ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಬೆಂಗಳೂರಿನ ಪೂರ್ವ ತಾಲ್ಲೂಕಿನಲ್ಲಿ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿ ನಿರ್ಮಿಸಿಕೊಡುವಂತೆ ಸರಕಾರಕ್ಕೆೆ ಕೆ.ಆರ್.ಪುರ ಕ್ಷೇತ್ರದ ಎಸ್. ಟಿ.ಮೋರ್ಚಾ ಅಧ್ಯಕ್ಷ ಎಚ್.ದುಶ್ಯಂತ್ ರಾಜ್ ಅವರು ಮನವಿ ಮಾಡಿದರು.
ಕೆ.ಆರ್.ಪುರ ಕ್ಷೇತ್ರದ ದೇವಸಂದ್ರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಸಮಾಜದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರದಲ್ಲಿ ಹದಿನೆಂಟು ಸಾವಿರಕ್ಕೂ ಹೆಚ್ಚು ಜನರು ಇದ್ದು, ಅಗತ್ಯಕ್ಕೆ ಅನುಗುಣವಾಗಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಮಾಡಬೇಕಿದೆ. ವಾಲ್ಮೀಕಿ ಚಿಂತನೆ ಹಾಗೂ ದೂರದೃಷ್ಟಿ ಮುಂದಿನ ಪೀಳಿಗೆಗೆ ಪರಿಚಯಿಸಲು ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣ ಮಾಡುವಂತೆ ತಿಳಿಸಿದರು.
ಸಮುದಾಯದ ಕಾರ್ಯಕ್ರಮಗಳಿಗೆ ಅನುಕೂಲವಾಗಲು ಅಗತ್ಯವಾಗಿ ಸಮುದಾಯ ನಿರ್ಮಿಸಿ ಸಮಾಜದ ಅಭಿವೃದ್ಧಿಗೆ ಒತ್ತು ನೀಡುವಂತೆ ಆಗ್ರಹಿಸಿದರು. ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸುವ ಮೂಲಕ ಸಮಾದಾಯವನ್ನು ಶೈಕ್ಷಣಿಕವಾಗಿ ಮುಂಚೂಣಿಗೆ ತರುವಂತೆ ನುಡಿದರು. ಈ ಸಂದರ್ಭದಲ್ಲಿ ಈಶ್ವರಾನಂದ ಸ್ವಾಾಮಿಜಿ, ಮುಖಂಡರಾದ ಕೃಷ್ಣಪ್ಪ, ರಾಮಚಂದ್ರ, ದೇವರಾಜ್, ನಾಗರಾಜ್, ರಾಜಣ್ಣ, ಸಚಿವ ಶ್ರೀರಾಮುಲು, ಅಜಯ್ ನಾಯಕ್ ಇದ್ದರು.
|
|