Monday, 20th May 2024

ಕೇರಳ ಬಿಜೆಪಿ ಉಪಾಧ್ಯಕ್ಷರಿಗೆ ಐಎಸ್ ಐಎಸ್‍’ನಿಂದ ಜೀವ ಬೆದರಿಕೆ ಕರೆ

ಕೊಚ್ಚಿ: ಕೇರಳ ಬಿಜೆಪಿ ಉಪಾಧ್ಯಕ್ಷ ಡಾ.ಕೆ.ಎಸ್.ರಾಧಾಕೃಷ್ಣನ್‍ ಅವರಿಗೆ ಇಸ್ಲಾಮಿಕ್‍ ಸ್ಟೇಟ್‍ ಭಯೋತ್ಪಾದಕ ಸಂಘಟನೆಯಿಂದ ಜೀವ ಬೆದರಿಕೆ ಕರೆ ಬಂದಿದೆ.

ಕರೆ ಸ್ವೀಕರಿಸಿದಾಗ ಅತ್ತ ಕಡೆಯ ವ್ಯಕ್ತಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಐಎಸ್ ಐಎಸ್‍ ಭಯೋತ್ಪಾದಕ ಎಂದು ಹೇಳಿಕೊಳ್ಳುತ್ತಿರುವ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ ಎಂದು ಬಿಜೆಪಿ ಮುಖಂಡ ಶನಿವಾರ ತಿಳಿಸಿದ್ದಾರೆ.

ಯುಎಇ ಮೂಲದ ಸಂಖ್ಯೆಯಿಂದ ಬಿಜೆಪಿ ನಾಯಕನನ್ನು ಸಂಪರ್ಕಿಸಲು ಇನ್ನೂ ಎರಡು ಪ್ರಯತ್ನಗಳು ನಡೆದವು. ಅದರ ನಂತರ ರಾಜ್ಯ ಬಿಜೆಪಿ ಉಪಾಧ್ಯಕ್ಷರು ಎರ್ನಾಕುಳಂನಗರ ಪೊಲೀಸ್ ಆಯುಕ್ತರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದರು.

ಕಳೆದ ಕೆಲವು ವರ್ಷಗಳಲ್ಲಿ ರಾಧಾಕೃಷ್ಣನ್ ಅವರು ಐಎಸ್ ಐಎಸ್‍ ನಿಂದ ಪಡೆದ ಮೂರನೇ ಬೆದರಿಕೆ ಕರೆ ಇದಾಗಿದೆ. ಇದಕ್ಕೂ ಮೊದಲು ಕೇರಳದ ಗೃಹ ಸಚಿವರಾಗಿರುವ ಕೊಡಿಯೇರಿ ಬಾಲಕೃಷ್ಣನ್ ಅವರ ಅಧಿಕಾರಾವಧಿಯಲ್ಲಿ ಬೆದರಿಕೆ ಬಂದಾಗ ಅವರಿಗೆ ಪೊಲೀಸ್ ರಕ್ಷಣೆ ನೀಡಲಾಗಿತ್ತು. ಅವರು ಕೇರಳ ಸಾರ್ವಜನಿಕ ಸೇವಾ ಆಯೋಗದ ಮಾಜಿ ಅಧ್ಯಕ್ಷರೂ ಆಗಿದ್ದರು.

 

Leave a Reply

Your email address will not be published. Required fields are marked *

error: Content is protected !!