Sunday, 19th May 2024

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಬಂಧಿತ ಶಿವಲಿಂಗ ಪಾಟೀಲ ನಿವಾಸಕ್ಕೆ ಸಿಸಿಬಿ ದಾಳಿ

ಗೋಕಾಕ : ಕೆಪಿಎಸ್ ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧನವಾಗಿರುವ ಗೋಕಾಕದ ಶಿವಲಿಂಗ ಪಾಟೀಲ ಅವರ ಮಾಲೀಕತ್ವದ ಮನೆ ಹಾಗೂ ಪರ್ನೆಚೇರ್ ಅಂಗಡಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಜ.24 ರಂದು ಎಫ್ ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು 11 ಜನರನ್ನು ಬಂಧಿಸಿ, ತನಿಖೆ ನಡೆಸಿದ್ದರು. ಆರೋಪಿಗಳು ಬಾಯಿಬಿಟ್ಟ ಮಾಹಿತಿ ಪ್ರಕಾರ ಗೋಕಾಕದ ಶಿವಲಿಂಗ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಈಚೇಗೆ ಬಂಧಿಸಿದ್ದರು.

ಫೆ,22 ಮಂಗಳವಾರ ಅವರ ಮನೆ ಹಾಗೂ ತಾಲೂಕಿನ ಸಂಗನಕೇರಿಯಲ್ಲಿರುವ ಎಸ್.ಎಂ.ಕೆ ಮಾರ್ಟ್ ಎಂಬ ಹೆಸರಿನ ಅಂಗಡಿ ಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ

Leave a Reply

Your email address will not be published. Required fields are marked *

error: Content is protected !!