Friday, 19th April 2024

ಹಿರಿಯ ಮುತ್ಸದ್ದಿ ರಾಜಕಾರಣಿ ಎ.ಕೆ.ಸುಬ್ಬಯ್ಯ ಇನಿಲ್ಲ

ಹುಟ್ಟಿದ ದಿನಾಂಕ 09-08-1936
ಹುಟ್ಟಿದ ಸ್ಥಳ ವಿರಾಜ್‌ಪೇಟೆ
ಸಮರ ಸ್ಥಿತಿ ವಿವಾಹಿತ
ಮಕ್ಕಳು  5 ಮಕ್ಕಳು
ಶೈಕ್ಷಣಿಕ ಅರ್ಹತೆ ಬಿ.ಎಸ್ಸಿ, ಬಿ.ಎಲ್
ವೃತ್ತಿ  ವಕೀಲ
ನಡೆದ ಸ್ಥಾನ           1. ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ವಿಶೇಷವಾಗಿ ಉನ್ನತ  ಮಟ್ಟದ ರಾಜಕೀಯ ಭ್ರಷ್ಟಾಚಾರ  ಮತ್ತು ನೇಪಾಟಿಸಂ

2. ಇತ್ತೀಚೆಗೆ ಪ್ರಕಟವಾದ ಕನ್ನಡದಲ್ಲಿ “ಆರ್ಎಸ್ಎಸ್ ಅಂತಾರಂಗ”ಎಂಬ ಪುಸ್ತಕವನ್ನು ಬರೆದಿದ್ದಾರೆ.

ಕರ್ನಾಟಕದ ಹಿರಿಯ ಮುತ್ಸಧಿ ರಾಜಕಾರಣಿ, ರಾಜ್ಯ ಹೈಕೋರ್ಟ್ ನ ಹಿರಿಯ ವಕೀಲರಾಗಿದ್ದ ಮಾಜಿ ಶಾಸಕ ಅಜ್ಜಿಕುಟ್ಟೀರ ಕಾರ್ಯಪ್ಪ ಸುಬ್ಬಯ್ಯ ( ಎ.ಕೆ.ಸುಬ್ಬಯ್ಯ) ಅವರು ಇಂದು ನಿಧನರಾದರು. ಮೂಲತಃ ವಿರಾಜಪೇಟೆ ತಾಲೂಕಿನ ಹುದಿಕೇರಿ ಸಮೀಪದ ಕೋಣಗೇರಿಯವರಾದ ಸುಬ್ಬಯ್ಯ ಅವರಿಗೆ 86 ವರ್ಷ ಪ್ರಾಯವಾಗಿತ್ತು.

ಕೆಲ ತಿಂಗಳುಗಳಿಂದ ತಮ್ಮ ವಯೋಸಹಜ ಅನಾರೋಗ್ಯದಿಂದಾಗಿ ಬಳಲುತ್ತಿದ್ದ ಎ.ಕೆ.ಸುಬ್ಬಯ್ಯ ಅವರನ್ನು ಆಗಸ್ಟ್ 10ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತಜ್ಞವೈದ್ಯರ ತಂಡ ನಿರಂತರವಾಗಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರೂ ಪಲಕಾರಿಯಾಗಲಿಲ್ಲ. ಇದರಿಂದಾಗಿ ಇಂದು ಮಧ್ಯಾಹ್ನ 2.47 ಗಂಟೆಗೆ ಸುಬ್ಬಯ್ಯ ಅವರು ನಿಧನರಾದರು ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿತು.

ಎ.ಕೆ.ಸುಬ್ಬಯ್ಯ ಅವರು ತಮ್ಮ ಐವರು ಪುತ್ರರು ಸೇರಿದಂತೆ ನಾಡಿನಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.

ಎ.ಕೆ.ಸುಬ್ಬಯ್ಯ ಅವರ ಪ್ರಾರ್ಥಿವ ಶರೀರವನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕಿಟ್ಟು ನಂತರ ರಸ್ತೆ ಮಾರ್ಗವಾಗಿ ಕೊಡಗಿಗೆ ತರಲಾಗುವುದು.

ಮೃತ್ತರ ಅಂತ್ಯಕ್ರಿಯೆ (ಸಮಯ ಇನ್ನು ನಿಗಧಿಯಾಗಿಲ್ಲ) ಹುದಿಕೇರಿ ಸಮೀಪದ ಬೆಳ್ಳೂರಿನ ಅವರ ನೆಚ್ಚಿನ ಕಲ್ಲುಗುಂಡಿ ತೋಟದಲ್ಲಿ ನಡೆಯಲಿದೆ. ಇದಕ್ಕು ಮೊದಲು ಅವರ ಬೆಳ್ಳೂರಿನ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!