ಸಿರಾ ತಾಲ್ಲೂಕಿನ ಎಮ್ಮೇರಹಳ್ಳಿಯಲ್ಲಿ ಇತ್ತೀಚೆಗೆ ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದಂತಹ ಬಿ.ಜೆ.ಪಿ. ಮುಖಂಡ ಬಿ.ಕೆ. ಮಂಜುನಾಥ್ ಹಾಗೂ ಬಿ.ಜೆ.ಪಿ. ಸಿರಾ ತಾಲ್ಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಆಯ್ಕೆಯಾದ ವೈ.ಎನ್. ಮಂಜುನಾಥ್ ರವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಜೆ.ಪಿ. ಮುಖಂಡರುಗಳಾದ ವೈ.ಡಿ. ಗೋವಿಂದರಾಜು, ಗುಮ್ಮನಹಳ್ಳಿ ಈರಣ್ಣ, ಕೆ.ಟಿ.ಕೆ. ಪ್ರಭು ಗುಬ್ಬಿ, ಮಾಗೋಡು ನಾಗರಾಜು, ಹೆಗ್ಗನಹಳ್ಳಿ ಲಿಂಗರಾಜು, ಎಮ್ಮೇರಹಳ್ಳಿ ಮಂಜುನಾಥ್. ಎಸ್., ಜಿ.ತಿಮ್ಮರಾಜು, ಮಾಜಿ ಗ್ರಾಮ ಪಂಚಾಯಿತಿ ಅದ್ಯಕ್ಷ ನಾಗರಾಜಪ್ಪ, ಜಿ. ಪ್ರಸನ್ನ ಕುಮಾರ್, ಟಿ. ಶರತ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.