟಕದ ಅನೇಕ ಹಳ್ಳಿಿಗಳಲ್ಲಿ ರೈತರು ತಮ್ಮ ಹೊಲಗಳಲ್ಲಿ ಕೆರೆ ಕಟ್ಟೆೆಗಳನ್ನು ನಿರ್ಮಿಸುವ ವಿಷಯ ನನ್ನ ಗಮನಕ್ಕೆೆ ಬಂದಿದೆ. ಇದೊಂದು ಒಳ್ಳೆೆಯ ಬೆಳವಣಿಗೆ. ನೀವೆಲ್ಲರೂ ರೈತರಿಗೆ ಮಾರ್ಗದರ್ಶನ ನೀಡಬೇಕು ಅವರಲ್ಲಿ ಹುರುಪು ತುಂಬಬೇಕು. ಸಣ್ಣ ಪುಟ್ಟ ತೊಂದರೆಗಳಿದ್ದರೆ ಪರಿಹರಿಸಬೇಕು’ ಅವರು ಮಾರ್ಗದರ್ಶನ ಮಾಡಿದರು.

ಒಂದೇ ನ್ಯಾಾಯ ಮಂಡಳಿ; ದೇಶದ ಜಲ ವಿವಾದ ಇತ್ಯರ್ಥಕ್ಕೆೆ ಒಂದೇ ನ್ಯಾಾಯ ಮಂಡಳಿ ರಚಿಸುವ ಉದ್ದೇಶವಿರುವ ವಿಚಾರ ಅವರು ವಿವರಿಸಿದರು. (ವಿಧೇಯಕವನ್ನು ಇದೇ ವರ್ಷ ಜುಲೈ 31 ಲೋಕಸಭೆಯಲ್ಲಿ ಅಂಗೀಕಾರವಾಗಿದೆ) ಸದ್ಯ ದೇಶದಲ್ಲಿ ಕಾವೇರಿ, ಮಹದಾಯಿ, ಕೃಷ್ಣಾಾ, ರಾವಿ, ಗೋದಾವರಿ, ಬಿಯಾಸ್, ನರ್ಮದಾ ಹೀಗೆ ಅಂತರ್‌ರಾಜ್ಯಗಳ ವಿವಾದ ಕುರಿತು 9 ನ್ಯಾಾಯಮಂಡಳಿಗಳಿವೆ. ಇನ್ನು ಮುಂದೆ ಇವುಗಳ ಬದಲಿಗೆ ದೇಶಾದ್ಯಂತ ಏಕರೂಪದ ಒಂದೇ ಟ್ರಿಿಬ್ಯೂನಲ್ ರಚಿಸಿ ಆ ಮೂಲಕ ವಿವಾದಗಳ ತ್ವರಿತಗತಿಯಲ್ಲಿ ಇತ್ಯರ್ಥ ನಡೆಸಲಾಗುವುದು. ಸುಮಾರು 33 ವರ್ಷಗಳಷ್ಟು ಹಳೆಯ ವಿವಾದಗಳಿವೆ. ಇವುಗಳನ್ನೆೆಲ್ಲ ಬೇಗನೆ ಪರಿಹರಿಸುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತನ್ನ ಯಶಸ್ವಿಿ- ಎರಡನೇ ಅವಧಿಯಲ್ಲಿ ಇದೇ ಮೊದಲ ಬಾರಿಗೆ ನೀರನ್ನು ಪೂಜ್ಯ ಮತ್ತು ಪರಿಪೂರ್ಣ ದೃಷ್ಟಿಿಯಿಂದ ನೋಡುವ ವಿಧಾನ ಜಾರಿಯಲ್ಲಿ ತಂದಿದೆ. ಮಳೆ ನೀರು ಕೊಯ್ಲು, ವ್ಯಕ್ತಿಿಗತವಾಗಿ ಅವಶ್ಯವಿರುವಷ್ಟೇ ನೀರಿನ ಬಳಕೆ, ಅಂತರ್ಜಲ ರಕ್ಷಣೆಗೆ ಕ್ರಮ, ಬಳಸಿದ ನೀರು ಶುದ್ಧೀಕರಿಸಿ ಪುನರ್ ಬಳಸುವುದು, ಕೃಷಿ ಕೈಗಾರಿಕೆಗಳಿಗೆ ತಾಂತ್ರಿಿಕ ವಿಧಾನದ ಮೂಲಕ ನೀರಿನ ಬಳಕೆ, ಇವು ನೀರು ಸಂರಕ್ಷಣೆಯ ಪ್ರಮುಖ ಸ್ತಂಭಗಳಾಗಿವೆ. ಈ ಐದು ವಿಧಾನಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆೆ ತಂದರೆ ದೇಶದಲ್ಲಿ ನೀರಿನ ವಿಷಯದಲ್ಲಿ ಬಹುದೊಡ್ಡ ಬದಲಾವಣೆ ಕಾಣಬಹುದು. ನಳದ ಮೂಲಕ ಪ್ರತಿ ಗ್ರಾಾಮಕ್ಕೆೆ ಕುಡಿಯುವ ನೀರು ಪೂರೈಸುವ ಯೋಜನೆ ಕೇಂದ್ರ ಸರಕಾರ ರೂಪಿಸಿದೆ. ಇದು ನಮ್ಮ ಸರಕಾರದ ಬಹುದೊಡ್ಡ ಜನಪರ ಯೋಜನೆಯಾಗಿದೆ. ನೀವೆಲ್ಲ ದಕ್ಷತೆಯಿಂದ ಕೆಲಸ ಮಾಡಿದರೆ ಈ ಯೋಜನೆ ಯಶಸ್ವಿಿಯಾಗುತ್ತದೆ’. ಜನರ ಸಹಭಾಗಿತ್ವ, ಜನಾಂದೋಲನದಿಂದ ಮಾತ್ರ ಜಲಪೂರ್ಣತೆ ಸಾಧಿಸುವುದು ಸಾಧ್ಯವಾಗುತ್ತದೆ.

ಜನಾಂದೋಲನದಿಂದ ಜಗತ್ತಿಿನ ಅನೇಕ ರಾಷ್ಟ್ರಗಳು ಪ್ರಗತಿ ಸಾಧಿಸಿವೆ. ನದಿ, ಹಳ್ಳ, ಕೆರೆಗಳ ಶುದ್ಧೀಕರಣದಲ್ಲಿ ಜನರ ಸಹಭಾಗಿತ್ವ ಬಹುದೊಡ್ಡ ಕೆಲಸ ಮಾಡುತ್ತದೆ. ಗಂಗಾ ನದಿಯ ಶುದ್ಧೀಕರಣದಲ್ಲಿ ಜನಶಕ್ತಿಿಯನ್ನು ಸಮರ್ಪಕವಾಗಿ ಹರಿಯಾಣ ಮಾದರಿಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತದೆ. ಅಂದರೆ ಹರಿಯಾಣದಲ್ಲಿ ಅಲ್ಲಿನ ಮುಖ್ಯಮಂತ್ರಿಿ ಮನೋಹರ್ ಲಾಲ್ ಖಟ್ಟರ್ ಅವರು ಅಲ್ಲಿಯ ರೈತರು ಭತ್ತ ಬೆಳೆಯುವುದಕ್ಕೆೆ ಹೆಚ್ಚು ನೀರು ಬಳಸುವುದನ್ನು ಗಮನಿಸಿದರು. ಭತ್ತಕ್ಕೆೆ ಗ್ಯಾಾರೆಂಟಿ ಮಾರುಕಟ್ಟೆೆಯಿದೆ. ಈ ಕಾರಣಕ್ಕೆೆ ಅಲ್ಲಿ ರೈತರು ಭತ್ತ ಬೆಳೆಯುತ್ತಿಿದ್ದಾಾರೆ. ಭತ್ತದ ಬದಲಾಗಿ ಪರ್ಯಾಯ ಬೆಳೆ ಬೆಳೆಯುವುದಕ್ಕಾಾಗಿ ಅವರು ಮಾರ್ಗ ಕಂಡು ಹಿಡಿದರು.

ಗೋವಿನ ಜೋಳ ಬೆಳೆಯುವ ರೈತರಿಗೆ ಪ್ರತಿ ಎಕರೆಗೆ 2000 ರು. ಸಹಾಯಧನ ನೀಡುವುದಾಗಿ ಮುಖ್ಯಮಂತ್ರಿಿ ಖಟ್ಟರ್ ಘೋಷಿಸಿದರು. ಒಂದೇ ಏಟಿಗೆ 18,000 ಹೆಕ್ಟೇರಿನಲ್ಲಿ ಭತ್ತ ಬೆಳೆಯುವುದನ್ನು ನಿಲ್ಲಿಸಿ, ರೈತರು ಗೋವಿನ ಜೋಳ ಬೆಳೆಯತೊಡಗಿದ್ದಾಾರೆ. ಅದೇ ರೀತಿ ಮಹಾರಾಷ್ಟ್ರದ ಮುಖ್ಯಮಂತ್ರಿಿ ದೇವೇಂದ್ರ ಪಡ್ನವೀಸ್ ಕಬ್ಬು ಬೆಳೆಯುವುದಕ್ಕೆೆ ಕಡ್ಡಾಾಯವಾಗಿ ‘ಡ್ರಿಿಪ್ ಇರಿಗೇಶನ್’ ಮಾಡಬೇಕು ಎಂಬ ನಿಯಮ ಜಾರಿಗೆ ತಂದಿದ್ದಾಾರೆ. ಮಹಾರಾಷ್ಟ್ರದಲ್ಲಿ ಮಳೆ ನೀರು ಕೊಯ್ಲು ವಿಷಯದಲ್ಲಿ ಪ್ರಗತಿ ಸಾಧಿಸಿದ ಹಳ್ಳಿಿಗಳಿಗೆ 50 ಲಕ್ಷ ರು. ಅನುದಾನ ಕೊಡುವ ಯೋಜನೆಯನ್ನು ಸರಕಾರ ಜಾರಿಗೆ ತಂದಿದೆ. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಮಳೆ ನೀರು ಕೊಯ್ಲು ವಿಷಯದಲ್ಲಿ ನಾ ಮುಂದೆ, ತಾ ಮುಂದೆ ಎಂಬ ಸ್ಪರ್ಧೆ ಏರ್ಪಟ್ಟಿಿದೆ. ಜನನಾಯಕರ ಒಳ್ಳೆೆಯ ಚಿಂತನೆಗಳು ಪವಾಡ ಸೃಷ್ಟಿಿ ಮಾಡಬಹುದು ಅಲ್ಲವೇ?’ ಎಂದು ಅವರು ನಗುತ್ತ ಪ್ರಶ್ನಿಿಸಿದರು.
ಶೇಖಾವತ್ ಕೇಳಿದ ಈ ಪ್ರಶ್ನೆೆ ಮನಸ್ಸಿಿನಲ್ಲಿ ಗಟ್ಟಿಿಯಾಗಿ ನಿಂತುಬಿಟ್ಟಿಿದೆ.

Leave a Reply

Your email address will not be published. Required fields are marked *

error: Content is protected !!