Sunday, 28th April 2024

ರತ್ನಾಕರ ಭಟ್ಟರಿಗೆ “ಯಕ್ಷ ಸೇವಾ ರತ್ನ” ಪ್ರಶಸ್ತಿ

ಶಿರಸಿ: ಇದೇ ಬರುವ ಅ.೧೫ರಂದು ತಾಲೂಕಿನ ಬಾಳಗಾರ ಜೋಗಿಮನೆಯಲ್ಲಿ ಜೋಗಿಮನೆ ಬಳಗದ ವತಿಯಿಂದ ಆಯೋಜಿಸಿರುವ “ಪಂಚವಟಿ-ಮಾಯಾಮೃಗ” ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಕಾನಸೂರಿನ ರತ್ನಾಕರ ಭಟ್ಟರಿಗೆ “ಯಕ್ಷ ಸೇವಾ ರತ್ನ” ಪ್ರಶಿಸ್ತಿ ನೀಡಿ ಗೌರವಿಸ ಲಾಗು ವುದು.

ಕಳೆದ ಎರಡು ದಶಕಗಳಿಗೂ ಹೆಚ್ಚಿನ ಕಾಲದಿಂದ ಸೇವಾ ರತ್ನ ಯಕ್ಷಗಾನ ಮಂಡಳಿಯ ಮೂಲಕ ನಾಡಿನ ವಿವಿಧ ಭಾಗಗಳಲ್ಲಿ ಯಕ್ಷಗಾನ, ತಾಳಮದ್ದಲೆ ಕಾರ್ಯಕ್ರಮ ಸಂಘಟಿಸಿ ಪಾರಂಪರಿಕ ಯಕ್ಷಗಾನ ಕ್ಷೇತ್ರಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ್ದಕ್ಕಾಗಿ ಈ ಪ್ರಶಸ್ತಿ ದಯಪಾಲಿಸಲಾಗುತ್ತಿದೆ ಎಂದು ಸಂಘಟಕ ರಾದ ಜೋಗಿಮನೆ ಬಳಗದ ಡಾ.ಬಾಲಕೃಷ್ಣ ಹೆಗಡೆ ಮತ್ತು ಅನಂತ ರಾಮಕೃಷ್ಣ ಹೆಗಡೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!