Sunday, 12th May 2024

ವಿದ್ಯುತ್ ಕಳ್ಳ ಅನ್ನುವುದನ್ನು ನಿಲ್ಲಿಸಿ: ಹೆಚ್.ಡಿ.ಕುಮಾರಸ್ವಾಮಿ ಮನವಿ

ಬೆಂಗಳೂರು: ನನ್ನ ತಪ್ಪಿಗೆ ವಿಷಾದ ಕೂಡ ವ್ಯಕ್ತ ಪಡಿಸಿದ್ದೇನೆ. ನಾನು ಮಾಡಿದ ತಪ್ಪಿಗಾಗಿ ಬೆಸ್ಕಾಂ ರೂ.68,526 ದಂಡ ವಿಧಿಸಿದೆ. ಅದನ್ನು ಕಟ್ಟಿದ್ದೇನೆ. ವಿದ್ಯುತ್ ಕಳ್ಳ ಅನ್ನೋದನ್ನು ನಿಲ್ಲಿಸಿ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಮನೆಯ ದೀಪಾಲಂಕಾರಕ್ಕೆ ಪಡೆದ ಅಕ್ರಮ ವಿದ್ಯುತ್ ಸಂಪರ್ಕದ ಬಗ್ಗೆ ತಪ್ಪಿನ ಅರಿವಾದ ಕೂಡಲೇ ವಿಷಾದ ವ್ಯಕ್ತ ಪಡಿಸಿದ್ದೇನೆ. ದಂಡದ ಪಾವತಿಯನ್ನು ಮಾಡಿದ್ದೇನೆ ಎಂಬುದಾಗಿ ಹೇಳಿದರು.

ನನಗೊಂದು ಲೇಬರ್ ಬೇರೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳಿಂದ ಸೇರಿ ವಿದ್ಯುತ್ ಕಳ್ಳ ಪಟ್ಟಕೊಟ್ಟಿದ್ದಾರೆ. ನಾನು ಇದಕ್ಕಾಗಿ ವಿಷಾದ ವ್ಯಕ್ತ ಪಡಿಸಿದ್ದೇನೆ ಎಂದರು. ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದೇನೆ ಎಂಬ ಕುರಿತಂತೆ 2.25 ಕಿಲೋವ್ಯಾಟ್ ವಿದ್ಯುತ್ ಅಕ್ರಮವಾಗಿ ಬಳಕೆ ಮಾಡಿದ್ದೇನೆ ಎಂಬುದಾಗಿ ಬಿಲ್ ಕೊಟ್ಟಿದ್ದಾರೆ ಎಂದು ಹೇಳಿದರು.

ನನ್ನ ಮನೆಗೆ 33 ಕಿಲೋ ವ್ಯಾಟ್ ಗಾಗಿ ಪರ್ಮೀಷನ್ ಪಡೆದಿದ್ದೇನೆ. ಆದರೆ ದೀಪಾಲಂಕಾರಕ್ಕೆ ವಿದ್ಯುತ್ ಸಂಪರ್ಕ ಅಕ್ರಮ ಪಡೆದ ಆರೋಪದ ಹಿನ್ನಲೆಯಲ್ಲಿ ಬೆಸ್ಕಾಂ ಅಧಿಕಾರಿಗಳು ನನಗೆ 68,526 ರೂಪಾಯಿ ದಂಡದ ಬಿಲ್ ನೀಡಿದ್ದಾರೆ ಎಂದರು.

ನಾನು ಬೆಸ್ಕಾಂ ನೀಡಿದ ದಂಡದ ಬಿಲ್ ಕಟ್ಟಿದ್ದೇನೆ. ನನ್ನ ಅದೇನೋ ವಿದ್ಯುತ್ ಕಳ್ಳ ಅಂತೀರಲ್ಲ ಅದನ್ನ ನಿಲ್ಲಿಸಿಬಿಡಿ ಎಂದರು.

Leave a Reply

Your email address will not be published. Required fields are marked *

error: Content is protected !!