Monday, 20th May 2024

ಸಚಿವ ಪ್ರಭು ಚೌಹಾಣ್ ಎಡವಟ್ಟು!

ಹಾವೇರಿ: ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಅವರು ದೇಗುಲದ ಒಳಗೇ ಶೂ ಹಾಕಿಕೊಂಡು ದೇವರ ದರ್ಶನ ಪಡೆದು ಎಡವಟ್ಟು ಮಾಡಿಕೊಂಡಿದ್ದಾರೆ.

ಹಾವೇರಿ‌ ಜಿಲ್ಲೆಯ ಶಿಗ್ಗಾವಿಯ ಬಂಕಾಪುರ ಪಟ್ಟಣದಲ್ಲಿ ನಡೆದಿರುವ ಘಟನೆ ನಡೆದಿದೆ.

ಬಂಕಾಪುರದ ನಗರೇಶ್ವರ ದೇವಾಲಯದ ಒಳಗೆ ಶೂ ಹಾಕಿಕೊಂಡು ಹೋಗಿ ದೇವರ ದರ್ಶನ ಪಡೆದ ಚೌಹಾಣ್ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಖ್ಯಮಂತ್ರಿಯವರ ಆದೇಶದ ಮೇರೆಗೆ ಜಿಲ್ಲೆ ಪ್ರವಾಸ ಕೈಗೊಂಡಿರುವ ಸಚಿವ ಪ್ರಭು ಚೌಹಾಣ್ ರವರು ಹಾವೇರಿ ಪ್ರವಾಸದಲ್ಲಿದ್ದಾರೆ.

ಈ ಮಧ್ಯೆ ಬಂಕಾಪುರದ ಗೊ ಶಾಲೆಗೆ ಹೋಗಿ ಪರಿಶೀಲನೆ ನಡೆಸಿ, ಪಕ್ಕದಲ್ಲೇ ಇರುವ ದೇಗುಲದಲ್ಲಿ ಶೂ ಹಾಕಿಕೊಂಡು ದೇವರ ದರ್ಶನ ಪಡೆದು ವಿವಾದಕ್ಕೆ ಗುರಿಯಾಗಿದ್ದಾರೆ. 

Leave a Reply

Your email address will not be published. Required fields are marked *

error: Content is protected !!